ETV Bharat / state

ಮನೆ ಬಾಡಿಗೆ ಕಟ್ಟದ ಆರೋಪ ಪ್ರಕರಣ- ನಿರ್ದೇಶಕ ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್

author img

By

Published : May 15, 2019, 9:23 AM IST

'ಮನೆ ಬಾಡಿಗೆ ಕೇಳಿದ್ದಕ್ಕಾಗಿ ನಟ ಆದಿತ್ಯ ಅವರ ತಂದೆ, ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಜೀವ ಬೆದರಿಕೆ ಹಾಕಿದ್ದಾರೆ' ಎಂದು ಆರೋಪಿಸಿ ಮನೆಯ ಮಾಲೀಕ ಜಿ.ಆರ್.ಪ್ರಸನ್ನ ಎಂಬುವರು ನಗರ ಪೊಲೀಸ್​ ಕಮಿಷನರ್​ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

ಸಂಗ್ರಹ ಚಿತ್ರ

ಬೆಂಗಳೂರು: ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್​​ ಬಾಬು ಅವರಿಗೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನು ಓದಿ: ರಾಜೇಂದ್ರಸಿಂಗ್ ಬಾಬು ಬಾಡಿಗೆ ವಿವಾದ: ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ ಮನೆ ಮಾಲೀಕ

ಘಟನೆ ನಡೆದ ನಂತರ ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಇದಕ್ಕೆ ಕ್ಯಾರೆ ಅನ್ನದ ರಾಜೇಂದ್ರ ಸಿಂಗ್ ಬಾಬು ಅವರ ಕುಟುಂಬ, ವಿದೇಶದಲ್ಲಿದ್ದೇವೆ ಎಂಬ ಕುಂಟು ನೆಪ ಹೇಳುತ್ತಿದೆ. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ಜೀವ ಬೆದರಿಕೆ‌ ಹಾಕಿರುವ ಹಿನ್ನೆಲೆ ಮನೆ ಮಾಲೀಕ ಪ್ರಸನ್ನ ಎಂಬುವರು, ನಿರ್ದೇಶಕ ರಾಜೇಂದ್ರ ಸಿಂಗ್​​​ ಕುಟುಂಬದ ವಿರುದ್ಧ ನಗರ ಪೊಲೀಸ್​ ಕಮೀಷನರ್​ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

ಕಳೆದ 7ತಿಂಗಳಿಂದ ಮನೆ ಬಾಡಿಗೆ ಕೊಡದೇ ಸತಾಯಿಸುತ್ತಿರುವುದರಿಂದ ಮನೆ ಮಾಲೀಕ ಪ್ರಸನ್ನ, ಬಾಬು ಕುಟುಂಬಸ್ಥರ ಬಳಿ ಬಾಡಿಗೆ ಕೇಳಲು ಹೋದಾಗ ಕೊಲೆ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ನ್ಯಾಯಾಲಯ ಹಾಗೂ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಬೆಂಗಳೂರು: ಮನೆ ಬಾಡಿಗೆ ವಿವಾದ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್​​ ಬಾಬು ಅವರಿಗೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಇದನ್ನು ಓದಿ: ರಾಜೇಂದ್ರಸಿಂಗ್ ಬಾಬು ಬಾಡಿಗೆ ವಿವಾದ: ಪ್ರಕರಣದ ಸಂಪೂರ್ಣ ಮಾಹಿತಿ ನೀಡಿದ ಮನೆ ಮಾಲೀಕ

ಘಟನೆ ನಡೆದ ನಂತರ ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರೂ ಇದಕ್ಕೆ ಕ್ಯಾರೆ ಅನ್ನದ ರಾಜೇಂದ್ರ ಸಿಂಗ್ ಬಾಬು ಅವರ ಕುಟುಂಬ, ವಿದೇಶದಲ್ಲಿದ್ದೇವೆ ಎಂಬ ಕುಂಟು ನೆಪ ಹೇಳುತ್ತಿದೆ. ಹಾಗಾಗಿ ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ಇನ್ನು ಜೀವ ಬೆದರಿಕೆ‌ ಹಾಕಿರುವ ಹಿನ್ನೆಲೆ ಮನೆ ಮಾಲೀಕ ಪ್ರಸನ್ನ ಎಂಬುವರು, ನಿರ್ದೇಶಕ ರಾಜೇಂದ್ರ ಸಿಂಗ್​​​ ಕುಟುಂಬದ ವಿರುದ್ಧ ನಗರ ಪೊಲೀಸ್​ ಕಮೀಷನರ್​ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ.

