ETV Bharat / state

KSRTC: ಕೆಂಪು ಬಣ್ಣದ ಬಸ್​ಗಳಿಗೆ ಹೈಟೆಕ್ ಸ್ಪರ್ಶ.. ಚಿಂತೆ ಬಿಡಿ ಆರಾಮಾಗಿ ಪ್ರಯಾಣಿಸಿ ಎನ್ನುತ್ತಿದೆ ಕೆಎಸ್ಆರ್​ಟಿಸಿ

author img

By ETV Bharat Karnataka Team

Published : Aug 24, 2023, 5:30 PM IST

ನೂತನ ಕೆಎಸ್​ಆರ್​ಟಿಸಿ ಪ್ರೋಟೋಟೈಪ್ ಬಸ್​ಗಳನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪರಿಶೀಲನೆ ನಡೆಸಿದರು.

ಕೆಎಸ್​ಆರ್​ಟಿಸಿ ಪ್ರೋಟೋ ಟೈಪ್
ಕೆಎಸ್​ಆರ್​ಟಿಸಿ ಪ್ರೋಟೋ ಟೈಪ್

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಬೆಂಗಳೂರು : ಇನ್ಮುಂದೆ ಕೆಎಸ್ಆರ್​ಟಿಸಿಯ ಕೆಂಪು ಬಣ್ಣದ ಬಸ್​ಗಳಲ್ಲಿ ಪ್ರಯಾಸದ ಪ್ರಯಾಣಕ್ಕೆ ಗುಡ್ ಬೈ ಹೇಳಿ ಆರಾಮದಾಯಕ ಅನುಭವದ ಪ್ರಯಾಣ ಮಾಡಬಹುದಾಗಿದೆ. ಪುಷ್ ಬ್ಯಾಕ್ ಹೊರತುಪಡಿಸಿ ಬಹುತೇಕ ರಾಜಹಂಸ ಬಸ್ ಪ್ರಯಾಣದ ಅನುಭವ ನೀಡುವ ವ್ಯವಸ್ಥೆಯನ್ನು ಸಾಮಾನ್ಯ ಸಾರಿಗೆಯಲ್ಲಿ ನೀಡಲು ಸಂಸ್ಥೆ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಂಡ ಪ್ರೋಟೋಟೈಪ್ ಬಸ್​ಗಳು ಅಕ್ಟೋಬರ್ ವೇಳೆಗೆ ರಸ್ತೆಗಿಳಿಯಲಿವೆ.

ಹತ್ತು ಹಲವು ಪ್ರಯೋಗಗಳ ಮೂಲಕ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ ಸ್ಥಿತಿಯಲ್ಲಿರುವ ಸಾಮಾನ್ಯ ಬಸ್ (ಕೆಂಪುಬಣ್ಣದ ಬಸ್)ಗಳನ್ನು ಓಡಿಸುತ್ತಿದೆ. ಇತರ ರಾಜ್ಯಗಳ ಸಾಮಾನ್ಯ ಸಾರಿಗೆ ಬಸ್​ಗಳಿಗೆ ಹೋಲಿಸಿದಲ್ಲಿ ಕೆಎಸ್ಆರ್​ಟಿಸಿ ಸಾಮಾನ್ಯ ಸಾರಿಗೆ ಬಸ್ ಗಳ ಸ್ಥಿತಿ ಅತ್ಯುತ್ತಮವಾಗಿದೆ. ಆದರೂ ಈಗ ಮತ್ತೊಂದು ಹಂತ ಮುಂದೆ ಹೋಗಲು ನಿರ್ಧರಿಸಿದೆ. ಸಾಮಾನ್ಯ ಸಾರಿಗೆ ಬಸ್​ಗಳನ್ನು ಪ್ರೋಟೋಟೈಪ್ ವಾಹನಗಳನ್ನಾಗಿ ವಿನ್ಯಾಸ ಮಾಡುತ್ತಿದ್ದು, ಐಷಾರಾಮಿ ಪ್ರಯಾಣದ ಅನುಭವ ಪ್ರಯಾಣಿಕರಿಗೆ ಸಾಮಾನ್ಯ ಬಸ್​ಗಳಲ್ಲೇ ಸಿಗುವಂತೆ ಮಾಡಲು ಮುಂದಾಗಿದೆ.

