ETV Bharat / state

ಕೆಪಿಎಲ್ ಬೆಟ್ಟಿಂಗ್ ಪ್ರಕರಣ: ತನಿಖಾಧಿಕಾರಿ ಎದುರು ಕ್ಷಮೆ ಕೇಳಿದ ಪ್ರತಿಷ್ಠಿತ ಆಟಗಾರ

author img

By

Published : Nov 11, 2019, 1:48 PM IST

ಕರ್ನಾಟಕ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣವನ್ನ ಸಿಸಿಬಿ ಬಯಲಿಗೆಳೆದು ಪ್ರತಿಷ್ಠಿತ ಆಟಗಾರ ತನಿಖೆಯನ್ನ ಚುರುಕುಗೊಳಿಸಿದೆ.

KPL

ಬೆಂಗಳೂರು: ಕೆಪಿಎಲ್​ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ. ಗೌತಮ್ ಹಾಗೂ ಆರ್​​ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿಯವರನ್ನು ತನಿಖೆಗೆ ಒಳಪಡಿಸಿದಾಗ ಕೆಲ ರೋಚಕ ವಿಚಾರಗಳು ಬಯಲಿಗೆ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೆಪಿಎಲ್ ಬೆಟ್ಟಿಂಗ್ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು

ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ನೀಡಿದ‌ ಸಿಸಿಬಿ

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಕುಲ್​ದೀಪ್ ಕುಮಾರ್ ಜೈನ್ ಅವರು ಇಬ್ಬರು ಆಟಗಾರರನ್ನು ವಿಚಾರಣೆ ನಡೆಸಿದಾಗ ಕೆಪಿಎಲ್ ಹಗರಣದಲ್ಲಿ ಇನ್ನಷ್ಟು ಪ್ರತಿಷ್ಠಿತ ಆಟಗಾರರು ಭಾಗಿಯಾಗಿರುವ ವಿಚಾರ ಬಾಯ್ಬಿಟ್ಟಿದ್ದಾರೆ. 2019ರಲ್ಲಿ ನಡೆದ ಕೆ.ಪಿಎಲ್ ಮ್ಯಾಚ್ ಸೋಲಲು ಈ ಇಬ್ಬರು ಆಟಗಾರರು‌ ಮಾತ್ರ ಕಾರಣವಲ್ಲದೇ ಇದರಲ್ಲಿ ಕೆಪಿಎಲ್ ಟೀಂನಲ್ಲಿ ಆಟವಾಡಿದ ಇನ್ನಷ್ಟು ಆಟಗಾರರ ಪಾತ್ರವಿದ್ದು, ಇವರು ಬುಕ್ಕಿಗಳು ಹೇಳಿದ ಹಾಗೆ ಮ್ಯಾಚ್ ಆಡಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ.

ಕ್ಷಮೆ ಕೇಳಿದ ಸಿ.ಎಂ. ಗೌತಮ್

ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ. ಗೌತಮ್ ಪ್ರಸಕ್ತ ಸಾಲಿನಲ್ಲಿ ಗೋವಾ ಪರ ಆಡುತ್ತಿದ್ದ.‌ 2012-13 ನೇ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರ. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದ ಗೌತಮ್ ಬಹಳಷ್ಟು ಹೆಸರು ಗಳಿಸಿದ್ದ. ಆದರೆ ಕೆಪಿಎಲ್ ಹಗರಣದಲ್ಲಿ ತನಿಖೆಗೆ ಇಳಿದಾಗ ಗೌತಮ್ ಭಾಗಿಯಾಗಿದ್ದು ಗೊತ್ತಾಗಿದ್ದು, ನಂತರ ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದಾಗ ಈತ ತನಿಖಾಧಿಕಾರಿಗಳ ಎದುರು, "ತನ್ನ ಭವಿಷ್ಯ ಕ್ರಿಕೆಟ್​ನಲ್ಲೆ ಇದ್ದು ಈ ಒಂದು ಸಲ ತಪ್ಪಾಗಿದೆ ಎಂದು ಕ್ಷಮೆ ‌ಕೋರಿದ್ದಾನೆ ಎಂದು ತಿಳಿದು ಬಂದಿದೆ.

