ETV Bharat / state

ರಾಜ್ಯದಲ್ಲಿ ಕೊರೊನಾ ರಣಕೇಕೆ :10 ಸಾವಿರ ಸೋಂಕಿತರು ಪತ್ತೆ

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ. ಇವರಲ್ಲಿ‌ 10,228 ಮ‌ಂದಿ ಗುಣಮುಖರಾಗಿದ್ದು 5,33,074 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸಕ್ರಿಯ 1,15,151 ಪ್ರಕರಣಗಳು ಇದ್ದು 848 ಮಂದಿ ತೀವ್ರ ನಿಗಾ ಘಟಕದಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ.

author img

By

Published : Oct 6, 2020, 9:30 PM IST

Updated : Oct 6, 2020, 10:07 PM IST

karnataka today corona report
ರಾಜ್ಯ, ರಾಜಧಾನಿಯಲ್ಲಿ ಕೊರೊನಾ ರಣಕೇಕೆ : ಇಲ್ಲಿದೆ ಸೋಂಕಿತ ಸಂಖ್ಯೆ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ‌‌ ಇದ್ದು, ಇಂದು 9993 ಜನರಿಗೆ ಸೋಂಕು ದೃಢವಾಗಿದೆ.

ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ. ಇವರಲ್ಲಿ‌ 10,228 ಮ‌ಂದಿ ಗುಣಮುಖರಾಗಿದ್ದು, 5,33,074 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸಕ್ರಿಯ 1,15,151 ಪ್ರಕರಣಗಳು ಇದ್ದು 848 ಮಂದಿ ತೀವ್ರ ನಿಗಾ ಘಟಕದಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾಗೆ 91 ಮಂದಿ ಬಲಿಯಾಗಿದ್ದು, ಈ ಮೂಲಕ ಸಾವಿನ‌ ಸಂಖ್ಯೆ 9,461 ಕ್ಕೆ ಏರಿಕೆ ಆಗಿದೆ.‌ 19 ಸೋಂಕಿತರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ. 2,18,806 ಕಳೆದ 7 ದಿನಗಳಲ್ಲಿ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ. ಪ್ರಾಥಮಿಕ ಹಂತದಲ್ಲಿ 5,04,042 ದ್ವಿತೀಯ ಹಂತದಲ್ಲಿ 4,43,686 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ. ವಿಮಾನ ನಿಲ್ದಾಣದಿಂದ 734 ಪ್ರಯಾಣಿಕರು ಆಗಮಿಸಿದ್ದು, ಅವರನ್ನೆಲ್ಲ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.‌

ಬೆಂಗಳೂರಿನಲ್ಲಿ ಅಬ್ಬರಿಸ್ತಿದ್ದಾಳೆ ಹೆಮ್ಮಾರಿ ಕೊರೊನಾ :

ಬೆಂಗಳೂರು ನಗರದಲ್ಲಿ ಕೊರೊನಾ ನಿಯಂತ್ರಣ ಮೀರಿ ಹರಡುತ್ತಿದ್ದು, ಒಂದೇ ದಿನ 5012 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

34 ಮಂದಿ ಮೃತಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 55,736 ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 5012ಕ್ಕೆ ಏರಿಕೆಯಾಗಿದೆ.
ಇಂದು 3354 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,98,369 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಅಲ್ಲದೇ ಈವರೆಗೆ 3,135 ಮಂದಿ ಮೃತಪಟ್ಟಿದ್ದು, 302 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಸೆಂಬರ್​​​ವರೆಗೆ ಬಾಧಿಸಲಿದೆಯಂತೆ ಕೊರೊನಾ ಹೆಮ್ಮಾರಿ

ಬೆಂಗಳೂರಿನ ಜನರು ಇನ್ನಷ್ಟು ಹೆಚ್ಚು ಜಾಗೃತೆ ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಮಹಾಮಾರಿ ಕೊರೊನಾಗೆ ತಜ್ಞರೇ ಬೆಚ್ಚಿಬಿದಿದ್ದಾರೆ. ಡಿಸೆಂಬರ್​​ವರೆಗೂ ಮತ್ತಷ್ಟು ಬಾಧಿಸಲಿದೆಯಂತೆ. ಸೋಂಕಿತರ ಸಂಖ್ಯೆಯಷ್ಟೇ ಅಲ್ಲ ಸಾವಿನ ಸಂಖ್ಯೆಯು ಏರಿಕೆ ಆಗಲಿದೆ.. ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಆರ್ಭಟ ಮತ್ತಷ್ಟು‌ ಜಾಸ್ತಿಯಾಗಿದೆ. ಕೇವಲ 10 ದಿನಗಳಲ್ಲಿ 35,599 ಕೇಸ್ ಪತ್ತೆ ಯಾಗಿದ್ದು, 280 ಸೋಂಕಿತರು ಬಲಿಯಾಗಿದ್ದಾರೆ.

