ETV Bharat / state

ಈ ಬಾರಿಯ ಲೋಕ ಸಮರದಲ್ಲಿ ಯಾವ ಪಕ್ಷದಿಂದ ಎಷ್ಟು ಮಹಿಳೆಯರಿಗೆ ಟಿಕೆಟ್​​​!? - undefined

ರಾಜಕೀಯ ಪಕ್ಷಗಳು ಶೇ. 50ರಷ್ಟು ಮೀಸಲಾತಿ ಹೊಂದಿದ್ದರೂ 28 ಕ್ಷೇತ್ರಗಳಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ನೀಡಿದ್ದು, ಮಹಿಳಾ ಅಭ್ಯರ್ಥಿಗಳನ್ನು ಪಕ್ಷದ ನಾಯಕರು ಕಡೆಗಣಿಸಿದ್ದಾರೆ.

ಬಿಜೆಪಿ,ಕಾಂಗ್ರೆಸ್​,ಜೆಡಿಎಸ್
author img

By

Published : Apr 15, 2019, 10:27 AM IST

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಶಕ್ತಿಯನ್ನು ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಮಹಿಳೆಯರು ಶೇ. 50ರಷ್ಟು ಮತ ಹೊಂದಿದ್ದರೂ ರಾಜಕೀಯ ಪಕ್ಷಗಳು 28 ಕ್ಷೇತ್ರಗಳಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ನೀಡಿವೆ.

ಬಿಜೆಪಿಯು ಶೋಭಾ ಕರಂದ್ಲಾಜೆ ಅವರಿಗೆ ಚಿಕ್ಕಮಗಳೂರು -ಉಡುಪಿ ಕ್ಷೇತ್ರದಲ್ಲಿ ಟಿಕೆಟ್​ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ವೀಣಾ ಕಾಶಪ್ಪನವರ್ ಅವರಿಗೆ ಬಾಗಲಕೋಟೆಯಿಂದ ಟಿಕೆಟ್ ನೀಡಿದೆ. ಜೆಡಿಎಸ್ ಪಕ್ಷ ಡಾ. ಸುನಿತಾ ದೇವಾನಂದ ಚೌಹಾಣ್​ಗೆ ಸ್ಪರ್ಧಿಸಲು ಟಿಕೆಟ್ ದಯಪಾಲಿಸಿದೆ. ಈ ಮೂಲಕ ಮಹಿಳೆಯರ ಪರ ತಮಗಿರುವ ಧೋರಣೆಯನ್ನು ರಾಜಕೀಯ ಪಕ್ಷಗಳು ಮೆರೆದಿವೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡಬೇಕೆನ್ನುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗದೆ ನನೆಗುದಿಗೆ ಬಿದ್ದಿದೆ.

ರಾಜ್ಯಸಭೆ ಮಹಿಳಾ ಮೀಸಲಾತಿ ಮಸೂದೆಗೆ 2010ರ ಮಾ. 5ರಂದೇ ಅಸ್ತು ಎಂದರೆ ಲೋಕಸಭೆಯಲ್ಲಿ ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸದೆ ಮಸೂದೆಗೆ ಒಪ್ಪಿಗೆ ಕೊಡದೆ ಅಂಗೀಕಾರವಾಗುವುದು ಬಾಕಿಯಿದೆ. ಮಹಿಳೆಯರಿಗೆ ಟಿಕೆಟ್ ನೀಡಿದರೆ ಅವರು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎನ್ನುವ ಕಾರಣಕ್ಕೆ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಲು ಆಸಕ್ತಿ ತೋರಿಸಿಲ್ಲವೆಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಬಹಳಷ್ಟು ಆಸಕ್ತಿ ತೋರಿಸಿ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಚುನಾವಣೆ ಪ್ರಚಾರ ಸಹ ಆರಂಭಿಸಿದ್ದರು. ಕೊನೆ ಕ್ಷಣದಲ್ಲಿ ಬಿಜೆಪಿ ವರಿಷ್ಠರು ತೇಜಸ್ವಿನಿಗೆ ಟಿಕೆಟ್ ನೀಡದೆ ವಂಚನೆ ಮಾಡಿದ ಆರೋಪಕ್ಕೆ ತುತ್ತಾದರು.

