ETV Bharat / state

ಮುಂಗಾರಿನ ಅಭಿಷೇಕಕ್ಕೆ ಮಿಂದೆದ್ದ ಬೆಂಗಳೂರು; ಮಳೆ ಸಂಗೀತಕ್ಕೆ ತಣ್ಣಗಾದ ಸಿಲಿಕಾನ್ ಸಿಟಿ

author img

By

Published : May 6, 2020, 7:58 PM IST

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣದ ನಡುವೆ ಹಲವೆಡೆ ಮಳೆ ಸುರಿದಿದೆ. ಗಾಳಿಯಿಂದ ಒಂದು ಮರ ಬಿದ್ದಿರುವ ಬಗ್ಗೆ ಪಾಲಿಕೆ ಕಂಟ್ರೋಲ್​​ ರೂಂ ಮಾಹಿತಿ ನೀಡಿದೆ.

Rain in Silicon City
ಸಂಗ್ರಹ ಚಿತ್ರ

ಬೆಂಗಳೂರು: ಬಿರು ಬಿಸಿಲಿನಿಂದ ಸುಡುತ್ತಿದ್ದ ಸಿಲಿಕಾನ್ ಸಿಟಿ ಸಂಜೆ ವೇಳೆ ಮಳೆಯ ಆಗಮನದಿಂದ ತಂಪಾಗಿದೆ. ನಗರದ ಏರ್​​​ಪೋರ್ಟ್​ ರಸ್ತೆ, ಹೆಬ್ಬಾಳ, ಯಶವಂತಪುರ, ಮಲ್ಲೇಶ್ವರಂ, ಯಲಹಂಕ, ವಿದ್ಯಾರಣ್ಯಪುರ, ರಾಜಾಜಿನಗರದಲ್ಲಿ ಮಳೆ ಸುರಿದಿದೆ.

ಬೊಮ್ಮನಹಳ್ಳಿ, ಜಯನಗರ ಕಾರ್ಪೋರೇಷನ್ ಸರ್ಕಲ್, ಆರ್ ಆರ್ ನಗರದಲ್ಲಿ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲಿ ಚದುರಿದ ಮಳೆಯಾಗಬಹುದು. ಇನ್ನು ಗಾಳಿಗೆ ಒಂದು ಮರ ಬಿದ್ದಿದ್ದು ಈ ದೂರು ಬಿಟ್ಟರೆ ಬೇರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಾಲಿಕೆ ಕಂಟ್ರೋಲ್​​ ರೂಂ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಮಳೆ

ಪೂರ್ವ ಮುಂಗಾರು ಮಳೆ ಅನಿರೀಕ್ಷಿತವಾಗಿ ಇನ್ನು ಮುಂದೆಯೂ ಬರಲಿದೆ. ಈಗಾಗಲೇ ಚಿತ್ರದುರ್ಗ ಭಾಗದಲ್ಲಿ 40-50 ಮಿ.ಮೀಟರ್ ಮಳೆಯಾಗಿದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರದಲ್ಲಿಯೂ ಉತ್ತಮ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.

ಬೆಂಗಳೂರು: ಬಿರು ಬಿಸಿಲಿನಿಂದ ಸುಡುತ್ತಿದ್ದ ಸಿಲಿಕಾನ್ ಸಿಟಿ ಸಂಜೆ ವೇಳೆ ಮಳೆಯ ಆಗಮನದಿಂದ ತಂಪಾಗಿದೆ. ನಗರದ ಏರ್​​​ಪೋರ್ಟ್​ ರಸ್ತೆ, ಹೆಬ್ಬಾಳ, ಯಶವಂತಪುರ, ಮಲ್ಲೇಶ್ವರಂ, ಯಲಹಂಕ, ವಿದ್ಯಾರಣ್ಯಪುರ, ರಾಜಾಜಿನಗರದಲ್ಲಿ ಮಳೆ ಸುರಿದಿದೆ.

ಬೊಮ್ಮನಹಳ್ಳಿ, ಜಯನಗರ ಕಾರ್ಪೋರೇಷನ್ ಸರ್ಕಲ್, ಆರ್ ಆರ್ ನಗರದಲ್ಲಿ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲಿ ಚದುರಿದ ಮಳೆಯಾಗಬಹುದು. ಇನ್ನು ಗಾಳಿಗೆ ಒಂದು ಮರ ಬಿದ್ದಿದ್ದು ಈ ದೂರು ಬಿಟ್ಟರೆ ಬೇರೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪಾಲಿಕೆ ಕಂಟ್ರೋಲ್​​ ರೂಂ ಮಾಹಿತಿ ನೀಡಿದೆ.

ಸಿಲಿಕಾನ್ ಸಿಟಿಯಲ್ಲಿ ಹಲವೆಡೆ ಮಳೆ

ಪೂರ್ವ ಮುಂಗಾರು ಮಳೆ ಅನಿರೀಕ್ಷಿತವಾಗಿ ಇನ್ನು ಮುಂದೆಯೂ ಬರಲಿದೆ. ಈಗಾಗಲೇ ಚಿತ್ರದುರ್ಗ ಭಾಗದಲ್ಲಿ 40-50 ಮಿ.ಮೀಟರ್ ಮಳೆಯಾಗಿದೆ. ಉಳಿದಂತೆ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಕೊಡಗು, ಚಾಮರಾಜನಗರದಲ್ಲಿಯೂ ಉತ್ತಮ ಮಳೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಸಂಸ್ಥೆಯ ನಿರ್ದೇಶಕ ಡಾ. ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.