ETV Bharat / state

ಮೂರು ಪಕ್ಷಗಳ ಬೆಂಬಲದ ಅಗತ್ಯ ಇಲ್ಲ: ರಾಜಕೀಯ ನಾಯಕರಿಗೆ ರೈತ ಮುಖಂಡರ ಖಡಕ್ ಎಚ್ಚರಿಕೆ - ಇತ್ತೀಚಿನ ಬೆಂಗಳೂರು ಸುದ್ದಿ

ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದೆ ಧರಣಿಗೆ ವಾಪಸಾದ ಮಹದಾಯಿ ಹೋರಾಟಗಾರರು ನಮಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲದ ಅಗತ್ಯ ಇಲ್ಲ. ಧರಣಿಗೆ ಯಾರೂ ಕೂಡ ಬಂದು ಬೆಂಬಲ ನೀಡೋದು ಬೇಡವೆಂದು ರೈತ ಮುಖಂಡ ವೀರೇಶ್ ಸೊಬರದಮಠ ಎಚ್ಚರಿಕೆ ನೀಡಿದ್ದಾರೆ.

ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ ಇಲ್ಲ: ರಾಜಕೀಯ ಮುಖಂಡರಿಗೆ ರೈತರ ಖಡಕ್ ಎಚ್ಚರಿಕೆ
author img

By

Published : Oct 18, 2019, 5:50 PM IST

Updated : Oct 18, 2019, 6:02 PM IST

ಬೆಂಗಳೂರು: ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದೆ ಧರಣಿಗೆ ವಾಪಸಾದ ಮಹದಾಯಿ ಹೋರಾಟಗಾರರು ನಮಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ ಇಲ್ಲ. ನಮ್ಮ ಧರಣಿಗೆ ಯಾರ ಬೆಂಬಲವೂ ಬೇಡವೆಂದು ರೈತ ಮುಖಂಡ ವೀರೇಶ್ ಸೊಬರದಮಠ ಹೇಳಿದ್ದಾರೆ.

ಮೂರು ಪಕ್ಷಗಳ ಬೆಂಬಲದ ಅಗತ್ಯ ಇಲ್ಲ: ರಾಜಕೀಯ ನಾಯಕರಿಗೆ ರೈತ ಮುಖಂಡರ ಖಡಕ್ ಎಚ್ಚರಿಕೆ

ಇಂದು ಮಧ್ಯಾಹ್ನ 3:30 ರ ವೇಳೆಗೆ ರಾಜಭವನಕ್ಕೆ ರೈತರನ್ನು ಕರೆದೊಯ್ಯಲಾಯಿತು. ಆದ್ರೆ ರೈತರ ಮನವಿಯನ್ನು ರಾಜ್ಯಪಾಲರು ಸ್ವೀಕರಿಸದೆ, ಅಧಿಕಾರಿಗಳು ಸ್ವೀಕರಿಸಲು ಬಂದಾಗ, ರೈತರು ಅದನ್ನು ತಿರಸ್ಕರಿಸಿದರು. ನಮ್ಮ ಮನವಿಯನ್ನು ಖುದ್ದು ರಾಜ್ಯಪಾಲರೇ ಸ್ವೀಕರಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಇನ್ನು, ಮಹದಾಯಿ ಹೋರಾಟಗಾರರನ್ನು ಬೆಳಗ್ಗೆಯಿಂದ ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೈಲ್ವೆ ನಿಲ್ದಾಣಕ್ಕೆ ಬಂದು ಭೇಟಿ ಮಾಡಿ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ವೀರೇಶ್ ಸೊಬರದಮಠ, ನಮಗೆ ರಾಜಕೀಯ ಪಕ್ಷಗಳ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ಯಾರ ಬೆಂಬಲವೂ ಬೇಕಾಗಿಲ್ಲ. ನಾವು ಕೇವಲ ರಾಜ್ಯಪಾಲರನ್ನು ಭೇಟಿಯಾಗಬೇಕಿದ್ದು, ಈ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಖಡಕ್​ ಆಗಿ ಹೇಳಿದ್ದಾರೆ.

ಬೆಂಗಳೂರು: ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದೆ ಧರಣಿಗೆ ವಾಪಸಾದ ಮಹದಾಯಿ ಹೋರಾಟಗಾರರು ನಮಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ ಇಲ್ಲ. ನಮ್ಮ ಧರಣಿಗೆ ಯಾರ ಬೆಂಬಲವೂ ಬೇಡವೆಂದು ರೈತ ಮುಖಂಡ ವೀರೇಶ್ ಸೊಬರದಮಠ ಹೇಳಿದ್ದಾರೆ.

ಮೂರು ಪಕ್ಷಗಳ ಬೆಂಬಲದ ಅಗತ್ಯ ಇಲ್ಲ: ರಾಜಕೀಯ ನಾಯಕರಿಗೆ ರೈತ ಮುಖಂಡರ ಖಡಕ್ ಎಚ್ಚರಿಕೆ

ಇಂದು ಮಧ್ಯಾಹ್ನ 3:30 ರ ವೇಳೆಗೆ ರಾಜಭವನಕ್ಕೆ ರೈತರನ್ನು ಕರೆದೊಯ್ಯಲಾಯಿತು. ಆದ್ರೆ ರೈತರ ಮನವಿಯನ್ನು ರಾಜ್ಯಪಾಲರು ಸ್ವೀಕರಿಸದೆ, ಅಧಿಕಾರಿಗಳು ಸ್ವೀಕರಿಸಲು ಬಂದಾಗ, ರೈತರು ಅದನ್ನು ತಿರಸ್ಕರಿಸಿದರು. ನಮ್ಮ ಮನವಿಯನ್ನು ಖುದ್ದು ರಾಜ್ಯಪಾಲರೇ ಸ್ವೀಕರಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

