ETV Bharat / state

ನಾನೂ ಸಚಿವ ಸ್ಥಾನದ ಆಕಾಂಕ್ಷಿ.. ಬಿಎಸ್‌ವೈ ನಿರ್ಧಾರಕ್ಕೆ ಬದ್ಧ.. ಎಂಟಿಬಿ ನಾಗರಾಜ್‌ - ಬಚ್ಚೇಗೌಡ ವಿರುದ್ಧ ಎಂಟಿಬಿ ನಾಗರಾಜ್ ವಾಗ್ದಾಳಿ

ನನ್ನ ಸೋಲಿಗೆ ಕಾರಣರಾಗಿರುವ ಶರತ್ ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಎಂಟಿಬಿ ನಾಗರಾಜ್ ಒತ್ತಾಯಿಸಿದ್ದಾರೆ.

ಎಂಟಿಬಿ ನಾಗರಾಜ್
ಎಂಟಿಬಿ ನಾಗರಾಜ್
author img

By

Published : Dec 16, 2019, 10:05 PM IST

ಬೆಂಗಳೂರು: ನನ್ನ ಸೋಲಿಗೆ ಕಾರಣರಾಗಿರುವ ಶರತ್ ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಹೊಸಕೋಟೆ ಪರಾಜಿತ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ ನೀಡಿ, ಕ್ಷೇತ್ರದ ಕೆಲಸಗಳ ಜೊತೆ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ನನ್ನ‌ ಸೋಲಿಗೆ ಶರತ್ ಬಚ್ಚೇಗೌಡ, ಸಂಸದ ಬಚ್ಚೇಗೌಡ ಕಾರಣ. ಮೊದಲು ಒಪ್ಪಿ ಆಮೇಲೆ ಶರತ್ ನನಗೆ ಮೋಸ ಮಾಡಿದರು. ನನ್ನ ಸೋಲಿಗೆ ಅವರಿಬ್ಬರೇ ನೇರ ಕಾರಣ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಬಾರದು. ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಂಟಿಬಿ ನಾಗರಾಜ್..

ಮಂತ್ರಿಯಾಗುವ ಆಸೆ ಇದೆ: ನನಗೂ ಮಂತ್ರಿ ಆಗಬೇಕು ಅಂತಾ ಆಸೆಯಿದೆ. ನಮ್ಮ ಪರಿಸ್ಥಿತಿಯ ಬಗ್ಗೆ ಸಿಎಂಗೆ ಗೊತ್ತಿದೆ ಎಂದರು. ಸಚಿವ ಸ್ಥಾನದ ಬಗ್ಗೆ ಸಿಎಂ ಯಡಿಯೂರಪ್ಪ ನನಗೆ ಯಾವುದೇ ಭರವಸೆ ನೀಡಿಲ್ಲ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧವಾಗಿದ್ದೇವೆ ಎಂದರು.

ದೆಹಲಿ ನಾಯಕರ ಭೇಟಿ ಮಾಡಲ್ಲ : ಹೈಕಮಾಂಡ್ ಸೇರಿದಂತೆ ಕೇಂದ್ರದ ಯಾವುದೇ ನಾಯಕರನ್ನು ನಾನು ಭೇಟಿ ಮಾಡಲ್ಲ. ರಾಜ್ಯ ನಾಯಕರೇ ಎಲ್ಲಾ ನಿರ್ಧಾರ ಮಾಡಲಿ ಎಂದರು. ನಾವು ಕೇಳೋದನ್ನು ಕೇಳಿದ್ದೇವೆ. ಮುಂದೆ ಅವರು ನಿರ್ಧಾರ ಮಾಡಲಿ ಎಂದು ಹೈಕಮಾಂಡ್ ಭೇಟಿ ಸಾಧ್ಯತೆಯನ್ನು ಎಂಟಿಬಿ ತಳ್ಳಿ ಹಾಕಿದರು.

