ETV Bharat / state

ಗಲಭೆ ಪ್ರಕರಣ: ಆರೋಪಿಗಳ‌‌‌ ಮೇಲೆ ಪೊಲೀಸ್ ಆಯುಕ್ತರ ಹೊಸ ಅಸ್ತ್ರ

author img

By

Published : Aug 16, 2020, 2:52 PM IST

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

Police station
Police station

ಬೆಂಗಳೂರು: ಕೋಮು ಗಲಭೆ, ಸರ್ಕಾರದ ಆಸ್ತಿ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಸಾರ್ವಜನಿಕ ಆಸ್ತಿ ಹಾಳು, ಠಾಣೆಗೆ ಬೆಂಕಿ, ದರೋಡೆ, ಹಲ್ಲೆ ಹೀಗೆ ಕುಕೃತ್ಯವೆಸಗಿ ಬಂಧಿತರಾದ ಆರೋಪಿಗಳು ಜೈಲಿನಿಂದ ಸಲೀಸಾಗಿ ಜಾಮೀನು ಪಡೆದು ಹೊರ ಬರಲು ಸಾಧ್ಯವಾಗಬಾರದೆಂದು ಬೆಂಗಳೂರು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಈ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಸದ್ಯ ಆರೋಪಿಗಳ ಪೋಷಕರು ತಮ್ಮ ಮಕ್ಕಳು ತಪ್ಪು ಮಾಡಿಲ್ಲವೆಂದು ಠಾಣೆ ಎದುರು ಬಂದು ಗಲಾಟೆ ಮಾಡ್ತಿದ್ದಾರೆ. ಜೊತೆಗೆ ಆರೋಪಿಗಳಿಗೆ ಜಾಮೀನು ಕೊಡಿಸುವ ಸಾಧ್ಯತೆಯೂ ಇದೆ. ಹೀಗಾಗಿ ಘಟನೆಯಿಂದ ಹಾನಿಗೊಳಗಾದ ಸಾರ್ವಜನಿಕರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಒಬ್ಬ ಆರೋಪಿ ಮೇಲೆ 25ಕ್ಕೂ ಹೆಚ್ಚು ಕೇಸ್:

ಒಬ್ಬ ವ್ಯಕ್ತಿ ಮೇಲೆ 25 ಕೇಸ್ ದಾಖಲಾದರೆ ಒಂದೊಂದು ಪ್ರಕರಣಕ್ಕೂ ಜಾಮೀನು ಪಡೆಯುವುದು ಅನಿವಾರ್ಯವಾಗುತ್ತದೆ. ಹಾಗೆಯೇ ಜೀವನಪೂರ್ತಿ ಕೋರ್ಟ್, ಕಚೇರಿ ಅಂತ ಅಲೆಯಬೇಕಾಗುತ್ತದೆ. ಇದು ಬೆಂಗಳೂರು ಪೊಲೀಸರ ಪ್ಲಾನ್‌.

ಈ ಹಿಂದೆ ಪಾದರಾಯನಪುರ ಬಳಿ ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ಆದಷ್ಟು ಬೇಗ ಜಾಮೀನು ಸಿಕ್ಕಿತ್ತು. ಸದ್ಯ ಪಾದರಾಯನಪುರದ ಹಾಗೆಯೇ ಈ ಘಟನೆ ಆಗಬಾರದು, ಆರೋಪಿಗಳಿಗೆ ತಪ್ಪಿನ ಅರಿವಾಗಬೇಕು ಎನ್ನುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ.

ಬೆಂಗಳೂರು: ಕೋಮು ಗಲಭೆ, ಸರ್ಕಾರದ ಆಸ್ತಿ ನಷ್ಟ, ಸರ್ಕಾರಿ ಕೆಲಸಕ್ಕೆ ಅಡ್ಡಿ, ಸಾರ್ವಜನಿಕ ಆಸ್ತಿ ಹಾಳು, ಠಾಣೆಗೆ ಬೆಂಕಿ, ದರೋಡೆ, ಹಲ್ಲೆ ಹೀಗೆ ಕುಕೃತ್ಯವೆಸಗಿ ಬಂಧಿತರಾದ ಆರೋಪಿಗಳು ಜೈಲಿನಿಂದ ಸಲೀಸಾಗಿ ಜಾಮೀನು ಪಡೆದು ಹೊರ ಬರಲು ಸಾಧ್ಯವಾಗಬಾರದೆಂದು ಬೆಂಗಳೂರು ಪೊಲೀಸರು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಈ ಕುರಿತು ತನಿಖೆ ನಡೆಸುತ್ತಿರುವ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ್ದಾರೆ.

ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುತ್ತಿದ್ದಾರೆ. ಸದ್ಯ ಆರೋಪಿಗಳ ಪೋಷಕರು ತಮ್ಮ ಮಕ್ಕಳು ತಪ್ಪು ಮಾಡಿಲ್ಲವೆಂದು ಠಾಣೆ ಎದುರು ಬಂದು ಗಲಾಟೆ ಮಾಡ್ತಿದ್ದಾರೆ. ಜೊತೆಗೆ ಆರೋಪಿಗಳಿಗೆ ಜಾಮೀನು ಕೊಡಿಸುವ ಸಾಧ್ಯತೆಯೂ ಇದೆ. ಹೀಗಾಗಿ ಘಟನೆಯಿಂದ ಹಾನಿಗೊಳಗಾದ ಸಾರ್ವಜನಿಕರಿಂದ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಒಬ್ಬ ಆರೋಪಿ ಮೇಲೆ 25ಕ್ಕೂ ಹೆಚ್ಚು ಕೇಸ್:

ಒಬ್ಬ ವ್ಯಕ್ತಿ ಮೇಲೆ 25 ಕೇಸ್ ದಾಖಲಾದರೆ ಒಂದೊಂದು ಪ್ರಕರಣಕ್ಕೂ ಜಾಮೀನು ಪಡೆಯುವುದು ಅನಿವಾರ್ಯವಾಗುತ್ತದೆ. ಹಾಗೆಯೇ ಜೀವನಪೂರ್ತಿ ಕೋರ್ಟ್, ಕಚೇರಿ ಅಂತ ಅಲೆಯಬೇಕಾಗುತ್ತದೆ. ಇದು ಬೆಂಗಳೂರು ಪೊಲೀಸರ ಪ್ಲಾನ್‌.

ಈ ಹಿಂದೆ ಪಾದರಾಯನಪುರ ಬಳಿ ಕೊರೊನಾ ವಾರಿಯರ್ಸ್‌ ಮೇಲೆ ಹಲ್ಲೆ ಮಾಡಿದ ಆರೋಪಿಗಳಿಗೆ ಆದಷ್ಟು ಬೇಗ ಜಾಮೀನು ಸಿಕ್ಕಿತ್ತು. ಸದ್ಯ ಪಾದರಾಯನಪುರದ ಹಾಗೆಯೇ ಈ ಘಟನೆ ಆಗಬಾರದು, ಆರೋಪಿಗಳಿಗೆ ತಪ್ಪಿನ ಅರಿವಾಗಬೇಕು ಎನ್ನುವ ಉದ್ದೇಶದಿಂದ ಈ ಹೆಜ್ಜೆ ಇಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.