ETV Bharat / state

ರಾಜ್ಯೋತ್ಸವಕ್ಕೆ ಎಷ್ಟಾದರೂ ಶಿಫಾರಸು ಮಾಡಲಿ, ಇಲ್ಲಿ ಸಾಧನೆಯೇ ಮಾನದಂಡ: ಸಚಿವ ಸುನಿಲ್ ಕುಮಾರ್

author img

By

Published : Oct 19, 2021, 5:02 PM IST

ರಾಜ್ಯೋತ್ಸವ ಪ್ರಶಸ್ತಿಗಾಗಿ ನಾಲ್ಕೂವರೆ ಸಾವಿರ ಅರ್ಜಿಗಳು ಬಂದಿವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ. ಸೇವಾ ಸಿಂಧು ಮೂಲಕ ಅರ್ಜಿ ಕರೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್ ತಿಳಿಸಿದರು.

ಮಾತಾಡ್ ಮಾತಾಡ್ ಕನ್ನಡ ಅಭಿಯಾನ
ಮಾತಾಡ್ ಮಾತಾಡ್ ಕನ್ನಡ ಅಭಿಯಾನ

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಎಷ್ಟಾದರೂ ಶಿಫಾರಸು ಮಾಡಲಿ ಆದರೆ, ಅವರ ಸಾಧನೆಯೇ ಮಾನದಂಡ‌ವಾಗಿರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿಗಾಗಿ ನಾಲ್ಕೂವರೆ ಸಾವಿರ ಅರ್ಜಿಗಳು ಬಂದಿವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ. ಸೇವಾ ಸಿಂಧು ಮೂಲಕ ಅರ್ಜಿ ಕರೆಯಲಾಗಿದೆ. ನನಗೆ ಪ್ರಶಸ್ತಿ ಬೇಕು ಅನ್ನುವವರ ಸಂಖ್ಯೆ ಕಡಿಮೆ ಆಗಬೇಕು. ಇಂತವರಿಗೆ ಕೊಡಬೇಕು ಅಂತ ಶಿಫಾರಸು ಮಾಡುವವರ ಸಂಖ್ಯೆ ಹೆಚ್ಚಿದೆ ಎಂದರು‌.

ಮಾತಾಡ್ ಮಾತಾಡ್ ಕನ್ನಡ ಅಭಿಯಾನ

ಮಾತಾಡ್ ಮಾತಾಡ್ ಕನ್ನಡ ಅಭಿಯಾನ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರು ರೀತಿಯ ಅಭಿಯಾನ ನಡೆಯಲಿದೆ. ಕನ್ನಡಕ್ಕಾಗಿ ನಾವು ಮಾತಾಡ್ ಮಾತಾಡ್ ಕನ್ನಡ ಎಂದು ಅ. 25 ರಿಂದ 30ರ ವರೆಗೆ ಮಾತಾಡ್ ಮಾತಾಡ್ ಕನ್ನಡ ಎಂಬ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲೂ ಜಾಗತೀಕರಣದ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆ ಕನ್ನಡ ಭಾಷೆಯನ್ನು ಎಲ್ಲರ ಮನೆಗೆ ತಲುಪಿಸುವ ಯತ್ನ ಇದಾಗಿದೆ. ಭಾಷೆಯ ಜೊತೆ ಸಂಸ್ಕೃತಿ ಇದೆ. ಉಡುಗೆ ತೊಡುಗೆ ಇದೆ. ಅದಕ್ಕೆ ಪೂರಕವಾಗಿ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ. ನಮ್ಮ ನಾಡಿನ ಭಾಷೆ, ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ.

