ETV Bharat / state

45 ಶಾಸಕರು ಬೇಡ, 4 ಎಂಎಲ್​ಎಗಳನ್ನು ಕರೆದುಕೊಳ್ಳಲಿ ನೋಡೋಣ: ಬಿಎಲ್‌ ಸಂತೋಷ್‌ಗೆ ಪ್ರಿಯಾಂಕ್ ಖರ್ಗೆ ಸವಾಲು

Priyank Kharge challenge to BL Santosh: ಬಿ.ಎಲ್.ಸಂತೋಷ್ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಿಯಾಂಕ್ ಖರ್ಗೆ ಮೊದಲು ಅವರ ಶಾಸಕರನ್ನು, ಸಂಸದರನ್ನು ಹಿಡಿದಿಟ್ಟುಕೊಳ್ಳಲಿ. ನಂತರ ಕಾಂಗ್ರೆಸ್ ಶಾಸಕರ ಬಗ್ಗೆ ಮಾತನಾಡಲಿ ಎಂದು ಸವಾಲು ಹಾಕಿದರು.

author img

By ETV Bharat Karnataka Team

Published : Sep 2, 2023, 12:46 PM IST

Priyank Kharge
ಪ್ರಿಯಾಂಕ್ ಖರ್ಗೆ

ಬೆಂಗಳೂರು/ ಕಲಬುರಗಿ: ನನ್ನ ಜೊತೆ ಹಲವು ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದ ಬಿ.ಎಲ್‌ ಸಂತೋಷ್‌ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. 45 ಶಾಸಕರು ಬೇಡ, 4 ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ ಎಂದು ಪಂಥಾಹ್ವಾನ ನೀಡಿದ್ದಾರೆ.

Priyank Kharge tweet
ಪ್ರಿಯಾಂಕ್ ಖರ್ಗೆ ಎಕ್ಸ್​ (ಹಿಂದಿನ ಟ್ವಿಟ್ಟರ್​) ಪೋಸ್ಟ್​

ಬಿ.ಎಲ್ ಸಂತೋಷ್ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ 'ಮೊದಲು ಅವರ ಶಾಸಕರನ್ನು, ಸಂಸದರನ್ನು ಹಿಡಿದಿಟ್ಟುಕೊಳ್ಳಲಿ. ನಂತರ ಕಾಂಗ್ರೆಸ್ ಶಾಸಕರ ಬಗ್ಗೆ ಮಾತನಾಡಲಿ ಎಂದರು. ಆರ್​ಎಸ್​ಎಸ್ ಯಾವ ಪಕ್ಷದ ಜೊತೆ ಇಲ್ಲ ಎನ್ನುತ್ತಾರೆ. ಆದರೆ, ಬಿಜೆಪಿಗೆ‌ ಹೋಗಿ ಪಾಠ ಮಾಡ್ತಾರೆ. ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬರುತ್ತದೆ?. ಬಿಎಸ್​​ವೈ ಸೇರಿ ಲಿಂಗಾಯತರಿಗೆ ಟಿಕೆಟ್ ನೀಡಲಿಲ್ಲ.‌ ಇದಕ್ಕೆ ಬಿ.ಎಲ್.ಸಂತೋಷ್ ಮೊದಲು ಉತ್ತರ ನೀಡಲಿ. ನಂತರ ನಮ್ಮವರ ಬಗ್ಗೆ ಮಾತನಾಡಲಿ' ಎಂದರು.

ಸರ್ಕಾರ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ: ಕೈ ಶಾಸಕರ ಅಸಮಾಧಾನದ ವಿಚಾರವಾಗಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಶಾಸಕರ ಅಹವಾಲು ಸ್ವೀಕರಿಸಿದ್ದಾರೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುತ್ತಾರೆ. ಎಲ್ಲರ ಸಹಕಾರ, ಸಹನೆ ಬೇಕಾಗುತ್ತದೆ.‌ ನಮ್ಮ ಗ್ಯಾರಂಟಿಗಳು ಎಲ್ಲರಿಗೂ ಹೋಗುತ್ತಿವೆ. ಈ ಬಾರಿ ಸ್ವಲ್ಪ ಕಷ್ಟ ಆಗಬಹುದು ಎಂದು ಸಿಎಂ ಹೇಳಿದ್ದಾರೆ. ಹಿಂದಿನ ಸರ್ಕಾರ ಸಾಲ ಮಾಡಿ ತುಪ್ಪ ತಿಂದಿದೆ. ಈಗ ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿಲ್ಲ. ಸರ್ಕಾರ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ.‌ ಎಲ್ಲರ ಸಹಕಾರ ಸರ್ಕಾರಕ್ಕೆ ಬೇಕು ಎಂದು ಮನವಿ ಮಾಡಿದರು.

