ETV Bharat / state

ಕೃಷ್ಣಬೈರೇಗೌಡರಿಗೆ ಬುದ್ಧಿಭ್ರಮಣೆ ಆಗಿದೆ: ಎಂಟಿಬಿ ಟಾಂಗ್​

author img

By

Published : Oct 9, 2019, 3:52 PM IST

ಉಪ ಚುನಾವಣೆಯಲ್ಲಿ ಒಂದು ವೋಟ್​​ಗೆ ಎಂಟಿಬಿ 2 ಸಾವಿರ ಕೊಟ್ರೆ ನಾನು 4 ಸಾವಿರ ಕೊಡುತ್ತೇನೆ ಎಂಬ ಕೃಷ್ಣಬೈರೇಗೌಡರ ಹೇಳಿಕೆಗೆ ಪ್ರತ್ಯುತ್ತರವಾಗಿ, ಅಧಿಕಾರ ಕಳೆದುಕೊಂಡಿದ್ದಕ್ಕೆ ಗೌಡರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.

ಕೃಷ್ಣಬೈರೇಗೌಡರಿಗೆ ಬುದ್ದಿಭ್ರಮಣೆ ಆಗಿದೆ- ಎಂಟಿಬಿ ಟಾಂಗ್

ಬೆಂಗಳೂರು: ಉಪ ಚುನಾವಣೆಯಲ್ಲಿ ಒಂದು ವೋಟ್​ಗೆ ಎಂಟಿಬಿ 2 ಸಾವಿರ ಕೊಟ್ರೆ ನಾನು 4 ಸಾವಿರ ಕೊಡುತ್ತೇನೆ ಎಂಬ ಕೃಷ್ಣಬೈರೇಗೌಡರ ಹೇಳಿಕೆಗೆ ಪ್ರತ್ಯುತ್ತರವಾಗಿ, ಅಧಿಕಾರ ಕಳೆದುಕೊಂಡಿದ್ದಕ್ಕೆ ಗೌಡರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.

ನಾನು ರಾಜಕೀಯ ಜೀವನದಲ್ಲಿ ಎಲ್ಲೂ ದುಡ್ಡು ಕೊಟ್ಟು ವೋಟ್ ಪಡೆಯುತ್ತೇನೆ ಎನ್ನುವ ರೀತಿ ಮಾತನಾಡಿಲ್ಲ. ನಾನು ಮಾತನಾಡಿರುವ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ ಎಂದು ಕೃಷ್ಣಬೈರೇಗೌಡರ ವಿರುದ್ಧ ಎಂಟಿಬಿ ಆಕ್ರೋಶ ಹೊರಹಾಕಿದರು. ಸಿಎಂ ಬಿಎಸ್​ವೈ ಅವರನ್ನು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಎಂಟಿಬಿ ನಾಗರಾಜ್ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 22ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಅರ್ಜಿ ವಿಚಾರಣೆ ಹಾಗೂ ಉಪ ಚುನಾವಣೆಯಲ್ಲಿ ಟಿಕೆಟ್ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.

ಕೃಷ್ಣಬೈರೇಗೌಡರಿಗೆ ಬುದ್ಧಿಭ್ರಮಣೆ ಆಗಿದೆ: ಎಂಟಿಬಿ ಟಾಂಗ್

ಇನ್ನು ಟಿಕೆಟ್ ವಿಚಾರವಾಗಿ ನಾನು ಸಂತೋಷ್ ಅವರನ್ನ ಭೇಟಿಯಾಗಿಲ್ಲ. ಯಾರು ಭೇಟಿ ಆಗಿದ್ದಾರೆ ಅಂತ ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಶರತ್ ಬಚ್ಚೇಗೌಡರು ಯಾವ ಪಕ್ಷದಿಂದ ಕಣಕ್ಕಿಳಿದರೂ ನಾನು ಎಲ್ಲದ್ದಕ್ಕೂ ಸಿದ್ಧನಾಗಿದ್ದೇನೆ. ಗೆಲ್ಲುವ ವಿಶ್ವಾಸವಿದೆ. ಮತ್ತೊಮ್ಮೆ ನಾನು ಗೆಲ್ತೇನೆ ಎಂದರು.

ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಬೇಕು ಅಂತ ನೀವು ಬಯಸ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ, ಯಾರೇ ಪ್ರತಿಪಕ್ಷದ ನಾಯಕ ಆದರೂ ನಮಗೆ ಸಂಬಂಧ ಇಲ್ಲ. ನಾವು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದೇವೆ. ಸಿದ್ದರಾಮಯ್ಯ ನಮ್ಮ ನಾಯಕ ಹಿಂದೆ ಆಗಿದ್ರು ಈಗಲ್ಲ. ನಮ್ಮ ನಾಯಕ ಯಾರು ಅಂತ 22ರ ನಂತರ ಹೇಳ್ತೇನೆ ಎಂದರು.