ಆದರೆ ತನಿಖಾಧಿಕಾರಿ ಈ ಟಿವಿ ಭಾರತ್ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿ, ನಾವು ತನಿಖೆಯಲ್ಲಿ ಸ್ಪಷ್ಟ ನಿಲುವು ಇಟ್ಟುಕೊಂಡು ಗಂಭೀರವಾಗಿ ತನಿಖೆಯನ್ನ ಮುಂದುವರೆಸಿದ್ದೇವೆ. ಕ್ರಿಕೆಟ್ ಮೇಲೆ ಬಹಳಷ್ಟು‌ ಮಂದಿ ಅಭಿಮಾನ ಇಟ್ಟುಕೊಂಡಿದ್ದಾರೆ. ಹಾಗೆ ಈ ಕೆಪಿಎಲ್ ಹಗರಣ ಕಳೆದ ಒಂದು ತಿಂಗಳ ಹಿಂದೆನೆ ಬಯಲಿಗೆ ಬಂದಿತ್ತು. ನಾವು ಬಹಳ ಕಷ್ಟ ಪಟ್ಟು ತನಿಖೆ ನಡೆಸಿದಾಗ ಈ ಆಟಗಾರರ ಹೆಸರು ಬಯಲಾಗಿದ್ದು ಈ ಆಟಗಾರ ಮೊದಲೇ ಬಂದು ತನಿಖೆಗೆ ಒಳಪಡಬೇಕಿತ್ತು. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳಿದರೆ ಪ್ರಯೋಜನವೇನು ಮಾಡಿದ ತಪ್ಪು ಅನುಭವಿಸಲೇಬೇಕು ಎಂದು ಹೇಳಿದ್ದಾರೆ.

ಪ್ರತಿಪಂದ್ಯ ಬಗ್ಗೆ ಗಮನ ಇಟ್ಟ ಸಿಸಿಬಿ

ಪ್ರಕರಣ ಬಯಲಾದ ಹಿನ್ನೆಲೆ, 2018ರಿಂದ ಇಲ್ಲಿಯವರೆಗೆ ನಡೆದ ಕೆಪಿಎಲ್, ಐಪಿಎಲ್, ಟೂರ್ನಿ ಎಲ್ಲಾ ಮ್ಯಾಚ್​ಗಳ‌ನ್ನು ತನಿಖಾಧಿಕಾರಿ ಕುಲ್ ದೀಪ್ ಕುಮಾರ್ ಜೈನ್, ವೀಕ್ಷಣೆ ಮಾಡಿದ್ದು ಪ್ರತಿ ಆಟಗಾರರು ಯಾವ ರೀತಿ ಹೇಗೆ ಆಟವಾಡಿದ್ದಾರೆಂದು ಪಟ್ಟಿ ರೆಡಿ ಮಾಡಿದ್ದಾರೆ. ಸಿಸಿಬಿಗೆ ಈಗಾಗ್ಲೇ ಪ್ರತಿ‌ ಕ್ರಿಕೆಟ್ ಮ್ಯಾಚ್​ನಲ್ಲಿ ಫಿಕ್ಸಿಂಗ್ ನಡೆದಿರುವ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.

ಇನ್ನಷ್ಟು ಬುಕ್ಕಿಗಳ ಬೆನ್ನತ್ತಿದ ಸಿಸಿಬಿ

ಸದ್ಯ ಇಬ್ಬರು ಬುಕ್ಕಿಗಳನ್ನ ಬಂಧಿಸಿರುವ ಸಿಸಿಬಿ, ಇನ್ನಷ್ಟು ಮಂದಿ ಬುಕ್ಕಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ತನಿಖೆ ನಡೆಸಿದಾಗ ಕೆಲ ಬುಕ್ಕಿಗಳು ವಿದೇಶಕ್ಕೆ ಹಾರಿರುವ ಮಾಹಿತಿ ಗೊತ್ತಾಗಿದೆ.

ಬೆಂಗಳೂರು: ಕೆಪಿಎಲ್​ನಲ್ಲಿ ನಡೆದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ. ಗೌತಮ್ ಹಾಗೂ ಆರ್​​ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿಯವರನ್ನು ತನಿಖೆಗೆ ಒಳಪಡಿಸಿದಾಗ ಕೆಲ ರೋಚಕ ವಿಚಾರಗಳು ಬಯಲಿಗೆ ಬಂದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಕೆಪಿಎಲ್ ಬೆಟ್ಟಿಂಗ್ ಪ್ರಕರಣ: ತನಿಖೆ ಚುರುಕುಗೊಳಿಸಿದ ಪೊಲೀಸರು

