ETV Bharat / state

ಕೆ.ಜಿ ಹಳ್ಳಿ, ಡಿ.ಜೆ ಹಳ್ಳಿ ಗಲಭೆ ಪ್ರಕರಣ: ಇಬ್ಬರು ಕಾಂಗ್ರೆಸ್ ಶಾಸಕರ ವಿಚಾರಣೆ ನಡೆಸಿದ ಎನ್​ಐಎ

author img

By

Published : Oct 14, 2020, 11:09 AM IST

ಡಿ.ಜೆ ಹಳ್ಳಿ ಮತ್ತು ಕೆ.ಜೆ ಹಳ್ಳಿ ಗಲಭೆ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಇಬ್ಬರು ಕಾಂಗ್ರೆಸ್​ ಶಾಸಕರನ್ನು ವಿಚಾರಣೆಗೆ ಒಳಪಡಿಸಿದೆ.

NIA investigated  two Congress  MLA's in  Bengaluru
ಬೆಂಗಳೂರಿನ ಕಾಂಗ್ರೆಸ್​ ಶಾಸಕರನ್ನು ವಿಚಾರಣೆ ನಡೆಸಿದ ಎನ್ಐಎ

ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​​ಐಎ ಅಧಿಕಾರಿಗಳು, ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್​ ಖಾನ್, ಮತ್ತು ರಿಜ್ವಾನ್ ಅರ್ಷದ್ ಅವ​ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಗಲಭೆ ನಡೆದ ದಿನ ಪೊಲೀಸರ ಕೋರಿಕೆ ಮೇರೆಗೆ ಈ ಇಬ್ಬರು ಶಾಸಕರು ಸ್ಥಳಕ್ಕೆ ತೆರಳಿ, ನೆರೆದಿದ್ದ ಜನರಲ್ಲಿ ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದರು. ಹೀಗಾಗಿ, ಗಲಭೆ ಸಂಬಂಧಿಸಿದಂತೆ ಸಪೂರ್ಣ ಮಾಹಿತಿಯನ್ನು ಎನ್​​ಐಎ ಅಧಿಕಾರಿಗಳು ಇಬ್ಬರು ಶಾಸಕರ ಮನೆಗೆ ತೆರಳಿ ಪಡೆದುಕೊಂಡಿದ್ದಾರೆ. ಎನ್​ಐಎ ಪ್ರಕರಣ ಕೈಗೆತ್ತಿಕೊಂಡ ತಕ್ಷಣ ಗಲಭೆಗೆ ಸಾಕ್ಷಿಯಾದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆಯ ಸುತ್ತಮುತ್ತ ಪರಿಶೀಲನೆ ನಡೆಸಿದೆ. ಜೊತೆಗೆ 18 ಮಂದಿ ತನಿಖಾಧಿಕಾರಿಗಳ ಹೇಳಿಕೆಯನ್ನು ‌ಕೂಡ ದಾಖಲಿಸಿದೆ.

ಎನ್​ಐಎ ವಿಚಾರಣೆ ಬಗ್ಗೆ ಮಾಹಿತಿ ನೀಡಿದ ಶಾಸಕ ರಿಜ್ವಾನ್ ಅರ್ಷದ್, ಎನ್​ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಗಲಭೆ ನಡೆದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಮ್ಮನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಹೀಗಾಗಿ, ಸ್ಥಳಕ್ಕೆ ತೆರಳಿ ಪೊಲೀಸರ ಜೊತೆ ಕೈ ಜೊಡಿಸಿದ್ದೆವು. ಹೀಗಾಗಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದೆ ವಿಚಾರಣೆ ನಡೆಸಿದರೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ಬೆಂಗಳೂರು : ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​​ಐಎ ಅಧಿಕಾರಿಗಳು, ಕಾಂಗ್ರೆಸ್ ಶಾಸಕರಾದ ಜಮೀರ್ ಅಹ್ಮದ್​ ಖಾನ್, ಮತ್ತು ರಿಜ್ವಾನ್ ಅರ್ಷದ್ ಅವ​ರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಗಲಭೆ ನಡೆದ ದಿನ ಪೊಲೀಸರ ಕೋರಿಕೆ ಮೇರೆಗೆ ಈ ಇಬ್ಬರು ಶಾಸಕರು ಸ್ಥಳಕ್ಕೆ ತೆರಳಿ, ನೆರೆದಿದ್ದ ಜನರಲ್ಲಿ ಶಾಂತಿಯಿಂದ ಇರುವಂತೆ ಮನವಿ ಮಾಡಿದ್ದರು. ಹೀಗಾಗಿ, ಗಲಭೆ ಸಂಬಂಧಿಸಿದಂತೆ ಸಪೂರ್ಣ ಮಾಹಿತಿಯನ್ನು ಎನ್​​ಐಎ ಅಧಿಕಾರಿಗಳು ಇಬ್ಬರು ಶಾಸಕರ ಮನೆಗೆ ತೆರಳಿ ಪಡೆದುಕೊಂಡಿದ್ದಾರೆ. ಎನ್​ಐಎ ಪ್ರಕರಣ ಕೈಗೆತ್ತಿಕೊಂಡ ತಕ್ಷಣ ಗಲಭೆಗೆ ಸಾಕ್ಷಿಯಾದ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆಯ ಸುತ್ತಮುತ್ತ ಪರಿಶೀಲನೆ ನಡೆಸಿದೆ. ಜೊತೆಗೆ 18 ಮಂದಿ ತನಿಖಾಧಿಕಾರಿಗಳ ಹೇಳಿಕೆಯನ್ನು ‌ಕೂಡ ದಾಖಲಿಸಿದೆ.

ಎನ್​ಐಎ ವಿಚಾರಣೆ ಬಗ್ಗೆ ಮಾಹಿತಿ ನೀಡಿದ ಶಾಸಕ ರಿಜ್ವಾನ್ ಅರ್ಷದ್, ಎನ್​ಐಎ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಗಲಭೆ ನಡೆದಾಗ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ನಮ್ಮನ್ನು ಸ್ಥಳಕ್ಕೆ ಕರೆಸಿಕೊಂಡಿದ್ದರು. ಹೀಗಾಗಿ, ಸ್ಥಳಕ್ಕೆ ತೆರಳಿ ಪೊಲೀಸರ ಜೊತೆ ಕೈ ಜೊಡಿಸಿದ್ದೆವು. ಹೀಗಾಗಿ, ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಮುಂದೆ ವಿಚಾರಣೆ ನಡೆಸಿದರೆ ಸಹಕರಿಸುವುದಾಗಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.