ETV Bharat / state

ಹಲಾಲ್ ಕಟ್ ವಿವಾದದ ಬೆನ್ನಲ್ಲೇ ಮಾಂಸ ವ್ಯಾಪಾರಿಗಳಿಗೆ ಶಾಕ್.. - ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್

ಸ್ಲಾಟರ್ ಹೌಸ್​ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಬಿಎಂಪಿಗೆ ನೋಟಿಸ್ ನೀಡಲಾಗಿದೆ.

ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್
ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್
author img

By

Published : Apr 30, 2022, 10:58 PM IST

Updated : May 2, 2022, 12:04 PM IST

ಬೆಂಗಳೂರು: ಹಲಾಲ್ ಕಟ್ ವಿವಾದದ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ ಎರಡು ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್ ನೀಡಲಾಗಿದೆ.‌ ಈ ಮೂಲಕ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.

ಸ್ಲಾಟರ್ ಹೌಸ್​ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಬಿಎಂಪಿಗೆ ನೋಟಿಸ್ ನೀಡಲಾಗಿದೆ. ಮೇಕೆ, ಕುರಿ, ಕೋಳಿ, ಎಮ್ಮೆಗಳ ವಧೆ ಮಾಡುವ ಕೇಂದ್ರಗಳಾಗಿರುವ ಸ್ಲಾಟರ್ ಹೌಸ್​ಗಳನ್ನ ಕ್ಲೋಸ್ ಮಾಡಲು ಸೂಚಿಸಿದೆ.

ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್
ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್

ಅಂತೆಯೇ ಕೆ.ಆರ್ ಮಾರ್ಕೆಟ್ ಹಾಗೂ ಫ್ರೇಜರ್ ಟೌನ್ ಬಳಿ ಎರಡು ಸ್ಲಾಟರ್ ಹೌಸ್ ಮುಚ್ಚಿಸಲು ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿ ದಿನ 5 ಸಾವಿರ ಕುರಿ, ಮೇಕೆ, 100ಕ್ಕೂ ಅಧಿಕ ಎಮ್ಮೆಗಳ ವಧೆ ಮಾಡಿ, ಅದರ ಮಾಂಸಗಳನ್ನು ಬೇರೆ ಬೇರೆ ಕಡೆ ಸರಬರಾಜು ಮಾಡುವ ಕೇಂದ್ರ ಇದಾಗಿದೆ.‌ ಇದೇ ವೇಳೆ ಟ್ರೇಡ್ ಲೈಸನ್ಸ್ ಇಲ್ಲದ ಚಿಕನ್, ಮಟನ್ ಶಾಪ್​ಗಳ ಕೂಡ ಮುಚ್ಚಿಸಲು ಬಿಬಿಎಂಪಿ ತಯಾರಿ ನಡೆಸಿದೆ.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ: ಸಿದ್ದರಾಮಯ್ಯ ವಾಗ್ದಾಳಿ

ಬೆಂಗಳೂರು: ಹಲಾಲ್ ಕಟ್ ವಿವಾದದ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ ಎರಡು ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್ ನೀಡಲಾಗಿದೆ.‌ ಈ ಮೂಲಕ ಮಾಂಸ ವ್ಯಾಪಾರಿಗಳಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ.

ಸ್ಲಾಟರ್ ಹೌಸ್​ಗಳಿಂದ ಕೆರೆಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಕಾರಣಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಬಿಬಿಎಂಪಿಗೆ ನೋಟಿಸ್ ನೀಡಲಾಗಿದೆ. ಮೇಕೆ, ಕುರಿ, ಕೋಳಿ, ಎಮ್ಮೆಗಳ ವಧೆ ಮಾಡುವ ಕೇಂದ್ರಗಳಾಗಿರುವ ಸ್ಲಾಟರ್ ಹೌಸ್​ಗಳನ್ನ ಕ್ಲೋಸ್ ಮಾಡಲು ಸೂಚಿಸಿದೆ.

ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್
ಮಾಂಸ ಉತ್ಪಾದನಾ ಮತ್ತು ಸಂಸ್ಕರಣಾ ಕೇಂದ್ರಗಳ ಮುಚ್ಚಲು ನೋಟಿಸ್

ಅಂತೆಯೇ ಕೆ.ಆರ್ ಮಾರ್ಕೆಟ್ ಹಾಗೂ ಫ್ರೇಜರ್ ಟೌನ್ ಬಳಿ ಎರಡು ಸ್ಲಾಟರ್ ಹೌಸ್ ಮುಚ್ಚಿಸಲು ನೋಟಿಸ್ ಜಾರಿ ಮಾಡಲಾಗಿದೆ. ಪ್ರತಿ ದಿನ 5 ಸಾವಿರ ಕುರಿ, ಮೇಕೆ, 100ಕ್ಕೂ ಅಧಿಕ ಎಮ್ಮೆಗಳ ವಧೆ ಮಾಡಿ, ಅದರ ಮಾಂಸಗಳನ್ನು ಬೇರೆ ಬೇರೆ ಕಡೆ ಸರಬರಾಜು ಮಾಡುವ ಕೇಂದ್ರ ಇದಾಗಿದೆ.‌ ಇದೇ ವೇಳೆ ಟ್ರೇಡ್ ಲೈಸನ್ಸ್ ಇಲ್ಲದ ಚಿಕನ್, ಮಟನ್ ಶಾಪ್​ಗಳ ಕೂಡ ಮುಚ್ಚಿಸಲು ಬಿಬಿಎಂಪಿ ತಯಾರಿ ನಡೆಸಿದೆ.

ಇದನ್ನೂ ಓದಿ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ, ಅಕ್ರಮಗಳು ಹೆಚ್ಚಾಗಿವೆ: ಸಿದ್ದರಾಮಯ್ಯ ವಾಗ್ದಾಳಿ

Last Updated : May 2, 2022, 12:04 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.