ಕಾಂಗ್ರೆಸ್ ಪಕ್ಷದಲ್ಲಿ ಸಹ ಬಹಳಷ್ಟು ಮಹಿಳೆಯರು ಟಿಕೆಟ್​ಗಾಗಿ ಲಾಬಿ ಮಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಹಲವರು ಹಸ್ತದ ಟಿಕೆಟ್​ಗೆ ಅರ್ಜಿ ಹಾಕಿದ್ದರು. ಅಂಬರೀಶ್ ಅವರ ಪತ್ನಿ ಸುಮಲತಾ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕೇಳಿಕೊಂಡರು. ಕಾಂಗ್ರೆಸ್ ಪಕ್ಷ ಮಂಡ್ಯ ಕ್ಷೇತ್ರವನ್ನು ತನ್ನ ಮೈತ್ರಿ ಪಕ್ಷವಾದ ಜೆಡಿಎಸ್​​ಗೆ ಬಿಟ್ಟು ಕೊಟ್ಟು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಂದರ್ಭ ಸೃಷ್ಟಿ ಮಾಡಿತು.

ರಾಜ್ಯದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದರೂ ಅಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಟಿಕೆಟ್ ನೀಡಿಲ್ಲ. ಒಟ್ಟು 18.93 ಲಕ್ಷ ಮತದಾರರಲ್ಲಿ 9 ಲಕ್ಷ 53 ಸಾವಿರ ಮಹಿಳಾ ಮತದಾರರಿದ್ದಾರೆ. 9 ಲಕ್ಷ 39 ಸಾವಿರ ಪುರುಷರಿದ್ದಾರೆ. ಪುರುಷರಿಗಿಂತ ಸುಮಾರು 20 ಸಾವಿರದಷ್ಟು ಅಧಿಕ ಮಹಿಳಾ ಮತದಾರರಿದ್ದರೂ ಅಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿಲ್ಲ.

‌‌‌‌ಇದು ರಾಜ್ಯದ ಕತೆಯಾದರೆ ರಾಷ್ಟ್ರ ಮಟ್ಟದಲ್ಲೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿಲ್ಲ. ಪ್ರಮುಖ ರಾಜಕೀಯ ಪಕ್ಷಗಳು ತಾವು ಘೋಷಿಸಿದ 2009 ಅಭ್ಯರ್ಥಿಗಳಲ್ಲಿ ಕೇವಲ 136 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ದೇಶದ ಅತಿ ದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ 374 ಅಭ್ಯರ್ಥಿಗಳ ಪೈಕಿ 45 ಸ್ತ್ರೀಯರಿಗೆ, ಕಾಂಗ್ರೆಸ್ ಪಕ್ಷ 344 ಅಭ್ಯರ್ಥಿಗಳಲ್ಲಿ 47 ಮಹಿಳೆಯರಿಗೆ ಟಿಕೆಟ್ ನೀಡಿವೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮಾತ್ತ ಶೇ. 40.5ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. 42 ಅಭ್ಯರ್ಥಿಗಳಲ್ಲಿ 17 ಮಹಿಳಾ ಕ್ಯಾಂಡಿಡೇಟ್​ಗಳಿಗೆ ಟಿಕೆಟ್ ನೀಡಿ ದೇಶದಲ್ಲೇ ಅತಿ ಹೆಷ್ಷು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿರುವ ಪಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಶಕ್ತಿಯನ್ನು ರಾಜಕೀಯ ಪಕ್ಷಗಳು ಸಂಪೂರ್ಣವಾಗಿ ತಿರಸ್ಕರಿಸಿದ್ದು, ಮಹಿಳೆಯರು ಶೇ. 50ರಷ್ಟು ಮತ ಹೊಂದಿದ್ದರೂ ರಾಜಕೀಯ ಪಕ್ಷಗಳು 28 ಕ್ಷೇತ್ರಗಳಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಟಿಕೆಟ್ ನೀಡಿವೆ.