ಬೆಂಗಳೂರು: ನನ್ನ ಸೋಲಿಗೆ ಕಾರಣರಾಗಿರುವ ಶರತ್ ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು ಎಂದು ಹೊಸಕೋಟೆ ಪರಾಜಿತ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಡಾಲರ್ಸ್ ಕಾಲೋನಿಯ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ ನೀಡಿ, ಕ್ಷೇತ್ರದ ಕೆಲಸಗಳ ಜೊತೆ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ನನ್ನ‌ ಸೋಲಿಗೆ ಶರತ್ ಬಚ್ಚೇಗೌಡ, ಸಂಸದ ಬಚ್ಚೇಗೌಡ ಕಾರಣ. ಮೊದಲು ಒಪ್ಪಿ ಆಮೇಲೆ ಶರತ್ ನನಗೆ ಮೋಸ ಮಾಡಿದರು. ನನ್ನ ಸೋಲಿಗೆ ಅವರಿಬ್ಬರೇ ನೇರ ಕಾರಣ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಬಾರದು. ಪಕ್ಷ ವಿರೋಧಿ ಚಟುವಟಿಕೆ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಎಂಟಿಬಿ ನಾಗರಾಜ್..

ಮಂತ್ರಿಯಾಗುವ ಆಸೆ ಇದೆ: ನನಗೂ ಮಂತ್ರಿ ಆಗಬೇಕು ಅಂತಾ ಆಸೆಯಿದೆ. ನಮ್ಮ ಪರಿಸ್ಥಿತಿಯ ಬಗ್ಗೆ ಸಿಎಂಗೆ ಗೊತ್ತಿದೆ ಎಂದರು. ಸಚಿವ ಸ್ಥಾನದ ಬಗ್ಗೆ ಸಿಎಂ ಯಡಿಯೂರಪ್ಪ ನನಗೆ ಯಾವುದೇ ಭರವಸೆ ನೀಡಿಲ್ಲ. ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ಧವಾಗಿದ್ದೇವೆ ಎಂದರು.

ದೆಹಲಿ ನಾಯಕರ ಭೇಟಿ ಮಾಡಲ್ಲ : ಹೈಕಮಾಂಡ್ ಸೇರಿದಂತೆ ಕೇಂದ್ರದ ಯಾವುದೇ ನಾಯಕರನ್ನು ನಾನು ಭೇಟಿ ಮಾಡಲ್ಲ. ರಾಜ್ಯ ನಾಯಕರೇ ಎಲ್ಲಾ ನಿರ್ಧಾರ ಮಾಡಲಿ ಎಂದರು. ನಾವು ಕೇಳೋದನ್ನು ಕೇಳಿದ್ದೇವೆ. ಮುಂದೆ ಅವರು ನಿರ್ಧಾರ ಮಾಡಲಿ ಎಂದು ಹೈಕಮಾಂಡ್ ಭೇಟಿ ಸಾಧ್ಯತೆಯನ್ನು ಎಂಟಿಬಿ ತಳ್ಳಿ ಹಾಕಿದರು.

Intro:


ಬೆಂಗಳೂರು: ನನ್ನ ಸೋಲಿಗೆ ಕಾರಣರಾಗಿರುವ ಶರತ್ ಬಚ್ಚೇಗೌಡರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳಬಾರದು,ಪಕ್ಷ ವಿರೋಧ ಚಟುವಟಿಕೆ ನಡೆಸಿದವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೊಸಕೋಟೆ ಪರಾಜಿತ ಅಭ್ಯರ್ಥಿ ಎಂಟಿಬಿ ನಾಗರಾಜ್ ಒತ್ತಾಯಿಸಿದ್ದಾರೆ.

