ETV Bharat / state

ಚುನಾವಣೆಯಲ್ಲಿ ಅಣ್ಣ-ತಮ್ಮಂದಿರ ಸ್ಪರ್ಧೆ: ಗೆದ್ದವರಾರು, ಸೋತವರಾರು?

author img

By

Published : May 13, 2023, 9:24 AM IST

Updated : May 13, 2023, 6:27 PM IST

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸಾಕಷ್ಟು ಸಹೋದರರು ಸ್ಪರ್ಧಿಸಿದ್ದು ಅವರ ಗೆಲುವು-ಸೋಲಿನ ಫಲಿತಾಂಶ ವಿವರ ಹೀಗಿದೆ..

ಅಣ್ಣ-ತಮ್ಮಂದಿರ ಸ್ಪರ್ಧೆ
ಅಣ್ಣ-ತಮ್ಮಂದಿರ ಸ್ಪರ್ಧೆ

ಬೆಂಗಳೂರು: ಮಾಜಿ ಸಿಎಂ ಧರ್ಮಸಿಂಗ್ ಮಕ್ಕಳಾದ ಅಜಯ್​​ ಸಿಂಗ್​​​​ ಹಾಗೂ ವಿಜಯ್​ ಸಿಂಗ್​ ಇಬ್ಬರಿಗೂ ಈ ಬಾರಿ ಕಾಂಗ್ರೆಸ್​​​​ ಟಿಕೆಟ್​ ನೀಡಿತ್ತು. ಜೇವರ್ಗಿಯಲ್ಲಿ ಅಜಯ್​ ಸಿಂಗ್ ಎರಡು ಬಾರಿ ಗೆದ್ದಿದ್ದು, ಈ ಬಾರಿಯೂ 10,000 ಮತಗಳ ಅಂತರದಿಂದ ಜೆಡಿಎಸ್​ನ ದೊಡ್ಡಪ್ಪ ಗೌಡ ವಿರುದ್ಧ ಗೆಲುವು ಸಾಧಿಸಿದರು. ಧರ್ಮಸಿಂಗ್ ಅವರ ಇನ್ನೊಬ್ಬ ಪುತ್ರ ವಿಜಯ್​ ಸಿಂಗ್​​ ಮೊದಲ ಬಾರಿಗೆ ಬಸವ ಕಲ್ಯಾಣದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಶರಣು ಪಾಟೀಲ್​ ಸಲಗಾರ್​ ವಿರುದ್ಧ 14,415 ಅಂತರದ ಮತಗಳಿಂದ ಸೋಲು ಕಂಡಿದ್ದಾರೆ.

ಬಂಗಾರಪ್ಪ ಸಹೋದರರು: ಮಾಜಿ ಸಿಎಂ ಸಾರೆಕೊಪ್ಪ ಬಂಗಾರಪ್ಪ ಅವರ ಮಕ್ಕಳಾದ ಕುಮಾರ್​ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಕಾಂಗ್ರೆಸ್​ನಿಂದ ಸ್ಪರ್ಧಿಸಿರುವ ಮಧು ಬಂಗಾರಪ್ಪ 44,262 ಮತಗಳ ಅಂತರದಿಂದ ಬಿಜೆಪಿಯ ಸ್ಪರ್ಧಿ, ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಹೆಚ್​ಡಿಕೆ ಸಹೋದರರು: ಚನ್ನಪಟ್ಟಣದಿಂದ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಯ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ವಿರುದ್ಧ 13,601 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್​ಡಿಕೆ ಸಹೋದರ ಹೆಚ್​.ಡಿ.ರೇವಣ್ಣ ಕಾಂಗ್ರೆಸ್​​​ ಅಭ್ಯರ್ಥಿ ಶ್ರೇಯಸ್​​ ಎಂ.ಪಾಟೀಲ್​ ವಿರುದ್ಧ 2,758 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈಗಾಗಲೇ 6 ಸಲ ಗೆದ್ದಿರುವ ರೇವಣ್ಣ ಈ ಗೆಲುವಿನಿಂದ 7ನೇ ಬಾರಿಗೆ ಅದೃಷ್ಟ ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ.

