ETV Bharat / state

ಕುಮಾರಕೃಪಾ ಅತಿಥಿ ಗೃಹದಿಂದ ದಿಢೀರ್​ ನಿರ್ಗಮಿಸಿದ ಮೈತ್ರಿ ನಾಯಕರು.. - undefined

ಕುಮಾರಕೃಪ ಅತಿಥಿಗೃಹದಲ್ಲಿ ಕೇವಲ 10ರಿಂದ 15 ನಿಮಿಷದ ಮಾತುಕತೆಯ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕುಮಾರಕೃಪಾ ಅತಿಥಿ ಗೃಹದಿಂದ ವಾಪಸ್‌ ತೆರಳಿದ್ದಾರೆ.

ಬೆಂಗಳೂರು
author img

By

Published : Jul 14, 2019, 6:34 PM IST

ಬೆಂಗಳೂರು: ಕೇವಲ 10ರಿಂದ 15 ನಿಮಿಷದ ಮಾತುಕತೆಯ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕುಮಾರಕೃಪಾ ಅತಿಥಿ ಗೃಹದಿಂದ ವಾಪಸ್‌ ತೆರಳಿದ್ದಾರೆ.

ಕುಮಾರಕೃಪಾ ಅತಿಥಿ ಗೃಹದಿಂದ ದಿಢೀರ್​ ನಿರ್ಗಮಿಸುತ್ತಿರುವ ಮೈತ್ರಿ ನಾಯಕರು..

ಕುಮಾರಕೃಪಾ ಅತಿಥಿಗೃಹದಲ್ಲಿ ಕೆಲ ಸಮಯ ಸಭೆ ನಡೆಸಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಒಂದು ಕಾರಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇನ್ನೊಂದು ಕಾರು ಹಾಗೂ ಡಿ ಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಮತ್ತೊಂದು ಕಾರಿನಲ್ಲಿ ಒಟ್ಟಾಗಿ ತೆರಳಿದರು. ಎಲ್ಲರೂ ಚಂದಾಪುರದತ್ತ ತೆರಳಿದ್ದು, ರಾಮಲಿಂಗಾರೆಡ್ಡಿ ಫಾರಂ ಹೌಸ್​ಗೆ ತೆರಳಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ.

ರಾಮಲಿಂಗ ರೆಡ್ಡಿ ನಿವಾಸದತ್ತ ಪಯಣ :

ಇಂದು ಬೆಳಗ್ಗೆ ರಾಮಲಿಂಗ ರೆಡ್ಡಿ ಅವರನ್ನು ಮನವೊಲಿಸಲು ಮಾಜಿ ಸಚಿವ ಹೆಚ್‌ ಕೆ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೆರಳಿದ್ದರು. ಆದರೆ, ಈ ಸಂದರ್ಭ ಪಕ್ಷದ ನಾಯಕರುಗಳ ನಡೆಯ ಬಗ್ಗೆ ಅಸಮಾಧಾನ ಹಾಗೂ ಬೇಸರ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಈಗ ಮೈತ್ರಿ ಸರ್ಕಾರದ ಹಿರಿಯ ನಾಯಕರೇ ತೆರಳಿದ್ದಾರೆ.

ಸರ್ಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿರುವ ನಾಯಕರು, ಇನ್ನೆರಡು ದಿನಗಳ ಕಾಲಾವಕಾಶದಲ್ಲಿ ಶತಾಯಗತಾಯ ಒಂದಿಷ್ಟು ಶಾಸಕರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವ ವಿಚಾರದಲ್ಲಿ ಮೃದು ಧೋರಣೆ ತಾಳಿರುವ ರಾಮಲಿಂಗರೆಡ್ಡಿ ಅವರನ್ನು ಮರಳಿ ಕರೆಸುವಲ್ಲಿ ಸಫಲರಾದರೆ ಇನ್ನಷ್ಟು ಶಾಸಕರು ಇದರಿಂದ ಪ್ರಭಾವಿತರಾಗಿ ಮರಳಬಹುದು ಎಂಬ ವಿಶ್ವಾಸ ಈಗಲೂ ಮೈತ್ರಿ ಸರ್ಕಾರದಲ್ಲಿ ಉಳಿದಿದೆ.