ನೂತನ ಕೆಎಸ್​ಆರ್​ಟಿಸಿ ಪ್ರೋಟೋ ಟೈಪ್ ಬಸ್​ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ನೂತನ ಕೆಎಸ್​ಆರ್​ಟಿಸಿ ಪ್ರೋಟೋ ಟೈಪ್ ಬಸ್​ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಈಗಾಗಲೇ ಪಾಯಿಂಟ್ ಟು ಪಾಯಿಂಟ್ ಮತ್ತು ವೇಗಧೂತ ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನದ ಪ್ರೋಟೋ ಟೈಪ್ ವಾಹನದ ಮಾದರಿ ಸಿದ್ಧವಾಗಿದ್ದು, ಹೊಸ ವಿನ್ಯಾಸದಲ್ಲಿ ಸಿದ್ಧಗೊಂಡಿರುವ ಹೊಸ ಬಸ್ ಅನ್ನು ನಿಗಮದ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿ ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಈ ಹೊಸ ವಿನ್ಯಾಸಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಇನ್ನೊಂದು ತಿಂಗಳಿನಲ್ಲಿ ರಾಜ್ಯದಲ್ಲಿ ಪ್ರೋಟೋಟೈಪ್ ಬಸ್​ಗಳ ಸಂಚಾರ ಆರಂಭವಾಗಲಿದೆ. ಖಾಸಗಿ ಬಸ್​ಗಳಿಗೆ ಈ ಹೊಸ ಕೆಂಪು ಬಣ್ಣದ ಬಸ್​ಗಳು ಸ್ಪರ್ಧೆ ನೀಡಲಿವೆ.

ನೂತನ ಬಸ್​ ವಿಶೇಷತೆಗಳೇನು? : ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಕರ್ನಾಟಕ ಸಾರಿಗೆ ವಾಹನಗಳನ್ನು ಮೆ.ಕೆ.ಎಂ.ಎಸ್. ಕೋಚ್ ಬಿಲ್ಡರ್ಸ ನಿರ್ಮಾಣ ಮಾಡುತ್ತಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ‌. ಈ ಹೊಸ ವಿನ್ಯಾಸದ ಬಸ್​ನ ಎತ್ತರ 3420 ಮಿ.ಮೀ ಆಗಿದ್ದು 3+2 ಮಾದರಿಯ 52 ಆಸನಗಳ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರ ಆಸನ ಬಕೆಟ್ ಟೈಪ್ ಮಾದರಿಯಲ್ಲಿ ನಿರ್ಮಿಸಿದ್ದು, ಕಾಲುಗಳನ್ನು ಇರಿಸಿಕೊಳ್ಳಲು ಲೆಗ್ ಸ್ಪೇಸ್ ಹೆಚ್ಚಿಸಲಾಗಿದೆ. ನೀರಿನ ಬಾಟಲ್ ಹಾಗು ಮ್ಯಾಗಜಿನ್ ಇರಿಸಿಕೊಳ್ಳಲು ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಪ್ರಯಾಣಿಕರಿಗೆ ರಾಜಹಂಸ ಬಸ್​ನಲ್ಲಿ ಕುಳಿತ ಅನುಭವ ನೀಡಲಿದೆ.

ಸಾಮಾನ್ಯ ಬಸ್​ಗಳಲ್ಲಿ ಕಿಟಕಿ ಗಾಜುಗಳ ಗಾತ್ರ ಚಿಕ್ಕದಾಗಿದ್ದರೆ, ಈ ಬಸ್​ನಲ್ಲಿ ಪ್ರಯಾಣಿಕರ ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುವಂತೆ ವಿನ್ಯಾಸಗೊಳಿಸಿದ್ದು, ದೊಡ್ಡದಾದ ಟಿಂಟೆಡ್ ಗಾಜುಗಳ ಕಿಟಕಿಯಿಂದ ಹೊರಗಿನ ಪರಿಸರವನ್ನು ಪ್ರಯಾಣದ ವೇಳೆ ಅನುಭವಿಸುವಂತೆ ಮಾಡಲಾಗಿದೆ. ಇನ್ನು ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ ಮಾಡಿದೆ. ಲಗೇಜ್​ ಕ್ಯಾರಿಯರ್ ವಿಶಾಲವಾಗಿ ಹಾಗು ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು ಸಾಗಿಸಬಹುದಾಗಿದೆ.