ಕೋವಿಡ್ ಪರೀಕ್ಷೆ ನಿರಾಕರಿಸುವಂತಿಲ್ಲ : ಕಡ್ಡಾಯ ಪರೀಕ್ಷೆಗೆ ಆರೋಗ್ಯ ಇಲಾಖೆ ಆದೇಶ

ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಸರ್ಕಾರವು ಕೈಗೊಂಡಿರುವ ಪ್ರಯತ್ನಕ್ಕೆ ತೀವ್ರ ಹಿನ್ನೆಡೆಯಾಗುತ್ತಿದೆ.. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ಓಂ ಪ್ರಕಾಶ್ ಪಾಟೀಲ್ ಹೊಸ ಆದೇಶ ಹೊರಡಿಸಿದ್ದಾರೆ. ಯಾವ ವ್ಯಕ್ತಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ತಿಳಿಸಲಾಗಿದೆಯೋ ಅಂತಹ ಎಲ್ಲ ವ್ಯಕ್ತಿಗಳು ಕಡ್ಡಾಯವಾಗಿ ಪರೀಕ್ಷಗೊಳಪಡತಕ್ಕದ್ದು. ಅದರಿಂದ ಕೋವಿಡ್ ಸೋಂಕು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಲೇ‌‌ ಇದ್ದು, ಇಂದು 9993 ಜನರಿಗೆ ಸೋಂಕು ದೃಢವಾಗಿದೆ.

ಇದೀಗ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 6,57,705ಕ್ಕೆ ಏರಿಕೆಯಾಗಿದೆ. ಇವರಲ್ಲಿ‌ 10,228 ಮ‌ಂದಿ ಗುಣಮುಖರಾಗಿದ್ದು, 5,33,074 ಮಂದಿ ಆಸ್ಪತ್ರೆಯಿಂದ ಡಿಸ್ಜಾರ್ಜ್ ಆಗಿದ್ದಾರೆ. ಸಕ್ರಿಯ 1,15,151 ಪ್ರಕರಣಗಳು ಇದ್ದು 848 ಮಂದಿ ತೀವ್ರ ನಿಗಾ ಘಟಕದಲ್ಲಿ ‌ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೊರೊನಾಗೆ 91 ಮಂದಿ ಬಲಿಯಾಗಿದ್ದು, ಈ ಮೂಲಕ ಸಾವಿನ‌ ಸಂಖ್ಯೆ 9,461 ಕ್ಕೆ ಏರಿಕೆ ಆಗಿದೆ.‌ 19 ಸೋಂಕಿತರು ಅನ್ಯಕಾರಣಕ್ಕೆ ಮೃತರಾಗಿದ್ದಾರೆ. 2,18,806 ಕಳೆದ 7 ದಿನಗಳಲ್ಲಿ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ. ಪ್ರಾಥಮಿಕ ಹಂತದಲ್ಲಿ 5,04,042 ದ್ವಿತೀಯ ಹಂತದಲ್ಲಿ 4,43,686 ಜನರು ಸೋಂಕಿತರ ಸಂಪರ್ಕದಲ್ಲಿ ಇದ್ದಾರೆ. ವಿಮಾನ ನಿಲ್ದಾಣದಿಂದ 734 ಪ್ರಯಾಣಿಕರು ಆಗಮಿಸಿದ್ದು, ಅವರನ್ನೆಲ್ಲ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.‌

ಬೆಂಗಳೂರಿನಲ್ಲಿ ಅಬ್ಬರಿಸ್ತಿದ್ದಾಳೆ ಹೆಮ್ಮಾರಿ ಕೊರೊನಾ :

ಬೆಂಗಳೂರು ನಗರದಲ್ಲಿ ಕೊರೊನಾ ನಿಯಂತ್ರಣ ಮೀರಿ ಹರಡುತ್ತಿದ್ದು, ಒಂದೇ ದಿನ 5012 ಜನರಲ್ಲಿ ಪಾಸಿಟಿವ್ ದೃಢಪಟ್ಟಿದೆ.