ಬೆಂಗಳೂರು ನಗರದ ತಮ್ಮ ನಿವಾಸದಿಂದ ಚಂದಾಪುರದತ್ತ ರಾಮಲಿಂಗರೆಡ್ಡಿ ಪ್ರಯಾಣ ಬೆಳೆಸಿದ್ದು, ಆನೇಕಲ್ ಸಮೀಪವಿರುವ ಅವರ ಫಾರಂ ಹೌಸ್​ನಲ್ಲಿರುವ ಮಾಹಿತಿ ಇದೆ. ಈಗಾಗಲೇ ಸಚಿವ ಕೆ.ಜೆ ಜಾರ್ಜ್ ಅಲ್ಲಿಗೆ ತೆರಳಿದ್ದು, ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ ಮೈತ್ರಿ ಸರ್ಕಾರದ ನಾಯಕರು ಈಗ ತೆರಳಿ ಮನವೊಲಿಸುವ ಕಾರ್ಯವನ್ನು ಮುಂದುವರಿಸಲಿದ್ದಾರೆ.

ಬೆಂಗಳೂರು: ಕೇವಲ 10ರಿಂದ 15 ನಿಮಿಷದ ಮಾತುಕತೆಯ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕುಮಾರಕೃಪಾ ಅತಿಥಿ ಗೃಹದಿಂದ ವಾಪಸ್‌ ತೆರಳಿದ್ದಾರೆ.

ಕುಮಾರಕೃಪಾ ಅತಿಥಿ ಗೃಹದಿಂದ ದಿಢೀರ್​ ನಿರ್ಗಮಿಸುತ್ತಿರುವ ಮೈತ್ರಿ ನಾಯಕರು..

ಕುಮಾರಕೃಪಾ ಅತಿಥಿಗೃಹದಲ್ಲಿ ಕೆಲ ಸಮಯ ಸಭೆ ನಡೆಸಿ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಒಂದು ಕಾರಲ್ಲಿ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇನ್ನೊಂದು ಕಾರು ಹಾಗೂ ಡಿ ಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಮತ್ತೊಂದು ಕಾರಿನಲ್ಲಿ ಒಟ್ಟಾಗಿ ತೆರಳಿದರು. ಎಲ್ಲರೂ ಚಂದಾಪುರದತ್ತ ತೆರಳಿದ್ದು, ರಾಮಲಿಂಗಾರೆಡ್ಡಿ ಫಾರಂ ಹೌಸ್​ಗೆ ತೆರಳಿ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಲಿದ್ದಾರೆ ಎಂಬ ಮಾಹಿತಿ ಇದೆ.

ರಾಮಲಿಂಗ ರೆಡ್ಡಿ ನಿವಾಸದತ್ತ ಪಯಣ :

ಇಂದು ಬೆಳಗ್ಗೆ ರಾಮಲಿಂಗ ರೆಡ್ಡಿ ಅವರನ್ನು ಮನವೊಲಿಸಲು ಮಾಜಿ ಸಚಿವ ಹೆಚ್‌ ಕೆ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೆರಳಿದ್ದರು. ಆದರೆ, ಈ ಸಂದರ್ಭ ಪಕ್ಷದ ನಾಯಕರುಗಳ ನಡೆಯ ಬಗ್ಗೆ ಅಸಮಾಧಾನ ಹಾಗೂ ಬೇಸರ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಈಗ ಮೈತ್ರಿ ಸರ್ಕಾರದ ಹಿರಿಯ ನಾಯಕರೇ ತೆರಳಿದ್ದಾರೆ.