ಬಿಜೆಪಿಯು ಶೋಭಾ ಕರಂದ್ಲಾಜೆ ಅವರಿಗೆ ಚಿಕ್ಕಮಗಳೂರು -ಉಡುಪಿ ಕ್ಷೇತ್ರದಲ್ಲಿ ಟಿಕೆಟ್​ ನೀಡಲಾಗಿದೆ. ಕಾಂಗ್ರೆಸ್ ಪಕ್ಷ ವೀಣಾ ಕಾಶಪ್ಪನವರ್ ಅವರಿಗೆ ಬಾಗಲಕೋಟೆಯಿಂದ ಟಿಕೆಟ್ ನೀಡಿದೆ. ಜೆಡಿಎಸ್ ಪಕ್ಷ ಡಾ. ಸುನಿತಾ ದೇವಾನಂದ ಚೌಹಾಣ್​ಗೆ ಸ್ಪರ್ಧಿಸಲು ಟಿಕೆಟ್ ದಯಪಾಲಿಸಿದೆ. ಈ ಮೂಲಕ ಮಹಿಳೆಯರ ಪರ ತಮಗಿರುವ ಧೋರಣೆಯನ್ನು ರಾಜಕೀಯ ಪಕ್ಷಗಳು ಮೆರೆದಿವೆ. ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಸ್ಥಾನಗಳನ್ನು ಮೀಸಲಿಡಬೇಕೆನ್ನುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗದೆ ನನೆಗುದಿಗೆ ಬಿದ್ದಿದೆ.

ರಾಜ್ಯಸಭೆ ಮಹಿಳಾ ಮೀಸಲಾತಿ ಮಸೂದೆಗೆ 2010ರ ಮಾ. 5ರಂದೇ ಅಸ್ತು ಎಂದರೆ ಲೋಕಸಭೆಯಲ್ಲಿ ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸದೆ ಮಸೂದೆಗೆ ಒಪ್ಪಿಗೆ ಕೊಡದೆ ಅಂಗೀಕಾರವಾಗುವುದು ಬಾಕಿಯಿದೆ. ಮಹಿಳೆಯರಿಗೆ ಟಿಕೆಟ್ ನೀಡಿದರೆ ಅವರು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎನ್ನುವ ಕಾರಣಕ್ಕೆ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಲು ಆಸಕ್ತಿ ತೋರಿಸಿಲ್ಲವೆಂದು ಹೇಳಲಾಗುತ್ತಿದೆ. ಬಿಜೆಪಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಬಹಳಷ್ಟು ಆಸಕ್ತಿ ತೋರಿಸಿ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಚುನಾವಣೆ ಪ್ರಚಾರ ಸಹ ಆರಂಭಿಸಿದ್ದರು. ಕೊನೆ ಕ್ಷಣದಲ್ಲಿ ಬಿಜೆಪಿ ವರಿಷ್ಠರು ತೇಜಸ್ವಿನಿಗೆ ಟಿಕೆಟ್ ನೀಡದೆ ವಂಚನೆ ಮಾಡಿದ ಆರೋಪಕ್ಕೆ ತುತ್ತಾದರು.

ಕಾಂಗ್ರೆಸ್ ಪಕ್ಷದಲ್ಲಿ ಸಹ ಬಹಳಷ್ಟು ಮಹಿಳೆಯರು ಟಿಕೆಟ್​ಗಾಗಿ ಲಾಬಿ ಮಾಡಿದರು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಹಲವರು ಹಸ್ತದ ಟಿಕೆಟ್​ಗೆ ಅರ್ಜಿ ಹಾಕಿದ್ದರು. ಅಂಬರೀಶ್ ಅವರ ಪತ್ನಿ ಸುಮಲತಾ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕೇಳಿಕೊಂಡರು. ಕಾಂಗ್ರೆಸ್ ಪಕ್ಷ ಮಂಡ್ಯ ಕ್ಷೇತ್ರವನ್ನು ತನ್ನ ಮೈತ್ರಿ ಪಕ್ಷವಾದ ಜೆಡಿಎಸ್​​ಗೆ ಬಿಟ್ಟು ಕೊಟ್ಟು ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಂದರ್ಭ ಸೃಷ್ಟಿ ಮಾಡಿತು.

