ETV Bharat / state

ಜೆಡಿಎಸ್​ ಕಾರ್ಯಕರ್ತನ ಹತ್ಯೆ ಕಾರಣ ಕಂಡು ಬೆಚ್ಚಿಬಿದ್ದ ಪೊಲೀಸರು

author img

By

Published : Nov 20, 2019, 5:26 PM IST

Updated : Nov 20, 2019, 5:36 PM IST

ಜೆಡಿಎಸ್​ ಕಾರ್ಯಕರ್ತ ಸಂತೋಷ್​ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಕೊಲೆ ಮಾಡಿದ ದಂಪತಿಯನ್ನು ಬಂಧಿಸಲಾಗಿದೆ.

ಜೆಡಿಎಸ್​ ಕಾರ್ಯಕರ್ತನ ಹತ್ಯೆ ಆರೋಪಿಗಳ ಬಂಧನ

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಜೆಡಿಎಸ್​ ಕಾರ್ಯಕರ್ತ ಸಂತೋಷ್​ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಕೊಲೆ ಮಾಡಿದ ದಂಪತಿಯನ್ನು ಬಂಧಿಸಲಾಗಿದೆ.

ಇಂಟರೆಸ್ಟಿಂಗ್​ ವಿಷಯ ಎಂದರೆ ಹತ ಸಂತೋಷ್​​ ಮಾಡಿದ ಬ್ಲ್ಯಾಕ್​ ಮೇಲ್​ ತಂತ್ರವೇ ಆತನ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಜೆಡಿಎಸ್​ ಕಾರ್ಯಕರ್ತನ ಹತ್ಯೆ ಆರೋಪಿಗಳ ಬಂಧನ

ಮಂಜುನಾಥ್ ಮತ್ತು ಸಾವಿತ್ರಿ ಬಂಧಿತ ದಂಪತಿ. ಹತ ಸಂತೋಷ್ ಕೊಲೆ ಆರೋಪಿ ಮಂಜುನಾಥ್​ ಜೊತೆ ಸ್ನೇಹವಿತ್ತು. ಆರೋಪಿ ಆಟೊ ಡ್ರೈವರ್​ ಆಗಿದ್ದ, ಜೊತೆಗೆ ಚೀಟಿ ಸಹ ನಡೆಸುತ್ತಿದ್ದ. ಸಲುಗೆಯಿಂದ ಆಗಾಗ್ಗೆ ನಂದಿನಿ ಲೇಔಟ್​​ನಲ್ಲಿರುವ ಸ್ನೇಹಿತ ಮಂಜುನಾಥ್​ ಮನೆಗೆ ಬರುತ್ತಿದ್ದ ಸಂತೋಷ್​, ಮಂಜುನಾಥ್​ ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದನಂತೆ. ಜೊತೆಗೆ ಅವರ ಮನೆಗೆ ರಹಸ್ಯ ಕ್ಯಾಮೆರಾ ಅಳವಡಿಸಿ ದಂಪತಿ ಸ್ನಾನ ಮಾಡುವ ದೃಶ್ಯ ಹಾಗೂ ಖಾಸಗಿ ದೃಶ್ಯಗಳನ್ನು ರೆಕಾರ್ಡ್​ ಮಾಡಿದ್ದನಂತೆ. ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್​ ಮಾಡಲು ಯತ್ನಿಸಿದ ಸಂತೋಷ್​​ನನ್ನು ದಂಪತಿ ಮನೆಗೆ ಕರೆಸಿ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಗೋಣಿಚೀಲದಲ್ಲಿ ತುಂಬಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಸಿಕ್ಕಿಬಿದ್ದದ್ದು ಹೇಗೆ?
ಗೋಣಿಚೀಲದಲ್ಲಿ ಸಿಕ್ಕ ಹೆಣ ಹೇಗೆ ಬಂತು, ಕೊಲೆ ಮಾಡಿದವರು ಯಾರು ಎಂಬೆಲ್ಲಾ ಸಾಕ್ಷಿಗಳು ಸಿಗದೆ ಪೊಲೀಸರು ಬೇಸತ್ತಿದ್ದಾಗ. ಅನತಿ ದೂರದಲ್ಲಿದ್ದ ಸಿಸಿ ಕ್ಯಾಮೆರಾವೊಂದು ತನಿಖೆಗೆ ಸಹಕಾರಿಯಾಗಿದೆ. ಆ ಕ್ಯಾಮೆರಾದ ಫುಟೇಜ್​ ತೆಗೆದು ನೋಡಿದಾಗ ಆಟೊದಲ್ಲಿ ಹೆಣ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ. ಅದನ್ನು ಆಧಾರವಾಗಿಟ್ಟುಕೊಂಡು ಮಂಜುನಾಥ್​ ದಂಪತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಂಗಳೂರು: ಭಾರಿ ಕುತೂಹಲ ಕೆರಳಿಸಿದ್ದ ಜೆಡಿಎಸ್​ ಕಾರ್ಯಕರ್ತ ಸಂತೋಷ್​ ಕೊಲೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ಕೊಲೆ ಮಾಡಿದ ದಂಪತಿಯನ್ನು ಬಂಧಿಸಲಾಗಿದೆ.