ಸಚಿವರ ಕಚೇರಿಯಲ್ಲಿ ಪಿಎಗಳ ದರ್ಬಾರ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನಗೆ ಅದರ ಬಗ್ಗೆ ‌ಮಾಹಿತಿಯಿಲ್ಲ. ಶಾಸಕರೇ ನನಗೆ ಹೇಳಬೇಕು ಎಂದರು.‌ ಅಕ್ರಮ ಬಿಟ್ ಕಾಯಿನ್ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಹ್ಯಾಕರ್ ಶ್ರೀಕಿಯಿಂದ ವರ್ಗಾವಣೆ ಆರೋಪ ಪ್ರಕರಣವನ್ನು ತನಿಖೆ ಮಾಡಿದರೆ ವಿಚಾರ ಹೊರಗೆ ಬರುತ್ತೆಂದು ತನಿಖೆ ಮಾಡಿಸಿಲ್ಲ. ನಾವು ಬಂದ ನಂತರ ಎಸ್​ಐಟಿ ಮಾಡಿದ್ದೇವೆ. ತನಿಖೆಯನ್ನೂ ಮಾಡಿಸುತ್ತಿದ್ದೇವೆ.‌

ಸರಿಯಾದ ತನಿಖೆಯಾದರೆ ಎಲ್ಲರ ಹೆಸರು ಹೊರಬರುತ್ತದೆ. ಪ್ರಾಮಾಣಿಕ ತನಿಖೆ ನಡೆಯಬೇಕು ಎಂದು ನಾನು ಮೊದಲೇ ಹೇಳಿದ್ದೆ. ಪ್ರಕರಣವನ್ನ ತಾಂತ್ರಿಕವಾಗಿ ಆಳ ತನಿಖೆಗೆ ಒಳಪಡಿಸಬೇಕು. ಡಾರ್ಕ್ ವೆಬ್ ಬಗ್ಗೆ ತಿಳಿದವರಿಂದ ತನಿಖೆ ಆಗಬೇಕು. ಸೈಬರ್ ಕೇಸ್ ತಿಳಿದುಕೊಂಡವರಿಂದ ತನಿಖೆಯಾದರೆ ಮತ್ತಷ್ಟು ಹೆಚ್ಚಿನ ಮಾಹಿತಿ ಸಿಗಲಿದೆ ಎಂದರು.

ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ?: ಒಂದು‌ ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ತೋರಿಸಿ " ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್​ಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಸವಾಲು ಎಸೆದಿದ್ದಾರೆ.

40-45 ಜನ ಸಂಪರ್ಕದಲ್ಲಿದ್ದಾರೆ. ಒಪ್ಪಿಗೆ ಸಿಕ್ಕರೆ ಒಂದು ದಿನದ ಕೆಲಸ ಎನ್ನುವ ಸಂತೋಷ್ ಅವರ ಹೇಳಿಕೆಯನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರ ಬೀಳಿಸುವುದು ಇರಲಿ, ಅಲ್ಲಾಡಿಸಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ. 'ಸಂತೋಷ್ ಅವರಿಗೆ ಒಂದು‌ ಸವಾಲು, ಒಂದು ದಿನವಲ್ಲ ಒಂದು ತಿಂಗಳು ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ ಅಲ್ಲಾಡಿಸಿ ತೋರಿಸಲಿ' ಎಂದು ಪಂಥಾಹ್ವಾನ ನೀಡಿದ್ದಾರೆ.

ಬಿಜೆಪಿ ವಿರುದ್ಧ ಟೀಕೆ ಮುಂದುವರೆಸಿರುವ ಸಚಿವರು, 'ಇವೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಸವಾಲು, ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ' ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೆಂಟ್ರಲ್ ಲೀಡರ್ ಶಿಪ್ ರಾಜ್ಯ ನಾಯಕರನ್ನು ಕ್ಯಾರೇ ಮಾಡುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು/ ಕಲಬುರಗಿ: ನನ್ನ ಜೊತೆ ಹಲವು ಕಾಂಗ್ರೆಸ್‌ ಶಾಸಕರು ಸಂಪರ್ಕದಲ್ಲಿದ್ದಾರೆ ಎಂದಿದ್ದ ಬಿ.ಎಲ್‌ ಸಂತೋಷ್‌ ಅವರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದ್ದಾರೆ. 45 ಶಾಸಕರು ಬೇಡ, 4 ಶಾಸಕರನ್ನು ಕರೆದುಕೊಂಡು ಹೋಗಲಿ ನೋಡೋಣ ಎಂದು ಪಂಥಾಹ್ವಾನ ನೀಡಿದ್ದಾರೆ.

Priyank Kharge tweet
ಪ್ರಿಯಾಂಕ್ ಖರ್ಗೆ ಎಕ್ಸ್​ (ಹಿಂದಿನ ಟ್ವಿಟ್ಟರ್​) ಪೋಸ್ಟ್​

ಬಿ.ಎಲ್ ಸಂತೋಷ್ ಹೇಳಿಕೆ‌ ವಿಚಾರವಾಗಿ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ 'ಮೊದಲು ಅವರ ಶಾಸಕರನ್ನು, ಸಂಸದರನ್ನು ಹಿಡಿದಿಟ್ಟುಕೊಳ್ಳಲಿ. ನಂತರ ಕಾಂಗ್ರೆಸ್ ಶಾಸಕರ ಬಗ್ಗೆ ಮಾತನಾಡಲಿ ಎಂದರು. ಆರ್​ಎಸ್​ಎಸ್ ಯಾವ ಪಕ್ಷದ ಜೊತೆ ಇಲ್ಲ ಎನ್ನುತ್ತಾರೆ. ಆದರೆ, ಬಿಜೆಪಿಗೆ‌ ಹೋಗಿ ಪಾಠ ಮಾಡ್ತಾರೆ. ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬರುತ್ತದೆ?. ಬಿಎಸ್​​ವೈ ಸೇರಿ ಲಿಂಗಾಯತರಿಗೆ ಟಿಕೆಟ್ ನೀಡಲಿಲ್ಲ.‌ ಇದಕ್ಕೆ ಬಿ.ಎಲ್.ಸಂತೋಷ್ ಮೊದಲು ಉತ್ತರ ನೀಡಲಿ. ನಂತರ ನಮ್ಮವರ ಬಗ್ಗೆ ಮಾತನಾಡಲಿ' ಎಂದರು.

ಸರ್ಕಾರ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ: ಕೈ ಶಾಸಕರ ಅಸಮಾಧಾನದ ವಿಚಾರವಾಗಿ ಮಾತನಾಡಿದ ಅವರು, ಸಿಎಂ, ಡಿಸಿಎಂ ಶಾಸಕರ ಅಹವಾಲು ಸ್ವೀಕರಿಸಿದ್ದಾರೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುತ್ತಾರೆ. ಎಲ್ಲರ ಸಹಕಾರ, ಸಹನೆ ಬೇಕಾಗುತ್ತದೆ.‌ ನಮ್ಮ ಗ್ಯಾರಂಟಿಗಳು ಎಲ್ಲರಿಗೂ ಹೋಗುತ್ತಿವೆ. ಈ ಬಾರಿ ಸ್ವಲ್ಪ ಕಷ್ಟ ಆಗಬಹುದು ಎಂದು ಸಿಎಂ ಹೇಳಿದ್ದಾರೆ. ಹಿಂದಿನ ಸರ್ಕಾರ ಸಾಲ ಮಾಡಿ ತುಪ್ಪ ತಿಂದಿದೆ. ಈಗ ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿಲ್ಲ. ಸರ್ಕಾರ ಪ್ರಗತಿ ಪರ ಹೆಜ್ಜೆ ಹಾಕುತ್ತಿದೆ.‌ ಎಲ್ಲರ ಸಹಕಾರ ಸರ್ಕಾರಕ್ಕೆ ಬೇಕು ಎಂದು ಮನವಿ ಮಾಡಿದರು.

ಸಚಿವರ ಕಚೇರಿಯಲ್ಲಿ ಪಿಎಗಳ ದರ್ಬಾರ್ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನಗೆ ಅದರ ಬಗ್ಗೆ ‌ಮಾಹಿತಿಯಿಲ್ಲ. ಶಾಸಕರೇ ನನಗೆ ಹೇಳಬೇಕು ಎಂದರು.‌ ಅಕ್ರಮ ಬಿಟ್ ಕಾಯಿನ್ ವರ್ಗಾವಣೆ ವಿಚಾರವಾಗಿ ಮಾತನಾಡಿದ ಅವರು, ಹ್ಯಾಕರ್ ಶ್ರೀಕಿಯಿಂದ ವರ್ಗಾವಣೆ ಆರೋಪ ಪ್ರಕರಣವನ್ನು ತನಿಖೆ ಮಾಡಿದರೆ ವಿಚಾರ ಹೊರಗೆ ಬರುತ್ತೆಂದು ತನಿಖೆ ಮಾಡಿಸಿಲ್ಲ. ನಾವು ಬಂದ ನಂತರ ಎಸ್​ಐಟಿ ಮಾಡಿದ್ದೇವೆ. ತನಿಖೆಯನ್ನೂ ಮಾಡಿಸುತ್ತಿದ್ದೇವೆ.‌