ಜಾರಕಿಹೋಳಿ ಸಹೋದರರು: ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಹೊಂದಿರುವ ಜಾರಕಿಹೊಳಿ ಕುಟುಂಬದ ಸಹೋದರರು ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿದ್ದಾರೆ. ಕಾಂಗ್ರೆಸ್​ ಶಾಸಕ ಸತೀಶ್​ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಬಸವರಾಜ​ ಹೂಂಡ್ರಿ ವಿರುದ್ಧ57,046 ಮತಗಳ ಅಂತರದಿಂದ ಜಯ ಸಾಧಿಸಿದರು. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು ಬಿಜೆಪಿಯಿಂದ ಗೋಕಾಕ್​ನಲ್ಲಿ ಸ್ಪರ್ಧಿಸಿ, ಕಾಂಗ್ರೆಸ್​ ಅಭ್ಯರ್ಥಿ ಮಹಾಂತೇಶ್ ಕಡಾಡಿ ವಿರುದ್ಧ 24,637 ಮತಗಳ ಅಂತರದಿಂದ ಗೆದ್ದರು. ಬಾಲಚಂದ್ರ ಜಾರಕಿಹೊಳಿ ಕೂಡ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್​ನ ಅರವಿಂದ್​ ಮಹಾದೇವ್​ ರಾವ್ ದಳವಾಯಿ ವಿರುದ್ದ 22,761 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಚುನಾವಣಾ ಕಣದಲ್ಲಿ ರೆಡ್ಡಿ ಬ್ರದರ್ಸ್: ಬಳ್ಳಾರಿ ಜಿಲ್ಲೆಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ರೆಡ್ಡಿ ಕುಟುಂಬಸ್ಥರು ಚುನಾವಣಾ ಅಖಾಡದಲ್ಲೂ ಸ್ಪರ್ಧಿಗಳಾಗಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈ ಬಾರಿಯ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಪಕ್ಷ ಕಟ್ಟಿ ಕಣಕ್ಕಿಳಿದಿದ್ದಾರೆ. ಗಂಗಾವತಿಯಲ್ಲಿ ಸ್ಪರ್ಧಿಸಿರುವ ಅವರು ಕಾಂಗ್ರೆಸ್​ನ ಇಕ್ಬಾಲ್​ ಅನ್ಸಾರಿ ವಿರುದ್ಧ 8,117 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ. ಮತ್ತೊಂದಡೆ, ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಶಾಸಕ ಹಾಗು ಜನಾರ್ದನ ರೆಡ್ಡಿ ಸಹೋದರ ಗಾಲಿ ಸೋಮಶೇಖರ್ ರೆಡ್ಡಿ ಅವರು ಕಾಂಗ್ರೆಸ್​ ಅಭ್ಯರ್ಥಿ ನಾರಾ ಭರತ್​ ರೆಡ್ಡಿ ವಿರುದ್ಧ 49,049 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಇವರ ಸೊಸೆ ಲಕ್ಷ್ಮಿ ಅರುಣಾ ಕೆಆರ್‌ಪಿಪಿಯಿಂದ ಎದುರಾಳಿಯಾಗಿದ್ದರು. 48118 ಮತಗಳು ಪಡೆದುಕೊಂಡು ಸೋಲನುಭವಿಸಿದರು.

ಇದನ್ನೂ ಓದಿ: ಮತ ಪ್ರಭುವಿನ ಮಹಾತೀರ್ಪು! 'ಕೈ' ವಶವಾದ ಕರ್ನಾಟಕ - ಬಿಜೆಪಿಗೆ ಭಾರಿ ಮುಖಭಂಗ ​

ಬೆಂಗಳೂರು: ಮಾಜಿ ಸಿಎಂ ಧರ್ಮಸಿಂಗ್ ಮಕ್ಕಳಾದ ಅಜಯ್​​ ಸಿಂಗ್​​​​ ಹಾಗೂ ವಿಜಯ್​ ಸಿಂಗ್​ ಇಬ್ಬರಿಗೂ ಈ ಬಾರಿ ಕಾಂಗ್ರೆಸ್​​​​ ಟಿಕೆಟ್​ ನೀಡಿತ್ತು. ಜೇವರ್ಗಿಯಲ್ಲಿ ಅಜಯ್​ ಸಿಂಗ್ ಎರಡು ಬಾರಿ ಗೆದ್ದಿದ್ದು, ಈ ಬಾರಿಯೂ 10,000 ಮತಗಳ ಅಂತರದಿಂದ ಜೆಡಿಎಸ್​ನ ದೊಡ್ಡಪ್ಪ ಗೌಡ ವಿರುದ್ಧ ಗೆಲುವು ಸಾಧಿಸಿದರು. ಧರ್ಮಸಿಂಗ್ ಅವರ ಇನ್ನೊಬ್ಬ ಪುತ್ರ ವಿಜಯ್​ ಸಿಂಗ್​​ ಮೊದಲ ಬಾರಿಗೆ ಬಸವ ಕಲ್ಯಾಣದಿಂದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯ ಶರಣು ಪಾಟೀಲ್​ ಸಲಗಾರ್​ ವಿರುದ್ಧ 14,415 ಅಂತರದ ಮತಗಳಿಂದ ಸೋಲು ಕಂಡಿದ್ದಾರೆ.

