ETV Bharat / state

ಬೆಂಗಳೂರಲ್ಲಿ ಮತ್ತೆ ಗುಂಡಿನ ಸದ್ದು... ರೌಡಿ ಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್​ - undefined

ರಾಜಾಗೋಪಾಲನಗರ ರೌಡಿಶೀಟರ್ ಆದ ಮುನಿರಾಜು ಅಲಿಯಾಸ್​ ಮುನ್ನಾ ಎಂಬುವವನ ಮೇಲೆ ಪೊಲೀಸರು ಇಂದು ಗುಂಡಿನ ದಾಳಿ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರೌಡಿ ಶೀಟರ್
author img

By

Published : Mar 28, 2019, 12:37 PM IST

ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ರೌಡಿ ಶೀಟರ್ ಮುನಿರಾಜು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಮುನಿರಾಜು ಅಲಿಯಾಸ್​ ಮುನ್ನಾ ಎಂಬಾತನೇ ಪೊಲೀಸರಿಂದ ಗುಂಡೇಟು ತಿಂದಿರುವ ರೌಡಿಶೀಟರ್​. ಕ್ರಿಕೆಟ್ ಆಡುವ ವಿಚಾರಕ್ಕೆ ಮುನಿರಾಜು ಮತ್ತು ಅವರ ಗ್ಯಾಂಗ್​ನವರು ಸಂದೀಪ್ ಮತ್ತು ಸುದೀಪ್ ಎಂಬುವರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ನಂದಿನಿ ಲೇ ಔಟ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ರೌಡಿ ಶೀಟರ್

ತನಿಖೆ ಕೈಗೆತ್ತಿಕೊಂಡ ಪೊಲೀಸರು ಮುನಿರಾಜುನನ್ನು ಬಂಧಿಸಲು ಮುಂದಾದಾಗ ಬಲರಾಮ್ ಎಂಬ ಪಿಸಿ ಮೇಲೆ ಮುನಿರಾಜು ಹಲ್ಲೆ ನಡೆಸಿದ್ದ. ಈ ವೇಳೆ, ಪೊಲೀಸ್ ಇನ್ಸ್​ಪೆಕ್ಟರ್ ಲೋಹಿತ್ ಶರಣಾಗುವಂತೆ ಸೂಚನೆ ನೀಡಿದ್ದರು. ಆದರೆ, ಪುನಃ ಪ್ರತಿ ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಮುನ್ನಾ ಸೇರಿದಂತೆ ಪಿಸಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಆರೋಪಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದು, ಈತ ರಾಜಾಗೋಪಾಲನಗರ ರೌಡಿಶೀಟರ್ ಆಗಿದ್ದಾನೆ. ಈತನ ವಿರುದ್ಧ ನಂದಿನಿ ಲೇಔಟ್, ಮಹಾಲಕ್ಷೀ ಲೇಔಟ್, ಸುಬ್ರಮಣ್ಯಪುರ ಪೊಲೀಸ್​ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ಇನ್ನು ಈತನ ಜೊತೆ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ ನಗರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ರೌಡಿ ಶೀಟರ್ ಮುನಿರಾಜು ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಮುನಿರಾಜು ಅಲಿಯಾಸ್​ ಮುನ್ನಾ ಎಂಬಾತನೇ ಪೊಲೀಸರಿಂದ ಗುಂಡೇಟು ತಿಂದಿರುವ ರೌಡಿಶೀಟರ್​. ಕ್ರಿಕೆಟ್ ಆಡುವ ವಿಚಾರಕ್ಕೆ ಮುನಿರಾಜು ಮತ್ತು ಅವರ ಗ್ಯಾಂಗ್​ನವರು ಸಂದೀಪ್ ಮತ್ತು ಸುದೀಪ್ ಎಂಬುವರ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ನಂದಿನಿ ಲೇ ಔಟ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ರೌಡಿ ಶೀಟರ್

ತನಿಖೆ ಕೈಗೆತ್ತಿಕೊಂಡ ಪೊಲೀಸರು ಮುನಿರಾಜುನನ್ನು ಬಂಧಿಸಲು ಮುಂದಾದಾಗ ಬಲರಾಮ್ ಎಂಬ ಪಿಸಿ ಮೇಲೆ ಮುನಿರಾಜು ಹಲ್ಲೆ ನಡೆಸಿದ್ದ. ಈ ವೇಳೆ, ಪೊಲೀಸ್ ಇನ್ಸ್​ಪೆಕ್ಟರ್ ಲೋಹಿತ್ ಶರಣಾಗುವಂತೆ ಸೂಚನೆ ನೀಡಿದ್ದರು. ಆದರೆ, ಪುನಃ ಪ್ರತಿ ದಾಳಿ ಮಾಡಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಕಾಲಿಗೆ ಫೈರಿಂಗ್ ಮಾಡಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವ ಮುನ್ನಾ ಸೇರಿದಂತೆ ಪಿಸಿಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಆರೋಪಿ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದು, ಈತ ರಾಜಾಗೋಪಾಲನಗರ ರೌಡಿಶೀಟರ್ ಆಗಿದ್ದಾನೆ. ಈತನ ವಿರುದ್ಧ ನಂದಿನಿ ಲೇಔಟ್, ಮಹಾಲಕ್ಷೀ ಲೇಔಟ್, ಸುಬ್ರಮಣ್ಯಪುರ ಪೊಲೀಸ್​ ಠಾಣೆಗಳಲ್ಲಿ 9 ಪ್ರಕರಣಗಳು ದಾಖಲಾಗಿವೆ. ಇನ್ನು ಈತನ ಜೊತೆ ಭಾಗಿಯಾಗಿರುವ ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