ಸರ್ಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿರುವ ನಾಯಕರು, ಇನ್ನೆರಡು ದಿನಗಳ ಕಾಲಾವಕಾಶದಲ್ಲಿ ಶತಾಯಗತಾಯ ಒಂದಿಷ್ಟು ಶಾಸಕರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವ ವಿಚಾರದಲ್ಲಿ ಮೃದು ಧೋರಣೆ ತಾಳಿರುವ ರಾಮಲಿಂಗರೆಡ್ಡಿ ಅವರನ್ನು ಮರಳಿ ಕರೆಸುವಲ್ಲಿ ಸಫಲರಾದರೆ ಇನ್ನಷ್ಟು ಶಾಸಕರು ಇದರಿಂದ ಪ್ರಭಾವಿತರಾಗಿ ಮರಳಬಹುದು ಎಂಬ ವಿಶ್ವಾಸ ಈಗಲೂ ಮೈತ್ರಿ ಸರ್ಕಾರದಲ್ಲಿ ಉಳಿದಿದೆ.

ಬೆಂಗಳೂರು ನಗರದ ತಮ್ಮ ನಿವಾಸದಿಂದ ಚಂದಾಪುರದತ್ತ ರಾಮಲಿಂಗರೆಡ್ಡಿ ಪ್ರಯಾಣ ಬೆಳೆಸಿದ್ದು, ಆನೇಕಲ್ ಸಮೀಪವಿರುವ ಅವರ ಫಾರಂ ಹೌಸ್​ನಲ್ಲಿರುವ ಮಾಹಿತಿ ಇದೆ. ಈಗಾಗಲೇ ಸಚಿವ ಕೆ.ಜೆ ಜಾರ್ಜ್ ಅಲ್ಲಿಗೆ ತೆರಳಿದ್ದು, ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ ಮೈತ್ರಿ ಸರ್ಕಾರದ ನಾಯಕರು ಈಗ ತೆರಳಿ ಮನವೊಲಿಸುವ ಕಾರ್ಯವನ್ನು ಮುಂದುವರಿಸಲಿದ್ದಾರೆ.

