ETV Bharat / state

ನಾಳೆಯಿಂದ Online class.. ಗ್ರಾಮೀಣ ಭಾಗದಲ್ಲಿ ಶೇ.5ರಷ್ಟು ಮಕ್ಕಳ ದಾಖಲಾತಿಯಾಗಿಲ್ಲ ಎಂದ ರೂಪ್ಸಾ

author img

By

Published : Jun 30, 2021, 4:20 PM IST

Updated : Jun 30, 2021, 4:38 PM IST

ಕೊರೊನಾದಿಂದಾಗಿ ವರ್ಷದಿಂದಲೂ ಶಾಲೆಗಳು ಬಾಗಿಲು ಹಾಕಿವೆ. ಆದರೆ ರಾಜ್ಯದಲ್ಲಿ ನಾಳೆಯಿಂದ ಪಾಠ ಆರಂಭಿಸಲು ಸರ್ಕಾರ ಅನುಮತಿ ನೀಡಿದೆ. ಕೊರೊನಾ ಹಿನ್ನೆಲೆ ಆನ್​ಲೈನ್​ನಲ್ಲಿ ಮಾತ್ರ ತರಗತಿ ಆರಂಭಕ್ಕೆ ಸೂಚಿಸಲಾಗಿದೆ. ಈ ಮಧ್ಯೆ ಗ್ರಾಮೀಣ ಭಾಗದಲ್ಲಿ ಶೇ. 5 ರಷ್ಟು ಸಹ ವಿದ್ಯಾರ್ಥಿಗಳ ದಾಖಲಾತಿ ಆಗಿಲ್ಲವೆಂದು ರೂಪ್ಸಾ ಹೇಳಿದೆ.

Online class
Online class

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ತರಗತಿ ಆರಂಭಿಸಲು ಅನುಮತಿ ನೀಡಲಾಗಿದ್ದು, ಕೊರೊನಾ ಕಾರಣಕ್ಕೆ ಭೌತಿಕ ತರಗತಿಗೆ ಬ್ರೇಕ್ ಹಾಕಲಾಗಿದೆ. ಬದಲಿಗೆ, ಆನ್​ಲೈನ್ ಮೂಲಕ ಶೈಕ್ಷಣಿಕ ವರ್ಷ ಆರಂಭಿಸಲು ಸೂಚಿಸಲಾಗಿದೆ.

ಈ ಕುರಿತು ಇಂದು ರೂಪ್ಸಾ(ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ)ದ ರಾಜ್ಯಾಧ್ಯಕ್ಷ ಹಾಲನೂರು ಎಸ್. ಲೇಪಾಕ್ಷಿ ಮಾತನಾಡಿ, ನಾಳೆಯಿಂದ ಪಾಠ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ‌. ತರಗತಿ ಆರಂಭವಾದರೆ ಆರ್​​​ಟಿಇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. 1 ರಿಂದ 6ನೇ ತರಗತಿವರೆಗೆ ಉಚಿತ ಶಿಕ್ಷಣಕ್ಕೆ ಅವಕಾಶ ಇದೆ. ಉಚಿತ ಶಿಕ್ಷಣ ಮುಂದುವರೆಸಲು 2 ತಿಂಗಳ ಹಿಂದೆಯೇ ಇಲಾಖೆ ಉನ್ನತೀಕರಣಕ್ಕೆ ಅರ್ಜಿ ಹಾಕಬೇಕು. ಆದರೆ ಇಲ್ಲಿಯವರೆಗೂ ಅರ್ಜಿ ಬಿಟ್ಟಿಲ್ಲ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶೇ.5ರಷ್ಟು ಮಕ್ಕಳ ದಾಖಲಾತಿಯಾಗಿಲ್ಲ ಎಂದ ರೂಪ್ಸಾ

ಗುರುವಾರದಿಂದ ತರಗತಿಗಳು ಆರಂಭವಾಗುತ್ತಿವೆ, ಆದರೆ ಮಕ್ಕಳ ದಾಖಲಾತಿಯೇ ಆಗಿಲ್ಲ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಈ ಬಾರಿ ಶೇ.5ರಷ್ಟು ಕೂಡ ದಾಖಲಾತಿ ಆಗಿಲ್ಲ. ಇತ್ತ ಗ್ರಾಮೀಣ ಭಾಗದಲ್ಲಿ ಆನ್​​​ಲೈನ್ ಕ್ಲಾಸ್​ಗೆ​​​​ ಪೋಷಕರಿಂದ ವಿರೋಧವಿದೆ. ಹೀಗಾಗಿ ಪಾಳಿ ಪದ್ಧತಿ ಅಥವಾ ವಿದ್ಯಾಗಮ ಆರಂಭಿಸಿ ಅಂತ ಮನವಿ ಮಾಡಿದರು.

ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಮಾಡಬಾರದು

ಶುಲ್ಕ ವಿಚಾರವಾಗಿವನ್ನೂ ಪ್ರಸ್ತಾಪಿಸಿದ ಅವರು, ಈ ಬಾರಿ ಕಾರ್ಪೊರೇಟ್​ ಶಾಲೆಗಳಲ್ಲಿ ಮಾತ್ರ ಶುಲ್ಕ ಕಡಿತ ಮಾಡಬೇಕು. ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಮಾಡಬಾರದು. ಬಜೆಟ್ ಶಾಲೆಗಳಲ್ಲಿ ಶುಲ್ಕ ಕೇವಲ 15 ರಿಂದ 20 ಸಾವಿರ ಮಾತ್ರ ಪಡೆಯುತ್ತಾರೆ. ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಈ ಬಾರಿ ಒಪ್ಪಲ್ಲ. ಶಾಲೆಗಳ ಉನ್ನತೀಕರಣ ಮಾಡದೇ ತರಗತಿ ಆರಂಭಿಸೋದು ಸರಿಯಲ್ಲ. ಆರ್​ಟಿಇ ಅಡಿಯಲ್ಲಿ 15 ರಿಂದ 20 ಸಾವಿರ ಮಕ್ಕಳಿದ್ದಾರೆ. ಇದರಲ್ಲಿ 4 ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಹುದು. ಹೀಗಾಗಿ ಕೂಡಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ರೂಪ್ಸಾ ಹೆಸರು ದುರ್ಬಳಕೆ

ರೂಪ್ಸಾ ಹೆಸರನ್ನ ಲೋಕೇಶ್ ತಾಳಿಕಟ್ಟೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇಪಾಕ್ಷಿ ಆರೋಪಿಸಿದ್ದಾರೆ. ಹೈಕೋರ್ಟ್​ನಲ್ಲಿ ಕೇಸ್ ಹಾಕಿದರು, ಆದರೆ ಅದು ವಜಾ ಆಯ್ತು. ಬಳಿಕ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್​ಗೆ ಅಪೀಲು ಹಾಕಿದಾಗ ಸ್ಟೇ ಕೊಟ್ಟಿದ್ದರೂ ಕೂಡ ಹೆಸರು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

ಬೆಂಗಳೂರು: ರಾಜ್ಯಾದ್ಯಂತ ನಾಳೆಯಿಂದ ತರಗತಿ ಆರಂಭಿಸಲು ಅನುಮತಿ ನೀಡಲಾಗಿದ್ದು, ಕೊರೊನಾ ಕಾರಣಕ್ಕೆ ಭೌತಿಕ ತರಗತಿಗೆ ಬ್ರೇಕ್ ಹಾಕಲಾಗಿದೆ. ಬದಲಿಗೆ, ಆನ್​ಲೈನ್ ಮೂಲಕ ಶೈಕ್ಷಣಿಕ ವರ್ಷ ಆರಂಭಿಸಲು ಸೂಚಿಸಲಾಗಿದೆ.

ಈ ಕುರಿತು ಇಂದು ರೂಪ್ಸಾ(ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ)ದ ರಾಜ್ಯಾಧ್ಯಕ್ಷ ಹಾಲನೂರು ಎಸ್. ಲೇಪಾಕ್ಷಿ ಮಾತನಾಡಿ, ನಾಳೆಯಿಂದ ಪಾಠ ಆರಂಭಕ್ಕೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ‌. ತರಗತಿ ಆರಂಭವಾದರೆ ಆರ್​​​ಟಿಇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಾರೆ. 1 ರಿಂದ 6ನೇ ತರಗತಿವರೆಗೆ ಉಚಿತ ಶಿಕ್ಷಣಕ್ಕೆ ಅವಕಾಶ ಇದೆ. ಉಚಿತ ಶಿಕ್ಷಣ ಮುಂದುವರೆಸಲು 2 ತಿಂಗಳ ಹಿಂದೆಯೇ ಇಲಾಖೆ ಉನ್ನತೀಕರಣಕ್ಕೆ ಅರ್ಜಿ ಹಾಕಬೇಕು. ಆದರೆ ಇಲ್ಲಿಯವರೆಗೂ ಅರ್ಜಿ ಬಿಟ್ಟಿಲ್ಲ ಎಂದು ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶೇ.5ರಷ್ಟು ಮಕ್ಕಳ ದಾಖಲಾತಿಯಾಗಿಲ್ಲ ಎಂದ ರೂಪ್ಸಾ