ಕಳೆದ 7ತಿಂಗಳಿಂದ ಮನೆ ಬಾಡಿಗೆ ಕೊಡದೇ ಸತಾಯಿಸುತ್ತಿರುವುದರಿಂದ ಮನೆ ಮಾಲೀಕ ಪ್ರಸನ್ನ, ಬಾಬು ಕುಟುಂಬಸ್ಥರ ಬಳಿ ಬಾಡಿಗೆ ಕೇಳಲು ಹೋದಾಗ ಕೊಲೆ ಬೆದರಿಕೆ ಹಾಕಿದ್ದರಂತೆ. ಈ ಸಂಬಂಧ ನ್ಯಾಯಾಲಯ ಹಾಗೂ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

Intro:ರಾಜೇಂದ್ರ ಸಿಂಗ್ ಬಾಬುಗೆ ಪೊಲೀಸ್ ನೋಟಿಸ್..!
ಮನೆ ಮಾಲೀಕರಿಗೆ ಜೀವ ಬೆದರಿಕೆ ಆರೋಪಕ್ಕೆ ಗುರಿಯಾಗಿರೋ ಬಾಬು ಕುಟುಂಬ

ಭವ್ಯ

File ಬಳಸಿ
ಇತ್ತಿಚ್ಚೆಗೆ ನಟ ಆದಿತ್ಯ ಹಾಗೂ ಆತನ ಕುಟುಂಬಸ್ಥರು ಮನೆ ಮಾಲೀಕರಿಗೆ ದುಡ್ಡು ನೀಡದೇ ಹಾಗೂ ಬೆದರಿಕೆ ಹಾಕಿರುವ ವಿಚಾರ ಸದ್ದು ಮಾಡಿತ್ತು. ಇದೀಗ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವ್ರಿಗೆ ಸದಾಶಿವನಗರ ಪೊಲೀಸರು ನೊಟಿಸ್ ಜಾರಿ ಮಾಡಿದ್ದಾರೆ. ಘಟನೆ ನಡೆದ ನಂತ್ರ ಹಲವು ಬಾರಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ರೂ ಕ್ಯಾರೆ ಅನ್ನದ ಬಾಬು ಫ್ಯಾಮಿಲಿ ಹೊರದೇಶದಲ್ಲಿ ಇದ್ದೀವಿ ಅಂತಾ ಕುಂಟು ನೆಪ ಹೇಳುತ್ತೀದ್ದಾರೆ..
ವಿಚಾರಣೆಗೆ ಹಾಜರಾಗುವಂತೆ ಸದಾಶಿವನಗರ ಪೊಲೀಸ್ರು‌12 ದಿನಗಳಿಂದ ಸೂಚಿಸ್ತಿದ್ದಾರೆ


ಇನ್ನು ಈ ವಿಚಾರವಾಗಿ ಮನೆ ಮಾಲೀಕ ಪ್ರಸನ್ನ ರಾಜೇಂದ್ರ ಸಿಂಗ್ ಕುಟುಂಬದ ವಿರುದ್ಧ ನಗರ ಪೊಲೀಸ್ ಕಮಿಷನರ್ ಗೆ ದೂರು ನೀಡಲು ನಿರ್ಧಾರ ಮಾಡಿದ್ದಾರೆ. ಯಾಕಂದ್ರೆ ಜಿ.ಆರ್.ಪ್ರಸನ್ನ ಕುಟುಂಬಕ್ಕೆ ಜೀವ ಬೆದರಿಕೆ‌ ಹಾಕಿರೋ ಹಿನ್ನಲೆ ಪೊಲೀಸ್ ಕಮಿಷನರ್ ಗೆ ದೂರು ನೀಡಲು ಮುಂದಾಗಿದ್ದಾರೆಮನೆ ಮಾಲೀಕ.


7 ತಿಂಗಳಿಂದ ಮನೆ ಬಾಡಿಗೆ ಕೊಡದೆ ಸತ್ತಾಯಿಸುತ್ತಿರುವ ಹಿನ್ನೆಲೆ ಮಾಲೀಕ ಪ್ರಸನ್ನ ರಾಜೇಂದ್ರಸಿಂಗ್ ಬಾಬು ಕುಟುಂಬಸ್ಥರ ಬಳಿ ಬಾಡಿಗೆ ಕೇಳಲು ಹೋದ್ರೆ ಕೊಲೆ ಬೆದರಿಕೆ ಹಾಕಿದ್ರು. ಈ ಸಂಬಂಧ ನ್ಯಾಯಲಯ ಹಾಗೂ ಸದಾಶಿವನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.

Body:KN_BNG_05-14-19-ADITYA_7204498-BHAVYAConclusion:KN_BNG_05-14-19-ADITYA_7204498-BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.