ಬೆಂಗಳೂರು: ಉಪ ಚುನಾವಣೆಯಲ್ಲಿ ಒಂದು ವೋಟ್​ಗೆ ಎಂಟಿಬಿ 2 ಸಾವಿರ ಕೊಟ್ರೆ ನಾನು 4 ಸಾವಿರ ಕೊಡುತ್ತೇನೆ ಎಂಬ ಕೃಷ್ಣಬೈರೇಗೌಡರ ಹೇಳಿಕೆಗೆ ಪ್ರತ್ಯುತ್ತರವಾಗಿ, ಅಧಿಕಾರ ಕಳೆದುಕೊಂಡಿದ್ದಕ್ಕೆ ಗೌಡರಿಗೆ ಬುದ್ಧಿಭ್ರಮಣೆ ಆಗಿದೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಟಾಂಗ್ ನೀಡಿದ್ದಾರೆ.

ನಾನು ರಾಜಕೀಯ ಜೀವನದಲ್ಲಿ ಎಲ್ಲೂ ದುಡ್ಡು ಕೊಟ್ಟು ವೋಟ್ ಪಡೆಯುತ್ತೇನೆ ಎನ್ನುವ ರೀತಿ ಮಾತನಾಡಿಲ್ಲ. ನಾನು ಮಾತನಾಡಿರುವ ಬಗ್ಗೆ ಒಂದೇ ಒಂದು ದಾಖಲೆ ನೀಡಲಿ ಎಂದು ಕೃಷ್ಣಬೈರೇಗೌಡರ ವಿರುದ್ಧ ಎಂಟಿಬಿ ಆಕ್ರೋಶ ಹೊರಹಾಕಿದರು. ಸಿಎಂ ಬಿಎಸ್​ವೈ ಅವರನ್ನು ಡಾಲರ್ಸ್ ಕಾಲೋನಿ ನಿವಾಸದಲ್ಲಿ ಭೇಟಿ ಮಾಡಿದ ಬಳಿಕ ಎಂಟಿಬಿ ನಾಗರಾಜ್ ಈ ಹೇಳಿಕೆ ನೀಡಿದ್ದಾರೆ. ಅಕ್ಟೋಬರ್ 22ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಅರ್ಜಿ ವಿಚಾರಣೆ ಹಾಗೂ ಉಪ ಚುನಾವಣೆಯಲ್ಲಿ ಟಿಕೆಟ್ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ.

ಕೃಷ್ಣಬೈರೇಗೌಡರಿಗೆ ಬುದ್ಧಿಭ್ರಮಣೆ ಆಗಿದೆ: ಎಂಟಿಬಿ ಟಾಂಗ್

ಇನ್ನು ಟಿಕೆಟ್ ವಿಚಾರವಾಗಿ ನಾನು ಸಂತೋಷ್ ಅವರನ್ನ ಭೇಟಿಯಾಗಿಲ್ಲ. ಯಾರು ಭೇಟಿ ಆಗಿದ್ದಾರೆ ಅಂತ ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ ಅಷ್ಟೇ. ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಶರತ್ ಬಚ್ಚೇಗೌಡರು ಯಾವ ಪಕ್ಷದಿಂದ ಕಣಕ್ಕಿಳಿದರೂ ನಾನು ಎಲ್ಲದ್ದಕ್ಕೂ ಸಿದ್ಧನಾಗಿದ್ದೇನೆ. ಗೆಲ್ಲುವ ವಿಶ್ವಾಸವಿದೆ. ಮತ್ತೊಮ್ಮೆ ನಾನು ಗೆಲ್ತೇನೆ ಎಂದರು.

ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಬೇಕು ಅಂತ ನೀವು ಬಯಸ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎಂಟಿಬಿ, ಯಾರೇ ಪ್ರತಿಪಕ್ಷದ ನಾಯಕ ಆದರೂ ನಮಗೆ ಸಂಬಂಧ ಇಲ್ಲ. ನಾವು ಕಾಂಗ್ರೆಸ್ ಪಕ್ಷ ತ್ಯಜಿಸಿದ್ದೇವೆ. ಸಿದ್ದರಾಮಯ್ಯ ನಮ್ಮ ನಾಯಕ ಹಿಂದೆ ಆಗಿದ್ರು ಈಗಲ್ಲ. ನಮ್ಮ ನಾಯಕ ಯಾರು ಅಂತ 22ರ ನಂತರ ಹೇಳ್ತೇನೆ ಎಂದರು.