ಕನಿಷ್ಠ ಒಂದು ವಾರದ ಕಾಲ ಕನ್ನಡದಲ್ಲೇ ಬರೆಯುತ್ತೇವೆ, ಕನ್ನಡದಲ್ಲೇ ಅಭ್ಯಸಿಸುತ್ತೇವೆ. ಕನ್ನಡದಲ್ಲೇ ವ್ಯವಹರಿಸುತ್ತೇವೆ ಎಂದು ಪಣ ತೊಡಬೇಕು. ಮಕ್ಳಳ ಜೊತೆ ವ್ಯವಹರಿಸುವಾಗ ಕನ್ನಡದಲ್ಲೇ ಮಾತನಾಡೋಣ.‌ ಕನ್ನಡದಲ್ಲೇ ಸಹಿ ಹಾಕಬೇಕು. ಹೊರ ರಾಜ್ಯದವರು ಕನಿಷ್ಠ ನೂರು ಶಬ್ದಗಳಲ್ಲಿ ಕನ್ನಡ ಮಾತನಾಡುವಂತೆ ಮನವಿ ಮಾಡಿದರು.

ಕನ್ನಡದಲ್ಲೇ ಮಾತನಾಡುವ ಸ್ಪರ್ಧೆ

ಜಿಲ್ಲಾ ರಾಜ್ಯಮಟ್ಟದಲ್ಲಿ ಕನ್ನಡದಲ್ಲೇ ಮಾತನಾಡುವ ಸ್ಪರ್ಧೆ ಏರ್ಪಡಿಸಲಾಗಿದೆ‌. ಬೇರೆ ಭಾಷೆ ಬಳಸದೇ ಮಾತಬಾಡಬೇಕು. ಇದಕ್ಕಾಗಿ ರಾಜ್ಯಮಟ್ಟದಲ್ಲಿ 50 ಸಾವಿರ ರೂ., ಜಿಲ್ಲಾಮಟ್ಟದಲ್ಲಿ ಐದು ಸಾವಿರ ಬಹುಮಾನ ನೀಡಲಾಗುವುದು ಎಂದರು.

ನ್ಯೂಸ್ ಚಾನಲ್ ಅವರು ಕೂಡ ಒಂದು ವಾರ ಅನ್ಯ ಭಾಷೆ ಬಳಸದೆ ಕಾರ್ಯಕ್ರಮ ಮಾಡಲು ಮನವಿ ಮಾಡಿದರು. ಬೆಂಗಳೂರು ಎಲ್ಲ ವಾರ್ಡ್ ಗಳಲ್ಲಿ, ವಿಶ್ವವಿದ್ಯಾಲಯ ಸೇರಿ ರಾಜ್ಯದ ಮೂಲೆ ಮೂಲೆಯಲ್ಲಿ ಕಾರ್ಯಕ್ರಮ ಮಾಡ್ತೇವೆ. ನಾಟಕ, ನೃತ್ಯ ಕಾರ್ಯಕ್ರಮ ಆಯೋಜಿಸಲಿದ್ದೇವೆ ಎಂದರು.

ಲಕ್ಷ ಕಂಠಗಳಲ್ಲಿ ಕನ್ನಡ ಗಾಯನ: ಅ.28ರಂದು ಬೆಳಗ್ಗೆ 11 ಗಂಟೆಗೆ ಲಕ್ಷ ಕಂಠಗಳಲ್ಲಿ ಕನ್ನಡದ ಗಾಯನ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕನಿಷ್ಠ ಮೂರು ಕನ್ನಡದ ಗಾಯನ‌ ಹಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ವಿಧಾನಸೌಧದ ಮೆಟ್ಟಿಲುಗಳಲ್ಲಿ ಇದನ್ನು ಆಯೋಜಿಸಲಾಗುವುದು. ಭಾರತೀಯ ಆಡಳಿತ ಸೇವೆಯಲ್ಲಿ ಕೆಲಸ ಮಾಡುವವರು ಭಾಗಿಯಾಗ್ತಾರೆ. 18 ಹೊರ ರಾಜ್ಯಗಳಲ್ಲಿ, 14 ಹೊರ ದೇಶಗಳಲ್ಲಿ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಲಂಡನ್​​​ನಲ್ಲಿರುವ ಬಸವಣ್ಣನ ಪ್ರತಿಮೆ ಮುಂದೆಯೂ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.28, 29, 30 ಕನ್ನಡದ ಸಾಂಸ್ಕೃತಿಕ ಉತ್ಸವ ನಡೆಯಲಿದೆ ಎಂದರು.