ಪ್ರತಿಷ್ಠಿತ ಆಟಗಾರರಿಗೆ ನೋಟಿಸ್ ನೀಡಿದ‌ ಸಿಸಿಬಿ

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಕುಲ್​ದೀಪ್ ಕುಮಾರ್ ಜೈನ್ ಅವರು ಇಬ್ಬರು ಆಟಗಾರರನ್ನು ವಿಚಾರಣೆ ನಡೆಸಿದಾಗ ಕೆಪಿಎಲ್ ಹಗರಣದಲ್ಲಿ ಇನ್ನಷ್ಟು ಪ್ರತಿಷ್ಠಿತ ಆಟಗಾರರು ಭಾಗಿಯಾಗಿರುವ ವಿಚಾರ ಬಾಯ್ಬಿಟ್ಟಿದ್ದಾರೆ. 2019ರಲ್ಲಿ ನಡೆದ ಕೆ.ಪಿಎಲ್ ಮ್ಯಾಚ್ ಸೋಲಲು ಈ ಇಬ್ಬರು ಆಟಗಾರರು‌ ಮಾತ್ರ ಕಾರಣವಲ್ಲದೇ ಇದರಲ್ಲಿ ಕೆಪಿಎಲ್ ಟೀಂನಲ್ಲಿ ಆಟವಾಡಿದ ಇನ್ನಷ್ಟು ಆಟಗಾರರ ಪಾತ್ರವಿದ್ದು, ಇವರು ಬುಕ್ಕಿಗಳು ಹೇಳಿದ ಹಾಗೆ ಮ್ಯಾಚ್ ಆಡಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ.

ಕ್ಷಮೆ ಕೇಳಿದ ಸಿ.ಎಂ. ಗೌತಮ್

ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ. ಗೌತಮ್ ಪ್ರಸಕ್ತ ಸಾಲಿನಲ್ಲಿ ಗೋವಾ ಪರ ಆಡುತ್ತಿದ್ದ.‌ 2012-13 ನೇ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರ. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದ ಗೌತಮ್ ಬಹಳಷ್ಟು ಹೆಸರು ಗಳಿಸಿದ್ದ. ಆದರೆ ಕೆಪಿಎಲ್ ಹಗರಣದಲ್ಲಿ ತನಿಖೆಗೆ ಇಳಿದಾಗ ಗೌತಮ್ ಭಾಗಿಯಾಗಿದ್ದು ಗೊತ್ತಾಗಿದ್ದು, ನಂತರ ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದಾಗ ಈತ ತನಿಖಾಧಿಕಾರಿಗಳ ಎದುರು, "ತನ್ನ ಭವಿಷ್ಯ ಕ್ರಿಕೆಟ್​ನಲ್ಲೆ ಇದ್ದು ಈ ಒಂದು ಸಲ ತಪ್ಪಾಗಿದೆ ಎಂದು ಕ್ಷಮೆ ‌ಕೋರಿದ್ದಾನೆ ಎಂದು ತಿಳಿದು ಬಂದಿದೆ.

ಆದರೆ ತನಿಖಾಧಿಕಾರಿ ಈ ಟಿವಿ ಭಾರತ್ ಪ್ರತಿನಿಧಿ ಜೊತೆ ದೂರವಾಣಿ ಮೂಲಕ ಮಾತನಾಡಿ, ನಾವು ತನಿಖೆಯಲ್ಲಿ ಸ್ಪಷ್ಟ ನಿಲುವು ಇಟ್ಟುಕೊಂಡು ಗಂಭೀರವಾಗಿ ತನಿಖೆಯನ್ನ ಮುಂದುವರೆಸಿದ್ದೇವೆ. ಕ್ರಿಕೆಟ್ ಮೇಲೆ ಬಹಳಷ್ಟು‌ ಮಂದಿ ಅಭಿಮಾನ ಇಟ್ಟುಕೊಂಡಿದ್ದಾರೆ. ಹಾಗೆ ಈ ಕೆಪಿಎಲ್ ಹಗರಣ ಕಳೆದ ಒಂದು ತಿಂಗಳ ಹಿಂದೆನೆ ಬಯಲಿಗೆ ಬಂದಿತ್ತು. ನಾವು ಬಹಳ ಕಷ್ಟ ಪಟ್ಟು ತನಿಖೆ ನಡೆಸಿದಾಗ ಈ ಆಟಗಾರರ ಹೆಸರು ಬಯಲಾಗಿದ್ದು ಈ ಆಟಗಾರ ಮೊದಲೇ ಬಂದು ತನಿಖೆಗೆ ಒಳಪಡಬೇಕಿತ್ತು. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳಿದರೆ ಪ್ರಯೋಜನವೇನು ಮಾಡಿದ ತಪ್ಪು ಅನುಭವಿಸಲೇಬೇಕು ಎಂದು ಹೇಳಿದ್ದಾರೆ.

