ETV Bharat / state

ಬೊಮ್ಮಾಯಿ ಸಂಪುಟದ 12 ಸಚಿವರಿಗೆ ಸೋಲು!

author img

By

Published : May 13, 2023, 5:39 PM IST

Updated : May 14, 2023, 9:55 AM IST

ಸಿಎಂ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟದ ಸಹೋದ್ಯೋಗಿಗಳು ಸಾಲು ಸಾಲಾಗಿ ಸೋಲು ಕಂಡಿದ್ದಾರೆ. 24 ಸಚಿವರಲ್ಲಿ ಅರ್ಧದಷ್ಟು ಮಂದಿ ಸೋಲಿನ ಕಹಿ ಅನುಭವಿಸಿದ್ದಾರೆ.

ಸಚಿವರ ಸಾಲು ಸಾಲು ಸೋಲು
ಸಚಿವರ ಸಾಲು ಸಾಲು ಸೋಲು

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ತೀವ್ರ ಮುಖಭಂಗ ಅನುಭವಿಸುವ ಮೂಲಕ ಅಧಿಕಾರ ಕಳೆದುಕೊಂಡಿದೆ. 64 ಸ್ಥಾನಗಳಲ್ಲಿ ಮಾತ್ರ ಕೇಸರಿ ಪಕ್ಷ ಗೆಲುವು ಕಂಡಿದೆ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದ 12 ಮಂದಿ ಸಚಿವರು ಸೋಲು ಕಂಡಿರುವುದು ಆಡಳಿತ ವಿರೋಧಿ ಅಲೆಗೆ ಸಾಕ್ಷಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಿಎಂ ಬೊಮ್ಮಾಯಿ ಅವರು ಹಾವೇರಿಯ ಶಿಗ್ಗಾಂವಿಯಲ್ಲಿ ಗೆಲುವು ಸಾಧಿಸಿದ್ದರೆ, ಅವರ ಸಂಪುಟದ ಸಚಿವರು ಸಾಲು ಸಾಲಾಗಿ ಸೋಲಿನ ಕಹಿ ಅನುಭವಿಸಿದ್ದಾರೆ. ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ಬಿ. ಶ್ರೀರಾಮುಲು ಸೇರಿದಂತೆ ಅನೇಕ ಸಚಿವರು ಸೋತಿದ್ದಾರೆ.

12 ಸಚಿವರಿಗೆ ಸೋಲು: ಆರೋಗ್ಯ ಇಲಾಖೆ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಸೋಲುಂಡಿದ್ದಾರೆ. ಸುಧಾಕರ್​ 19,815 ಮತಗಳನ್ನು ಪಡೆದರೆ, ಕೈ ಅಭ್ಯರ್ಥಿ ಪ್ರದೀಪ್​ ಈಶ್ವರ್​ 86,224 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.

ministers-who-lost-2023-assembly-elections
ಸೋಲು-ಗೆಲುವಿನ ಮಾಹಿತಿ

ಗದಗ ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಶಂಕರ್​ ಪಾಟೀಲ್​ ಮುನೇನಕೊಪ್ಪ ವಿರುದ್ಧ ಕಾಂಗ್ರೆಸ್​ನ ಎನ್​.ಎಚ್.ಕೋನರೆಡ್ಡಿ ಗೆಲುವು ಸಾಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದಲ್ಲಿ ಸಚಿವ ಹಾಲಪ್ಪ ಆಚಾರ್ 77,149 ಪಡೆದು ಸೋಲು ಕಂಡರೆ, ಕಾಂಗ್ರೆಸ್​ನ ರಾಯರೆಡ್ಡಿ 94,330 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಬಿ.ಸಿ.ನಾಗೇಶ್‌ (ತಿಪಟೂರು): ಪ್ರಾಥಮಿಕ ಇಲಾಖೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸೋಲು ಕಂಡಿದ್ದಾರೆ. ನಾಗೇಶ್​ 54,347 ಮತ ಗಳಿಸಿದರೆ, ಕಾಂಗ್ರೆಸ್​ನ ಷಡಕ್ಷರಿ 71,999 ಮತಗಳನ್ನು ಸಂಪಾದಿಸಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಕಣಕ್ಕಿಳಿದಿದ್ದ ಕಂದಾಯ ಸಚಿವ ಆರ್. ಅಶೋಕ ಸೋಲು ಕಂಡಿದ್ದಾರೆ. ಆದರೆ ಬೆಂಗಳೂರಿನ ಪದ್ಮನಾಭನಗರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ವಿರುದ್ಧ ಮತ್ತು ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಲು ಕಂಡಿದ್ದಾರೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ. ನಾಗೇಂದ್ರ ವಿರುದ್ಧ ಸಾರಿಗೆ ಸಚಿವ ಬಿ. ಶ್ರೀರಾಮುಲು ಸೋತಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಜೆಡಿಎಸ್‌ನ ಸುರೇಶ್‌ ಬಾಬು ವಿರುದ್ಧ ಸೋಲು ಕಂಡರು.