ಒಳಾಂಗಣದ ದೀಪ ಸತತವಾದ ಎಲ್​ಇಡಿ ಆಗಿದ್ದು, ಬಸ್​ನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಎಲ್​ಇಡಿ ಮಾರ್ಗ ಫಲಕ ಅಳವಡಿಕೆ ಮಾಡಲಾಗಿದೆ. ಅಲ್ಲದೆ, ಬ್ಯಾನೆಟ್ ಇನ್ಸುಲೇಶನ್ ಮತ್ತು ರೆಕ್ಸಿನ್ ಪ್ಯಾಡಿಂಗ್ ಅಳವಡಿಸಲಾಗಿದೆ. ಬಾಗಿಲಿಗೆ ಸ್ವಯಂಚಾಲಿತ ಸೆನ್ಸಾರ್ ಮತ್ತು ತುರ್ತು ಬಟನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದು ಹೀಗೆ.. ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಲ್ ಬಸ್ ಮತ್ತು ಎಕ್ಸ್ ಪ್ರೆಸ್ ಬಸ್​ಗಳು ಒಂದೇ ಆಗಿದ್ದರೂ ಎಕ್ಸ್​ಪ್ರೆಸ್ ಎನ್ನುವ ಕಾರಣಕ್ಕೆ ವೇಗಧೂತದಲ್ಲಿ ಹೆಚ್ಚಿನ ಪ್ರಯಾಣ ದರ ಪಡೆಯಲಾಗುತ್ತಿದೆ. ಹಾಗಾಗಿ ದೂರದ ಪ್ರಯಾಣದ ಬಸ್​ಗಳ ಪ್ರಯಾಣಿಕರಿಗೆ ಸ್ವಲ್ಪ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ಪ್ರೊಟೊಟೈಪ್ ಬಸ್ ಗಳ ವಿನ್ಯಾಸ ಮಾಡಲಾಗಿದೆ. ಹೆಚ್ಚು ಹಣ ಕೊಡುತ್ತಾರೆ ಎನ್ನುವ ಕಾರಣಕ್ಕೆ ಆರಾಮವಾಗಿರಲಿ ಎಂದು ಸೌಲಭ್ಯ ಕಲ್ಪಿಸಲಾಗಿದೆ.

300 ಬಸ್ ಇನ್ನೊಂದು ತಿಂಗಳಿನಲ್ಲಿ ಬರಲಿದೆ. ಇವೆಲ್ಲಾ ಬಸ್​ಗಳು ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ‌ ಕಲ್ಪಿಸಲಿದೆ‌. ಪ್ರೋಟೋ ಟೈಪ್ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗಧೂತ ವಾಹನವನ್ನಾಗಿ ಉಪಯೋಗಿಸಲಿದ್ದು, ಸದ್ಯಕ್ಕೆ ಲೋಕಲ್ ರೂಟ್​ಗೆ ಇರುವ ಬಸ್​ಗಳೇ ಮುಂದುವರೆಯಲಿವೆ. ಮುಂಬರುವ ಎಲ್ಲಾ ಹೊಸ ಬಸ್​ಗಳು ಈ ರೀತಿಯ ವಿನ್ಯಾಸವನ್ನು ಹೊಂದಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ : Shakti Scheme: ಮಹಿಳೆಯರಿಗೆ ಟ್ಯಾಪ್ & ಟ್ರಾವೆಲ್ ಸ್ಮಾರ್ಟ್ ಕಾರ್ಡ್ ವಿತರಿಸಲು ಕೆಎಸ್​ಆರ್​ಟಿಸಿ ಚಿಂತನೆ