ಪ್ರತಿಪಂದ್ಯ ಬಗ್ಗೆ ಗಮನ ಇಟ್ಟ ಸಿಸಿಬಿ

ಪ್ರಕರಣ ಬಯಲಾದ ಹಿನ್ನೆಲೆ, 2018ರಿಂದ ಇಲ್ಲಿಯವರೆಗೆ ನಡೆದ ಕೆಪಿಎಲ್, ಐಪಿಎಲ್, ಟೂರ್ನಿ ಎಲ್ಲಾ ಮ್ಯಾಚ್​ಗಳ‌ನ್ನು ತನಿಖಾಧಿಕಾರಿ ಕುಲ್ ದೀಪ್ ಕುಮಾರ್ ಜೈನ್, ವೀಕ್ಷಣೆ ಮಾಡಿದ್ದು ಪ್ರತಿ ಆಟಗಾರರು ಯಾವ ರೀತಿ ಹೇಗೆ ಆಟವಾಡಿದ್ದಾರೆಂದು ಪಟ್ಟಿ ರೆಡಿ ಮಾಡಿದ್ದಾರೆ. ಸಿಸಿಬಿಗೆ ಈಗಾಗ್ಲೇ ಪ್ರತಿ‌ ಕ್ರಿಕೆಟ್ ಮ್ಯಾಚ್​ನಲ್ಲಿ ಫಿಕ್ಸಿಂಗ್ ನಡೆದಿರುವ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.

ಇನ್ನಷ್ಟು ಬುಕ್ಕಿಗಳ ಬೆನ್ನತ್ತಿದ ಸಿಸಿಬಿ

ಸದ್ಯ ಇಬ್ಬರು ಬುಕ್ಕಿಗಳನ್ನ ಬಂಧಿಸಿರುವ ಸಿಸಿಬಿ, ಇನ್ನಷ್ಟು ಮಂದಿ ಬುಕ್ಕಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ತನಿಖೆ ನಡೆಸಿದಾಗ ಕೆಲ ಬುಕ್ಕಿಗಳು ವಿದೇಶಕ್ಕೆ ಹಾರಿರುವ ಮಾಹಿತಿ ಗೊತ್ತಾಗಿದೆ.

Intro:ಕೆಪಿ ಎಲ್ ಬೆಟ್ಟಿಂಗ್ ಪ್ರಕರಣ
ತನಿಖಾಧಿಕಾರಿ ಎದುರು ಕ್ಷಮೆ ಕೇಳಿದ ಪ್ರತಿಷ್ಟಿತ ಆಟಗಾರ

ಸ್ಪೇಷಾಲ್ ಸ್ಟೋರಿ

ಕರ್ನಾಟಕ ಪ್ರೀಮಿಯರ್ ಕ್ರೀಕೆಟ್ ಟೂರ್ನಿಯಲ್ಲಿ ನಡೆದಿರುವ ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಹಗರಣವನ್ನ ಸಿಸಿಬಿ ಬಯಲಿಗೆ ಎಳೆದು ಪ್ರತಿಷ್ಠಿತ ಆಟಗಾರ ತನಿಖೆಯನ್ನ ಚುರುಕುಗೊಳಿಸಿದೆ.
ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ ಗೌತಮ್ ಹಾಗೂ ಆರ್ಸಿಬಿ ಪರ ಒಂದು ಪಂದ್ಯವನ್ನಾಡಿದ್ದ ಅಬ್ರಾರ್ ಖಾಜಿಯವರನ್ನ ತನಿಖೆಗೆ ಒಳಪಡಿಸಿದಾಗ ಕೆಲ ರೋಚಕ ವಿಚಾರಗಳು ಬಯಲಿಗೆ ಬಂದಿದೆ.

