ETV Bharat / state

ರಾಜ್ಯದ ಸಣ್ಣ ಅಂಗಡಿಗಳ ನೌಕರರಿಗೆ ಪರಿಹಾರ ನೀಡಿ: ಲಾಕ್​ಡೌನ್ ಆರ್ಥಿಕ ಸಂಕಷ್ಟದಿಂದ ಉಳಿಸಿ

ಲಾಕ್​ಡೌನ್​ನಿಂದ ಕಳೆದ ಒಂದು ತಿಂಗಳಿನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಹಿನ್ನೆಲೆ ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡುವ ಎಲ್ಲಾ ನೌಕರರಿಗೂ ಪರ್ಯಾಯವಾಗಿ ಆರ್ಥಿಕ ಪರಿಹಾರ ಘೋಷಿಸಬೇಕು ಎಂದು ಸಗಟು ಜವಳಿ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

author img

By

Published : May 20, 2021, 11:02 PM IST

ಲಾಕ್ ಡೌನ್
ಲಾಕ್ ಡೌನ್

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಅಂಗಡಿಗಳು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದು ಲಾಕ್​ಡೌನ್​ನಿಂದ ಕಳೆದ ಒಂದು ತಿಂಗಳಿನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಹಿನ್ನೆಲೆ ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರಿಗೂ ಪರ್ಯಾಯವಾಗಿ ಆರ್ಥಿಕ ಪರಿಹಾರ ಘೋಷಿಸಬೇಕು ಎಂದು ಸಗಟು ಜವಳಿ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಕಳೆದ ವರ್ಷ ದೇಶದಲ್ಲಿ ಲಾಕ್​ಡೌನ್​ ಇದ್ದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಅಂಗಡಿ ವ್ಯಾಪಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಸರ್ಕಾರ ನೀಡಿದ್ದ ದಿನಾಂಕದ ವರೆಗೂ ವ್ಯಾಪಾರ ವಹಿವಾಟನ್ನು ನಿಲ್ಲಿಸಿದ್ದವು. ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಮತ್ತೆ ಈ ತಿಂಗಳು ಅಧಿಕವಾಗಿ ಹರಡುವಿಕೆ ತಡೆಯಲು ಮತ್ತೆ ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಇದರಿಂದ ತಡೆಯಲಾಗದಷ್ಟು ಆರ್ಥಿಕ ಸಂಕಷ್ಟಕ್ಕೆ ಅಂಗಡಿ ಮಾಲೀಕರು ಸಿಲಿಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಲಾಕ್​ಡೌನ್ ಆರ್ಥಿಕ ಸಂಕಷ್ಟದಿಂದ ಉಳಿಸುವಂತೆ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಮನವಿ

ಸಣ್ಣ ಅಂಗಡಿಯಲ್ಲಿ ಕನಿಷ್ಠ ಎಂದರೂ ಇಬ್ಬರು ನೌಕರರು ಸಂಬಳಕ್ಕೆ ದುಡಿಯುತ್ತಿದ್ದಾರೆ, ಇವರಿಗೆ ಈ ಸಂದರ್ಭದಲ್ಲಿ ವೇತನ ನೀಡಲು ಆಗುತ್ತಿಲ್ಲ. ಜೊತೆಗೆ ಆಸ್ತಿ ತೆರಿಗೆ, ಸಾಲದ ಕಂತು, ಜಿಎಸ್​ಟಿ ಸೇರಿದಂತೆ ಇತರೆಗಳ ಬಗ್ಗೆ ಸರ್ಕಾರ ವಿನಾಯಿತಿ ನೀಡಿಲ್ಲ. ಕೂಡಲೇ ಸರ್ಕಾರ ಸಣ್ಣ ಉದ್ಯಮಿದಾರರ ಕಷ್ಟಗಳನ್ನು ಅರಿತು ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹ ಮಾಡಿದರು.

ಬೆಂಗಳೂರು: ರಾಜ್ಯದಲ್ಲಿ ಲಕ್ಷಾಂತರ ಅಂಗಡಿಗಳು ಪ್ರತಿನಿತ್ಯ ಕಾರ್ಯನಿರ್ವಹಿಸುತ್ತಿದ್ದು ಲಾಕ್​ಡೌನ್​ನಿಂದ ಕಳೆದ ಒಂದು ತಿಂಗಳಿನಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಹಿನ್ನೆಲೆ ಸಣ್ಣ ಅಂಗಡಿಗಳಲ್ಲಿ ಕೆಲಸ ಮಾಡುವ ಎಲ್ಲ ನೌಕರರಿಗೂ ಪರ್ಯಾಯವಾಗಿ ಆರ್ಥಿಕ ಪರಿಹಾರ ಘೋಷಿಸಬೇಕು ಎಂದು ಸಗಟು ಜವಳಿ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.

ಕಳೆದ ವರ್ಷ ದೇಶದಲ್ಲಿ ಲಾಕ್​ಡೌನ್​ ಇದ್ದ ಸಂದರ್ಭದಲ್ಲಿ ರಾಜ್ಯದ ಎಲ್ಲಾ ಅಂಗಡಿ ವ್ಯಾಪಾರಿಗಳು ಸಂಪೂರ್ಣ ಸಹಕಾರ ನೀಡಿದ್ದು, ಸರ್ಕಾರ ನೀಡಿದ್ದ ದಿನಾಂಕದ ವರೆಗೂ ವ್ಯಾಪಾರ ವಹಿವಾಟನ್ನು ನಿಲ್ಲಿಸಿದ್ದವು. ಕೋವಿಡ್ ಎರಡನೇ ಅಲೆ ರಾಜ್ಯದಲ್ಲಿ ಮತ್ತೆ ಈ ತಿಂಗಳು ಅಧಿಕವಾಗಿ ಹರಡುವಿಕೆ ತಡೆಯಲು ಮತ್ತೆ ರಾಜ್ಯ ಸರ್ಕಾರ ಲಾಕ್​ಡೌನ್ ಘೋಷಣೆ ಮಾಡಿದೆ. ಇದರಿಂದ ತಡೆಯಲಾಗದಷ್ಟು ಆರ್ಥಿಕ ಸಂಕಷ್ಟಕ್ಕೆ ಅಂಗಡಿ ಮಾಲೀಕರು ಸಿಲಿಕಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಲಾಕ್​ಡೌನ್ ಆರ್ಥಿಕ ಸಂಕಷ್ಟದಿಂದ ಉಳಿಸುವಂತೆ ವ್ಯಾಪಾರಿ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಮನವಿ

ಸಣ್ಣ ಅಂಗಡಿಯಲ್ಲಿ ಕನಿಷ್ಠ ಎಂದರೂ ಇಬ್ಬರು ನೌಕರರು ಸಂಬಳಕ್ಕೆ ದುಡಿಯುತ್ತಿದ್ದಾರೆ, ಇವರಿಗೆ ಈ ಸಂದರ್ಭದಲ್ಲಿ ವೇತನ ನೀಡಲು ಆಗುತ್ತಿಲ್ಲ. ಜೊತೆಗೆ ಆಸ್ತಿ ತೆರಿಗೆ, ಸಾಲದ ಕಂತು, ಜಿಎಸ್​ಟಿ ಸೇರಿದಂತೆ ಇತರೆಗಳ ಬಗ್ಗೆ ಸರ್ಕಾರ ವಿನಾಯಿತಿ ನೀಡಿಲ್ಲ. ಕೂಡಲೇ ಸರ್ಕಾರ ಸಣ್ಣ ಉದ್ಯಮಿದಾರರ ಕಷ್ಟಗಳನ್ನು ಅರಿತು ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.