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

ಬೆಂಗಳೂರು : ಇನ್ಮುಂದೆ ಕೆಎಸ್ಆರ್​ಟಿಸಿಯ ಕೆಂಪು ಬಣ್ಣದ ಬಸ್​ಗಳಲ್ಲಿ ಪ್ರಯಾಸದ ಪ್ರಯಾಣಕ್ಕೆ ಗುಡ್ ಬೈ ಹೇಳಿ ಆರಾಮದಾಯಕ ಅನುಭವದ ಪ್ರಯಾಣ ಮಾಡಬಹುದಾಗಿದೆ. ಪುಷ್ ಬ್ಯಾಕ್ ಹೊರತುಪಡಿಸಿ ಬಹುತೇಕ ರಾಜಹಂಸ ಬಸ್ ಪ್ರಯಾಣದ ಅನುಭವ ನೀಡುವ ವ್ಯವಸ್ಥೆಯನ್ನು ಸಾಮಾನ್ಯ ಸಾರಿಗೆಯಲ್ಲಿ ನೀಡಲು ಸಂಸ್ಥೆ ಸಿದ್ಧತೆ ಆರಂಭಿಸಿದೆ. ಅದಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಂಡ ಪ್ರೋಟೋಟೈಪ್ ಬಸ್​ಗಳು ಅಕ್ಟೋಬರ್ ವೇಳೆಗೆ ರಸ್ತೆಗಿಳಿಯಲಿವೆ.

ಹತ್ತು ಹಲವು ಪ್ರಯೋಗಗಳ ಮೂಲಕ ಹೆಸರಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಅತ್ಯುತ್ತಮ ಸ್ಥಿತಿಯಲ್ಲಿರುವ ಸಾಮಾನ್ಯ ಬಸ್ (ಕೆಂಪುಬಣ್ಣದ ಬಸ್)ಗಳನ್ನು ಓಡಿಸುತ್ತಿದೆ. ಇತರ ರಾಜ್ಯಗಳ ಸಾಮಾನ್ಯ ಸಾರಿಗೆ ಬಸ್​ಗಳಿಗೆ ಹೋಲಿಸಿದಲ್ಲಿ ಕೆಎಸ್ಆರ್​ಟಿಸಿ ಸಾಮಾನ್ಯ ಸಾರಿಗೆ ಬಸ್ ಗಳ ಸ್ಥಿತಿ ಅತ್ಯುತ್ತಮವಾಗಿದೆ. ಆದರೂ ಈಗ ಮತ್ತೊಂದು ಹಂತ ಮುಂದೆ ಹೋಗಲು ನಿರ್ಧರಿಸಿದೆ. ಸಾಮಾನ್ಯ ಸಾರಿಗೆ ಬಸ್​ಗಳನ್ನು ಪ್ರೋಟೋಟೈಪ್ ವಾಹನಗಳನ್ನಾಗಿ ವಿನ್ಯಾಸ ಮಾಡುತ್ತಿದ್ದು, ಐಷಾರಾಮಿ ಪ್ರಯಾಣದ ಅನುಭವ ಪ್ರಯಾಣಿಕರಿಗೆ ಸಾಮಾನ್ಯ ಬಸ್​ಗಳಲ್ಲೇ ಸಿಗುವಂತೆ ಮಾಡಲು ಮುಂದಾಗಿದೆ.

ನೂತನ ಕೆಎಸ್​ಆರ್​ಟಿಸಿ ಪ್ರೋಟೋ ಟೈಪ್ ಬಸ್​ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ
ನೂತನ ಕೆಎಸ್​ಆರ್​ಟಿಸಿ ಪ್ರೋಟೋ ಟೈಪ್ ಬಸ್​ ಪರಿಶೀಲನೆ ನಡೆಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ

