ಬೆಂಗಳೂರು: ಸುರಿಯುವ ಮಳೆಯಲ್ಲಿಯೇ ಆಹಾರ ಪದಾರ್ಥಗಳ ಕಿಟ್ಗಳನ್ನು ಬಡವರಿಗೆ ಶಾಸಕಿ ಸೌಮ್ಯಾ ರೆಡ್ಡಿ ವಿತರಿಸಿದರು.
![mla soumya reddy](https://etvbharatimages.akamaized.net/etvbharat/prod-images/kn-bng-08-sowmya-reddy-work-script-9020923_09042020230426_0904f_1586453666_96.jpg)
ಇಂದು ಸಂಜೆ 5.30ರಿಂದ 8-30ರವರೆಗೂ ಸುರಿದ ಮಳೆಯ ನಡುವೆ ಬೆಂಗಳೂರಿನ ಜಯನಗರದ ರಾಗಿಗುಡ್ಡ ದೇವಸ್ಥಾನ ಸುತ್ತಲಿನ ಪ್ರದೇಶದ ಅಶಕ್ತರು ಹಾಗೂ ಬಡವರಿಗೆ ಉಚಿತ ಆಹಾರ ಪದಾರ್ಥಗಳಿರುವ ಕಿಟ್ಗಳನ್ನು ನೀಡಲಾಯಿತು.
10 ದಿನಗಳಿಂದ ನಿರಂತರವಾಗಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿರುವ ಸೌಮ್ಯಾ ರೆಡ್ಡಿ, ಎಲ್ಲಾ ಕಡೆ ಆಹಾರ ಹಾಗೂ ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.