Intro:newsBody:ಕುಮಾರಕೃಪಾ ಅತಿಥಿ ಗೃಹದಿಂದ ದಿಡೀರ್ ನಿರ್ಗಮಿಸಿದ ನಾಯಕರು

ಬೆಂಗಳೂರು: ಕೇವಲ 10ರಿಂದ 15 ನಿಮಿಷದ ಮಾತುಕತೆಯ ನಂತರ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಕುಮಾರಕೃಪಾ ಅತಿಥಿ ಗೃಹದಿಂದ ತೆರಳಿದ್ದಾರೆ.
ಕುಮಾರಕೃಪ ಅತಿಥಿಗೃಹದಲ್ಲಿ ಕೆಲಸಮಯದ ಸಭೆಯ ನಂತರ ಸಿಎಂ ಕುಮಾರಸ್ವಾಮಿ ಹಾಗೂ ಡಿಸಿಎಂ ಪರಮೇಶ್ವರ್ ಒಂದು ಕಾರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಲ್ಲಿಕಾರ್ಜುನ ಖರ್ಗೆ ಇನ್ನೊಂದು ಕಾರಣ ಹಾಗೂ ಡಿಕೆ ಶಿವಕುಮಾರ್ ದಿನೇಶ್ ಗುಂಡೂರಾವ್ ಮತ್ತೊಂದು ಕಾರಿನಲ್ಲಿ ಒಟ್ಟಾಗಿ ತೆರಳಿದರು. ಎಲ್ಲರೂ ಚಂದಾಪುರ ದತ್ತ ತೆರಳಿದ್ದು ರಾಮಲಿಂಗಾರೆಡ್ಡಿ ಅವರ ಫಾರಂ ಹೌಸ್ ನಲ್ಲಿ ಭೇಟಿಮಾಡಿ ಸಮಾಲೋಚನೆ ತೆರಳಿದ್ದಾರೆ ಎಂಬ ಮಾಹಿತಿ ಇದೆ.
ರಾಮಲಿಂಗ ರೆಡ್ಡಿ ನಿವಾಸದತ್ತ ಪಯಣ
ರಾಮಲಿಂಗಾರೆಡ್ಡಿ ಅವರ ನಿವಾಸದತ್ತ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಇಂದು ಬೆಳಿಗ್ಗೆ ಬೆಂಗಳೂರು ನಗರದಲ್ಲಿರುವ ನಿವಾಸದಲ್ಲಿದ್ದ ರಾಮಲಿಂಗ ರೆಡ್ಡಿ ಅವರನ್ನು ಮನವೊಲಿಸಲು ಮಾಜಿ ಸಚಿವ ಹೆಚ್ ಕೆ ಪಾಟೀಲ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತೆರಳಿದ್ದರು. ಆದರೆ ಈ ಸಂದರ್ಭ ಪಕ್ಷದ ನಾಯಕರುಗಳ ನಡೆಯ ಬಗ್ಗೆ ಅಸಮಾಧಾನ ಹಾಗೂ ಬೇಸರ ವ್ಯಕ್ತಪಡಿಸಿದ್ದ ರಾಮಲಿಂಗಾರೆಡ್ಡಿ ಅವರ ಮನವೊಲಿಸಲು ಈಗ ಮೈತ್ರಿ ಸರ್ಕಾರದ ಹಿರಿಯ ನಾಯಕರೇ ತೆರಳಿದ್ದಾರೆ.
ಸರ್ಕಾರ ಉಳಿಸಿಕೊಳ್ಳಲು ತೀವ್ರ ಕಸರತ್ತು ನಡೆಸಿರುವ ನಾಯಕರು ಇನ್ನೆರಡು ದಿನಗಳ ಕಾಲಾವಕಾಶ ದಲ್ಲಿ ಶತಾಯಗತಾಯ ಒಂದಿಷ್ಟು ಶಾಸಕರನ್ನು ಸೆಳೆಯುವ ಯತ್ನ ನಡೆಸಿದ್ದಾರೆ. ರಾಜೀನಾಮೆ ವಾಪಸ್ ಪಡೆಯುವ ವಿಚಾರದಲ್ಲಿ ಮೃದುಧೋರಣೆ ತಾಳಿರುವ ರಾಮಲಿಂಗ ರೆಡ್ಡಿ ಅವರನ್ನು ಮರಳಿ ಕರೆ ಸುವಲ್ಲಿ ಸಫಲರಾದರೆ ಇನ್ನಷ್ಟು ಶಾಸಕರು ಇದರಿಂದ ಪ್ರಭಾವಿತರಾಗಿ ಮರಳಬಹುದು ಎಂಬ ವಿಶ್ವಾಸ ಈಗಲೂ ಮೈತ್ರಿ ಸರ್ಕಾರದಲ್ಲಿ ಉಳಿದಿದೆ.
ಬೆಂಗಳೂರು ನಗರದ ತಮ್ಮ ನಿವಾಸದಿಂದ ಚಂದಾಪುರ ದತ್ತ ರಾಮಲಿಂಗ ರೆಡ್ಡಿ ಪ್ರಯಾಣ ಬೆಳೆಸಿದ್ದು ಆನೇಕಲ್ ಸಮೀಪವಿರುವ ಅವರ ಫಾರಂ ಹೌಸ್ ನಲ್ಲಿ ಇರುವ ಮಾಹಿತಿ ಇದೆ. ಈಗಾಗಲೇ ಸಚಿವ ಕೆಜೆ ಜಾರ್ಜ್ ಅಲ್ಲಿಗೆ ತೆರಳಿದ್ದು ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಉಳಿದ ಮೈತ್ರಿ ಸರ್ಕಾರದ ನಾಯಕರು ಈಗ ತೆರಳಿ ಮನವೊಲಿಸುವ ಕಾರ್ಯವನ್ನು ಮುಂದುವರಿಸಲಿದ್ದಾರೆ.Conclusion:news

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.