ಬೆಂಗಳೂರು: ರಾಜಧಾನಿಯ ಪ್ರಮುಖ ವ್ಯಾಪಾರ ಕೇಂದ್ರವಾದ ಮಲ್ಲೇಶ್ವರಂನಲ್ಲಿ ಎಂದಿನಂತೆ ಜನರು ರಸ್ತೆಯಲ್ಲಿ ಓಡಾಡುತ್ತಿದ್ದು, ಕೊರೊನಾ ವೈರಸ್ನ್ನು ಲೆಕ್ಕಿಸದೇ ಬೇಕಾಬಿಟ್ಟಿ ತಿರುಗಾಡುತ್ತಿರುವುದು ಕಂಡು ಬಂದಿದೆ.
ರಾಜ್ಯದಲ್ಲಿ ದಿನಗಳೆದಂತೆ ಕೊರೊನಾ ವೈರಸ್ ಹೆಚ್ಚಾಗುತ್ತಿರುವುದರಿಂದ ಪರಿಹಾರದ ಕ್ರಮವಾಗಿ ಸರ್ಕಾರ ಈಗ ಕರ್ಫ್ಯೂ ಮೊರೆ ಹೋಗಿದೆ. ಈ ನಡುವೆ ಜನ ಹೂವು, ಹಣ್ಣು, ತರಕಾರಿಗಳನ್ನು ಕೊಂಡುಕೊಳ್ಳಲು ಅಧಿಕ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಧಾವಿಸಿದ್ದಾರೆ.
ಹನ್ನೆರಡು ಗಂಟೆಯವರೆಗೆ ದಿನಸಿ ಅಂಗಡಿ ತೆರೆದಿರುವ ಕಾರಣ, ಪ್ರತಿ ನಿತ್ಯದಂತೆ ರೋಡ್ನಲ್ಲಿ ವಾಹನಗಳು ಸಂಚರಿಸುತ್ತಿವೆ. ಡೆಡ್ಲೈನ್ ನಂತರ ಬ್ಯಾರಿಕೇಡ್ ಹಾಕಿದ್ದರೂ ಪೊಲೀಸರು ಯಾವುದೇ ಪರಿಶೀಲನೆಯನ್ನು ನಡೆಸುತ್ತಿಲ್ಲದಿರುವುದು ಕಂಡು ಬರುತ್ತಿದೆ.
ಓದಿ: ಚಾಮರಾಜನಗರ ಘಟನೆ ಕುರಿತು ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮ: ಸಿಎಂ ಬಿಎಸ್ವೈ ಟ್ವೀಟ್