ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಕಾರು ಅಪಘಾತ ಪ್ರಕರಣ ಸಂಬಂಧ ಗಾಯಾಳು ಪ್ರಫುಲ್ ಇಂದು ಠಾಣೆಗೆ ಬಂದು ಹೇಳಿಕೆ ನೀಡಿದ್ದಾರೆ.
ಮೇಖ್ರಿ ಸರ್ಕಲ್ ಬಳಿ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಮಾಡಿದ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಾಶಿವನಗರ ಸಂಚಾರ ಪೊಲೀಸ್ ಠಾಣೆಗೆ ಅಪಘಾತಕ್ಕೆ ಒಳಗಾದ ಗಾಯಾಳು ಪ್ರಫುಲ್ ಆಗಮಿಸಿ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಆ್ಯಕ್ಸಿಡೆಂಟ್ ಆದ ದಿನ ಕಾಲಿನ ಮೂಳೆ ಮುರಿತದಿಂದ ರಾಮಯ್ಯ ಆಸ್ಪತ್ರೆಗೆ ಪ್ರಫುಲ್ ಅವರನ್ನ ದಾಖಲಿಸಲಾಗಿತ್ತು. ಆದರೆ, ನಿನ್ನೆ ನಲಪಾಡ್ಗೆ ಪೊಲೀಸರು ನೋಟಿಸ್ ಜಾರಿ ಮಾಡಿದ ಕಾರಣ ಇಂದು ಪ್ರಫುಲ್ ಪೊಲೀಸರಿಗೆ ಸ್ಟೇಟ್ಮೆಂಟ್ ನೀಡಲು ಆಗಮಿಸಿದ್ದರು.
ಆದರೆ, ಆಶ್ಚರ್ಯ ಎಂದರೆ ಸ್ಮೇಟ್ಮೆಂಟ್ ನೀಡಲು ಬಂದವರ ಜೊತೆ ನಲಪಾಡ್ ಸ್ನೇಹಿತರು ಕೂಡ ಆಗಮಿಸಿ ಹೇಳಿಕೆ ಕೊಟ್ಟು ವಾಪಸ್ ಆಗುವವರೆಗೆ ಬೆಂಗಾವಲಾಗಿ ನಿಂತು ಮಾಧ್ಯಮ ಜೊತೆ ಮಾತಾನಾಡದ ಹಾಗೆ ತಡೆದು ಪ್ರಫುಲ್ ಅವರನ್ನ ಕಳುಹಿಸಿ ಕೊಟ್ಟರು. ಹಾಗೆ ನಲಪಾಡ್ ಸ್ನೇಹಿತರು ಠಾಣೆ ಎದುರು ಹೈಡ್ರಾಮಾ ಕೂಡ ಮಾಡಿದ್ರು. ಮೊದಲು ಪ್ರತಿಕ್ರಿಯೆ ನೀಡ್ತಿನಿ ಅಂದಿದ್ದ ಗಾಯಾಳು ಪ್ರಫುಲ್, ನಲಪಾಡ್ ಟೀಮ್ ಜೊತೆ ಠಾಣೆಯಿಂದ ಹೊರ ಬರ್ತಿದ್ದಂತೆ ಏಕಾಏಕಿ ಹೊರಟುಹೋಗಿದ್ದು ನಲ್ಪಾಡ್ ಸ್ನೇಹಿತರಿಂದ ನಡೀತಾ ಕಾಂಪ್ರಮೈಸ್..? ಅನ್ನೊ ಪ್ರಶ್ನೆ ಮೂಡಿಸಿದೆ.
ಅಷ್ಟು ಮಾತ್ರವಲ್ಲದೇ ನಲಪಾಡ್ ಸ್ನೇಹಿತ ಹುಸೇನ್ ಮಾತನಾಡಿ, ಪ್ರಫುಲ್ನ ಎಲ್ಲ ವೈದ್ಯಕೀಯ ಖರ್ಚು- ವೆಚ್ಚ ನೋಡ್ಕೋತ್ತೀವಿ ಅಂದ್ರು. ಕಾರು ಅಪಘಾತವಾದಾಗ 30 ಕಿಲೊಮೀಟರ್ ಸ್ಪೀಡ್ನಲ್ಲಿ ಹೋಗಿಲ್ಲ ಎಂದು ಸ್ಟಷ್ಟನೆ ಕೊಟ್ಟಿದ್ದಾರೆ.