ಬೆಂಗಳೂರು : ಗಣೇಶ ಚತುರ್ಥಿ ಹಬ್ಬದ ನಿಮಿತ್ತ ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಡದಿಯ ಕೇತಗಾನಹಳ್ಳಿಯ ತಮ್ಮ ತೋಟದಲ್ಲಿ ಶ್ರೀ ವಿನಾಯಕನಿಗೆ ಪೂಜೆ ಸಲ್ಲಿಸಿದರು.
ಪರಿಸರ ಗಣಪನನ್ನು ಪೂಜಿಸಿದ ಕುಮಾರಸ್ವಾಮಿ ಅವರು, ನಮ್ಮ ನೆಲದ ಸಂಸ್ಕೃತಿ, ಪರಂಪರೆಯ ಅನುಸಾರ ಮಣ್ಣಿನ ಗಣಪನನ್ನೇ ಪೂಜಿಸಿದ್ದೇನೆ. ಎಲ್ಲರೂ ಪರಿಸರಕ್ಕೆ ಪೂರಕವಾದ ಪರಿಸರ ಗಣಪನನ್ನು ಪೂಜಿಸಿಬೇಕು ಎಂದು ವಿನಂತಿ ಮಾಡಿದ್ದಾರೆ. ಅಲ್ಲದೆ, ಇದೇ ವೇಳೆ ಮಾಜಿ ಮುಖ್ಯಮಂತ್ರಿಗಳು ಗೋ ಮಾತೆಯ ಪೂಜೆಯನ್ನೂ ನೆರವೇರಿಸಿದರು.
ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿ ಹಬ್ಬದ ಶುಭಾಶಯಗಳು. ಶ್ರೀ ವಿನಾಯಕನ ಕರುಣೆ, ಅನುಗ್ರಹದಿಂದ ಎಲ್ಲರಿಗೂ ಒಳ್ಳೆಯದಾಗಲಿ ಹಾಗೂ ಎಲ್ಲೆಡೆ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ನೆಲೆಸಲಿ ಎಂದು ಆ ವಿಘ್ನ ನಿವಾರಕನಲ್ಲಿ ಪ್ರಾರ್ಥಿಸಿದ್ದೇನೆ ಎಂದು ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಹಬ್ಬದ ಶುಭಾಶಯ ಕೋರಿದ್ದಾರೆ.
ಜೆಪಿ ನಗರದ ತಮ್ಮ ನಿವಾಸಲ್ಲಿಯೂ ಮಾಜಿ ಮುಖ್ಯಮಂತ್ರಿಗಳು ತಮ್ಮ ಕುಟುಂಬದ ಸದಸ್ಯರೊಂದಿಗೆ ಗಣಪನ ಪೂಜೆ ನೆರವೇರಿಸುವರು. ಬಳಿಕ ಪದ್ಮನಾಭ ನಗರದಲ್ಲಿರುವ ತಂದೆ ಹೆಚ್.ಡಿ.ದೇವೇಗೌಡರ ನಿವಾಸಕ್ಕೆ ತೆರಳಿ ವಿನಾಯಕನ ಪೂಜೆಯಲ್ಲಿ ಪಾಲ್ಗೊಂಡು ತಂದೆ ತಾಯಿಯವರ ಆಶೀರ್ವಾದ ಪಡೆಯಲಿದ್ದಾರೆ.
-
|| ಏಕದಂತಂ ಮಹಾಕಾಯಂ ಲಂಬೋದರಂ ಗಜಾನನಂ
— H D Devegowda (@H_D_Devegowda) August 31, 2022 " class="align-text-top noRightClick twitterSection" data="
ವಿಘ್ನನಾಶಕರಂ ದೇವಂ ಹೇರಂಬ ಪ್ರಣಮಾಮ್ಯಹಂ ||
ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
ಈ ಪುಣ್ಯ ದಿನದಂದು ಶ್ರೀ ವರಸಿದ್ಧಿ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ. ಶುಭವಾಗಲಿ. #HappyGaneshChaturthi pic.twitter.com/RWkiW2KnOs
">|| ಏಕದಂತಂ ಮಹಾಕಾಯಂ ಲಂಬೋದರಂ ಗಜಾನನಂ
— H D Devegowda (@H_D_Devegowda) August 31, 2022
ವಿಘ್ನನಾಶಕರಂ ದೇವಂ ಹೇರಂಬ ಪ್ರಣಮಾಮ್ಯಹಂ ||
ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
ಈ ಪುಣ್ಯ ದಿನದಂದು ಶ್ರೀ ವರಸಿದ್ಧಿ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ. ಶುಭವಾಗಲಿ. #HappyGaneshChaturthi pic.twitter.com/RWkiW2KnOs|| ಏಕದಂತಂ ಮಹಾಕಾಯಂ ಲಂಬೋದರಂ ಗಜಾನನಂ
— H D Devegowda (@H_D_Devegowda) August 31, 2022
ವಿಘ್ನನಾಶಕರಂ ದೇವಂ ಹೇರಂಬ ಪ್ರಣಮಾಮ್ಯಹಂ ||
ನಾಡಿನ ಸಮಸ್ತ ಜನತೆಗೆ ಶ್ರೀ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳು.
ಈ ಪುಣ್ಯ ದಿನದಂದು ಶ್ರೀ ವರಸಿದ್ಧಿ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ. ಶುಭವಾಗಲಿ. #HappyGaneshChaturthi pic.twitter.com/RWkiW2KnOs
ನಾಡಿನ ಜನತೆಗೆ ಶುಭ ಕೋರಿದ ಹೆಚ್ಡಿಡಿ : ಇದೇ ಸಂದರ್ಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಟ್ವೀಟ್ ಮೂಲಕ, ನಾಡಿನ ಸಮಸ್ತ ಜನತೆಗೆ ಗಣೇಶ ಚತುರ್ಥಿಯ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಈ ಪುಣ್ಯ ದಿನದಂದು ವರಸಿದ್ಧಿ ವಿನಾಯಕನು ಎಲ್ಲರ ಇಷ್ಟಾರ್ಥಗಳನ್ನು ಈಡೇರಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಗಣೇಶ ಚತುರ್ಥಿ 2022: ಈ ಐದು ವಿಶಿಷ್ಟ ಗಣಪ ಮೂರ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು?