ETV Bharat / state

ನಕಲಿ ನೋಂದಣಿ ಸಂಖ್ಯೆಯೊಂದಿಗೆ ಸಂಚರಿಸುತ್ತಿದ್ದ ವ್ಯಕ್ತಿ: ಆರ್​ಟಿಒ ಅಧಿಕಾರಿಗಳಿಂದ ಐಷಾರಾಮಿ ಕಾರು ಜಪ್ತಿ

author img

By

Published : Jul 28, 2020, 12:43 PM IST

Updated : Jul 28, 2020, 1:56 PM IST

ಉದ್ಯಾನಿ ನಗರಿಯಾದ್ಯಂತ ನಕಲಿ ನಂಬರ್​ ಪ್ಲೇಟ್​ನೊಂದಿಗೆ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ವ್ಯಕ್ತಿಯೋರ್ವ ಸಂಚಾರ ನಡೆಸುತ್ತಿದ್ದ. ಇದನ್ನು ಪತ್ತೆ ಹಚ್ಚಿದ ಆರ್​ಟಿಒ ಅಧಿಕಾರಿಗಳು ಕಾರನ್ನು ವಶಕ್ಕೆ ಪಡೆದಿದ್ದಾರೆ.

Lamborghini
ಜಪ್ತಿ ಮಾಡಲಾಗಿರುವ ಲ್ಯಾಂಬೋರ್ಗಿನಿ ಕಾರು

ಬೆಂಗಳೂರು: ನಕಲಿ ನೋಂದಣಿ‌ ಸಂಖ್ಯೆಯೊಂದಿಗೆ ರಾಜಾರೋಷವಾಗಿ ನಗರದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಆರ್​ಟಿಒ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಕಾರನ್ನು ವಶಕ್ಕೆ ಪಡೆಯುವಲ್ಲಿ ಯಶವಂತಪುರ ಆರ್.ಟಿ.ಒ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಜಪ್ತಿ ಮಾಡಲಾಗಿರುವ ಲ್ಯಾಂಬೋರ್ಗಿನಿ ಕಾರು

ಗಣೇಶ್ ಗೌಡ ಎಂಬತಾನಿಗೆ ಸೇರಿದ 5.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಇದಾಗಿದ್ದು, 2008ರಲ್ಲಿ ಈತ ಕಾರನ್ನು ಖರೀದಿ ‌ಮಾಡಿದ್ದ ಎನ್ನಲಾಗ್ತಿದೆ. ಆದರೆ ಕಾರು ಖರೀದಿಸಿದ ದಿನದಿಂದ ತೆರಿಗೆ ಪಾವತಿಸದೇ ಸಾರಿಗೆ ಇಲಾಖೆಗೆ ವಂಚನೆ ಮಾಡಿದ್ದ. ಈ ಕಾರನ್ನು ಪತ್ತೆ ಹಚ್ಚಲು ಇನ್ಸ್​​ಪೆಕ್ಟರ್​​ ರಾಜಣ್ಣ ಹಾಗೂ ಸುಧಾಕರ್ ಅವರು ಕಾರ್ಯಾಚರಣೆಗೆ ಇಳಿದಿದ್ದರು, ಈ ವೇಳೆ ಗಣೇಶ್ ಗೌಡ, ಎಂಹೆಚ್ 02-ಬಿಎಂ 9000 ಸಂಖ್ಯೆಯ ಫಲಕವನ್ನ ನಕಲಿಯಾಗಿ ಕಾರಿಗೆ ಅಳವಡಿಕೆ ಮಾಡಿರುವುದು ಗೊತ್ತಾಗಿದೆ.

ಲ್ಯಾಂಬೋರ್ಗಿನಿ ಹುಡುಕಾಟ ನಡೆಸುತ್ತಿದ್ದ ಅಧಿಕಾರಿಗಳಿಗೆ ಬಸವೇಶ್ವರ ನಗರದ ಗ್ಯಾರೇಜ್​​ವೊಂದರಲ್ಲಿ ಕಾರು ರಿಪೇರಿಗೆ ಬಂದಿರುವ ಮಾಹಿತಿ ದೊರೆತಿದ್ದು, ಕೂಡಲೇ ದಾಳಿ ನಡೆಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಕಾರಿನ ಮಾಹಿತಿ ತಪ್ಪಾಗಿ ನಮೂದು ಮಾಡಿರವುದು ಮತ್ತು ತೆರಿಗೆ ಬಾಕಿ ಇಟ್ಟಿರುವುದಕ್ಕೆ ದಾಖಲಾತಿ‌ ನೀಡುವುದಕ್ಕೆ‌ ಕಾರು‌ ಮಾಲೀಕನಿಗೆ ಆರ್​​​ಟಿಒ ಅಧಿಕಾರಿಗಳು ಸೂಚಿಸಿದ್ದಾರೆ.