ಇನ್ನು, ಮಹದಾಯಿ ಹೋರಾಟಗಾರರನ್ನು ಬೆಳಗ್ಗೆಯಿಂದ ಕಾಂಗ್ರೆಸ್ ಮುಖಂಡರಾದ ವಿ.ಎಸ್. ಉಗ್ರಪ್ಪ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ರೈಲ್ವೆ ನಿಲ್ದಾಣಕ್ಕೆ ಬಂದು ಭೇಟಿ ಮಾಡಿ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ ವೀರೇಶ್ ಸೊಬರದಮಠ, ನಮಗೆ ರಾಜಕೀಯ ಪಕ್ಷಗಳ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ಯಾರ ಬೆಂಬಲವೂ ಬೇಕಾಗಿಲ್ಲ. ನಾವು ಕೇವಲ ರಾಜ್ಯಪಾಲರನ್ನು ಭೇಟಿಯಾಗಬೇಕಿದ್ದು, ಈ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದು ಖಡಕ್​ ಆಗಿ ಹೇಳಿದ್ದಾರೆ.

Intro:

ಮೂರೂ ಪಕ್ಷಗಳ ಬೆಂಬಲ ಅಗತ್ಯ ಇಲ್ಲ- ರಾಜಕೀಯ ಮುಖಂಡರಿಗೆ ರೈತರ ಖಡಕ್ ಎಚ್ಚರಿಕೆ

ಬೆಂಗಳೂರು- ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದೆ ಧರಣಿಗೆ ವಾಪಾಸ್ಸಾದ ಮಹಾದಾಯಿ ಹೋರಾಟಗಾರರು ನಮಗೆ ಯಾವುದೇ ರಾಜಕೀಯ ಪಕ್ಷಗಳ ಬೆಂಬಲ ಅಗತ್ಯ ಇಲ್ಲ. ಧರಣಿಗೆ ಯಾರೂ ಬಂದು ಬೆಂಬಲ ನೀಡೋದು ಬೇಡ ಎಂದು ವೀರೇಶ್ ಸೊರಬದಮಠ ಎಚ್ಚರಿಸಿದ್ದಾರೆ.
ಮಧ್ಯಾಹ್ನ 3-30 ರ ವೇಳೆಗೆ ರಾಜಭವನಕ್ಕೆ ರೈತರನ್ನು ಕರೆದುಕೊಂಡು ಹೋಗಲಾಯಿತು. ಆದರೆ ರೈತರ ಮನವಿಯನ್ನು ರಾಜ್ಯಪಾಲರು ಸ್ವೀಕರಿಸದೆ, ಅಧಿಕಾರಿಗಳು ಸ್ವೀಕರಿಸಲು ಬಂದಾಗ, ರೈತರು ಅದನ್ನು ತಿರಸ್ಕರಿಸಿದರು. ನಮ್ಮ ಮನವಿಯನ್ನು ಖುದ್ದು ರಾಜ್ಯಪಾಲರೇ ಸ್ವೀಕರಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಇನ್ನು ಮಹಾದಾಯಿ ಹೋರಾಟಗಾರರನ್ನು ಬೆಳಗ್ಗೆಯಿಂದ ಕಾಂಗ್ರೆಸ್ ಮುಖಂಡರಾದ ವಿ.ಎಸ್ ಉಗ್ರಪ್ಪ ಹಾಗೂ ದಿನೇಶ್ ಗುಂಡೂರಾವ್ ರೈಲ್ವೇ ನಿಲ್ದಾಣಕ್ಕೆ ಬಂದು ಭೇಟಿ ಮಾಡಿ ಹೋರಾಟಕ್ಕೆ ನಮ್ಮ ಬೆಂಬಲವೂ ಇದೆ ಎಂದಿದ್ದರು.
ಇದನ್ನು ತೀವ್ರವಾಗಿ ಖಂಡಿಸಿದ ವೀರೇಶ್ ಸೊರಬದಮಠ , ನಮಗೆ ರಾಜಕೀಯ ಪಕ್ಷದ ಮೇಲೆ ಯಾವುದೇ ನಂಬಿಕೆ ಉಳಿದಿಲ್ಲ. ಯಾರ ಬೆಂಬಲವೂ ಬೇಕಾಗಿಲ್ಲ. ನಮಗೆ ಕೇವಲ ರಾಜ್ಯಪಾಲರನ್ನು ಭೇಟಿಯಾಗಬೇಕಿದ್ದು, ಈ ಹೋರಾಟವನ್ನು ರಾಜಕೀಯಕ್ಕೆ ಬಳಸಿಕೊಳ್ಳಬೇಡಿ ಎಂದರು.
ನಮ್ಮ ಹೋರಾಟವನ್ನು ಕುಲಗೆಡಿಸಬೇಡಿ. ಹುಳಿ ಹಿಂಡಬೇಡಿ. ಇಲ್ಲಿ ಹೋರಾಟದ ಸ್ಥಳಕ್ಕೆ ಬರುವ ಅಗತ್ಯ ಇಲ್ಲ ಎಂದು ವೀರೇಶ್ ಸೊಬರದಮಠ ತಿಳಿಸಿದರು.
ರಾಜ್ಯಪಾಲರನ್ನು ಭೇಟಿಯಾಗುವವರೆಗೂ ಶಾಂತಿಯಿಂದ ಹೋರಾಟ ನಡೆಸುತ್ತೇವೆ ಎಂದರು.


ಸೌಮ್ಯಶ್ರೀ

kn_bng_05_veeresh_protest_byte_7202707



Body:..


Conclusion:..
Last Updated : Oct 18, 2019, 6:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.