ETV Bharat / state

ಇಂದಿನಿಂದ ಕೇರಳಕ್ಕೆ ಬಸ್ ಸಂಚಾರ ಪುನಾರಂಭ : ಪ್ರಯಾಣಿಕರಿಗೆ ಖುಷಿಯ ನಡುವೆ ಆತಂಕ - ಹೊರ ರಾಜ್ಯಗಳಿಗೆ ಬಸ್​ ಸಂಚಾರ

ಜುಲೈ 7 ರಂದು ಕೆಎಸ್​ಆರ್​ಟಿಸಿ ಹೊರಡಿಸಿದ ಆದೇಶದಂತೆ ಇಂದಿನಿಂದ ಕೇರಳ ರಾಜ್ಯದ ವಿವಿಧ ಭಾಗಗಳಿಗೆ ಬಸ್​ ಸಂಚಾರ ಪುನರಾರಂಭವಾಗಲಿದೆ.

author img

By

Published : Jul 12, 2021, 11:21 AM IST

ಬೆಂಗಳೂರು : ಝಿಕಾ ವೈರಸ್ ಆತಂಕದಲ್ಲಿರುವ ಕೇರಳ ರಾಜ್ಯದ ವಿವಿಧ ಭಾಗಗಳಿಗೆ ಇಂದಿನಿಂದ ಕೆಎಸ್​ಆರ್​​ಟಿಸಿ ಬಸ್​ ಸಂಚಾರ ಪುನಾರಂಭಗೊಳ್ಳಲಿದ್ದು, ಜನರಿಗೆ ಸಂತಸದ ನಡುವೆ ಆಂತಕ ಶರುವಾಗಿದೆ. ಇಂದು ರಾತ್ರಿ ಕೇರಳದ ವಿವಿಧ ಜಿಲ್ಲೆಗಳಿಗೆ ಬಸ್​ ಸಂಚಾರ ಪುನಾರಂಭವಾಗಲಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರು ಸೇರಿದಂತೆ ಹಲವೆಡೆಯಿಂದ ಬಸ್​ಗಳ ಬಸ್​ಗಳು ಸಂಚರಿಸಲಿವೆ. ಆದರೆ, ಕೇರಳದಲ್ಲಿ ಝಿಕಾ ಎಂಬ ಹೊಸ ರೋಗ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

KSRTC Bus Services Resumes   to Kerala and other States today
ಕೆಎಸ್​ಆರ್​ಟಿಸಿ ಆದೇಶ ಪ್ರತಿ

ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿದ ಕೋವಿಡ್ ನೆಗೆಟಿವ್ ರಿಪೋರ್ಟ್​ ತರಬೇಕು ಅಥವಾ ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ತರಬೇಕು ಎಂದು ಸೂಚಿಸಲಾಗಿದೆ.

ಜುಲೈ 7 ರಂದು ಕೇರಳ ರಾಜ್ಯಕ್ಕೆ ಬಸ್‌ ಸಂಚಾರ ಪುನಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿತ್ತು. ಜುಲೈ 12 ರಿಂದ (ಇಂದಿನಿಂದ) ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರಿನಿಂದ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಂಸ್ಥೆ ತಿಳಿಸಿತ್ತು.

ಶಿಕ್ಷಣ, ವ್ಯವಹಾರ ಇನ್ನಿತರೆ ಕಾರಣಕ್ಕೆ ನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರು 15 ದಿನಗಳಿಗೊಮ್ಮೆ ಆರ್​ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು ಎಂದು ಕೆಎಸ್​ಆರ್​ಟಿಸಿ ಸೂಚಿಸಿದೆ. ಜೊತೆಗೆ ಇತರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ಬೆಂಗಳೂರು : ಝಿಕಾ ವೈರಸ್ ಆತಂಕದಲ್ಲಿರುವ ಕೇರಳ ರಾಜ್ಯದ ವಿವಿಧ ಭಾಗಗಳಿಗೆ ಇಂದಿನಿಂದ ಕೆಎಸ್​ಆರ್​​ಟಿಸಿ ಬಸ್​ ಸಂಚಾರ ಪುನಾರಂಭಗೊಳ್ಳಲಿದ್ದು, ಜನರಿಗೆ ಸಂತಸದ ನಡುವೆ ಆಂತಕ ಶರುವಾಗಿದೆ. ಇಂದು ರಾತ್ರಿ ಕೇರಳದ ವಿವಿಧ ಜಿಲ್ಲೆಗಳಿಗೆ ಬಸ್​ ಸಂಚಾರ ಪುನಾರಂಭವಾಗಲಿದೆ.

ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರು ಸೇರಿದಂತೆ ಹಲವೆಡೆಯಿಂದ ಬಸ್​ಗಳ ಬಸ್​ಗಳು ಸಂಚರಿಸಲಿವೆ. ಆದರೆ, ಕೇರಳದಲ್ಲಿ ಝಿಕಾ ಎಂಬ ಹೊಸ ರೋಗ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

KSRTC Bus Services Resumes   to Kerala and other States today
ಕೆಎಸ್​ಆರ್​ಟಿಸಿ ಆದೇಶ ಪ್ರತಿ

ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು 72 ಗಂಟೆಗಳ ಒಳಗೆ ಮಾಡಿಸಿದ ಕೋವಿಡ್ ನೆಗೆಟಿವ್ ರಿಪೋರ್ಟ್​ ತರಬೇಕು ಅಥವಾ ಕೋವಿಡ್ ಮೊದಲ ಡೋಸ್ ಲಸಿಕೆ ಪಡೆದ ಪ್ರಮಾಣ ಪತ್ರ ತರಬೇಕು ಎಂದು ಸೂಚಿಸಲಾಗಿದೆ.

ಜುಲೈ 7 ರಂದು ಕೇರಳ ರಾಜ್ಯಕ್ಕೆ ಬಸ್‌ ಸಂಚಾರ ಪುನಾರಂಭಿಸಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆದೇಶ ಹೊರಡಿಸಿತ್ತು. ಜುಲೈ 12 ರಿಂದ (ಇಂದಿನಿಂದ) ಬೆಂಗಳೂರು, ಮೈಸೂರು, ಮಂಗಳೂರು, ಪುತ್ತೂರಿನಿಂದ ಬಸ್ ಸಂಚಾರ ಆರಂಭಿಸಲಾಗುವುದು ಎಂದು ಸಂಸ್ಥೆ ತಿಳಿಸಿತ್ತು.

ಶಿಕ್ಷಣ, ವ್ಯವಹಾರ ಇನ್ನಿತರೆ ಕಾರಣಕ್ಕೆ ನಿತ್ಯ ಪ್ರಯಾಣ ಮಾಡುವ ಪ್ರಯಾಣಿಕರು 15 ದಿನಗಳಿಗೊಮ್ಮೆ ಆರ್​ಟಿಪಿಸಿಆರ್ ಟೆಸ್ಟ್ ಮಾಡಿಸಿ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಹೊಂದಿರಬೇಕು ಎಂದು ಕೆಎಸ್​ಆರ್​ಟಿಸಿ ಸೂಚಿಸಿದೆ. ಜೊತೆಗೆ ಇತರ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.