ಪ್ರತಿಷ್ಟಿತ ಆಟಗಾರರಿಗೆ ನೋಟಿಸ್ ನೀಡಿದ‌ ಸಿಸಿಬಿ

ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಕುಲ್ ದೀಪ್ ಜೈನ್ ಅವರು ಇಬ್ಬರು ಆಟಗಾರರನ್ನ ವಿಚಾರಣೆ ನಡೆಸಿದಾಗ ಕೆಪಿ ಎಲ್ ಹಗರಣದಲ್ಲಿ ಇನ್ನಷ್ಟು ಪ್ರತಿಷ್ಟಿತ ಆಟಗಾರರು ಭಾಗಿಯಾಗಿರುವ ವಿಚಾರ ಬಾಯಿ ಬಿಟ್ಟಿದ್ದಾರೆ . 2019ರಲ್ಲಿ ನಡೆದ ಕೆ.ಪಿಎಲ್ ಮ್ಯಾಚ್ ಸೋಲಲು ಈ ಇಬ್ಬರು ಆಟಗಾರರು‌ ಮಾತ್ರ ಕಾರಣವಲ್ಲದೇ ಇದರಲ್ಲಿ ಕೆಪಿಎಲ್ ಟೀಂ ನಲ್ಲಿ ಆಟವಾಡಿದ ಇನ್ನಷ್ಟು ಆಟಗಾರರು ಪಾತ್ರ ಹೊಂದಿದ್ದು ಇವರು ಬುಕ್ಕಿಗಳು ಹೇಳಿದ ಹಾಗೆ ಮ್ಯಾಚ್ ಆಡಿದ್ದಾರೆ ಅನ್ನೋ ವಿಚಾರ ತಿಳಿದು ಬಂದಿದೆ.

ಸಿಸಿಬಿ ತನಿಖಾಧಿಕಾರಿ ಬಳಿ ಕ್ಷಮೆ ಕೇಳಿದ. ಸಿ ಎಂ ಗೌತಮ್

ಕರ್ನಾಟಕ ರಣಜಿ ತಂಡದ ವಿಕೆಟ್ ಕೀಪರ್ ಹಾಗೂ ಬ್ಯಾಟ್ಸ್‌ಮನ್ ಆಗಿದ್ದ ಸಿ.ಎಂ ಗೌತಮ್. ಪ್ರಸಕ್ತ ಸಾಲಿನಲ್ಲಿ ಗೋವಾ ಪರ ಆಡುತ್ತಿದ್ದ.‌ 2012-13 ನೇ ಸಾಲಿನ ರಣಜಿ ಋತುವಿನಲ್ಲಿ ರಾಜ್ಯದ ಪರ ಅತೀ ಹೆಚ್ಚು ರನ್ ಗಳಿಸಿದ್ದ ಎರಡನೇ ಆಟಗಾರ. ಅದೇ ಪ್ರದರ್ಶನದ ಆಧಾರದಲ್ಲಿ ಇಂಡಿಯಾ ಎ ತಂಡವನ್ನೂ ಪ್ರತಿನಿಧಿಸಿದ್ದ ಗೌತಮ್ ಬಹಳಷ್ಟು ಹೆಸರು ಗಳಿಸಿದ್ದ. ಕೆಪಿ ಎಲ್ ಹಗರಣದಲ್ಲಿ ತನಿಖೆಗೆ ಇಳಿದಾಗ ಗೌತಮ್ ಭಾಗಿಯಾಗಿರುವ ವಿಚಾರದ ಆಧಾರದ ಮೇಲೆ ತನಿಖಾಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸಿದಾಗ ತನಿಖಾಧಿಕಾರಿಗಳ ಎದುರು ಗೌತಮ್ ತನ್ನ ಭವಿಷ್ಯ ಕ್ರೀಕೆಟ್ ನಲ್ಲೆ ಇದ್ದು ಈ ಒಂದು ಸಲ ತಪ್ಪಾಗಿದೆ ಎಂದು ಕ್ಷಮೆ ‌ಕೋರಿದ್ದಾನಂತೆ. ಆದರೆ ತನೀಕಾಧಿಕಾರಿ ಈ ಟಿವಿ ಭಾರತ್ ಜೊತೆ ಮಾತಾಡಿ ನಾವು ತನಿಖೆಯಲ್ಲಿ ಸ್ಪಷ್ಟ ನಿಲುವು ಇಟ್ಟುಕೋಂಡು ಗಂಭೀರವಾಗಿ ತನೀಕೆಯನ್ನ ಮುಂದುವರೆಸಿದ್ದೆವೆ. ಕ್ರೀಕೇಟ್ ಮೇಲೆ ಬಹಳಷ್ಟು‌ ಮಂದಿ ಅಭಿಮಾನ ಇಟ್ಟುಕೊಂಡಿದ್ದಾರೆ. ಹಾಗೆ ಈ ಕೆಪಿ ಎಲ್ ಹಗರಣ ಕಳೆದ ಒಂದು ತಿಂಗಳ ಹಿಂದೆನೆ ಬಯಲಿಗೆ ಬಂದಿತ್ತು. ನಾವು ಬಹಳ ಕಷ್ಟ ಪಟ್ಟು ತನಿಖೆ ನಡೆಸಿದಾಗ ಈ ಆಟಗಾರರ ಹೆಸರು ಬಯಲಾಗಿದ್ದು ಈ ಆಟಗಾರ ಮೊದಲೆ ಬಂದು ತನೀಕೆಗೆ ಒಳಪಡಬೇಕಿತ್ತು. ತಪ್ಪು ಮಾಡಿದ ಮೇಲೆ ಕ್ಷಮೆ ಕೇಳಿದರೆ ಪ್ರಯೋಜನವೇನು ಮಾಡಿದ ತಪ್ಪು ಅನುಭವಿಸಲೇಬೆಕು ಎಂದ್ರು.