ಬೆಂಗಳೂರು: ರಾಜ್ಯೋತ್ಸವ ಪ್ರಶಸ್ತಿಗೆ ಎಷ್ಟಾದರೂ ಶಿಫಾರಸು ಮಾಡಲಿ ಆದರೆ, ಅವರ ಸಾಧನೆಯೇ ಮಾನದಂಡ‌ವಾಗಿರಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್‌ ಕುಮಾರ್ ತಿಳಿಸಿದರು.

ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯೋತ್ಸವ ಪ್ರಶಸ್ತಿಗಾಗಿ ನಾಲ್ಕೂವರೆ ಸಾವಿರ ಅರ್ಜಿಗಳು ಬಂದಿವೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ. ಸೇವಾ ಸಿಂಧು ಮೂಲಕ ಅರ್ಜಿ ಕರೆಯಲಾಗಿದೆ. ನನಗೆ ಪ್ರಶಸ್ತಿ ಬೇಕು ಅನ್ನುವವರ ಸಂಖ್ಯೆ ಕಡಿಮೆ ಆಗಬೇಕು. ಇಂತವರಿಗೆ ಕೊಡಬೇಕು ಅಂತ ಶಿಫಾರಸು ಮಾಡುವವರ ಸಂಖ್ಯೆ ಹೆಚ್ಚಿದೆ ಎಂದರು‌.

ಮಾತಾಡ್ ಮಾತಾಡ್ ಕನ್ನಡ ಅಭಿಯಾನ

ಮಾತಾಡ್ ಮಾತಾಡ್ ಕನ್ನಡ ಅಭಿಯಾನ: ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆರು ರೀತಿಯ ಅಭಿಯಾನ ನಡೆಯಲಿದೆ. ಕನ್ನಡಕ್ಕಾಗಿ ನಾವು ಮಾತಾಡ್ ಮಾತಾಡ್ ಕನ್ನಡ ಎಂದು ಅ. 25 ರಿಂದ 30ರ ವರೆಗೆ ಮಾತಾಡ್ ಮಾತಾಡ್ ಕನ್ನಡ ಎಂಬ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ನಮ್ಮ ರಾಜ್ಯದಲ್ಲೂ ಜಾಗತೀಕರಣದ ಪ್ರಭಾವ ಬೀರುತ್ತಿದೆ. ಈ ಹಿನ್ನೆಲೆ ಕನ್ನಡ ಭಾಷೆಯನ್ನು ಎಲ್ಲರ ಮನೆಗೆ ತಲುಪಿಸುವ ಯತ್ನ ಇದಾಗಿದೆ. ಭಾಷೆಯ ಜೊತೆ ಸಂಸ್ಕೃತಿ ಇದೆ. ಉಡುಗೆ ತೊಡುಗೆ ಇದೆ. ಅದಕ್ಕೆ ಪೂರಕವಾಗಿ ವ್ಯಕ್ತಿತ್ವ ನಿರ್ಮಾಣ ಆಗುತ್ತದೆ. ನಮ್ಮ ನಾಡಿನ ಭಾಷೆ, ಸಂಸ್ಕೃತಿಯನ್ನು ಹೊಸ ಪೀಳಿಗೆಗೆ ತಲುಪಿಸುವ ಅಗತ್ಯ ಇದೆ.

ಕನಿಷ್ಠ ಒಂದು ವಾರದ ಕಾಲ ಕನ್ನಡದಲ್ಲೇ ಬರೆಯುತ್ತೇವೆ, ಕನ್ನಡದಲ್ಲೇ ಅಭ್ಯಸಿಸುತ್ತೇವೆ. ಕನ್ನಡದಲ್ಲೇ ವ್ಯವಹರಿಸುತ್ತೇವೆ ಎಂದು ಪಣ ತೊಡಬೇಕು. ಮಕ್ಳಳ ಜೊತೆ ವ್ಯವಹರಿಸುವಾಗ ಕನ್ನಡದಲ್ಲೇ ಮಾತನಾಡೋಣ.‌ ಕನ್ನಡದಲ್ಲೇ ಸಹಿ ಹಾಕಬೇಕು. ಹೊರ ರಾಜ್ಯದವರು ಕನಿಷ್ಠ ನೂರು ಶಬ್ದಗಳಲ್ಲಿ ಕನ್ನಡ ಮಾತನಾಡುವಂತೆ ಮನವಿ ಮಾಡಿದರು.