34 ಮಂದಿ ಮೃತಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 55,736 ಕ್ಕೆ ಏರಿಕೆಯಾಗಿದೆ. ಅಲ್ಲದೇ ಒಟ್ಟಾರೆ ಕೊರೊನಾ ಸೋಂಕಿತರ ಸಂಖ್ಯೆ 5012ಕ್ಕೆ ಏರಿಕೆಯಾಗಿದೆ.
ಇಂದು 3354 ಮಂದಿ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 1,98,369 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಅಲ್ಲದೇ ಈವರೆಗೆ 3,135 ಮಂದಿ ಮೃತಪಟ್ಟಿದ್ದು, 302 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಸೆಂಬರ್​​​ವರೆಗೆ ಬಾಧಿಸಲಿದೆಯಂತೆ ಕೊರೊನಾ ಹೆಮ್ಮಾರಿ

ಬೆಂಗಳೂರಿನ ಜನರು ಇನ್ನಷ್ಟು ಹೆಚ್ಚು ಜಾಗೃತೆ ವಹಿಸಬೇಕಾದ ಸನ್ನಿವೇಶ ಸೃಷ್ಟಿಯಾಗಲಿದೆ. ಮಹಾಮಾರಿ ಕೊರೊನಾಗೆ ತಜ್ಞರೇ ಬೆಚ್ಚಿಬಿದಿದ್ದಾರೆ. ಡಿಸೆಂಬರ್​​ವರೆಗೂ ಮತ್ತಷ್ಟು ಬಾಧಿಸಲಿದೆಯಂತೆ. ಸೋಂಕಿತರ ಸಂಖ್ಯೆಯಷ್ಟೇ ಅಲ್ಲ ಸಾವಿನ ಸಂಖ್ಯೆಯು ಏರಿಕೆ ಆಗಲಿದೆ.. ಕಳೆದ ಹತ್ತು ದಿನಗಳಿಂದ ಬೆಂಗಳೂರಿನಲ್ಲಿ ಆರ್ಭಟ ಮತ್ತಷ್ಟು‌ ಜಾಸ್ತಿಯಾಗಿದೆ. ಕೇವಲ 10 ದಿನಗಳಲ್ಲಿ 35,599 ಕೇಸ್ ಪತ್ತೆ ಯಾಗಿದ್ದು, 280 ಸೋಂಕಿತರು ಬಲಿಯಾಗಿದ್ದಾರೆ.

ಕೋವಿಡ್ ಪರೀಕ್ಷೆ ನಿರಾಕರಿಸುವಂತಿಲ್ಲ : ಕಡ್ಡಾಯ ಪರೀಕ್ಷೆಗೆ ಆರೋಗ್ಯ ಇಲಾಖೆ ಆದೇಶ

ಕೋವಿಡ್ ಸೋಂಕಿನ ನಿಯಂತ್ರಣಕ್ಕೆ ಸರ್ಕಾರವು ಕೈಗೊಂಡಿರುವ ಪ್ರಯತ್ನಕ್ಕೆ ತೀವ್ರ ಹಿನ್ನೆಡೆಯಾಗುತ್ತಿದೆ.. ಹೀಗಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಾದ ಓಂ ಪ್ರಕಾಶ್ ಪಾಟೀಲ್ ಹೊಸ ಆದೇಶ ಹೊರಡಿಸಿದ್ದಾರೆ. ಯಾವ ವ್ಯಕ್ತಿಗಳನ್ನು ಕೋವಿಡ್ ಪರೀಕ್ಷೆಗೊಳಪಡಿಸಲು ತಿಳಿಸಲಾಗಿದೆಯೋ ಅಂತಹ ಎಲ್ಲ ವ್ಯಕ್ತಿಗಳು ಕಡ್ಡಾಯವಾಗಿ ಪರೀಕ್ಷಗೊಳಪಡತಕ್ಕದ್ದು. ಅದರಿಂದ ಕೋವಿಡ್ ಸೋಂಕು ನಿಯಂತ್ರಿಸಬಹುದು ಎಂದು ತಿಳಿಸಿದ್ದಾರೆ.

Last Updated : Oct 6, 2020, 10:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.