ಡಾಲರ್ಸ್ ಕಾಲೋನಿಯಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಎಂಟಿಬಿ ನಾಗರಾಜ್ ಭೇಟಿ ನೀಡಿದರು. ಕ್ಷೇತ್ರದ ಕೆಲಸಗಳ ಜೊತೆ ತಮ್ಮ ಮುಂದಿನ ರಾಜಕೀಯ ಭವಿಷ್ಯದ ಕುರಿತು ಮಾತುಕತೆ ನಡೆಸಿದರು ಈ ವೇಳೆ ಶರತ್ ಬಚ್ಚೇಗೌಡ ಮತ್ತು ಬಚ್ಚೇಗೌಡ ವಿರುದ್ಧ ಮತ್ತೊಮ್ಮ ತಮ್ಮ ಅಸಮಧಾನ ವ್ಯಕ್ತಪಡಿಸಿದ್ದಾರೆ, ಯಾವ ಕಾರಣಕ್ಕೂ ಶರತ್ ಪಕ್ಷಕ್ಕೆ ವಾಪಸ್ ಬರಲು ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದು ಬಚ್ಚೇಗೌಡ ವಿರುದ್ಧವೂ ಕ್ರಮಕ್ಕೆ ಹೈಕಮಾಂಡ್ ಗೆ ದೂರು ನೀಡುವಂತೆ ಸಿಎಂಗೆ ಮನವಿ ಮಾಡಿದರು ಎಂದು ತಿಳಿದುಬಂದಿದೆ.

ಸಿಎಂ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಂಟಿಬಿ,ನನ್ನ‌ ಸೋಲಿಗೆ ಶರತ್ ಬಚ್ಚೇಗೌಡ, ಸಂಸದ ಬಚ್ಚೇಗೌಡ ಕಾರಣ. ಮೊದಲು ಒಪ್ಪಿ ಅಮೇಲೆ ಶರತ್ ನನಗೆ ಮೋಸ ಮಾಡಿದರು. ನನ್ನ ಸೋಲಿಗೆ ಅವರಿಬ್ಬರೇ ನೇರ ಕಾರಣ.ಅವರ ವಿರುದ್ದ ಕ್ರಮ ತೆಗೆದುಕೊಳ್ಳಬೇಕು.ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳಬಾರದು.
ಪಕ್ಷ ವಿರೋಧಿ ಚಟುವಟಿಕೆ ಮಾಡೋರಿಗೆ ಪಾಠ ಕಲಿಸಬೇಕು ಎಂದು ಆಗ್ರಹಿಸಿದರು.

ಮಂತ್ರಿಯಾಗುವ ಆಸೆ ಇದೆ:

ನನಗೂ ಮಂತ್ರಿ ಆಗಬೇಕು ಅಂತ ಆಸೆ ಇದೆ.ಯಾರಿಗೆ ತಾನೆ ಆಸೆ ಇರೋದಿಲ್ಲ ಹೇಳಿ.ನಮ್ಮ ಪರಿಸ್ಥಿತಿ ಎಲ್ಲಾ ಸಿಎಂಗೆ ಗೊತ್ತಿದೆ.ಸಚಿವ ಸ್ಥಾನದ ಬಗ್ಗೆ ಸಿಎಂ ಯಡಿಯೂರಪ್ಪ ನನಗೆ ಯಾವುದೇ ಭರವಸೆ ನೀಡಿಲ್ಲ.ಅವರು ಏನೇ ನಿರ್ಧಾರ ತೆಗೆದುಕೊಂಡರೂ ನಾವು ಬದ್ದವಾಗಿದ್ದೇವೆ ಎಂದರು.

ದೆಹಲಿ ನಾಯಕರ ಭೇಟಿ ಮಾಡಲ್ಲ:

ಹೈಕಮಾಂಡ್ ಸೇರಿದಂತೆ ಕೇಂದ್ರದ ಯಾವುದೇ ನಾಯಕರನ್ನ ನಾನು ಭೇಟಿ ಮಾಡಲ್ಲ.ರಾಜ್ಯ ನಾಯಕರೇ ಎಲ್ಲಾ ನಿರ್ಧಾರ ಮಾಡಲಿ.ನಾವಂತೂ ಕೇಳೋದನ್ನ ಕೇಳಿದ್ದೇವೆ. ಮುಂದೆ ಅವರು ನಿರ್ಧಾರ ಮಾಡಲಿ ಎಂದು ಹೈಕಮಾಂಡ್ ಭೇಟಿ ಸಾಧ್ಯತೆಯನ್ನು ಎಂಟಿಬಿ ತಳ್ಳಿಹಾಕಿದರು.
Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.