ರಾಜ್ಯದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದರೂ ಅಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಟಿಕೆಟ್ ನೀಡಿಲ್ಲ. ಒಟ್ಟು 18.93 ಲಕ್ಷ ಮತದಾರರಲ್ಲಿ 9 ಲಕ್ಷ 53 ಸಾವಿರ ಮಹಿಳಾ ಮತದಾರರಿದ್ದಾರೆ. 9 ಲಕ್ಷ 39 ಸಾವಿರ ಪುರುಷರಿದ್ದಾರೆ. ಪುರುಷರಿಗಿಂತ ಸುಮಾರು 20 ಸಾವಿರದಷ್ಟು ಅಧಿಕ ಮಹಿಳಾ ಮತದಾರರಿದ್ದರೂ ಅಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿಲ್ಲ.

‌‌‌‌ಇದು ರಾಜ್ಯದ ಕತೆಯಾದರೆ ರಾಷ್ಟ್ರ ಮಟ್ಟದಲ್ಲೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿಲ್ಲ. ಪ್ರಮುಖ ರಾಜಕೀಯ ಪಕ್ಷಗಳು ತಾವು ಘೋಷಿಸಿದ 2009 ಅಭ್ಯರ್ಥಿಗಳಲ್ಲಿ ಕೇವಲ 136 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ದೇಶದ ಅತಿ ದೊಡ್ಡ ರಾಜಕೀಯ ಪಕ್ಷಗಳಾದ ಬಿಜೆಪಿ 374 ಅಭ್ಯರ್ಥಿಗಳ ಪೈಕಿ 45 ಸ್ತ್ರೀಯರಿಗೆ, ಕಾಂಗ್ರೆಸ್ ಪಕ್ಷ 344 ಅಭ್ಯರ್ಥಿಗಳಲ್ಲಿ 47 ಮಹಿಳೆಯರಿಗೆ ಟಿಕೆಟ್ ನೀಡಿವೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮಾತ್ತ ಶೇ. 40.5ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. 42 ಅಭ್ಯರ್ಥಿಗಳಲ್ಲಿ 17 ಮಹಿಳಾ ಕ್ಯಾಂಡಿಡೇಟ್​ಗಳಿಗೆ ಟಿಕೆಟ್ ನೀಡಿ ದೇಶದಲ್ಲೇ ಅತಿ ಹೆಷ್ಷು ಮಹಿಳೆಯರಿಗೆ ಪ್ರಾತಿನಿಧ್ಯ ನೀಡಿರುವ ಪಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

Intro: ಪಾರ್ಲಿಮೆಂಟ್ ಚುನಾವಣೆಯಲ್ಲಿ ಮಹಿಳೆಯರಿಗೆ
" ಪೊಲಿಟಿಕಲ್ ಪವರ್ " ನೀಡದ ರಾಜಕಾರಣಿಗಳು..!

ಬೆಂಗಳೂರು -
ರಾಜ್ಯದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯಲ್ಲಿ " ಮಹಿಳಾ ಶಕ್ತಿ " ಯನ್ನು ರಾಜಕೀಯ ಪಕ್ಷಗಳು ಸಂಪೂರ್ಣ ವಾಗಿ ತಿರಸ್ಕರಿಸಿವೆ. ೨.೪೮ ಕೋಟಿಯಷ್ಟು ಮಹಿಳಾ ಮತದಾರರಿಗೆ ನೀಡಲಾಗಿರುವ ಪ್ರಾತಿನಿಧ್ಯ ಗಮನಿಸಿದರೆ ಸ್ತ್ರೀ
ಶಕ್ತಿಯನ್ನು ವೋಟು ಬ್ಯಾಂಕ್ ಆಗಿ ಮಾತ್ರ ಬಳಸಿಕೊಂಡು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವಾಗ ಸಂಪೂರ್ಣ ನಿರ್ಲಕ್ಷ್ಯ ಮಾಡಿದಂತಿದೆ.

ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಪಕ್ಷಗಳು ಸುಮಾರು ಶೇ. ೫೦ ರಷ್ಟು ಮತಹೊಂದಿರುವ ಮಹಿಳೆಯರಿಗೆ ತಲಾ ಒಂದೊಂ ದರಂತೆ ಟಿಕೆಟ್ ನೀಡಿ ಕೈತೊಳೆದುಕೊಂಡಿವೆ. ೨೮ ಕ್ಷೇತ್ರಗಳಲ್ಲಿ ಕೇವಲ ಮೂರು ಕ್ಷೇತ್ರಗಳಲ್ಲಿ ಮಾತ್ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡಿ ಮಹಿಳಾ ಕಾಳಜಿ ಮೆರೆದಿವೆ.


Body:ಬಿಜೆಪಿಯು ಶೋಭಾ ಕರಂದ್ಲಾಜೆ ಅವರಿಗೆ ಚಿಕ್ಕಮಗಳೂರು - ಉಡುಪಿ , ಕಾಂಗ್ರೆಸ್ ಪಕ್ಷ ವೀಣಾ ಕಾಶಪ್ಪನವರ್ ಅವರಿಗೆ ಬಾಗಲಕೋಟೆ ಮತ್ತು ಜೆಡಿಎಸ್ ಪಕ್ಷ ಡಾ. ಸುನಿತಾ ದೇವಾನಂದ ಚೌಹಾಣ್ ಗೆ ಸ್ಪರ್ಧಿಸಲು ಟಿಕೆಟ್ ದಯಪಾಲಿಸಿ ಮಹಿಳೆಯರ ಪರ ತಮಗಿರುವ ಧೋರಣೆಯನ್ನು ಮೆರೆದಿವೆ.

ಸಂಸತ್ತು ಮತ್ತು ವಿದಾನಸಭೆಗಳಲ್ಲಿ ಮಹಿಳೆಯರಿಗೆ ಶೇ ೩೩ ರಷ್ಟು ಸ್ಥಾನಗಳನ್ನು ಮೀಸಲಿಡಬೇಕೆನ್ನುವ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾಗದೆ ಇಂದಿಗೂ ನೆನೆಗುದಿಗೆ ಬಿದ್ದಿದೆ. ರಾಜ್ಯಸಭೆ ಮಹಿಳಾ ಮೀಸಲಾತಿ ಮಸೂದೆಗೆ ೨೦೧೦ ರ ಮಾರ್ಚ್‌ ೫ ರಂದೇ ಅಸ್ತು ಎಂದರೆ ಲೋಕಸಭೆಯಲ್ಲಿ ಮಾತ್ರ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸದೇ ಮಸೂದೆಗೆ ಒಪ್ಪಿಗೆ ಕೊಡದೇ ಅಂಗೀಕಾರವಾಗುವುದು ಬಾಕಿಯಿದೆ.

ಕಾಂಗ್ರೆಸ್ ಪಕ್ಷಕ್ಕೆ ಮಹಿಳೆಯೇ ಆಗಿರುವ ಸೋನಿಯಾಗಾಂಧಿ ಅವರೇ ಅಧಿನಾಯಕಿ ಆದರೂ ಸ್ತ್ರೀ ಯರಿಗೆ ಹೆಚ್ಚಿನ ಟಿಕೆಟ್ ನ್ನು ಅವರ ಮಗ ರಾಹುಲ್ ಗಾಂಧಿ ನೀಡಿಲ್ಲ, ಮಹಿಳೆಯರ ಬಗ್ಗೆ ಅಪಾರ ಕಾಳಜಿ ವ್ಯಕ್ತಪಡಿಸುವ ಅಷ್ಟೆ ಏಕೆ ಮಹಿಳೆಯರು ಮುಡಿಯುವ " ಕಮಲ " ದ ಚಿನ್ಹೆ ಹೊಂದಿರುವ ಬಿಜೆಪಿ ಸಹ ಏಕೈಕ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಭತ್ತದ ತೆನೆ ಹೊತ್ತ ಮಹಿಳೆಯನ್ನೇ ಪಕ್ಷದ ಚಿನ್ಹೆ ಯಾಗಿ ಹೊಂದಿರುವ ಜಾತ್ಯಾತೀತ ಜನತಾ ದಳ ಸಹ ಶಾಸ್ತ್ರಕ್ಕೆಂದು ಕೇವಲ ಒಬ್ಬರಿಗೆ ಟಿಕೆಟ್ ನೀಡಿದೆ.

