ETV Bharat / state

ನಾನು ಯಾರಿಗೂ ದುಡ್ಡು ಕೊಡುವ ಅವಶ್ಯಕತೆ ಇಲ್ಲ: ಎಂಟಿಬಿ ನಾಗರಾಜ್

ಎಲ್ಲ ಸಮುದಾಯದ ಜನರೂ ನನ್ನ ಬೆಂಬಲಿಸುತ್ತಾರೆ. ನಾನು ಯಾರಿಗೂ ದುಡ್ಡುಕೊಡೋ ಅವಶ್ಯಕತೆ ಇಲ್ಲ. ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿಶ್ವಾಸ ವ್ಯಕ್ತಪಡಿಸಿದರು.

author img

By

Published : Nov 26, 2019, 11:41 PM IST

MTB nagaraj statement in hosakote, ಎಂಟಿಬಿ ನಾಗರಾಜ್​ ಹೇಳಿಕೆ ಸುದ್ದಿ
ಎಂಟಿಬಿ ನಾಗರಾಜ್ ಹೇಳಿಕೆ

ಬೆಂಗಳೂರು (ಹೊಸಕೋಟೆ) : ಎಲ್ಲ ಸಮುದಾಯವೂ ನನ್ನ ಬೆಂಬಲಿಸುತ್ತಾರೆ. ನಾನು ಯಾರಿಗೂ ದುಡ್ಡುಕೊಡೋ ಅವಶ್ಯಕತೆ ಇಲ್ಲ. ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿಶ್ವಾಸ ವ್ಯಕ್ತಪಡಿಸಿದರು.

ಎಂಟಿಬಿ ನಾಗರಾಜ್ ಹೇಳಿಕೆ

ಹೊಸಕೋಟೆ ಉಪಚುನಾವಣೆ ಕಣ ದಿನದದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಹೊಸಕೋಟೆಯ ನಾಲ್ಕು ಹೋಬಳಿಯ ಪ್ರಮುಖರ ಸಭೆ ನಡೆಸಿ ಚುನಾವಣಾ ರಣತಂತ್ರಗಳನ್ನ ರೂಪಿಸಿದರು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಭಾಗವಹಿಸಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಯಶಸ್ವಿಯಾಗಿ ಪ್ರಚಾರ ಸಭೆಗಳನ್ನು ಮಾಡುತ್ತಿದ್ದೇವೆ. ನಾಳೆ 11 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬರಲಿದ್ದಾರೆ. ಶರತ್ ಬಚ್ಚೇಗೌಡ 120 ಕೋಟೆ ರೂ ಆಫರ್ ಕೊಟ್ಟಿರುವ ಬಗ್ಗೆ ಎಲ್ಲಿಯಾದ್ರೂ ಹೇಳಿದ್ರೆ ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದರು.

ಕೊಂಡುಕೊಳ್ಳುವುದಕ್ಕೆ ಇದು ಏನು ವ್ಯಾಪಾರನಾ? ಕೋಟಿ-ಕೋಟಿ ಕೊಡುವ ಪ್ರಮೇಯ ನನಗೆ ಏನಿದೆ? ದುಡ್ಡು ಕೊಟ್ಟು ಕೊಂಡುಕೊಳ್ಳುವುದಕ್ಕೆ ಕುರಿ, ಕೋಳಿ ವ್ಯಾಪಾರ ಅಲ್ಲ. ಮತದಾರರು ಎಲ್ಲವನ್ನೂ ನಿರ್ಧಾರಿಸುತ್ತಾರೆ ಎಂದು ಕಿಡಿಕಾರಿದರು.

ಅಲ್ಲದೆ ಸಿದ್ದರಾಮಯ್ಯ ಟೀಕೆ ಮಾಡುವ ವಿಚಾರದಲ್ಲಿ ಕುರುಬ ಸಮುದಾಯದ ಮತಗಳು ವಿಭಜನೆ ಆಗುವುದಿಲ್ಲ. ಎಲ್ಲ ಸಮುದಾಯಗಳು ನನ್ನನ್ನು ಬೆಂಬಲಿಸುತ್ತಾರೆ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಂಗಳೂರು (ಹೊಸಕೋಟೆ) : ಎಲ್ಲ ಸಮುದಾಯವೂ ನನ್ನ ಬೆಂಬಲಿಸುತ್ತಾರೆ. ನಾನು ಯಾರಿಗೂ ದುಡ್ಡುಕೊಡೋ ಅವಶ್ಯಕತೆ ಇಲ್ಲ. ಗೆಲುವು ನನ್ನದೇ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್​ ವಿಶ್ವಾಸ ವ್ಯಕ್ತಪಡಿಸಿದರು.