ಗುರುವಾರದಿಂದ ತರಗತಿಗಳು ಆರಂಭವಾಗುತ್ತಿವೆ, ಆದರೆ ಮಕ್ಕಳ ದಾಖಲಾತಿಯೇ ಆಗಿಲ್ಲ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಈ ಬಾರಿ ಶೇ.5ರಷ್ಟು ಕೂಡ ದಾಖಲಾತಿ ಆಗಿಲ್ಲ. ಇತ್ತ ಗ್ರಾಮೀಣ ಭಾಗದಲ್ಲಿ ಆನ್​​​ಲೈನ್ ಕ್ಲಾಸ್​ಗೆ​​​​ ಪೋಷಕರಿಂದ ವಿರೋಧವಿದೆ. ಹೀಗಾಗಿ ಪಾಳಿ ಪದ್ಧತಿ ಅಥವಾ ವಿದ್ಯಾಗಮ ಆರಂಭಿಸಿ ಅಂತ ಮನವಿ ಮಾಡಿದರು.

ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಮಾಡಬಾರದು

ಶುಲ್ಕ ವಿಚಾರವಾಗಿವನ್ನೂ ಪ್ರಸ್ತಾಪಿಸಿದ ಅವರು, ಈ ಬಾರಿ ಕಾರ್ಪೊರೇಟ್​ ಶಾಲೆಗಳಲ್ಲಿ ಮಾತ್ರ ಶುಲ್ಕ ಕಡಿತ ಮಾಡಬೇಕು. ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಮಾಡಬಾರದು. ಬಜೆಟ್ ಶಾಲೆಗಳಲ್ಲಿ ಶುಲ್ಕ ಕೇವಲ 15 ರಿಂದ 20 ಸಾವಿರ ಮಾತ್ರ ಪಡೆಯುತ್ತಾರೆ. ಬಜೆಟ್ ಶಾಲೆಗಳಲ್ಲಿ ಶುಲ್ಕ ಕಡಿತ ಈ ಬಾರಿ ಒಪ್ಪಲ್ಲ. ಶಾಲೆಗಳ ಉನ್ನತೀಕರಣ ಮಾಡದೇ ತರಗತಿ ಆರಂಭಿಸೋದು ಸರಿಯಲ್ಲ. ಆರ್​ಟಿಇ ಅಡಿಯಲ್ಲಿ 15 ರಿಂದ 20 ಸಾವಿರ ಮಕ್ಕಳಿದ್ದಾರೆ. ಇದರಲ್ಲಿ 4 ಸಾವಿರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಹುದು. ಹೀಗಾಗಿ ಕೂಡಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದರು.

ರೂಪ್ಸಾ ಹೆಸರು ದುರ್ಬಳಕೆ

ರೂಪ್ಸಾ ಹೆಸರನ್ನ ಲೋಕೇಶ್ ತಾಳಿಕಟ್ಟೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಲೇಪಾಕ್ಷಿ ಆರೋಪಿಸಿದ್ದಾರೆ. ಹೈಕೋರ್ಟ್​ನಲ್ಲಿ ಕೇಸ್ ಹಾಕಿದರು, ಆದರೆ ಅದು ವಜಾ ಆಯ್ತು. ಬಳಿಕ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್​ಗೆ ಅಪೀಲು ಹಾಕಿದಾಗ ಸ್ಟೇ ಕೊಟ್ಟಿದ್ದರೂ ಕೂಡ ಹೆಸರು ಬಳಕೆ ಮಾಡುತ್ತಿದ್ದಾರೆ. ಹೀಗಾಗಿ, ಅವರ ವಿರುದ್ಧ ಕಾನೂನಾತ್ಮಕವಾಗಿ ಕ್ರಮಕೈಗೊಳ್ಳಲಿದ್ದೇವೆ ಎಂದು ಎಚ್ಚರಿಕೆ ರವಾನಿಸಿದ್ದಾರೆ.

Last Updated : Jun 30, 2021, 4:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.