ಬೆಂಗಳೂರು: ನಕಲಿ ನೋಂದಣಿ‌ ಸಂಖ್ಯೆಯೊಂದಿಗೆ ರಾಜಾರೋಷವಾಗಿ ನಗರದಲ್ಲಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೋರ್ವ ಆರ್​ಟಿಒ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಕಾರನ್ನು ವಶಕ್ಕೆ ಪಡೆಯುವಲ್ಲಿ ಯಶವಂತಪುರ ಆರ್.ಟಿ.ಒ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಜಪ್ತಿ ಮಾಡಲಾಗಿರುವ ಲ್ಯಾಂಬೋರ್ಗಿನಿ ಕಾರು

ಗಣೇಶ್ ಗೌಡ ಎಂಬತಾನಿಗೆ ಸೇರಿದ 5.5 ಕೋಟಿ ಮೌಲ್ಯದ ಲ್ಯಾಂಬೋರ್ಗಿನಿ ಕಾರು ಇದಾಗಿದ್ದು, 2008ರಲ್ಲಿ ಈತ ಕಾರನ್ನು ಖರೀದಿ ‌ಮಾಡಿದ್ದ ಎನ್ನಲಾಗ್ತಿದೆ. ಆದರೆ ಕಾರು ಖರೀದಿಸಿದ ದಿನದಿಂದ ತೆರಿಗೆ ಪಾವತಿಸದೇ ಸಾರಿಗೆ ಇಲಾಖೆಗೆ ವಂಚನೆ ಮಾಡಿದ್ದ. ಈ ಕಾರನ್ನು ಪತ್ತೆ ಹಚ್ಚಲು ಇನ್ಸ್​​ಪೆಕ್ಟರ್​​ ರಾಜಣ್ಣ ಹಾಗೂ ಸುಧಾಕರ್ ಅವರು ಕಾರ್ಯಾಚರಣೆಗೆ ಇಳಿದಿದ್ದರು, ಈ ವೇಳೆ ಗಣೇಶ್ ಗೌಡ, ಎಂಹೆಚ್ 02-ಬಿಎಂ 9000 ಸಂಖ್ಯೆಯ ಫಲಕವನ್ನ ನಕಲಿಯಾಗಿ ಕಾರಿಗೆ ಅಳವಡಿಕೆ ಮಾಡಿರುವುದು ಗೊತ್ತಾಗಿದೆ.

ಲ್ಯಾಂಬೋರ್ಗಿನಿ ಹುಡುಕಾಟ ನಡೆಸುತ್ತಿದ್ದ ಅಧಿಕಾರಿಗಳಿಗೆ ಬಸವೇಶ್ವರ ನಗರದ ಗ್ಯಾರೇಜ್​​ವೊಂದರಲ್ಲಿ ಕಾರು ರಿಪೇರಿಗೆ ಬಂದಿರುವ ಮಾಹಿತಿ ದೊರೆತಿದ್ದು, ಕೂಡಲೇ ದಾಳಿ ನಡೆಸಿ ಕಾರನ್ನು ವಶಕ್ಕೆ ಪಡೆದಿದ್ದಾರೆ. ಹಾಗೆಯೇ ಕಾರಿನ ಮಾಹಿತಿ ತಪ್ಪಾಗಿ ನಮೂದು ಮಾಡಿರವುದು ಮತ್ತು ತೆರಿಗೆ ಬಾಕಿ ಇಟ್ಟಿರುವುದಕ್ಕೆ ದಾಖಲಾತಿ‌ ನೀಡುವುದಕ್ಕೆ‌ ಕಾರು‌ ಮಾಲೀಕನಿಗೆ ಆರ್​​​ಟಿಒ ಅಧಿಕಾರಿಗಳು ಸೂಚಿಸಿದ್ದಾರೆ.

Last Updated : Jul 28, 2020, 1:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.