ಮುಧೋಳ ಕ್ಷೇತ್ರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಆರ್.ಬಿ.ತಿಮ್ಮಾಪುರ ಗೆಲುವು ಸಾಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಸೋಲು ಕಂಡರು. ಕಾಂಗ್ರೆಸ್‌ ಜಗದೀಶ್ ಪಾಟೀಲ್ ಗೆಲುವು ಸಾಧಿಸಿದರು.

ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕ್ರೀಡಾ ಸಚಿವ ಡಾ. ನಾರಾಯಣಗೌಡ ಸೋಲುಂಡರೆ, ಕಾಂಗ್ರೆಸ್​ ಬಿಎಲ್​ ದೇವರಾಜು ಗೆಲುವು ಕಂಡರು. ಹೊಸಕೋಟೆ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ವಿರುದ್ಧ ಸೋಲು ಕಂಡರು. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಬಿಸಿ ಪಾಟೀಲ್ ಸೋಲು ಕಂಡರೆ, ಅವರ ವಿರುದ್ಧ ಕಾಂಗ್ರೆಸ್​ನ ಯುಬಿ ಬಣಕಾರ್​ ಗೆಲುವು ಕಂಡಿದ್ದಾರೆ.

ಗೆದ್ದ ಸಚಿವರು: ಮುನಿರತ್ನ (ಆರ್​ಆರ್​ ನಗರ), ವಿ.ಸುನೀಲ್​ ಕುಮಾರ್ (ಕಾರ್ಕಳ)​, ಶಶಿಕಲಾ ಜೊಲ್ಲೆ (ನಿಪ್ಪಾಣಿ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ಭೈರತಿ ಬಸವರಾಜ (ಕೆಆರ್ ಪುರಂ), ಎಸ್.​ಟಿ.ಸೋಮಶೇಖರ್ (ಯಶವಂತಪುರ), ಶಿವರಾಮ ಹೆಬ್ಬಾರ್ (ಯಲ್ಲಾಪುರ), ಪ್ರಭು ಚವ್ಹಾಣ್ (ಔರಾದ್​), ಆರ್​. ಅಶೋಕ (ಪದ್ಮನಾಭನಗರ), ಆರಗ ಜ್ಞಾನೇಂದ್ರ (ತೀರ್ಥಹಳ್ಳಿ), ಸಿಸಿ ಪಾಟೀಲ್ (ನರಗುಂದ), ಸಿಎನ್​ ಅಶ್ವತ್ಥ ನಾರಾಯಣ (ಮಲ್ಲೇಶ್ವರ).

ಇದನ್ನೂ ಓದಿ: ವಲಸಿಗ ಶಾಸಕರ ಕ್ಷೇತ್ರಗಳ ಟ್ರೆಂಡಿಂಗ್​.. ಸುಧಾಕರ್, ಬಿಸಿ ಪಾಟೀಲ್​, ಎಂಟಿಬಿಗೆ ಹಿನ್ನಡೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ತೀವ್ರ ಮುಖಭಂಗ ಅನುಭವಿಸುವ ಮೂಲಕ ಅಧಿಕಾರ ಕಳೆದುಕೊಂಡಿದೆ. 64 ಸ್ಥಾನಗಳಲ್ಲಿ ಮಾತ್ರ ಕೇಸರಿ ಪಕ್ಷ ಗೆಲುವು ಕಂಡಿದೆ. ಅದರಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ಅವರ ಸಂಪುಟದ 12 ಮಂದಿ ಸಚಿವರು ಸೋಲು ಕಂಡಿರುವುದು ಆಡಳಿತ ವಿರೋಧಿ ಅಲೆಗೆ ಸಾಕ್ಷಿ ಎಂದೇ ವಿಶ್ಲೇಷಿಸಲಾಗುತ್ತಿದೆ.