ಈಗಾಗಲೇ ಪಾಯಿಂಟ್ ಟು ಪಾಯಿಂಟ್ ಮತ್ತು ವೇಗಧೂತ ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನದ ಪ್ರೋಟೋ ಟೈಪ್ ವಾಹನದ ಮಾದರಿ ಸಿದ್ಧವಾಗಿದ್ದು, ಹೊಸ ವಿನ್ಯಾಸದಲ್ಲಿ ಸಿದ್ಧಗೊಂಡಿರುವ ಹೊಸ ಬಸ್ ಅನ್ನು ನಿಗಮದ ಕೇಂದ್ರ ಕಚೇರಿಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿ ಸಣ್ಣಪುಟ್ಟ ಮಾರ್ಪಾಡಿನೊಂದಿಗೆ ಈ ಹೊಸ ವಿನ್ಯಾಸಕ್ಕೆ ಒಪ್ಪಿಗೆ ನೀಡಿದ್ದಾರೆ. ಹಾಗಾಗಿ ಇನ್ನೊಂದು ತಿಂಗಳಿನಲ್ಲಿ ರಾಜ್ಯದಲ್ಲಿ ಪ್ರೋಟೋಟೈಪ್ ಬಸ್​ಗಳ ಸಂಚಾರ ಆರಂಭವಾಗಲಿದೆ. ಖಾಸಗಿ ಬಸ್​ಗಳಿಗೆ ಈ ಹೊಸ ಕೆಂಪು ಬಣ್ಣದ ಬಸ್​ಗಳು ಸ್ಪರ್ಧೆ ನೀಡಲಿವೆ.

ನೂತನ ಬಸ್​ ವಿಶೇಷತೆಗಳೇನು? : ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಕರ್ನಾಟಕ ಸಾರಿಗೆ ವಾಹನಗಳನ್ನು ಮೆ.ಕೆ.ಎಂ.ಎಸ್. ಕೋಚ್ ಬಿಲ್ಡರ್ಸ ನಿರ್ಮಾಣ ಮಾಡುತ್ತಿದ್ದು, ಹಲವು ವಿಶೇಷತೆಗಳನ್ನು ಹೊಂದಿದೆ‌. ಈ ಹೊಸ ವಿನ್ಯಾಸದ ಬಸ್​ನ ಎತ್ತರ 3420 ಮಿ.ಮೀ ಆಗಿದ್ದು 3+2 ಮಾದರಿಯ 52 ಆಸನಗಳ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರ ಆಸನ ಬಕೆಟ್ ಟೈಪ್ ಮಾದರಿಯಲ್ಲಿ ನಿರ್ಮಿಸಿದ್ದು, ಕಾಲುಗಳನ್ನು ಇರಿಸಿಕೊಳ್ಳಲು ಲೆಗ್ ಸ್ಪೇಸ್ ಹೆಚ್ಚಿಸಲಾಗಿದೆ. ನೀರಿನ ಬಾಟಲ್ ಹಾಗು ಮ್ಯಾಗಜಿನ್ ಇರಿಸಿಕೊಳ್ಳಲು ಕೂಡ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಪ್ರಯಾಣಿಕರಿಗೆ ರಾಜಹಂಸ ಬಸ್​ನಲ್ಲಿ ಕುಳಿತ ಅನುಭವ ನೀಡಲಿದೆ.

ಸಾಮಾನ್ಯ ಬಸ್​ಗಳಲ್ಲಿ ಕಿಟಕಿ ಗಾಜುಗಳ ಗಾತ್ರ ಚಿಕ್ಕದಾಗಿದ್ದರೆ, ಈ ಬಸ್​ನಲ್ಲಿ ಪ್ರಯಾಣಿಕರ ಕಿಟಕಿ ಫ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುವಂತೆ ವಿನ್ಯಾಸಗೊಳಿಸಿದ್ದು, ದೊಡ್ಡದಾದ ಟಿಂಟೆಡ್ ಗಾಜುಗಳ ಕಿಟಕಿಯಿಂದ ಹೊರಗಿನ ಪರಿಸರವನ್ನು ಪ್ರಯಾಣದ ವೇಳೆ ಅನುಭವಿಸುವಂತೆ ಮಾಡಲಾಗಿದೆ. ಇನ್ನು ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್ ವಿನೂತನ ವಿನ್ಯಾಸ ಮಾಡಿದೆ. ಲಗೇಜ್​ ಕ್ಯಾರಿಯರ್ ವಿಶಾಲವಾಗಿ ಹಾಗು ಒಳ ಭಾಗದಲ್ಲಿ ಹೆಚ್ಚು ಎತ್ತರವಾಗಿದ್ದು, ಹೆಚ್ಚಿನ ಸಾಮಗ್ರಿಗಳನ್ನು ಸಾಗಿಸಬಹುದಾಗಿದೆ.