ಪ್ರತಿ ಪಂದ್ಯ ಬಗ್ಗೆ ಗಮನ ಇಟ್ಟ ಸಿಸಿಬಿ

2018ರಿಂದ ಇಲ್ಲಿಯವರೆಗೆ ನಡೆದ ಕೆಪಿಎಲ್, ಐಪಿಎಲ್ ,ಟೂರ್ನಿ ಎಲ್ಲಾ ಮ್ಯಾಚ್ ಗಳ‌ನ್ನ ತನೀಖಾಧಿಕಾರಿ ಕುಲ್ ದೀಪ್ ಜೈನ್ ಪ್ರತಿ ಮ್ಯಾಚ್ ಗಳನ್ನ ವೀಕ್ಷಣೆ ಮಾಡಿ ಪ್ರತಿ ಆಟಗಾರರು ಯಾವ ರೀತಿ ಹೇಗೆ ಆಟವಾಡಿದ್ದಾರೆವೆಂಬ ಪಟ್ಟಿ ರೆಡಿ ಮಾಡಿದ್ದಾರೆ. ಸಿಸಿಬಿಗೆ ಈಗಾಗ್ಲೇ ಪ್ರತಿ‌ ಕ್ರೀಕೆಟ್ ಮ್ಯಾಚ್ ನಲ್ಲಿ ಫಿಕ್ಸಿಂಗ್ ನಡೆದಿರುವ ಮಾಹಿತಿ ಸಿಸಿಬಿಗೆ ಲಭ್ಯವಾಗಿದೆ.

ಇನ್ನಷ್ಟು ಬುಕ್ಕಿಗಳ ಬೆನ್ನತ್ತಿದ ಸಿಸಿಬಿ

ಮ್ಯಾಚ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ‌ ಅನ್ನ ಬುಕ್ಕಿಗಳು ಪ್ರತಿಷ್ಠಿತ ಆಟಗಾರರನ್ನ ಟಾರ್ಗೇಟ್ ಮಾಡ್ತಿದ್ರು. ಸದ್ಯ ಇಬ್ಬರು ಬುಕ್ಕಿಗಳನ್ನ ಬಂಧಿಸಿರುವ ಸಿಸಿಬಿ ಇನ್ನಷ್ಟು ಮಂದಿ ಬುಕ್ಕಿಗಳು ಪ್ರಕರಣದಲ್ಲಿ ಭಾಗಿಯಾಗಿರುವ ವಿಚಾರ ತಿಳಿದು ತನೀಕೆ ನಡೆಸಿದಾಗ ಕೆಲ ಬುಕ್ಕಿಗಳು ವಿದೇಶಕ್ಕೆ ಹಾರಿರುವ ಮಾಹಿತಿ ಗೊತ್ತಾಗಿ ಸಿಸಿಬಿ ಈ ಆಟಗಾರರ ಬೆನ್ನತ್ತಿ ಹೊರಟಿದ್ದಾರೆ

Body:KN_BNG_03_KPL_7204498Conclusion:KN_BNG_03_KPL_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.