ಸಿಎಂ ಬೊಮ್ಮಾಯಿ ಅವರು ಹಾವೇರಿಯ ಶಿಗ್ಗಾಂವಿಯಲ್ಲಿ ಗೆಲುವು ಸಾಧಿಸಿದ್ದರೆ, ಅವರ ಸಂಪುಟದ ಸಚಿವರು ಸಾಲು ಸಾಲಾಗಿ ಸೋಲಿನ ಕಹಿ ಅನುಭವಿಸಿದ್ದಾರೆ. ಹಿರಿಯ ಸಚಿವರಾದ ಗೋವಿಂದ ಕಾರಜೋಳ, ಡಾ.ಕೆ.ಸುಧಾಕರ್, ಬಿ. ಶ್ರೀರಾಮುಲು ಸೇರಿದಂತೆ ಅನೇಕ ಸಚಿವರು ಸೋತಿದ್ದಾರೆ.

12 ಸಚಿವರಿಗೆ ಸೋಲು: ಆರೋಗ್ಯ ಇಲಾಖೆ ಸಚಿವರಾಗಿದ್ದ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್ ಈಶ್ವರ್ ವಿರುದ್ಧ ಸೋಲುಂಡಿದ್ದಾರೆ. ಸುಧಾಕರ್​ 19,815 ಮತಗಳನ್ನು ಪಡೆದರೆ, ಕೈ ಅಭ್ಯರ್ಥಿ ಪ್ರದೀಪ್​ ಈಶ್ವರ್​ 86,224 ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.

ministers-who-lost-2023-assembly-elections
ಸೋಲು-ಗೆಲುವಿನ ಮಾಹಿತಿ

ಗದಗ ಜಿಲ್ಲೆಯ ನವಲಗುಂದ ಕ್ಷೇತ್ರದಲ್ಲಿ ಶಂಕರ್​ ಪಾಟೀಲ್​ ಮುನೇನಕೊಪ್ಪ ವಿರುದ್ಧ ಕಾಂಗ್ರೆಸ್​ನ ಎನ್​.ಎಚ್.ಕೋನರೆಡ್ಡಿ ಗೆಲುವು ಸಾಧಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದಲ್ಲಿ ಸಚಿವ ಹಾಲಪ್ಪ ಆಚಾರ್ 77,149 ಪಡೆದು ಸೋಲು ಕಂಡರೆ, ಕಾಂಗ್ರೆಸ್​ನ ರಾಯರೆಡ್ಡಿ 94,330 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.

ಬಿ.ಸಿ.ನಾಗೇಶ್‌ (ತಿಪಟೂರು): ಪ್ರಾಥಮಿಕ ಇಲಾಖೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸೋಲು ಕಂಡಿದ್ದಾರೆ. ನಾಗೇಶ್​ 54,347 ಮತ ಗಳಿಸಿದರೆ, ಕಾಂಗ್ರೆಸ್​ನ ಷಡಕ್ಷರಿ 71,999 ಮತಗಳನ್ನು ಸಂಪಾದಿಸಿದ್ದಾರೆ. ಕನಕಪುರ ಕ್ಷೇತ್ರದಲ್ಲಿ ಡಿ.ಕೆ.ಶಿವಕುಮಾರ್ ವಿರುದ್ಧ ಕಣಕ್ಕಿಳಿದಿದ್ದ ಕಂದಾಯ ಸಚಿವ ಆರ್. ಅಶೋಕ ಸೋಲು ಕಂಡಿದ್ದಾರೆ. ಆದರೆ ಬೆಂಗಳೂರಿನ ಪದ್ಮನಾಭನಗರದಲ್ಲಿ ಅವರು ಗೆಲುವು ಸಾಧಿಸಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ ಚಾಮರಾಜನಗರದಲ್ಲಿ ಕಾಂಗ್ರೆಸ್‌ನ ಪುಟ್ಟರಂಗ ಶೆಟ್ಟಿ ವಿರುದ್ಧ ಮತ್ತು ವರುಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸೋಲು ಕಂಡಿದ್ದಾರೆ. ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಬಿ. ನಾಗೇಂದ್ರ ವಿರುದ್ಧ ಸಾರಿಗೆ ಸಚಿವ ಬಿ. ಶ್ರೀರಾಮುಲು ಸೋತಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ ಜೆಡಿಎಸ್‌ನ ಸುರೇಶ್‌ ಬಾಬು ವಿರುದ್ಧ ಸೋಲು ಕಂಡರು.