ಎಂಟಿಬಿ ನಾಗರಾಜ್ ಹೇಳಿಕೆ

ಹೊಸಕೋಟೆ ಉಪಚುನಾವಣೆ ಕಣ ದಿನದದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇಂದು ಹೊಸಕೋಟೆಯ ನಾಲ್ಕು ಹೋಬಳಿಯ ಪ್ರಮುಖರ ಸಭೆ ನಡೆಸಿ ಚುನಾವಣಾ ರಣತಂತ್ರಗಳನ್ನ ರೂಪಿಸಿದರು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್. ವಿಶ್ವನಾಥ್ ಭಾಗವಹಿಸಿದ್ದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್, ಯಶಸ್ವಿಯಾಗಿ ಪ್ರಚಾರ ಸಭೆಗಳನ್ನು ಮಾಡುತ್ತಿದ್ದೇವೆ. ನಾಳೆ 11 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬರಲಿದ್ದಾರೆ. ಶರತ್ ಬಚ್ಚೇಗೌಡ 120 ಕೋಟೆ ರೂ ಆಫರ್ ಕೊಟ್ಟಿರುವ ಬಗ್ಗೆ ಎಲ್ಲಿಯಾದ್ರೂ ಹೇಳಿದ್ರೆ ಸಾಬೀತು ಪಡಿಸಲಿ ಎಂದು ಸವಾಲ್ ಹಾಕಿದರು.

ಕೊಂಡುಕೊಳ್ಳುವುದಕ್ಕೆ ಇದು ಏನು ವ್ಯಾಪಾರನಾ? ಕೋಟಿ-ಕೋಟಿ ಕೊಡುವ ಪ್ರಮೇಯ ನನಗೆ ಏನಿದೆ? ದುಡ್ಡು ಕೊಟ್ಟು ಕೊಂಡುಕೊಳ್ಳುವುದಕ್ಕೆ ಕುರಿ, ಕೋಳಿ ವ್ಯಾಪಾರ ಅಲ್ಲ. ಮತದಾರರು ಎಲ್ಲವನ್ನೂ ನಿರ್ಧಾರಿಸುತ್ತಾರೆ ಎಂದು ಕಿಡಿಕಾರಿದರು.

ಅಲ್ಲದೆ ಸಿದ್ದರಾಮಯ್ಯ ಟೀಕೆ ಮಾಡುವ ವಿಚಾರದಲ್ಲಿ ಕುರುಬ ಸಮುದಾಯದ ಮತಗಳು ವಿಭಜನೆ ಆಗುವುದಿಲ್ಲ. ಎಲ್ಲ ಸಮುದಾಯಗಳು ನನ್ನನ್ನು ಬೆಂಬಲಿಸುತ್ತಾರೆ ಗೆಲ್ಲುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Intro:ಹೊಸಕೋಟೆ:

ಎಲ್ಲಾ ಸಮುದಾಯವೂ ನನ್ನ ಬೆಂಬಲಿಸ್ತಾರೇ- ಎಂಟಿಬಿ ನಾಗರಾಜ್ ಯಾರಿಗೂ ದುಡ್ಡುಕೊಡೊ ಅವಶ್ಯಕತೆ ಇಲ್ಲ, ಗೆಲುವು ನನ್ನದೆ ಎಂಟಿಬಿ ವಿಶ್ವಾಸ.



ಹೊಸಕೋಟೆ ಉಪಚುನಾವಣೆ ಕಣ ದಿನದದಿಂದ ದಿನಕ್ಕೆ ರಂಗೇರುತ್ತಿದ್ದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ. ಇನ್ನೂ ಇಂದು ಹೊಸಕೋಟೆಯ ನಾಲ್ಕು ಕಡೆ ಹೋಬಳಿ ಪ್ರಮುಖರ ಸಭೆಯನ್ನ ನಡೆಸಿ ಚುನಾವಣಾ ರಣತಂತ್ರಗಳನ್ನ ರೂಪಿಸಿದ್ರು. ಇನ್ನೂ ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ , ಸಿಎಂ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಭಾಗವಹಿಸಿದ್ದರು.


