ETV Bharat / state

ರಾಜ್ಯಸಭೆ ಚುನಾವಣೆ : ಕಾಂಗ್ರೆಸ್ - ಜೆಡಿಎಸ್ ಒಳಜಗಳದಿಂದ ಬಿಜೆಪಿಗೆ ಬೋನಸ್ ಸೀಟು

author img

By

Published : Jun 11, 2022, 9:43 PM IST

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಅಂತಿಮವಾಗಿ ಕಣದಿಂದ ಹಿಂದೆ ಸರಿಸಲು ಸಮ್ಮತಿ ಸೂಚಿಸದೆ ಇರುವುದರಿಂದ ಅಂತಿಮವಾಗಿ ಬಿಜೆಪಿ ಈ ಬೆಳವಣಿಗೆಯ ಲಾಭ ಪಡೆದುಕೊಂಡಿತು.

rajya-sabha-election-bjp-gets-benefit-of-fight-between-congress-and-jds
ಕಾಂಗ್ರೆಸ್​-ಜೆಡಿಎಸ್​ ಹಠದಿಂದ 'ಕಮಲ'ಕ್ಕೆ ಲಾಭ: ರಾಜ್ಯಸಭೆ ಕದನದಲ್ಲಿ ಆಪ್ತನ ಗೆಲ್ಲಿಸಿಕೊಂಡ ಬಿಎಸ್​​ವೈ!

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಳ ಜಗಳದ ಲಾಭ ಪಡೆದ ಬಿಜೆಪಿ ಗೆಲುವಿಗೆ ಮತಗಳ ಕೊರತೆಯ ನಡುವಿಯೂ ಹೆಚ್ಚುವರಿಯಾಗಿ ಬೋನಸ್ ಸೀಟ್​​ ಎನ್ನುವಂತೆ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ.

ನಾಲ್ಕನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ನಡೆದಿದ್ದರೆ, ಎರಡೂ ಪಕ್ಷಗಳಿಂದ ಜಂಟಿ ಅಭ್ಯರ್ಥಿಯಾಗಿ ಜೆಎಡಿಎಸ್​ನ ಕುಪೇಂದ್ರ ರೆಡ್ಡಿ ಅಥವಾ ಕಾಂಗ್ರೆಸ್​ನ ಮನ್ಸೂರ್ ಅಲಿಖಾನ್ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಿದ್ದರೆ ಖಂಡಿತ ಗೆಲ್ಲುವ ಅವಕಾಶವಿತ್ತು. ಆದರೆ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಕೊರತೆ ಹಾಗೂ ಪ್ರತಿಷ್ಠೆಯ ಫಲವಾಗಿ ಬಿಜೆಪಿ ಅನಾಯಾಸವಾಗಿ ಒಂದು ಸೀಟ್​ನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿದೆ.

ನಾಲ್ಕು ಸ್ಥಾನಗಳಿಗೆ ನಡೆದ ರಾಜ್ಯ ಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಸಂಖ್ಯಾಬಲಕ್ಕೆ ಅನುಗುಣವಾಗಿ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಿತ್ತು. ನಾಲ್ಕನೇ ಸ್ಥಾನ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಮತಗಳ ಕೊರತೆ ಇದ್ದವು. ಯಾವುದೇ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಆಗಿದ್ದರೆ ಮಾತ್ರ ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ನಾಲ್ಕನೇ ಅಭ್ಯರ್ಥಿ ಗೆಲ್ಲುವ ಅವಕಾಶವಿತ್ತು. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಅಂತಿಮವಾಗಿ ಕಣದಿಂದ ಹಿಂದೆ ಸರಿಸಲು ಸಮ್ಮತಿ ಸೂಚಿಸದೆ ಇರುವುದರಿಂದ ಅಂತಿಮವಾಗಿ ಬಿಜೆಪಿ ಈ ಬೆಳವಣಿಗೆಯ ಲಾಭ ಪಡೆದುಕೊಂಡಿತು.