KN_Bng_02_28-shoutout_bhavya-7204498
Bhavya

ರೌಡಿ ಶೀಟರ್ ಮೇಲೆ ಗುಂಡಿನ ಪೊಲೀಸರಿಂದ ದಾಳಿ ..
ಬೆಳ್ಳಂ ಬೆಳ್ಳಿ ಗ್ಗೆ ಮತ್ತೊಂದು ಗುಂಡಿನ ಸದ್ದು

ರೌಡಿ ಶೀಟರ್ ಮೇಲೆ ಪೊಲೀಸರು ಬೆಳ್ಳಂ ಬೆಳ್ಳಿಗ್ಗೆ ಗುಂಡು ಹಾರಿಸಿದ್ದಾರೆ. ಮುನಿರಾಜು @ಮುನ್ನಾ ಎಂಬಾತನ ಪೊಲಿಸರ ಗುಂಡಿಗೆ ಒಳಗಾದವನು..

ಕ್ರಿಕೆಟ್ ಆಡುವ ವಿಚಾರಕ್ಕೆ ಮುನಿರಾಜು ಮತ್ತು ಇನ್ನಿಬ್ಬರು ಆರೋಪಿಗಳು ಸಂದೀಪ್  ಮತ್ತು ಸುದೀಪ್ ಎಂಬುವವರ ಮೇಲೆ ಹಲ್ಲೆ ಮಾಡಿದ್ರು ಮುನಿರಾಜು ಗ್ಯಾಂಗ್. ತೀವ್ರವಾದ ಹಲ್ಲೆ ಹಿನ್ನೆಲೆಯಲ್ಲಿ ನಂದಿನಿಲೇಔಟ್  ಪೊಲೀಸರು 307 ಪ್ರಕರಣ ದಾಖಲಿಸಿಕೊಂಡಿದ್ರು .. ನಂತ್ರ ತನಿಖೆ ನಡೆಸಿ ಈ ಪ್ರಕರಣದ ಜಾಡು ಹಿಡಿದು  ಮುನಿರಾಜು ಅಲಿಯಾಸ್ ಮುನ್ನಾ ಬಂಧನ ಮಾಡಲು ಹೊರಟ ಬಲರಾಮ್ ಎಂಬ ಪಿಸಿ ಮೇಲೆ ಮುನಿರಾಜು ಹಲ್ಲೆ  ಇಂದು ಮುಂಜಾನೆ ಮಾಡಿದ್ದಾನೆ .ಈ ವೇಳೆ  ನಂದಿನಿ ಲೇಔಟ್ ಪೊಲೀಸ್ ಇನ್ಸಪೆಕ್ಟರ್ ಲೋಹಿತ್  ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದ್ರೆ ಮತ್ತೆ ಪ್ರತಿದಾಳಿ ಮಾಡಿದಾಗ ಆತ್ಮರಕ್ಷಣೆ ಗಾಗಿ ನಂದಿನಿ ಲೇಔಟ್ ಪೊಲೀಸ್ ಇನ್ಸ್ಪೆಕ್ಟರ್ ಲೋಹಿತ್  ಕಾಲಿಗೆ ಫೈರಿಂಗ್ ಮಾಡಿದ್ದಾರೆ..

ಇನ್ನು ಆರೋಪಿ  ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದು ತಾನು ನಂದಿನೇಲೇಔಟ್ನಲ್ಲಿ ಕುಖ್ಯಾತ ರೌಡಿಯಾಗಬೆಂಕೆಂದು ಆ ಏರಿಯಾದಲ್ಲಿ ತನ್ನ ಹವಾ ಮಾಡ್ತಿದ್ದ.. ಇನ್ನು ಈತ ರಾಜಾಗೋಪಲನಗ ರೌಡಿಶೀಟರ್ ಆಗಿದ್ದು ಈತನ ಮೇಲೆ ನಂದಿನಿಲೇಔಟ್ ,ಮಹಾಲಕ್ಷೀಲೇಔಟ್, ಸುಬ್ರಮಣ್ಯಪುರ ಠಾಣೆಗಳಲ್ಲಿ 9ಪ್ರಕರಣ ದಾಖಲಾಗಿದೆ. ಈತ ಹಲ್ಲೆ ಡಾಕಯಿತಿ ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅನ್ನೋದು ತನಿಖೆಯಲ್ಲಿ ತಿಳಿದು ಬಂದಿದೆ. ಇನ್ನು ಆರೋಪಿಯನ್ನ ಹಾಗೆ  ಗಾಯಗೊಳಗಾದ  ಪಿಸಿಯನ್ನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇದ್ರ ಜೊತೆ ಭಾಗಿಯಾದ ಆರೋಪಿಗಳಿಗೆ ಶೋಧ ಮುಂದುವರೆಸಿದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.