ETV Bharat / state

ಬೆಂಗಳೂರಲ್ಲಿ ಕೊರೊನಾ ಸೋಂಕಿತರಿಗೆ ವಿಕಿರಣ ಚಿಕಿತ್ಸೆ ಪ್ರಯೋಗ: 3ನೇ ಅಲೆ ತಡೆಗೆ ಸಹಾಯವಾಗುತ್ತಾ ಈ ವಿಧಾನ?

author img

By

Published : May 31, 2021, 6:49 AM IST

ಕೊರೊನಾ ಸೋಂಕಿತರಿಗೆ ಹೊಸ ಮಾದರಿಯ ಚಿಕಿತ್ಸೆಗೆ ಚಿಂತನೆ ನಡೆದಿದೆ. ಈ ರೋಗಕ್ಕೆ ಕಡಿಮೆ ವಿಕಿರಣ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ. ಒಂದು ವೇಳೆ ಚಿಕಿತ್ಸೆ ಯಶಸ್ವಿಯಾದ್ರೆ, ರೋಗದ ತೀವ್ರತೆ ಹೆಚ್ಚು ಇರುವವರಿಗೆ ಇದು ವರದಾನವೂ ಆಗಬಹುದು.

Radiation therapy trial on corona patients in Bangalore
ಕೊರೊನಾ ಸೋಂಕಿತರಿಗೆ ವಿಕಿರಣ ಚಿಕಿತ್ಸೆ ಪ್ರಯೋಗ

ಬೆಂಗಳೂರು: ಇಡೀ ವಿಶ್ವದಲ್ಲಿ ಎಲ್ಲೆಡೆ ಕೊರೊನಾ ಸೋಂಕು ತಡೆಗಟ್ಟಲು ನಾನಾ ಅಧ್ಯಯನ, ಪ್ರಯೋಗಗಳು ನಡೆಯುತ್ತಲೇ ಇವೆ. ಇದೀಗ ಸಿಲಿಕಾನ್ ​ಸಿಟಿಯ ವೈದ್ಯರೊಬ್ಬರು ಕ್ಯಾನ್ಸರ್​​ಗೆ ಬಳಸುವ ರೇಡಿಯೋ ಥೆರಪಿಯನ್ನು ಕೊರೊನಾ ಚಿಕಿತ್ಸೆಗೆ ಬಳಸಲು ಮುಂದಾಗಿದ್ದಾರೆ.

ಕೊರೊನಾ ಸೋಂಕಿತರಿಗೆ ಹೊಸ ಮಾದರಿಯ ಚಿಕಿತ್ಸೆಗೆ ಚಿಂತನೆ ನಡೆದಿದ್ದು, ವೈದ್ಯರಿಂದ Low Doze Radio Therapy ಪ್ರಯೋಗ ನಡೆಯಲಿದೆ. ನಗರದ ಹೆಚ್​ಸಿಜಿ ಆಸ್ಪತ್ರೆಯ ವತಿಯಿಂದ ಈ ವಿನೂತನ ಪ್ರಯೋಗ ನಡೆಯಲಿದ್ದು, ಥೆರಪಿ ಬಗ್ಗೆ ಈಗಾಗಲೇ ವೈದ್ಯರ ತಂಡ ಅಧ್ಯಯನವನ್ನು ನಡೆಸಿದೆ.

ವಿಕಿರಣ ಚಿಕಿತ್ಸೆ ತಜ್ಞ ಡಾ.ಶ್ರೀಧರ್ ವಿವರಣೆ

ಶೇಕಡಾ 85 ರಿಂದ 90 ಭಾಗ ಈ ಥೆರಪಿ ಸಕ್ಸಸ್ ಆಗಲಿದೆಯಂತೆ. ಥೆರಪಿ ಯಶಸ್ಸು ಕಂಡಿಲ್ಲಾ ಎಂದರೂ ಅಡ್ಡ ಪರಿಣಾಮ ಇರಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಕ್ಯಾನ್ಸರ್‌ ಖಾಯಿಲೆಗೆ ರೇಡಿಯೋ ಥೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಕೊರೊನಾಗೂ ಕಡಿಮೆ ವಿಕಿರಣ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ.

ಮುಂದಿನ ವಾರದಿಂದಲೇ ಈ ಚಿಕಿತ್ಸೆ ಆರಂಭವಾಗಲಿದ್ದು, ಇದರಿಂದ ಸೋಂಕು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಕಿರಣ ಚಿಕಿತ್ಸೆ ತಜ್ಞ ಡಾ.ಶ್ರೀಧರ್.