ಮಹಿಳೆಯರಿಗೆ ಟಿಕೆಟ್ ನೀಡಿದರೆ ಅವರು ಚುನಾವಣೆಯಲ್ಲಿ ಗೆಲ್ಲುವುದು ಕಷ್ಟ ಎನ್ನುವ ಕಾರಣಕ್ಕೆ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡಲು ಆಸಕ್ತಿ ತೋರಿಸಿಲ್ಲವೆಂದು ಹೇಳಲಾಗುತ್ತಿದೆ.
ಹಾಗಂತ ಪುರುಷರಿಗೆ ಸಮನಾಗಿ ಸ್ಪರ್ದೆ ಒಡ್ಡಿ ಗೆಲ್ಲುವ ಸಾಮರ್ಥ್ಯ ಇರುವ ಮಹಿಳಾ ಅಭ್ಯರ್ಥಿಗಳು ಇಲ್ಲವೆಂದಲ್ಲ. ಬಿಜೆಪಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಿಂದ ಕಣಕ್ಕಿಳಿಯಲು ಕೇಂದ್ರ ಸಚಿವರಾಗಿದ್ದ ದಿ. ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಬಹಳಷ್ಟು ಆಸಕ್ತಿ ತೋರಿಸಿ ಟಿಕೆಟ್ ಘೋಷಣೆ ಮಾಡುವ ಮುನ್ನವೇ ಚುನಾವಣೆ ಪ್ರಚಾರ ಸಹ ಆರಂಭಿಸಿದ್ದರು ಕೊನೇ ಕ್ಷಣದಲ್ಲಿ ಬಿಜೆಪಿ ವರಿಷ್ಟರು ತೇಜಸ್ವಿನಿ ಗೆ ಟಿಕೆಟ್ ನೀಡದೆ ವಂಚನೆ ಮಾಡಿದ ಆರೋಪಕ್ಕೆ ತುತ್ತಾದರು.

ಕಾಂಗ್ರೆಸ್ ಪಕ್ಷದಲ್ಲಿ ಸಹ ಬಹಳಷ್ಟು ಮಹಿಳೆಯರು ಟಿಕೆಟ್ ಗಾಗಿ ಲಾಬಿ ಮಾಡಿದರು. ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಪುಷ್ಪ ಅಮರನಾಥ್ ಸೇರಿದಂತೆ ಹಲವರು ಹಸ್ತದ ಟಿಕೆಟ್ ಗೆ ಅರ್ಜಿ ಹಾಕಿದ್ದರು. ಅಂಬರೀಶ್ ಅವರ ಪತ್ನಿ ಸುಮಲತ ಮಂಡ್ಯದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಕೇಳಿಕೊಂಡರು. ಕಾಂಗ್ರೆಸ್ ಪಕ್ಷ ಮಂಡ್ಯ ಕ್ಚೇತ್ರವನ್ನು ತನ್ನ ಮೈತ್ರಿ ಪಕ್ಷವಾದ ಜೆಡಿಎಸ್ ಗೆ ಬಿಟ್ಟುಕೊಟ್ಟು ಸುಮಲತಾ ಪಕ್ಷೇತರ ಅಭ್ಯರ್ಥಿ ಯಾಗಿ ಸ್ಪರ್ಧೆ ಮಾಡುವ ಸಂದರ್ಭ ಸೃಷ್ಟಿ ಮಾಡಿತು.

ರಾಜ್ಯದ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿದ್ದರೂ ಅಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಟಿಕೆಟ್ ನೀಡಿಲ್ಲ. ಒಟ್ಟು ೧೮.೯೩ ಲಕ್ಷ ಮತದಾರ ರಲ್ಲಿ ೯ ಲಕ್ಷ ೫೩.ಸಾವಿರ ಮಹಿಳಾ ಮತದಾರರು ಇದ್ದಾರೆ. ಪುರುಷರು ೯ ಲಕ್ಷ ೩೯ ಸಾವಿರ ಇದ್ದಾರೆ. ಪುರುಷರಿಗಿಂತ ಸುಮಾರು ೨೦ ಸಾವಿರದಷ್ಟು ಮಹಿಳಾ ಮತದಾರರಿದ್ದರೂ ಅಲ್ಲಿ ಮಹಿಳೆಯರಿಗೆ ಟಿಕೆಟ್ ನೀಡಲಾಗಿಲ್ಲ.



