ETV Bharat / state

ಕೆ.ಆರ್. ಮಾರ್ಕೆಟ್​​​​ನಲ್ಲಿ ಮೂಟೆ ಹೊರುತ್ತಿದ್ದ ಕಾರ್ಮಿಕನ ಬರ್ಬರ ಹತ್ಯೆ..ಬೆಚ್ಚಿ ಬಿದ್ದ ಜನ! - ಬೆಂಗಳೂರು ಮಾರ್ಕೆಟ್​​ನಲ್ಲಿ ಕೂಲಿಕಾರ್ಮಿಕನ ಕೊಲೆ

ಕೂಲಿ ಕಾರ್ಮಿಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಮಾರ್ಕೆಟ್ ಬಳಿಯ ಈಸ್ಟ್ ಗೇಟ್ ನಲ್ಲಿ ನಡೆದಿದೆ.

man murder in bengaluru market
ಮಾರ್ಕೆಟ್​​ನಲ್ಲಿ ಕಾರ್ಮಿಕನ ಬರ್ಬರ ಹತ್ಯೆ
author img

By

Published : Feb 26, 2020, 9:30 AM IST

Updated : Feb 26, 2020, 9:47 AM IST

ಬೆಂಗಳೂರು: ಕೂಲಿ ಕಾರ್ಮಿಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆ.ಆರ್. ಮಾರ್ಕೆಟ್ ಬಳಿಯ ಈಸ್ಟ್ ಗೇಟ್​ನಲ್ಲಿ ನಡೆದಿದೆ.

ರಮೇಶ್ (24) ಮೃತ ಕಾರ್ಮಿಕ. ಈತ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾರ್ಕೆಟ್​​ನಲ್ಲಿ ಮೂಟೆ ಹೊರುತ್ತಿದ್ದ. ಮೂಟೆ ಹೊರುತ್ತಿದ್ದ ವೇಳೆ ಕೆಲ ಪುಢಾರಿಗಳು ಹಾಗೂ ರಮೇಶ್​​ ಮಧ್ಯೆ ಆಗಾಗ ಗಲಾಟೆಯಾಗ್ತಿತ್ತಂತೆ. ನಿನ್ನೆ ರಾತ್ರಿ ಮಾರ್ಕೆಟ್ ಬಳಿ ನಿಂತಿರುವಾಗ ಏಕಾಏಕಿ ಬಂದ ಪುಢಾರಿಗಳ ಗುಂಪು ‌ಎದೆ ಭಾಗ ಮತ್ತು ಕತ್ತಿನ ಭಾಗವನ್ನು ಕೊಯ್ದು ಎಸ್ಕೇಪ್ ಆಗಿದೆ. ರಮೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಘಟನೆ ನಡೆಯುವಾಗ ಮಾರ್ಕೆಟ್​​​ ಬಳಿ‌ಯೇ ಇದ್ದ ಜನ ಈ ಕೃತ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದು, ಶೋಧ ಕಾರ್ಯ ಮುಂದುವರೆದಿದೆ.

ಬೆಂಗಳೂರು: ಕೂಲಿ ಕಾರ್ಮಿಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಕೆ.ಆರ್. ಮಾರ್ಕೆಟ್ ಬಳಿಯ ಈಸ್ಟ್ ಗೇಟ್​ನಲ್ಲಿ ನಡೆದಿದೆ.

ರಮೇಶ್ (24) ಮೃತ ಕಾರ್ಮಿಕ. ಈತ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾರ್ಕೆಟ್​​ನಲ್ಲಿ ಮೂಟೆ ಹೊರುತ್ತಿದ್ದ. ಮೂಟೆ ಹೊರುತ್ತಿದ್ದ ವೇಳೆ ಕೆಲ ಪುಢಾರಿಗಳು ಹಾಗೂ ರಮೇಶ್​​ ಮಧ್ಯೆ ಆಗಾಗ ಗಲಾಟೆಯಾಗ್ತಿತ್ತಂತೆ. ನಿನ್ನೆ ರಾತ್ರಿ ಮಾರ್ಕೆಟ್ ಬಳಿ ನಿಂತಿರುವಾಗ ಏಕಾಏಕಿ ಬಂದ ಪುಢಾರಿಗಳ ಗುಂಪು ‌ಎದೆ ಭಾಗ ಮತ್ತು ಕತ್ತಿನ ಭಾಗವನ್ನು ಕೊಯ್ದು ಎಸ್ಕೇಪ್ ಆಗಿದೆ. ರಮೇಶ್ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಘಟನೆ ನಡೆಯುವಾಗ ಮಾರ್ಕೆಟ್​​​ ಬಳಿ‌ಯೇ ಇದ್ದ ಜನ ಈ ಕೃತ್ಯ ನೋಡಿ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಮಾರ್ಕೆಟ್ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದು, ಶೋಧ ಕಾರ್ಯ ಮುಂದುವರೆದಿದೆ.

Last Updated : Feb 26, 2020, 9:47 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.