ETV Bharat / state

ಕೆಪಿಎಲ್‌ ಬೆಟ್ಟಿಂಗ್: ಪ್ರಕರಣದಲ್ಲಿ ಹಿರಿಯ ಆಟಗಾರರೂ ಭಾಗಿ?, ಸಿಸಿಬಿಯಿಂದ ನೋಟಿಸ್‌ ಜಾರಿ

author img

By

Published : Nov 17, 2019, 2:35 PM IST

ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ.

ಕೆಪಿಎಲ್ ಬೆಟ್ಟಿಂಗ್ ಪ್ರಕರಣ

ಬೆಂಗಳೂರು : ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಕುಲದೀಪ್ ಜೈನ್ ಅವರು ತನಿಖೆ ನಡೆಸುತ್ತಿದ್ದು, ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ.ಗೌತಮ್ ಹಾಗೂ ಆರ್​ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿ ಬಂಧನ‌ದ ಬಳಿಕ ಸಿಸಿಬಿಗೆ ಬಹಳ ಮಹತ್ವದ ಸುಳಿವು ಸಿಕ್ಕಿದೆ. ಕೆಪಿಎಲ್ ಹಗರಣದಲ್ಲಿ ದೊಡ್ಡದೊಡ್ಡ ಆಟಗಾರರು ಭಾಗಿಯಾಗಿರುವ ದಾಖಲೆ ಹಾಗೂ ಮಾಹಿತಿ ಲಭ್ಯವಾಗಿದ್ದು, ಭಾಗಿಯಾದ ಪ್ರತಿಯೊಂದು ಆಟಗಾರರರಿಗೆ ಮೊದಲು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಅವಶ್ಯಕತೆ ಇದ್ದರೆ ಬಂಧಿಸಲು ಸಿಸಿಬಿ ಮುಂದಾಗಿದೆ.

ನಿರೀಕ್ಷಣಾ ಜಾಮೀನು ಅರ್ಜಿ :

ಸಿಸಿಬಿ ಕೆಪಿಎಲ್ ಹಗರಣವನ್ನ ಬಹಳ ಸೂಕ್ಷ್ಮವಾಗಿ ನಡೆಸುತ್ತಿರುವ ಕಾರಣ ಆಟಗಾರರ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಕೆಪಿಎಲ್ ಹಗರಣದಲ್ಲಿ ಭಾಗಿಯಾದ ಕೆಲ ಆಟಗಾರರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಬೆಂಗಳೂರು : ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಕುಲದೀಪ್ ಜೈನ್ ಅವರು ತನಿಖೆ ನಡೆಸುತ್ತಿದ್ದು, ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ.ಗೌತಮ್ ಹಾಗೂ ಆರ್​ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿ ಬಂಧನ‌ದ ಬಳಿಕ ಸಿಸಿಬಿಗೆ ಬಹಳ ಮಹತ್ವದ ಸುಳಿವು ಸಿಕ್ಕಿದೆ. ಕೆಪಿಎಲ್ ಹಗರಣದಲ್ಲಿ ದೊಡ್ಡದೊಡ್ಡ ಆಟಗಾರರು ಭಾಗಿಯಾಗಿರುವ ದಾಖಲೆ ಹಾಗೂ ಮಾಹಿತಿ ಲಭ್ಯವಾಗಿದ್ದು, ಭಾಗಿಯಾದ ಪ್ರತಿಯೊಂದು ಆಟಗಾರರರಿಗೆ ಮೊದಲು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ, ಅವಶ್ಯಕತೆ ಇದ್ದರೆ ಬಂಧಿಸಲು ಸಿಸಿಬಿ ಮುಂದಾಗಿದೆ.