ಇಂಟರೆಸ್ಟಿಂಗ್​ ವಿಷಯ ಎಂದರೆ ಹತ ಸಂತೋಷ್​​ ಮಾಡಿದ ಬ್ಲ್ಯಾಕ್​ ಮೇಲ್​ ತಂತ್ರವೇ ಆತನ ಕೊಲೆಗೆ ಕಾರಣ ಎಂಬುದು ತನಿಖೆಯಿಂದ ಗೊತ್ತಾಗಿದೆ.

ಜೆಡಿಎಸ್​ ಕಾರ್ಯಕರ್ತನ ಹತ್ಯೆ ಆರೋಪಿಗಳ ಬಂಧನ

ಮಂಜುನಾಥ್ ಮತ್ತು ಸಾವಿತ್ರಿ ಬಂಧಿತ ದಂಪತಿ. ಹತ ಸಂತೋಷ್ ಕೊಲೆ ಆರೋಪಿ ಮಂಜುನಾಥ್​ ಜೊತೆ ಸ್ನೇಹವಿತ್ತು. ಆರೋಪಿ ಆಟೊ ಡ್ರೈವರ್​ ಆಗಿದ್ದ, ಜೊತೆಗೆ ಚೀಟಿ ಸಹ ನಡೆಸುತ್ತಿದ್ದ. ಸಲುಗೆಯಿಂದ ಆಗಾಗ್ಗೆ ನಂದಿನಿ ಲೇಔಟ್​​ನಲ್ಲಿರುವ ಸ್ನೇಹಿತ ಮಂಜುನಾಥ್​ ಮನೆಗೆ ಬರುತ್ತಿದ್ದ ಸಂತೋಷ್​, ಮಂಜುನಾಥ್​ ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳಲು ಬಯಸಿದ್ದನಂತೆ. ಜೊತೆಗೆ ಅವರ ಮನೆಗೆ ರಹಸ್ಯ ಕ್ಯಾಮೆರಾ ಅಳವಡಿಸಿ ದಂಪತಿ ಸ್ನಾನ ಮಾಡುವ ದೃಶ್ಯ ಹಾಗೂ ಖಾಸಗಿ ದೃಶ್ಯಗಳನ್ನು ರೆಕಾರ್ಡ್​ ಮಾಡಿದ್ದನಂತೆ. ಈ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ ಮೇಲ್​ ಮಾಡಲು ಯತ್ನಿಸಿದ ಸಂತೋಷ್​​ನನ್ನು ದಂಪತಿ ಮನೆಗೆ ಕರೆಸಿ ಕೊಡಲಿಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾರೆ. ನಂತರ ಗೋಣಿಚೀಲದಲ್ಲಿ ತುಂಬಿ ಎಸೆದಿದ್ದಾರೆ ಎಂದು ತಿಳಿದುಬಂದಿದೆ.

ಸಿಕ್ಕಿಬಿದ್ದದ್ದು ಹೇಗೆ?
ಗೋಣಿಚೀಲದಲ್ಲಿ ಸಿಕ್ಕ ಹೆಣ ಹೇಗೆ ಬಂತು, ಕೊಲೆ ಮಾಡಿದವರು ಯಾರು ಎಂಬೆಲ್ಲಾ ಸಾಕ್ಷಿಗಳು ಸಿಗದೆ ಪೊಲೀಸರು ಬೇಸತ್ತಿದ್ದಾಗ. ಅನತಿ ದೂರದಲ್ಲಿದ್ದ ಸಿಸಿ ಕ್ಯಾಮೆರಾವೊಂದು ತನಿಖೆಗೆ ಸಹಕಾರಿಯಾಗಿದೆ. ಆ ಕ್ಯಾಮೆರಾದ ಫುಟೇಜ್​ ತೆಗೆದು ನೋಡಿದಾಗ ಆಟೊದಲ್ಲಿ ಹೆಣ ಸಾಗಿಸುತ್ತಿರುವ ದೃಶ್ಯ ಕಂಡುಬಂದಿದೆ. ಅದನ್ನು ಆಧಾರವಾಗಿಟ್ಟುಕೊಂಡು ಮಂಜುನಾಥ್​ ದಂಪತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.