Intro:ಕೃಷ್ಣಬೈರೇಗೌಡರಿಗೆ ಬುದ್ದಿಭ್ರಮಣೆ ಆಗಿದೆ- ಎಮ್ ಟಿಬಿ ನಾಗರಾಜ್
ಬೆಂಗಳೂರು- ಉಪಚುನಾವಣೆಯಲ್ಲಿ ಒಂದು ಓಟ್ ಗೆ ಎಂಟಿಬಿ 2 ಸಾವಿರ ಕೊಟ್ರೆ ನಾನು 4 ಸಾವಿರ ಕೊಡ್ತೆನೆ ಎಂಬ ಕೃಷ್ಣಬೈರೇಗೌಡ ಹೇಳಿಕೆಗೆ ತಿರುಗೇಟು ನೀಡಿರುವ ಅನರ್ಹ ಶಾಸಕ ಎಮ್ ಟಿಬಿ ನಾಗರಾಜ್, ಅಧಿಕಾರ ಕಳೆದುಕೊಂಡಿದ್ದಕ್ಕೆ ಕೃಷ್ಣಬೈರೇಗೌಡರಿಗೆ ಬುದ್ದಿಭ್ರಮಣೆ ಆಗಿದೆ. ನಾನು ರಾಜಕೀಯ ಜೀವನದಲ್ಲಿ ಎಲ್ಲೂ ದುಡ್ಡು ಕೊಟ್ಟು ಓಟ್ ಪಡೆಯುತ್ತೇನೆ ಎನ್ನುವ ರೀತಿ ಮಾತನಾಡಿಲ್ಲ. ನಾನು ಮಾತ್ನಾಡಿರುವ ಬಗ್ಗೆ ಒಂದೇ ಒಂದು ಹೇಳಿಕೆ ದಾಖಲೆ ನೀಡಲಿ ಎಂದು ಕೃಷ್ಣಬೈರೇಗೌಡರ ವಿರುದ್ಧ ಎಂಟಿಬಿ ಆಕ್ರೋಶ ಹೊರಹಾಕಿದರು.
ಸಿಎಂ ಬಿಎಸ್ ವೈ ಭೇಟಿ ಮಾಡಿದೆ ಬಳಿಕ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಎಂಟಿಬಿ ನಾಗರಾಜ್ ಈ ಹೇಳಿಕೆ ನೀಡಿದರು.
ಅಕ್ಟೋಬರ್ 22ರಂದು ಅನರ್ಹ ಶಾಸಕರ ಅರ್ಜಿ ವಿಚಾರಣೆ ಹಿನ್ನೆಲೆ, ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಅರ್ಜಿ ವಿಚಾರಣೆ ಹಾಗೂ ಉಪ ಚುನಾವಣೆಯಲ್ಲಿ ಟಿಕೆಟ್ ಕುರಿತು ಚರ್ಚೆ ನಡೆಸಿದ್ದಾರೆ.
ಇನ್ನು ಟಿಕೆಟ್ ವಿಚಾರವಾಗಿ ಪ್ರತಿಕ್ರಿಯಿಸಿ, ಸಂತೋಷ್ ಅವ್ರನ್ನ ನಾನು ಭೇಟಿಯಾಗಿಲ್ಲ.
ಯಾರು ಭೇಟಿ ಆದ್ರೂ ಅಂತ ಗೊತ್ತಿಲ್ಲ. ನಾನು ಮಾಧ್ಯಮದಲ್ಲಿ ನೋಡಿದ್ದೇನೆ. ನಾನು ಸಾರ್ವಜನಿಕವಾಗಿ ಜನರ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಶರತ್ ಬಚ್ಚೇಗೌಡರು ಯಾವ ಪಕ್ಷದಿಂದಲೂ ನಿಂತುಕೊಳ್ಳಲಿ. ನಾನು ಎಲ್ಲದ್ದಕ್ಕೂ ಸಿದ್ದನಾಗಿದ್ದೇನೆ. ಗೆಲ್ಲುವ ವಿಶ್ವಾಸವಿದೆ ಮತ್ತೊಮ್ಮೆ ನಾನು ಗೆಲ್ತೇನಿ ಎಂದರು.
ಮತ್ತೆ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಬೇಕು ಅಂತ ನೀವು ಬಯಸ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,
ಯಾರೇ ವಿಪಕ್ಷ ನಾಯಕ ಆದ್ರು ನಮಗೆ ಸಂಬಂಧ ಇಲ್ಲ.
ನಾವ್ ಕಾಂಗ್ರೆಸ್ ಪಕ್ಷ ಬಿಟ್ಟಿದ್ದೇವೆ. ಸಿದ್ದರಾಮಯ್ಯ ನಮ್ಮ ನಾಯಕ ಹಿಂದೆ ಆಗಿದ್ರು, ಈಗಲ್ಲ. ನಮ್ಮ ನಾಯಕ ಯಾರು ಅಂತ 22 ರ ನಂತರ ಹೇಳ್ತೇನೆ ಎಂದರು.


ಸೌಮ್ಯಶ್ರೀ
Kn_bng_02_MTB_byte_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.