ಸರಿಯಾದ ತನಿಖೆಯಾದರೆ ಎಲ್ಲರ ಹೆಸರು ಹೊರಬರುತ್ತದೆ. ಪ್ರಾಮಾಣಿಕ ತನಿಖೆ ನಡೆಯಬೇಕು ಎಂದು ನಾನು ಮೊದಲೇ ಹೇಳಿದ್ದೆ. ಪ್ರಕರಣವನ್ನ ತಾಂತ್ರಿಕವಾಗಿ ಆಳ ತನಿಖೆಗೆ ಒಳಪಡಿಸಬೇಕು. ಡಾರ್ಕ್ ವೆಬ್ ಬಗ್ಗೆ ತಿಳಿದವರಿಂದ ತನಿಖೆ ಆಗಬೇಕು. ಸೈಬರ್ ಕೇಸ್ ತಿಳಿದುಕೊಂಡವರಿಂದ ತನಿಖೆಯಾದರೆ ಮತ್ತಷ್ಟು ಹೆಚ್ಚಿನ ಮಾಹಿತಿ ಸಿಗಲಿದೆ ಎಂದರು.

ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ?: ಒಂದು‌ ದಿನವಲ್ಲ, ಒಂದು ತಿಂಗಳು ಸಮಯ ನೀಡುತ್ತೇವೆ, ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ, ಅಲ್ಲಾಡಿಸಲು ಸಾಧ್ಯವಾ ತೋರಿಸಿ " ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್​ಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಸವಾಲು ಎಸೆದಿದ್ದಾರೆ.

40-45 ಜನ ಸಂಪರ್ಕದಲ್ಲಿದ್ದಾರೆ. ಒಪ್ಪಿಗೆ ಸಿಕ್ಕರೆ ಒಂದು ದಿನದ ಕೆಲಸ ಎನ್ನುವ ಸಂತೋಷ್ ಅವರ ಹೇಳಿಕೆಯನ್ನು ಟ್ಯಾಗ್​ ಮಾಡಿ ಟ್ವೀಟ್​ ಮಾಡಿರುವ ಪ್ರಿಯಾಂಕ್ ಖರ್ಗೆ ಅವರು, ಸರ್ಕಾರ ಬೀಳಿಸುವುದು ಇರಲಿ, ಅಲ್ಲಾಡಿಸಲು ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ. 'ಸಂತೋಷ್ ಅವರಿಗೆ ಒಂದು‌ ಸವಾಲು, ಒಂದು ದಿನವಲ್ಲ ಒಂದು ತಿಂಗಳು ಸಮಯ ನೀಡುತ್ತೇವೆ. ನಮ್ಮ ಸರ್ಕಾರವನ್ನು ಬೀಳಿಸುವುದಿರಲಿ ಅಲ್ಲಾಡಿಸಿ ತೋರಿಸಲಿ' ಎಂದು ಪಂಥಾಹ್ವಾನ ನೀಡಿದ್ದಾರೆ.

ಬಿಜೆಪಿ ವಿರುದ್ಧ ಟೀಕೆ ಮುಂದುವರೆಸಿರುವ ಸಚಿವರು, 'ಇವೆಲ್ಲಕ್ಕೂ ಮಿಗಿಲಾಗಿ ಮತ್ತೊಂದು ಸವಾಲು, ಒಂದು ವಾರದ ಸಮಯದಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಹಾಗೂ ಮೇಲ್ಮನೆಯ ವಿಪಕ್ಷ ನಾಯಕನನ್ನು ಆಯ್ಕೆ ಮಾಡಿ ತೋರಿಸಿ. ಈ ಸವಾಲನ್ನು ಸ್ವೀಕರಿಸುವ ದಮ್ಮು, ತಾಕತ್ತು ಇದೆಯೇ' ಎಂದು ಕುಟುಕಿದ್ದಾರೆ.

ಇದನ್ನೂ ಓದಿ: ಬಿಜೆಪಿ ಸೆಂಟ್ರಲ್ ಲೀಡರ್ ಶಿಪ್ ರಾಜ್ಯ ನಾಯಕರನ್ನು ಕ್ಯಾರೇ ಮಾಡುತ್ತಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.