ನಿರೀಕ್ಷಣಾ ಜಾಮೀನು ಅರ್ಜಿ :

ಸಿಸಿಬಿ ಕೆಪಿಎಲ್ ಹಗರಣವನ್ನ ಬಹಳ ಸೂಕ್ಷ್ಮವಾಗಿ ನಡೆಸುತ್ತಿರುವ ಕಾರಣ ಆಟಗಾರರ ಹೆಸರನ್ನು ಬಿಟ್ಟುಕೊಟ್ಟಿಲ್ಲ. ಕೆಪಿಎಲ್ ಹಗರಣದಲ್ಲಿ ಭಾಗಿಯಾದ ಕೆಲ ಆಟಗಾರರು ಬಂಧನ ಭೀತಿಯಿಂದ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

Intro:ಕೆಪಿ ಎಲ್ ಬೆಟ್ಟಿಂಗ್ ಪ್ರಕರಣ
ಪ್ರತಿಷ್ಟಿತ ಆಟಗಾರರ ವಿಚಾರಣೆ ನಡೆಸಿದ ಸಿಸಿಬಿ

ಕರ್ನಾಟಕ ಪ್ರೀಮಿಯರ್ ಕ್ರೀಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣದ ತನಿಖೆ ದಿನಕ್ಕೊಂದು ರೋಚಕ ತಿರುವು ಪಡೆಯುತ್ತಿದೆ. ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಡಿಸಿಪಿ ಕುಲ್ ದೀಪ್ ಜೈನ್ ಅವರು ತನೀಕೆ ನಡೆಸಿತ್ತಿದ್ದು ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ ಗೌತಮ್ ಹಾಗೂ ಆರ್ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿ ಬಂಧನ‌ಬಳಿಕ ಸಿಸಿಬಿಗೆ ಬಹಳ ಮಹತ್ವರ ತಿರುವು ಸಿಕ್ಕಿದೆ. ಯಾಕಂದ್ರೆ ಕೆಪಿಎಲ್ ಹಗರಣದಲ್ಲಿ ಸಣ್ಣ ಪುಟ್ಟ ಆಟಗಾರರು ಇರದೇ ಬಹಳ ಪ್ರತಿಷ್ಟಿತ ಆಟಗಾರರು ಭಾಗಿಯಾಗಿರುದ ದಾಖಲೆ ಹಾಗೂ ಮಾಹಿತಿ ಲಭ್ಯವಾಗಿದ್ದು ಭಾಗಿಯಾದ ಪ್ರತಿಯೊಂದು ಆಟಗಾರರರಿಗೆ ಮೊದಲು ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಅವಶ್ಯಕತೆ ಇದ್ದಾರೆ ಬಂಧನ ಮಾಡೋಕ್ಕೆ ಸಿಸಿಬಿ ಮುಂದಾಗಿದೆ

ಪ್ರತಿಷ್ಟಿತ ಆಟಗಾರರಿಂದ ನೀರಿಕ್ಷಣಾ ಜಾಮೀನು ಅರ್ಜಿ

ಸಿಸಿಬಿ ಕೆ.ಪಿಎಲ್ ಹಗರಣವನ್ನ ಬಹಳ ಸೂಕ್ಷ್ಮ ತೆಯಿಂದ ನಡೆಸುತ್ತಿರುವ ಕಾರಣ ಯಾವ ಪ್ರತಿಷ್ಟಿತ ಆಟಗಾರನೆಂಬ ಇಂಟು‌ ಬಿಟ್ಟು ಕೊಡದೆ ಮೊದಲು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ತದ ನಂತ್ರ ಪಕ್ಕ ದಾಖಲೆಗಳ ಆಧಾರದ‌ ಮೇರೆಗೆ ಬಂಧನ ಮಾಡ್ತಿದ್ದಾರೆ. ಹೀಗಾಗಿ ಕೆ.ಪಿಎಲ್ ಹಗರಣದಲ್ಲಿ ಭಾಗಿಯಾದ ಕೆಲ ಪ್ರತಿಷ್ಟಿತ ಆಟಗಾರರು ತಾವೆಲ್ಲಿ ಬಂಧನವಾಗ್ತಿವಿ ಎಂದು ಹೆದರಿ ಜಾಮೀನು ಕೋರಿ ಅರ್ಜಿ ಹಾಕಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

Body:KN_BNG_06_KPL_7204498Conclusion:KN_BNG_06_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.