ETV Bharat / state

ರಾಜ್ಯಪಾಲ ಗೆಹ್ಲೋಟ್‌ ಕಾರು ಚಾಲಕ ಹೃದಯಾಘಾತದಿಂದ ಸಾವು

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಕರೆದೊಯ್ಯಲು ಬಂದಿದ್ದ ಕಾರು ಚಾಲಕ ನಿನ್ನೆ ತಡರಾತ್ರಿ ಹೃದಯಾಘಾತದಿಂದ ಮೃತಪಟ್ಟರು.

author img

By

Published : Dec 11, 2022, 12:18 PM IST

ರಾಜಭವನ
ರಾಜಭವನ

ದೇವನಹಳ್ಳಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಅವರನ್ನು ಏರ್ಪೋರ್ಟ್‌ನಿಂದ ಕರೆದೊಯ್ಯಲು‌ ಬಂದಿದ್ದ ಅವರ ಕಾರು ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರವಿಕುಮಾರ್ ಎಸ್. ಕಾಳೆ ಮೃತರು.

ಹುಬ್ಬಳ್ಳಿಯಿಂದ ತಡರಾತ್ರಿ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು‌ ಆಗಮಿಸಿದ್ದರು. ಅವರನ್ನು ಕರೆದೊಯ್ಯಲು ರವಿಕುಮಾರ್ ಬಂದಿದ್ದರು. ರಾಜ್ಯಪಾಲರು ಏರ್​ಪೋರ್ಟ್​ಗೆ ಬಂದು ವಿಐಪಿ ಲಾಂಜ್​ನಲ್ಲಿರುವಾಗ ಕಾರು ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ಹೃದಯಾಘಾತವಾಗಿ ಕಾರಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಂಬ್ಯುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ದೇವನಹಳ್ಳಿ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್​​ ಅವರನ್ನು ಏರ್ಪೋರ್ಟ್‌ನಿಂದ ಕರೆದೊಯ್ಯಲು‌ ಬಂದಿದ್ದ ಅವರ ಕಾರು ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರವಿಕುಮಾರ್ ಎಸ್. ಕಾಳೆ ಮೃತರು.

ಹುಬ್ಬಳ್ಳಿಯಿಂದ ತಡರಾತ್ರಿ ವಿಮಾನ ನಿಲ್ದಾಣಕ್ಕೆ ರಾಜ್ಯಪಾಲರು‌ ಆಗಮಿಸಿದ್ದರು. ಅವರನ್ನು ಕರೆದೊಯ್ಯಲು ರವಿಕುಮಾರ್ ಬಂದಿದ್ದರು. ರಾಜ್ಯಪಾಲರು ಏರ್​ಪೋರ್ಟ್​ಗೆ ಬಂದು ವಿಐಪಿ ಲಾಂಜ್​ನಲ್ಲಿರುವಾಗ ಕಾರು ಚಾಲಕನಿಗೆ ಎದೆನೋವು ಕಾಣಿಸಿಕೊಂಡಿದೆ. ಹೃದಯಾಘಾತವಾಗಿ ಕಾರಲ್ಲಿಯೇ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಆಂಬ್ಯುಲೆನ್ಸ್​​ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಬೇಕು: ರಾಜ್ಯಪಾಲ​ ಗೆಹ್ಲೋಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.