ಹಠದಿಂದ ಕಮಲಕ್ಕೆ ಲಾಭ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಠಮಾರಿ ಧೋರಣೆಯಿಂದ ಬಿಜೆಪಿಗೆ ಲಾಭವಾಗಿದೆ. ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿ ಗೆಲ್ಲಲು 20 ಮತಗಳ ಅವಶ್ಯಕತೆಯಿತ್ತು. ಜೆಡಿಎಸ್ ಅಭ್ಯರ್ಥಿ ಗೆಲ್ಲಲು 15 ಮತಗಳ ಅಗತ್ಯತೆ ಇತ್ತು. ಇಬ್ಬರ ನಡುವೆ ಹೊಂದಾಣಿಕೆ ನಡೆಯದಿದ್ದರೆ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲ್ಲಲು ಸಹಾಯವಾಗುತ್ತದೆ ಎನ್ನುವ ಸತ್ಯ ತಿಳಿದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಹೊಂದಾಣಿಕೆಯಿಂದ ಮೈತ್ರಿ ಅಭ್ಯರ್ಥಿ ನಿಲ್ಲಿಸಲು ಎರಡೂ ಪಕ್ಷಗಳ ನಾಯಕರಲ್ಲಿ ಸಹಮತ ಮೂಡಲಿಲ್ಲ.‌

ಜೆಡಿಎಸ್ ಆರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್​ನ್ನು ನೇರವಾಗಿ ಸಂಪರ್ಕಿಸಿರುವುದು ಕಾಂಗ್ರೆಸ್​ನ ರಾಜ್ಯಮಟ್ಟದ ನಾಯಕರಿಗೆ ಸರಿ ಕಾಣಲಿಲ್ಲವೆಂದು ಹೇಳಲಾಗಿದೆ. ಬಿಜೆಪಿ ಅಭ್ಯರ್ಥಿ ಸೋಲಿಸಲು ಒಂದು ಹಂತದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಲು ಸಿದ್ಧವಿದ್ದರೂ ರಾಜ್ಯದ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಮೈತ್ರಿಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತೊಂದರೆಯಾಗಲಿದೆ. ಮತದಾರರಿಗೆ ತಪ್ಪು ಸಂದೇಶ ಹೋಗಲಿದೆ ಎನ್ನುವ ವಾದ ಮುಂದಿಟ್ಟು ಜೆಡಿಎಸ್​ಗೆ ಸಹಕಾರ ನೀಡುವುದನ್ನು ತಡೆಹಿಡಿದರೆನ್ನಲಾಗಿದೆ.

ಆಪ್ತನನ್ನು ಗೆಲ್ಲಿಸಿಕೊಂಡ ಬಿಎಸ್​​ವೈ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್​ ಗೆಲುವು ಕಷ್ಟವಾಗಿದ್ದರೂ ಕೂಡ ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಆಪ್ತನನ್ನು ಗೆಲ್ಲಿಸಿಕೊಂಡರು. ಈ ಮೂಲಕ ಅಧಿಕಾರ ಇಲ್ಲದಿದ್ದರೂ ಇಂದಿಗೂ ತಾವೊಬ್ಬ ಜನಪ್ರಿಯ ಲೀಡರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಮೊದಲ ಪ್ರಾಶಸ್ತ್ಯ ಮತಗಳ ಜೊತೆಗೆ ಬಿಜೆಪಿಯ ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಿ ಹಾಗೂ ಬಿಜೆಪಿಯ ಯಾವ ಮತಗಳೂ ಕ್ರಾಸ್ ಆಗದಂತೆ ನೋಡಿಕೊಂಡು ತಮ್ಮ ಆಪ್ತನನ್ನು ಗೆಲ್ಲಿಸಿಕೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರು ತೆರೆಯ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಏರ್ಪಡದಂತೆ ರಾಜಕೀಯವಾಗಿ ನೋಡಿಕೊಂಡರು ಎಂದೂ ಹೇಳಲಾಗುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರು ದೇವನಹಳ್ಳಿ ಏರ್​​ಪೋರ್ಟ್​ನಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾನಯ್ಯನವರನ್ನು ಭೇಟಿ ಮಾಡಿದ್ದು ಸಹ ರಾಜ್ಯಸಭೆ ಚುನಾವಣೆ ರಾಜಕಾರಣದ ಒಂದು ಭಾಗವೆಂದೇ ಹೇಳಲಾಗುತ್ತದೆ. ಆದರೆ ಉಭಯ ನಾಯಕರು ತಮ್ಮದು ಆಕಸ್ಮಿಕ ಭೇಟಿ, ಇಬ್ಬರ ನಡುವಿನ ಭೇಟಿ, ಉಭಯ ಕುಶಲೋಪರಿಗಷ್ಟೇ ಸೀಮಿತವಾಗಿತ್ತು ಎಂದು ಸ್ಪಷ್ಟಪಡಿಸಿದ್ದರೂ ಗುಸು ಗುಸು ಮಾತ್ರ ನಿಂತಿಲ್ಲ.

ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿಯನ್ನ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಗೆಲ್ಲಿಸಿಕೊಂಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ಖುಷ್ ಆಗಿದೆ. ಗೆಲುವಿನ ಸಂತಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಬೊಮ್ಮಾಯಿಗೆ ಫೋನ್ ಕರೆ ಮಾಡಿ ಅಭಿನಂದನೆ ಹೇಳಿರುವುದು ಹೈಕಮಾಂಡ್​​ ಸಂತಸಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲಲು ನಾವಲ್ಲ, ಜೆಡಿಎಸ್​ ಕಾರಣ: ಸಿದ್ದರಾಮಯ್ಯ ಆರೋಪ

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕನೇ ಸ್ಥಾನಕ್ಕೆ ನಡೆದ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಒಳ ಜಗಳದ ಲಾಭ ಪಡೆದ ಬಿಜೆಪಿ ಗೆಲುವಿಗೆ ಮತಗಳ ಕೊರತೆಯ ನಡುವಿಯೂ ಹೆಚ್ಚುವರಿಯಾಗಿ ಬೋನಸ್ ಸೀಟ್​​ ಎನ್ನುವಂತೆ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡಿದೆ.

ನಾಲ್ಕನೇ ಸ್ಥಾನಕ್ಕಾಗಿ ನಡೆದ ಪೈಪೋಟಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಹೊಂದಾಣಿಕೆ ನಡೆದಿದ್ದರೆ, ಎರಡೂ ಪಕ್ಷಗಳಿಂದ ಜಂಟಿ ಅಭ್ಯರ್ಥಿಯಾಗಿ ಜೆಎಡಿಎಸ್​ನ ಕುಪೇಂದ್ರ ರೆಡ್ಡಿ ಅಥವಾ ಕಾಂಗ್ರೆಸ್​ನ ಮನ್ಸೂರ್ ಅಲಿಖಾನ್ ಇಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಿದ್ದರೆ ಖಂಡಿತ ಗೆಲ್ಲುವ ಅವಕಾಶವಿತ್ತು. ಆದರೆ ಎರಡೂ ಪಕ್ಷಗಳ ನಡುವಿನ ಹೊಂದಾಣಿಕೆ ಕೊರತೆ ಹಾಗೂ ಪ್ರತಿಷ್ಠೆಯ ಫಲವಾಗಿ ಬಿಜೆಪಿ ಅನಾಯಾಸವಾಗಿ ಒಂದು ಸೀಟ್​ನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿದೆ.