ಒಂದು ವೇಳೆ ಚಿಕಿತ್ಸೆ ಯಶ ಕಂಡರೆ, ರೋಗದ ಬಾಧೆ ಹೆಚ್ಚಾಗಿ ಇರುವವರಿಗೆ ಇದು ವರದಾನವೂ ಆಗಬಹುದು. ಹಾಗೇ ಮುಂಬರುವ ಮೂರನೇ ಅಲೆಯನ್ನು ತಡೆಯಲು ಕೂಡಾ ಪರಿಣಾಮಕಾರಿಯಾಗಲಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಕರ್ನಾಟಕದ ನರ್ಸಿಂಗ್ ಸಿಬ್ಬಂದಿಗೆ ಎಲ್ಲಿಲ್ಲದ ಬೇಡಿಕೆ : ಬ್ರಿಟನ್ ಆರೋಗ್ಯ ಇಲಾಖೆಗೂ ಬೇಕಂತೆ ನಮ್ಮ ನರ್ಸ್​ಗಳು

ಬೆಂಗಳೂರು: ಇಡೀ ವಿಶ್ವದಲ್ಲಿ ಎಲ್ಲೆಡೆ ಕೊರೊನಾ ಸೋಂಕು ತಡೆಗಟ್ಟಲು ನಾನಾ ಅಧ್ಯಯನ, ಪ್ರಯೋಗಗಳು ನಡೆಯುತ್ತಲೇ ಇವೆ. ಇದೀಗ ಸಿಲಿಕಾನ್ ​ಸಿಟಿಯ ವೈದ್ಯರೊಬ್ಬರು ಕ್ಯಾನ್ಸರ್​​ಗೆ ಬಳಸುವ ರೇಡಿಯೋ ಥೆರಪಿಯನ್ನು ಕೊರೊನಾ ಚಿಕಿತ್ಸೆಗೆ ಬಳಸಲು ಮುಂದಾಗಿದ್ದಾರೆ.

ಕೊರೊನಾ ಸೋಂಕಿತರಿಗೆ ಹೊಸ ಮಾದರಿಯ ಚಿಕಿತ್ಸೆಗೆ ಚಿಂತನೆ ನಡೆದಿದ್ದು, ವೈದ್ಯರಿಂದ Low Doze Radio Therapy ಪ್ರಯೋಗ ನಡೆಯಲಿದೆ. ನಗರದ ಹೆಚ್​ಸಿಜಿ ಆಸ್ಪತ್ರೆಯ ವತಿಯಿಂದ ಈ ವಿನೂತನ ಪ್ರಯೋಗ ನಡೆಯಲಿದ್ದು, ಥೆರಪಿ ಬಗ್ಗೆ ಈಗಾಗಲೇ ವೈದ್ಯರ ತಂಡ ಅಧ್ಯಯನವನ್ನು ನಡೆಸಿದೆ.

ವಿಕಿರಣ ಚಿಕಿತ್ಸೆ ತಜ್ಞ ಡಾ.ಶ್ರೀಧರ್ ವಿವರಣೆ

ಶೇಕಡಾ 85 ರಿಂದ 90 ಭಾಗ ಈ ಥೆರಪಿ ಸಕ್ಸಸ್ ಆಗಲಿದೆಯಂತೆ. ಥೆರಪಿ ಯಶಸ್ಸು ಕಂಡಿಲ್ಲಾ ಎಂದರೂ ಅಡ್ಡ ಪರಿಣಾಮ ಇರಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ. ಕ್ಯಾನ್ಸರ್‌ ಖಾಯಿಲೆಗೆ ರೇಡಿಯೋ ಥೆರಪಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೀಗಾಗಿ ಕೊರೊನಾಗೂ ಕಡಿಮೆ ವಿಕಿರಣ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಿದ್ದಾರೆ.

ಮುಂದಿನ ವಾರದಿಂದಲೇ ಈ ಚಿಕಿತ್ಸೆ ಆರಂಭವಾಗಲಿದ್ದು, ಇದರಿಂದ ಸೋಂಕು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವಿಕಿರಣ ಚಿಕಿತ್ಸೆ ತಜ್ಞ ಡಾ.ಶ್ರೀಧರ್.

ಒಂದು ವೇಳೆ ಚಿಕಿತ್ಸೆ ಯಶ ಕಂಡರೆ, ರೋಗದ ಬಾಧೆ ಹೆಚ್ಚಾಗಿ ಇರುವವರಿಗೆ ಇದು ವರದಾನವೂ ಆಗಬಹುದು. ಹಾಗೇ ಮುಂಬರುವ ಮೂರನೇ ಅಲೆಯನ್ನು ತಡೆಯಲು ಕೂಡಾ ಪರಿಣಾಮಕಾರಿಯಾಗಲಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಕರ್ನಾಟಕದ ನರ್ಸಿಂಗ್ ಸಿಬ್ಬಂದಿಗೆ ಎಲ್ಲಿಲ್ಲದ ಬೇಡಿಕೆ : ಬ್ರಿಟನ್ ಆರೋಗ್ಯ ಇಲಾಖೆಗೂ ಬೇಕಂತೆ ನಮ್ಮ ನರ್ಸ್​ಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.