ಕನ್ನಡದಲ್ಲೇ ಮಾತನಾಡುವ ಸ್ಪರ್ಧೆ

ಜಿಲ್ಲಾ ರಾಜ್ಯಮಟ್ಟದಲ್ಲಿ ಕನ್ನಡದಲ್ಲೇ ಮಾತನಾಡುವ ಸ್ಪರ್ಧೆ ಏರ್ಪಡಿಸಲಾಗಿದೆ‌. ಬೇರೆ ಭಾಷೆ ಬಳಸದೇ ಮಾತಬಾಡಬೇಕು. ಇದಕ್ಕಾಗಿ ರಾಜ್ಯಮಟ್ಟದಲ್ಲಿ 50 ಸಾವಿರ ರೂ., ಜಿಲ್ಲಾಮಟ್ಟದಲ್ಲಿ ಐದು ಸಾವಿರ ಬಹುಮಾನ ನೀಡಲಾಗುವುದು ಎಂದರು.

ನ್ಯೂಸ್ ಚಾನಲ್ ಅವರು ಕೂಡ ಒಂದು ವಾರ ಅನ್ಯ ಭಾಷೆ ಬಳಸದೆ ಕಾರ್ಯಕ್ರಮ ಮಾಡಲು ಮನವಿ ಮಾಡಿದರು. ಬೆಂಗಳೂರು ಎಲ್ಲ ವಾರ್ಡ್ ಗಳಲ್ಲಿ, ವಿಶ್ವವಿದ್ಯಾಲಯ ಸೇರಿ ರಾಜ್ಯದ ಮೂಲೆ ಮೂಲೆಯಲ್ಲಿ ಕಾರ್ಯಕ್ರಮ ಮಾಡ್ತೇವೆ. ನಾಟಕ, ನೃತ್ಯ ಕಾರ್ಯಕ್ರಮ ಆಯೋಜಿಸಲಿದ್ದೇವೆ ಎಂದರು.

ಲಕ್ಷ ಕಂಠಗಳಲ್ಲಿ ಕನ್ನಡ ಗಾಯನ: ಅ.28ರಂದು ಬೆಳಗ್ಗೆ 11 ಗಂಟೆಗೆ ಲಕ್ಷ ಕಂಠಗಳಲ್ಲಿ ಕನ್ನಡದ ಗಾಯನ ಎಂಬ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಕನಿಷ್ಠ ಮೂರು ಕನ್ನಡದ ಗಾಯನ‌ ಹಾಡಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.

ವಿಧಾನಸೌಧದ ಮೆಟ್ಟಿಲುಗಳಲ್ಲಿ ಇದನ್ನು ಆಯೋಜಿಸಲಾಗುವುದು. ಭಾರತೀಯ ಆಡಳಿತ ಸೇವೆಯಲ್ಲಿ ಕೆಲಸ ಮಾಡುವವರು ಭಾಗಿಯಾಗ್ತಾರೆ. 18 ಹೊರ ರಾಜ್ಯಗಳಲ್ಲಿ, 14 ಹೊರ ದೇಶಗಳಲ್ಲಿ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಲಂಡನ್​​​ನಲ್ಲಿರುವ ಬಸವಣ್ಣನ ಪ್ರತಿಮೆ ಮುಂದೆಯೂ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.28, 29, 30 ಕನ್ನಡದ ಸಾಂಸ್ಕೃತಿಕ ಉತ್ಸವ ನಡೆಯಲಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.