ನಾಲ್ಕು ಸ್ಥಾನಗಳಿಗೆ ನಡೆದ ರಾಜ್ಯ ಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಹೊಂದಿರುವ ಸಂಖ್ಯಾಬಲಕ್ಕೆ ಅನುಗುಣವಾಗಿ ಬಿಜೆಪಿ ಎರಡು ಸ್ಥಾನ, ಕಾಂಗ್ರೆಸ್ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಿತ್ತು. ನಾಲ್ಕನೇ ಸ್ಥಾನ ಗೆಲ್ಲಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್​​ಗೆ ಮತಗಳ ಕೊರತೆ ಇದ್ದವು. ಯಾವುದೇ ಎರಡು ಪಕ್ಷಗಳ ನಡುವೆ ಹೊಂದಾಣಿಕೆ ಆಗಿದ್ದರೆ ಮಾತ್ರ ಮೊದಲ ಪ್ರಾಶಸ್ತ್ಯದ ಮತದಲ್ಲಿಯೇ ನಾಲ್ಕನೇ ಅಭ್ಯರ್ಥಿ ಗೆಲ್ಲುವ ಅವಕಾಶವಿತ್ತು. ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಯನ್ನು ಅಂತಿಮವಾಗಿ ಕಣದಿಂದ ಹಿಂದೆ ಸರಿಸಲು ಸಮ್ಮತಿ ಸೂಚಿಸದೆ ಇರುವುದರಿಂದ ಅಂತಿಮವಾಗಿ ಬಿಜೆಪಿ ಈ ಬೆಳವಣಿಗೆಯ ಲಾಭ ಪಡೆದುಕೊಂಡಿತು.

ಹಠದಿಂದ ಕಮಲಕ್ಕೆ ಲಾಭ: ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹಠಮಾರಿ ಧೋರಣೆಯಿಂದ ಬಿಜೆಪಿಗೆ ಲಾಭವಾಗಿದೆ. ಕಾಂಗ್ರೆಸ್ ಪಕ್ಷದ ಎರಡನೇ ಅಭ್ಯರ್ಥಿ ಗೆಲ್ಲಲು 20 ಮತಗಳ ಅವಶ್ಯಕತೆಯಿತ್ತು. ಜೆಡಿಎಸ್ ಅಭ್ಯರ್ಥಿ ಗೆಲ್ಲಲು 15 ಮತಗಳ ಅಗತ್ಯತೆ ಇತ್ತು. ಇಬ್ಬರ ನಡುವೆ ಹೊಂದಾಣಿಕೆ ನಡೆಯದಿದ್ದರೆ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಗೆಲ್ಲಲು ಸಹಾಯವಾಗುತ್ತದೆ ಎನ್ನುವ ಸತ್ಯ ತಿಳಿದಿದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪರಸ್ಪರ ಹೊಂದಾಣಿಕೆಯಿಂದ ಮೈತ್ರಿ ಅಭ್ಯರ್ಥಿ ನಿಲ್ಲಿಸಲು ಎರಡೂ ಪಕ್ಷಗಳ ನಾಯಕರಲ್ಲಿ ಸಹಮತ ಮೂಡಲಿಲ್ಲ.‌

ಜೆಡಿಎಸ್ ಆರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್​ನ್ನು ನೇರವಾಗಿ ಸಂಪರ್ಕಿಸಿರುವುದು ಕಾಂಗ್ರೆಸ್​ನ ರಾಜ್ಯಮಟ್ಟದ ನಾಯಕರಿಗೆ ಸರಿ ಕಾಣಲಿಲ್ಲವೆಂದು ಹೇಳಲಾಗಿದೆ. ಬಿಜೆಪಿ ಅಭ್ಯರ್ಥಿ ಸೋಲಿಸಲು ಒಂದು ಹಂತದಲ್ಲಿ ಜೆಡಿಎಸ್ ಅಭ್ಯರ್ಥಿಗೆ ಬೆಂಬಲ ನೀಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ಸೂಚಿಸಲು ಸಿದ್ಧವಿದ್ದರೂ ರಾಜ್ಯದ ನಾಯಕರಾದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಈ ಮೈತ್ರಿಯಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ತೊಂದರೆಯಾಗಲಿದೆ. ಮತದಾರರಿಗೆ ತಪ್ಪು ಸಂದೇಶ ಹೋಗಲಿದೆ ಎನ್ನುವ ವಾದ ಮುಂದಿಟ್ಟು ಜೆಡಿಎಸ್​ಗೆ ಸಹಕಾರ ನೀಡುವುದನ್ನು ತಡೆಹಿಡಿದರೆನ್ನಲಾಗಿದೆ.

