ETV Bharat / state

ಕಿಡ್ನಿ ವೈಫಲ್ಯ: ಆ್ಯಂಬುಲೆನ್ಸ್​ನಲ್ಲೇ ದರ್ಶನ್ ಮನೆಗೆ ಬಂದ ಅಭಿಮಾನಿ

author img

By

Published : Feb 16, 2020, 10:28 PM IST

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಭಿಮಾನಿ ಶ್ರೀನಿವಾಸ್​ ಎಂಬಾತ ದರ್ಶನ್ ಮನೆ ಬಳಿ ಬಂದಿದ್ದ. ಆದ್ರೆ ರಾಬರ್ಟ್ ಚಿತ್ರಕ್ಕೆ ಡಬ್ಬಿಂಗ್ ಮಾಡಲು ದರ್ಶನ್​ ಅವರು ಅಭಿಮಾನ್ ಸ್ಟುಡಿಯೋಗೆ ಹೋಗಿದ್ದರು. ಈ ಹಿನ್ನೆಲೆ ಶ್ರೀನಿವಾಸ್ ನಿರಾಶೆಯಿಂದ ತಮ್ಮ ಮನೆಗೆ ತೆರಳುವಂತಾಯಿತು.

Kidney failure to darshan fan
ಆಂಬುಲೆನ್ಸ್​ನಲ್ಲೆ ದರ್ಶನ್ ಮನೆಗೆ ಬಂದ ರೋಗಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಶ್ರೀನಿವಾಸ್​ ಎಂಬಾತ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಹೀಗಾಗಿ ದಚ್ಚು ಬಳಿ ಸಹಾಯ ಕೇಳಲು ಆ್ಯಂಬುಲೆನ್ಸ್​ನಲ್ಲೇ ದರ್ಶನ್ ಮನೆಗೆ ಬಂದಿದ್ದ. ಆದರೆ ದರ್ಶನ್​ ಅವರು ಸಿಗದ ಕಾರಣ ನಿರಾಶೆಯಿಂದಲೇ ಮನೆಗೆ ಹಿಂದಿರುಗಿದ.

ಆ್ಯಂಬುಲೆನ್ಸ್​ನಲ್ಲೇ ದರ್ಶನ್ ಮನೆಗೆ ಬಂದ ರೋಗಿ

ಅಭಿಮಾನಿ ಶ್ರೀನಿವಾಸನು ದರ್ಶನ್ ಮನೆ ಬಳಿ ಬಂದಾಗ ಅವರು ರಾಬರ್ಟ್ ಚಿತ್ರದ ಡಬ್ಬಿಂಗ್ ಮಾಡಲು ಅಭಿಮಾನ್ ಸ್ಟುಡಿಯೋಗೆ ಹೋಗಿದ್ದರು. ಈ ಹಿನ್ನೆಲೆ ಶ್ರೀನಿವಾಸ್ ನಿರಾಶೆಯಿಂದ ತಮ್ಮ ಮನೆಗೆ ತೆರಳಿದ್ದಾನೆ.

Kidney failure to darshan fan
ದರ್ಶನ್​ ಅಭಿಮಾನಿಗೆ ಕಿಡ್ನಿ ವೈಫಲ್ಯ

ಶ್ರೀನಿವಾಸ್ ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿಯಾಗಿದ್ದು, ಈತನಿಗೆ ಎರಡೂ ಕಿಡ್ನಿಗಳು ವೈಫಲ್ಯವಾಗಿವೆ. ಶ್ರೀನಿವಾಸ್​ಗೆ ಅವರ ತಂದೆಯೇ ಕಿಡ್ನಿ ಕೊಡಲು ಮುಂದಾಗಿದ್ದು, ನಾಳೆ ಅಥವಾ ನಾಡಿದ್ದು ಆಪರೇಷನ್ ನಡೆಯಲಿದೆ. ಇನ್ನು, ಅಭಿಮಾನಿಗಳ ಕಷ್ಟಕ್ಕೆ ಹೆಗಲು ಕೊಡುವ ದರ್ಶನ್ ಈ ಅಭಿಮಾನಿಗೆ ಯಾವ ರೀತಿ ಸಹಾಯ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ ಶ್ರೀನಿವಾಸ್​ ಎಂಬಾತ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ. ಹೀಗಾಗಿ ದಚ್ಚು ಬಳಿ ಸಹಾಯ ಕೇಳಲು ಆ್ಯಂಬುಲೆನ್ಸ್​ನಲ್ಲೇ ದರ್ಶನ್ ಮನೆಗೆ ಬಂದಿದ್ದ. ಆದರೆ ದರ್ಶನ್​ ಅವರು ಸಿಗದ ಕಾರಣ ನಿರಾಶೆಯಿಂದಲೇ ಮನೆಗೆ ಹಿಂದಿರುಗಿದ.

ಆ್ಯಂಬುಲೆನ್ಸ್​ನಲ್ಲೇ ದರ್ಶನ್ ಮನೆಗೆ ಬಂದ ರೋಗಿ

ಅಭಿಮಾನಿ ಶ್ರೀನಿವಾಸನು ದರ್ಶನ್ ಮನೆ ಬಳಿ ಬಂದಾಗ ಅವರು ರಾಬರ್ಟ್ ಚಿತ್ರದ ಡಬ್ಬಿಂಗ್ ಮಾಡಲು ಅಭಿಮಾನ್ ಸ್ಟುಡಿಯೋಗೆ ಹೋಗಿದ್ದರು. ಈ ಹಿನ್ನೆಲೆ ಶ್ರೀನಿವಾಸ್ ನಿರಾಶೆಯಿಂದ ತಮ್ಮ ಮನೆಗೆ ತೆರಳಿದ್ದಾನೆ.

Kidney failure to darshan fan
ದರ್ಶನ್​ ಅಭಿಮಾನಿಗೆ ಕಿಡ್ನಿ ವೈಫಲ್ಯ

ಶ್ರೀನಿವಾಸ್ ಬೆಂಗಳೂರಿನ ಕುರುಬರಹಳ್ಳಿಯ ನಿವಾಸಿಯಾಗಿದ್ದು, ಈತನಿಗೆ ಎರಡೂ ಕಿಡ್ನಿಗಳು ವೈಫಲ್ಯವಾಗಿವೆ. ಶ್ರೀನಿವಾಸ್​ಗೆ ಅವರ ತಂದೆಯೇ ಕಿಡ್ನಿ ಕೊಡಲು ಮುಂದಾಗಿದ್ದು, ನಾಳೆ ಅಥವಾ ನಾಡಿದ್ದು ಆಪರೇಷನ್ ನಡೆಯಲಿದೆ. ಇನ್ನು, ಅಭಿಮಾನಿಗಳ ಕಷ್ಟಕ್ಕೆ ಹೆಗಲು ಕೊಡುವ ದರ್ಶನ್ ಈ ಅಭಿಮಾನಿಗೆ ಯಾವ ರೀತಿ ಸಹಾಯ ಮಾಡ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.