ಒಳಾಂಗಣದ ದೀಪ ಸತತವಾದ ಎಲ್​ಇಡಿ ಆಗಿದ್ದು, ಬಸ್​ನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಎಲ್​ಇಡಿ ಮಾರ್ಗ ಫಲಕ ಅಳವಡಿಕೆ ಮಾಡಲಾಗಿದೆ. ಅಲ್ಲದೆ, ಬ್ಯಾನೆಟ್ ಇನ್ಸುಲೇಶನ್ ಮತ್ತು ರೆಕ್ಸಿನ್ ಪ್ಯಾಡಿಂಗ್ ಅಳವಡಿಸಲಾಗಿದೆ. ಬಾಗಿಲಿಗೆ ಸ್ವಯಂಚಾಲಿತ ಸೆನ್ಸಾರ್ ಮತ್ತು ತುರ್ತು ಬಟನ್‌ ವ್ಯವಸ್ಥೆ ಕಲ್ಪಿಸಲಾಗಿದೆ.

ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದು ಹೀಗೆ.. ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಲೋಕಲ್ ಬಸ್ ಮತ್ತು ಎಕ್ಸ್ ಪ್ರೆಸ್ ಬಸ್​ಗಳು ಒಂದೇ ಆಗಿದ್ದರೂ ಎಕ್ಸ್​ಪ್ರೆಸ್ ಎನ್ನುವ ಕಾರಣಕ್ಕೆ ವೇಗಧೂತದಲ್ಲಿ ಹೆಚ್ಚಿನ ಪ್ರಯಾಣ ದರ ಪಡೆಯಲಾಗುತ್ತಿದೆ. ಹಾಗಾಗಿ ದೂರದ ಪ್ರಯಾಣದ ಬಸ್​ಗಳ ಪ್ರಯಾಣಿಕರಿಗೆ ಸ್ವಲ್ಪ ಹೆಚ್ಚಿನ ಸೌಲಭ್ಯ ಕಲ್ಪಿಸಬೇಕು ಎಂದು ಪ್ರೊಟೊಟೈಪ್ ಬಸ್ ಗಳ ವಿನ್ಯಾಸ ಮಾಡಲಾಗಿದೆ. ಹೆಚ್ಚು ಹಣ ಕೊಡುತ್ತಾರೆ ಎನ್ನುವ ಕಾರಣಕ್ಕೆ ಆರಾಮವಾಗಿರಲಿ ಎಂದು ಸೌಲಭ್ಯ ಕಲ್ಪಿಸಲಾಗಿದೆ.

300 ಬಸ್ ಇನ್ನೊಂದು ತಿಂಗಳಿನಲ್ಲಿ ಬರಲಿದೆ. ಇವೆಲ್ಲಾ ಬಸ್​ಗಳು ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ‌ ಕಲ್ಪಿಸಲಿದೆ‌. ಪ್ರೋಟೋ ಟೈಪ್ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗಧೂತ ವಾಹನವನ್ನಾಗಿ ಉಪಯೋಗಿಸಲಿದ್ದು, ಸದ್ಯಕ್ಕೆ ಲೋಕಲ್ ರೂಟ್​ಗೆ ಇರುವ ಬಸ್​ಗಳೇ ಮುಂದುವರೆಯಲಿವೆ. ಮುಂಬರುವ ಎಲ್ಲಾ ಹೊಸ ಬಸ್​ಗಳು ಈ ರೀತಿಯ ವಿನ್ಯಾಸವನ್ನು ಹೊಂದಲಿವೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ : Shakti Scheme: ಮಹಿಳೆಯರಿಗೆ ಟ್ಯಾಪ್ & ಟ್ರಾವೆಲ್ ಸ್ಮಾರ್ಟ್ ಕಾರ್ಡ್ ವಿತರಿಸಲು ಕೆಎಸ್​ಆರ್​ಟಿಸಿ ಚಿಂತನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.