ETV Bharat / state

ಕುಡಿದ ಮತ್ತಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

author img

By

Published : Nov 2, 2020, 12:43 PM IST

ಇಬ್ಬರೂ ಗಟ್ಟಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು, ತಡರಾತ್ರಿ ಕುಡಿತದ ಅಮಲಿನಲ್ಲಿ ಮಾತು ಶುರುವಾಗಿ ಜಗಳ ಹೆಚ್ಚಾಗಿದ್ದು ಕೈಲಿದ್ದ ಮಚ್ಚಿನಿಂದ ಸಾಯಿನಾಥ್ ಮೇಲೆ ಬೀಸಿ ಹತ್ಯೆ ಮಾಡಲಾಗಿದೆ..

Murder of a person in Anekal
ಕುಡಿದ ಮತ್ತಲ್ಲಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

ಆನೇಕಲ್(ಹೆಬ್ಬಗೋಡಿ): ಕುಡಿದ ಅಮಲಿನಲ್ಲಿ ಆರಂಭವಾದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಆನೇಕಲ್ ತಾಲೂಕಿನ ಗಟ್ಟಹಳ್ಳಿ ಡಾಲರ್ಸ್ ಕಾಲೋನಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ಸಾಯಿನಾಥ್ (40) ಕೊಲೆಯಾದ ಕಾರ್ಮಿಕ. ಪಶ್ಚಿಮ ಬಂಗಾಳದ ರಾಜಾರಾಯ್ (23) ಮಚ್ಚಿನಿಂದ ಹತ್ಯೆಮಾಡಿರುವ ಆರೋಪಿ.

ಇಬ್ಬರೂ ಗಟ್ಟಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು, ತಡರಾತ್ರಿ ಕುಡಿತದ ಅಮಲಿನಲ್ಲಿ ಮಾತು ಶುರುವಾಗಿ ಜಗಳ ಹೆಚ್ಚಾಗಿದ್ದು, ಕೈಲಿದ್ದ ಮಚ್ಚಿನಿಂದ ಸಾಯಿನಾಥ್ ಮೇಲೆ ಬೀಸಿ ಹತ್ಯೆ ಮಾಡಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಬ್ಬಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಆನೇಕಲ್(ಹೆಬ್ಬಗೋಡಿ): ಕುಡಿದ ಅಮಲಿನಲ್ಲಿ ಆರಂಭವಾದ ಜಗಳ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯವಾಗಿದೆ. ಆನೇಕಲ್ ತಾಲೂಕಿನ ಗಟ್ಟಹಳ್ಳಿ ಡಾಲರ್ಸ್ ಕಾಲೋನಿಯಲ್ಲಿ ತಡರಾತ್ರಿ ಈ ಘಟನೆ ನಡೆದಿದ್ದು, ಬಿಹಾರ ಮೂಲದ ಸಾಯಿನಾಥ್ (40) ಕೊಲೆಯಾದ ಕಾರ್ಮಿಕ. ಪಶ್ಚಿಮ ಬಂಗಾಳದ ರಾಜಾರಾಯ್ (23) ಮಚ್ಚಿನಿಂದ ಹತ್ಯೆಮಾಡಿರುವ ಆರೋಪಿ.

ಇಬ್ಬರೂ ಗಟ್ಟಹಳ್ಳಿಯ ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದರು, ತಡರಾತ್ರಿ ಕುಡಿತದ ಅಮಲಿನಲ್ಲಿ ಮಾತು ಶುರುವಾಗಿ ಜಗಳ ಹೆಚ್ಚಾಗಿದ್ದು, ಕೈಲಿದ್ದ ಮಚ್ಚಿನಿಂದ ಸಾಯಿನಾಥ್ ಮೇಲೆ ಬೀಸಿ ಹತ್ಯೆ ಮಾಡಲಾಗಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಹೆಬ್ಬಗೋಡಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.