ಆಪ್ತನನ್ನು ಗೆಲ್ಲಿಸಿಕೊಂಡ ಬಿಎಸ್​​ವೈ: ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್ ಸಿಂಗ್​ ಗೆಲುವು ಕಷ್ಟವಾಗಿದ್ದರೂ ಕೂಡ ಮಾಜಿ ಸಿಎಂ ಯಡಿಯೂರಪ್ಪನವರು ತಮ್ಮ ಆಪ್ತನನ್ನು ಗೆಲ್ಲಿಸಿಕೊಂಡರು. ಈ ಮೂಲಕ ಅಧಿಕಾರ ಇಲ್ಲದಿದ್ದರೂ ಇಂದಿಗೂ ತಾವೊಬ್ಬ ಜನಪ್ರಿಯ ಲೀಡರ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಮೊದಲ ಪ್ರಾಶಸ್ತ್ಯ ಮತಗಳ ಜೊತೆಗೆ ಬಿಜೆಪಿಯ ಶಾಸಕರ ಎರಡನೇ ಪ್ರಾಶಸ್ತ್ಯದ ಮತಗಳನ್ನು ಹಾಕಿಸಿ ಹಾಗೂ ಬಿಜೆಪಿಯ ಯಾವ ಮತಗಳೂ ಕ್ರಾಸ್ ಆಗದಂತೆ ನೋಡಿಕೊಂಡು ತಮ್ಮ ಆಪ್ತನನ್ನು ಗೆಲ್ಲಿಸಿಕೊಂಡಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪನವರು ತೆರೆಯ ಹಿಂದೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಹೊಂದಾಣಿಕೆ ಏರ್ಪಡದಂತೆ ರಾಜಕೀಯವಾಗಿ ನೋಡಿಕೊಂಡರು ಎಂದೂ ಹೇಳಲಾಗುತ್ತಿದೆ.

ಚುನಾವಣೆ ಸಂದರ್ಭದಲ್ಲಿ ಯಡಿಯೂರಪ್ಪನವರು ದೇವನಹಳ್ಳಿ ಏರ್​​ಪೋರ್ಟ್​ನಲ್ಲಿ ಅನಿರೀಕ್ಷಿತವಾಗಿ ಕಾಂಗ್ರೆಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಸಿದ್ದರಾನಯ್ಯನವರನ್ನು ಭೇಟಿ ಮಾಡಿದ್ದು ಸಹ ರಾಜ್ಯಸಭೆ ಚುನಾವಣೆ ರಾಜಕಾರಣದ ಒಂದು ಭಾಗವೆಂದೇ ಹೇಳಲಾಗುತ್ತದೆ. ಆದರೆ ಉಭಯ ನಾಯಕರು ತಮ್ಮದು ಆಕಸ್ಮಿಕ ಭೇಟಿ, ಇಬ್ಬರ ನಡುವಿನ ಭೇಟಿ, ಉಭಯ ಕುಶಲೋಪರಿಗಷ್ಟೇ ಸೀಮಿತವಾಗಿತ್ತು ಎಂದು ಸ್ಪಷ್ಟಪಡಿಸಿದ್ದರೂ ಗುಸು ಗುಸು ಮಾತ್ರ ನಿಂತಿಲ್ಲ.

ರಾಜ್ಯಸಭೆ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿಯನ್ನ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಸಿಎಂ ಬೊಮ್ಮಾಯಿ ಗೆಲ್ಲಿಸಿಕೊಂಡಿದ್ದಕ್ಕೆ ಬಿಜೆಪಿ ಹೈಕಮಾಂಡ್ ಖುಷ್ ಆಗಿದೆ. ಗೆಲುವಿನ ಸಂತಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಿಎಂ ಬೊಮ್ಮಾಯಿಗೆ ಫೋನ್ ಕರೆ ಮಾಡಿ ಅಭಿನಂದನೆ ಹೇಳಿರುವುದು ಹೈಕಮಾಂಡ್​​ ಸಂತಸಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ರಾಜ್ಯಸಭೆಯಲ್ಲಿ ಬಿಜೆಪಿ ಗೆಲ್ಲಲು ನಾವಲ್ಲ, ಜೆಡಿಎಸ್​ ಕಾರಣ: ಸಿದ್ದರಾಮಯ್ಯ ಆರೋಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.