ಮುಧೋಳ ಕ್ಷೇತ್ರದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಆರ್.ಬಿ.ತಿಮ್ಮಾಪುರ ಗೆಲುವು ಸಾಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ಷೇತ್ರದಲ್ಲಿ ಕೈಗಾರಿಕಾ ಸಚಿವ ಮರುಗೇಶ್ ನಿರಾಣಿ ಸೋಲು ಕಂಡರು. ಕಾಂಗ್ರೆಸ್‌ ಜಗದೀಶ್ ಪಾಟೀಲ್ ಗೆಲುವು ಸಾಧಿಸಿದರು.

ಮಂಡ್ಯದ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಕ್ರೀಡಾ ಸಚಿವ ಡಾ. ನಾರಾಯಣಗೌಡ ಸೋಲುಂಡರೆ, ಕಾಂಗ್ರೆಸ್​ ಬಿಎಲ್​ ದೇವರಾಜು ಗೆಲುವು ಕಂಡರು. ಹೊಸಕೋಟೆ ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಕಾಂಗ್ರೆಸ್‌ನ ಶರತ್ ಬಚ್ಚೇಗೌಡ ವಿರುದ್ಧ ಸೋಲು ಕಂಡರು. ಹಾವೇರಿ ಜಿಲ್ಲೆಯ ಹಿರೇಕೆರೂರಿನಲ್ಲಿ ಬಿಸಿ ಪಾಟೀಲ್ ಸೋಲು ಕಂಡರೆ, ಅವರ ವಿರುದ್ಧ ಕಾಂಗ್ರೆಸ್​ನ ಯುಬಿ ಬಣಕಾರ್​ ಗೆಲುವು ಕಂಡಿದ್ದಾರೆ.

ಗೆದ್ದ ಸಚಿವರು: ಮುನಿರತ್ನ (ಆರ್​ಆರ್​ ನಗರ), ವಿ.ಸುನೀಲ್​ ಕುಮಾರ್ (ಕಾರ್ಕಳ)​, ಶಶಿಕಲಾ ಜೊಲ್ಲೆ (ನಿಪ್ಪಾಣಿ), ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್), ಭೈರತಿ ಬಸವರಾಜ (ಕೆಆರ್ ಪುರಂ), ಎಸ್.​ಟಿ.ಸೋಮಶೇಖರ್ (ಯಶವಂತಪುರ), ಶಿವರಾಮ ಹೆಬ್ಬಾರ್ (ಯಲ್ಲಾಪುರ), ಪ್ರಭು ಚವ್ಹಾಣ್ (ಔರಾದ್​), ಆರ್​. ಅಶೋಕ (ಪದ್ಮನಾಭನಗರ), ಆರಗ ಜ್ಞಾನೇಂದ್ರ (ತೀರ್ಥಹಳ್ಳಿ), ಸಿಸಿ ಪಾಟೀಲ್ (ನರಗುಂದ), ಸಿಎನ್​ ಅಶ್ವತ್ಥ ನಾರಾಯಣ (ಮಲ್ಲೇಶ್ವರ).

ಇದನ್ನೂ ಓದಿ: ವಲಸಿಗ ಶಾಸಕರ ಕ್ಷೇತ್ರಗಳ ಟ್ರೆಂಡಿಂಗ್​.. ಸುಧಾಕರ್, ಬಿಸಿ ಪಾಟೀಲ್​, ಎಂಟಿಬಿಗೆ ಹಿನ್ನಡೆ

Last Updated : May 14, 2023, 9:55 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.