Body:ಇನ್ನೂ ನಂದಗುಡಿ ಖಾಸಗಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಪ್ರಮುಖ ಮುಖಂಡರ ಸಭೆಯಲ್ಲಿ ಭಾಗವಹಿಸಿ ಮಾದ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ ನಾಗರಾಜ್ ಇಂದು ನಾಲ್ಕು ಕಡೆ ಕಾರ್ಯಕರ್ತರ ಸಭೆ ಇದ್ದು ಯಶಸ್ವಿಯಾಗಿ ಪ್ರಚಾರ ಸಭೆಗಳನ್ನು ಮಾಡುತ್ತಿದ್ದೇವೆ. ನಾಳೆ 11 ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬರಲಿದ್ದಾರೆ ಅಂತಾ ಮಾಹಿತಿ ನೀಡಿದ್ರು. ಜತೆಗೆ ಶರತ್ ಬಚ್ಚೇಗೌಡ 120 ಕೋಟೆ ಆಫರ್ ಕೊಟ್ಟಿರುವ ಬಗ್ಗೆ ಎಲ್ಲಿ ಅದ್ರು ಹೇಳಿದ್ರೆ ಸಾಬೀತು ಪಡಿಸಲಿ ಅಂತಾ ಸವಾಲ್ ಹಾಕಿದ್ರು. ಕೊಂಡುಕೊಳ್ಳುವುದಕ್ಕೆ ಇದು ಏನು ವ್ಯಾಪಾರನ..... ಕೋಟಿ ಕೋಟಿ ಕೊಡುವ ಪ್ರಮೇಯ ನನಗೆ ಏನಿದೆ ಅಂತಾ ಪ್ರಶ್ನಿಸಿದ ಎಂಟಿಬಿ ದುಡ್ಡು ಕೊಟ್ಟು ಕೊಂಡುಕೊಳ್ಳುವುದಕ್ಕೆ ಕುರಿ ಕೋಳಿ ವ್ಯಾಪಾರ ಅಲ್ಲ. ಮತದಾರರು ಎಲ್ಲವನ್ನೂ ನಿರ್ಧಾರಿಸುತ್ತಾರೆ ಅಂತಾ ತಿಳಿಸಿದ್ರು. ಅಲ್ಲದೆ ಸಿದ್ದರಾಮಯ್ಯ ಟೀಕೆ ಮಾಡುವ ವಿಚಾರದಲ್ಲಿ ಕುರುಬ ಸಮುದಾಯದ ಮತಗಳು ವಿಭಜನೆ ಆಗುವುದಿಲ್ಲ. ಎಲ್ಲ ಸಮುದಾಯಗಳು ನನ್ನನ್ನು ಬೆಂಬಲಿಸುತ್ತಾರೆ ಗೆಲ್ಲುವುದು ಖಚಿತ ಎಂದ್ರು.

Conclusion:ಇನ್ನೂ ಚಿಕ್ಕೆಗೌಡ ಹಾಗೂ ಬಚ್ಚೇಗೌಡ ಅವಧಿಯಲ್ಲಿ ಹೊಸಕೋಟೆ ಮಿನಿ ಬಿಹಾರ್ ಆಗಿತ್ತು ಎಂತಾ ಹೇಳಿದ್ದು ನಿಜ.
ನಿಜ ಬೇಕಿದ್ರೆ ಈ ಭಾಗದಲ್ಲಿ ನಿಮ್ಮ ಪೂರ್ವಜರು ಯಾರಾದ್ರು ಇದ್ರೆ ಕೇಳಿ.೨೦೦೩ ರವರೆಗೂ ಹೊಸಕೋಟೆಯಲ್ಲಿ ಆ ಪರಿಸ್ಥಿತಿ ಇತ್ತು ನಾನು ಬಂದ ಮೇಲೆ ಎಲ್ಲವನ್ನೂ ಹೋಗಲಾಡಿಸಿದ್ದೇನೆ ಅಂತಾ ತಿಳಿಸಿದ್ರು.

ಬೈಟ್: ಎಂಟಿಬಿ ನಾಗರಾಜ್, ಬಿಜೆಪಿ ಅಭ್ಯರ್ಥಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.