Intro:ಅಶ್ಲೀಲ ವಿಡೀಯೋ ತೋರಿಸಿ ಬ್ಲಾಕ್ಮೇಲ್...!
ಗಂಡನ ಮುಂದೆಯೇ ಪತ್ನಿಯನ್ನ ಸೆಕ್ಸ್ಗೆ ಕರೀತಿದ್ದ ಭೂಪ ಮುಗಿಸೆ ಬಿಟ್ಟರು ದಂಪತಿಗಳು

ಬೈಟ್ ಶಶಿಕುಮಾರ್ ಉತ್ತರ ವಿಭಾಗ ಡಿಸಿಪಿ
Cc ಬಳಸಿ

Mojo
ನಂದಿನಿ‌ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜೆಡಿಎಸ್ ಕಾರ್ಯಕರ್ತ ಸಂತೋಷ್ ಕೊಲೆ ಪ್ರಕರಣ ವನ್ನ‌ ಉತ್ತರ ವಿಭಾಗ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಜುನಾಥ್ ಮತ್ತು ಸಾವಿತ್ರಿ ಬಂಧಿತ ಆರೋಪಿಗಳು

ಸಂತೋಷ್ ಹಾಗೂ ಮಂಜುನಾಥ್ ಇಬ್ಬರು ಸ್ನೇಹಿತರಾಗಿದ್ದರು.
ಚೀಟಿ ವ್ಯವಹಾರದ ಜೊತೆಗೆ ಆಟೋ ಡ್ರೈವರ್ ಆಗಿರುವ ಮಂಜುನಾಥ್ ಕೊಲೆಯಾದ ಸಂತೋಷ್ ಜೊತೆ ಸ್ನೇಹ ಹೊಂದಿದ್ದ. ಆಗಾಗ‌ ಮನೆಗೆ ಬರುತ್ತಿದ ಸಂತೋಷ್ ಮಂಜುನಾಥ್ ಹೆಂಡತಿ ಸಾವಿತ್ರಿ ಮೇಲೆ ಒಂದು ಕಣ್ಣಿಟ್ಟು ಆಕೆಯ ಜೊತೆ ಅಕ್ರಮ ಸಂಬಂಧ ಇಟ್ಟುಕೊಳ್ಳಲು ಬಯಸಿ ಮತ್ತೊಂದೆಡೆ ದಂಪತಿಗಳಿಬ್ಬರು ಸ್ನಾನ ಮಾಡುತ್ತಿರುವ ಖಾಸಗಿ ಕ್ಷಣದ ವಿಡಿಯೋ , ಹಾಗೆ ಮಂಜುನಾಥ್ ಮನೆಗೆ ಕ್ಯಾಮಾರಾ ಫಿಕ್ಸ್ ಮಾಡಿ ಒಂದಷ್ಟು ಪ್ರೈವೇಟ್ ಫೋಟೋ ತೆಗೆದುಕೊಂಡಿದ್ದ.

ಇನ್ನು ಸಂತೋಷ್ ಈ ವಿಡಿಯೋ ಇಟ್ಟುಕೊಂಡು ಹಣ ನೀಡುವಂತೆ ಬ್ಲಾಕ್ ಮೇಲೆ ಮಾಡ್ತಿದ್ದ. ಬೇಸತ್ತ ಗಂಡ ಹೆಂಡತಿ ಫ್ಲಾನ್ ಮಾಡಿ ನಂದೀನಿಲೇಔಟ್ ಬಳಿ ಇರುವ ಮನೆಗೆ ಕರೆಸಿ ಕೊಡಲಿಯಲ್ಲಿ ತಲೆ ಮೇಲೆ ಹಲ್ಲೆ ನಡೆಸಿ ನಂತರ ಗೋಣಿಚೀಲದಲ್ಲಿ ಹೆಣವನ್ನ ತುಂಬಿ ತನ್ನ ಆಟೋದಲ್ಲೇ ಹೆಣವನ್ನ ಮಂಜೂನಾಥ್ ಸಾಗಿಸಿ ನಂತ್ರ ಹೆಣದ ಮುಂದೆ ನಿಂತು ಮೊಸಳೆ ಕಣ್ಣೀರಿಟ್ಟಿದ್ದಾರೆ .

ಇನ್ನು ನಂದಿನಿ ಲೇಔಟ್ ಪೊಲಿಸರು ಎವಿಡೆನ್ಸೇ ಇಲ್ಲದೆ ಒದ್ದಾಡಿ ಘಟನೆ ನಡೆದ ಅನತಿ ದೂರದಲ್ಲಿರುವ ಸಿಸಿಟಿವಿಯನ್ನ ಪರಿಶೀಲನೆ ನಡೆಸಿದಾಗ ಇಡೀ ಪ್ರಕರಣ ಹೊರ ಬಿದ್ದಿದೆ. ಆಟೋದಲ್ಲಿ ಹೆಣ ಸಾಗಿಸುವ ದೃಶ್ಯ ಸೆರೆಯಾಗಿದ್ದು ಸದ್ಯ ಆರೋಪಿಗಳ ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.ಇನ್ನು ಹತ್ಯೆ ನಡೆಸೋದು ಅಕ್ಷಮ್ಯ ಅಪರಾಧ ಹಾಗಂತ ಹತ್ಯೆಗೆ ಕಾರಣವೂ ಕನ್ಸಿಡರ್ ಮಾಡಲೇ ಬೇಕಿದೆ. ಸದ್ಯ ಆರೋಪಿಗಳನ್ನ ಈಗಾಗಲೆ ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ.


Body:KN_BNG_06_MURDER_7204498Conclusion:KN_BNG_06_MURDER_7204498
Last Updated : Nov 20, 2019, 5:36 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.