‌‌‌‌



Conclusion: ಇದು ರಾಜ್ಯದ ಕತೆಯಾದರೆ ರಾಷ್ಟ್ರ ಮಟ್ಟದಲ್ಲೂ ರಾಜಕೀಯ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಟಿಕೆಟ್ ನೀಡಿಲ್ಲ. ಪ್ರಮುಖ ರಾಜಕೀಯ ಪಕ್ಷಗಳು ತಾವು ಘೋಷಿಸಿದ ೧೦೦೯ ಅಭ್ಯರ್ಥಿಗಳಲ್ಲಿ ಕೇವಲ ೧೩೬ ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿವೆ. ದೇಶದ ಅತಿ ದೊಡ್ಡ ರಾಜಕೀಯ ಪಕ್ಷ ಗಳಾದ ಬಿಜೆಪಿ ೩೭೪ ಅಭ್ಯರ್ಥಿಗಳ ಪೈಕಿ ೪೫ ಸ್ತ್ರೀಯರಿಗೆ, ಕಾಂಗ್ರೆಸ್ ಪಕ್ಷ ೩೪೪ ಅಭ್ಯರ್ಥಿಗಳಲ್ಲಿ ೪೭ ಮಹಿಳೆಯರಿಗೆ ಟಿಕೆಟ್ ನೀಡಿವೆ. ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‌ ಮಾತ್ತ ಶೇಕಡಾ ೪೦.೫ ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ೪೨ ಅಭ್ಯರ್ಥಿಗಳಲ್ಲಿ ೧೭ ಮಹಿಳಾ ಕ್ಯಾಂಡಿಡೇಟ್ ಗಳಿಗೆ ಟಿಕೆಟ್ ನೀಡಿ ದೇಶದಲ್ಲೇ ಅತಿ ಹೆಷ್ಷು ಮಹಿಳೆಯರಿಗೆ ಪ್ರಾತಿನಿದ್ಯ ಪಕ್ಷ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಜ್ಯದಲ್ಲಿ ಇರುವ ೨೮ ಕ್ಷೇತ್ರಗಳಲ್ಲಿನ ೨ ಕೋಟಿ ೫೫ ಲಕ್ಷ ಪುರುಷ ಮತದಾರರಿಗೆ ಬಿಜೆಪಿ ೨೬ ಅಭ್ಯರ್ಥಿಗಳನ್ನು , ೨ ಕೋಟಿ ೪೮ ಲಕ್ಷ ಮಹಿಳಾ ಮತದಾರರಿಗೆ ಕೇವಲ ಒಬ್ಬರಿಗೆ ಟಿಕೆಟ್ ನೀಡಿದೆ. ಮಂಡ್ಯದಲ್ಲಿ ಪಕ್ಷೇತರ ಮಹಿಳಾ ಅಭ್ಯರ್ಥಿ ಸುಮಲತ ಅಂಬರೀಶ್ ಗೆ ಬೆಂಬಲ ಘೋಷಿಸಿದೆ. ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪಕ್ಷ ೨೮ ಕ್ಷೇತ್ರಗಳಲ್ಲಿ ಇಬ್ಬರಿಗೆ ಟಿಕೆಟ್ ನೀಡಿ ಹೆಚ್ಚಿನ ಸಂಖ್ಯೆಯ ಮಹಿಳಾ ಅಭ್ಯರ್ಥಿಗಳು ಲೋಕಸಭೆ ಪ್ರವೇಶಿಸದಂತೆ ಎಚ್ಚರಿಕೆ ವಹಿಸಿ ರಾಜಕೀಯ ಪಕ್ಷಗಳ ಲಿಂಗ ತಾರತಮ್ಯ ಧೋರಣೆಯನ್ನು ಬಹಿರಂಗಪಡಿಸಿವೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.