ಬಂಗಾರಪ್ಪ ಸಹೋದರರು: ಮಾಜಿ ಸಿಎಂ ಸಾರೆಕೊಪ್ಪ ಬಂಗಾರಪ್ಪ ಅವರ ಮಕ್ಕಳಾದ ಕುಮಾರ್​ ಬಂಗಾರಪ್ಪ ಮತ್ತು ಮಧು ಬಂಗಾರಪ್ಪ ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿಗಳಾಗಿದ್ದರು. ಕಾಂಗ್ರೆಸ್​ನಿಂದ ಸ್ಪರ್ಧಿಸಿರುವ ಮಧು ಬಂಗಾರಪ್ಪ 44,262 ಮತಗಳ ಅಂತರದಿಂದ ಬಿಜೆಪಿಯ ಸ್ಪರ್ಧಿ, ಸಹೋದರ ಕುಮಾರ ಬಂಗಾರಪ್ಪ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಹೆಚ್​ಡಿಕೆ ಸಹೋದರರು: ಚನ್ನಪಟ್ಟಣದಿಂದ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿಯ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್​ ವಿರುದ್ಧ 13,601 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಹೊಳೆನರಸೀಪುರ ಕ್ಷೇತ್ರದಿಂದ ಸ್ಪರ್ಧಿಸಿರುವ ಹೆಚ್​ಡಿಕೆ ಸಹೋದರ ಹೆಚ್​.ಡಿ.ರೇವಣ್ಣ ಕಾಂಗ್ರೆಸ್​​​ ಅಭ್ಯರ್ಥಿ ಶ್ರೇಯಸ್​​ ಎಂ.ಪಾಟೀಲ್​ ವಿರುದ್ಧ 2,758 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. ಈಗಾಗಲೇ 6 ಸಲ ಗೆದ್ದಿರುವ ರೇವಣ್ಣ ಈ ಗೆಲುವಿನಿಂದ 7ನೇ ಬಾರಿಗೆ ಅದೃಷ್ಟ ಪರೀಕ್ಷೆಯಲ್ಲಿ ಪಾಸ್​ ಆಗಿದ್ದಾರೆ.

ಜಾರಕಿಹೋಳಿ ಸಹೋದರರು: ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಹಿಡಿತ ಹೊಂದಿರುವ ಜಾರಕಿಹೊಳಿ ಕುಟುಂಬದ ಸಹೋದರರು ಚುನಾವಣಾ ಅಖಾಡದಲ್ಲಿ ಗಮನ ಸೆಳೆದಿದ್ದಾರೆ. ಕಾಂಗ್ರೆಸ್​ ಶಾಸಕ ಸತೀಶ್​ ಜಾರಕಿಹೊಳಿ ಯಮಕನಮರಡಿ ಕ್ಷೇತ್ರದಲ್ಲಿ ಸ್ಪರ್ಧಿಸಿ, ಬಿಜೆಪಿ ಅಭ್ಯರ್ಥಿ ಬಸವರಾಜ​ ಹೂಂಡ್ರಿ ವಿರುದ್ಧ57,046 ಮತಗಳ ಅಂತರದಿಂದ ಜಯ ಸಾಧಿಸಿದರು. ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು ಬಿಜೆಪಿಯಿಂದ ಗೋಕಾಕ್​ನಲ್ಲಿ ಸ್ಪರ್ಧಿಸಿ, ಕಾಂಗ್ರೆಸ್​ ಅಭ್ಯರ್ಥಿ ಮಹಾಂತೇಶ್ ಕಡಾಡಿ ವಿರುದ್ಧ 24,637 ಮತಗಳ ಅಂತರದಿಂದ ಗೆದ್ದರು. ಬಾಲಚಂದ್ರ ಜಾರಕಿಹೊಳಿ ಕೂಡ ಅರಭಾವಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್​ನ ಅರವಿಂದ್​ ಮಹಾದೇವ್​ ರಾವ್ ದಳವಾಯಿ ವಿರುದ್ದ 22,761 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.

ಚುನಾವಣಾ ಕಣದಲ್ಲಿ ರೆಡ್ಡಿ ಬ್ರದರ್ಸ್: ಬಳ್ಳಾರಿ ಜಿಲ್ಲೆಯಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿರುವ ರೆಡ್ಡಿ ಕುಟುಂಬಸ್ಥರು ಚುನಾವಣಾ ಅಖಾಡದಲ್ಲೂ ಸ್ಪರ್ಧಿಗಳಾಗಿದ್ದಾರೆ. ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈ ಬಾರಿಯ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಎಂಬ ಪಕ್ಷ ಕಟ್ಟಿ ಕಣಕ್ಕಿಳಿದಿದ್ದಾರೆ. ಗಂಗಾವತಿಯಲ್ಲಿ ಸ್ಪರ್ಧಿಸಿರುವ ಅವರು ಕಾಂಗ್ರೆಸ್​ನ ಇಕ್ಬಾಲ್​ ಅನ್ಸಾರಿ ವಿರುದ್ಧ 8,117 ಮತಗಳ ಅಂತರದಿಂದ ಗೆಲವು ದಾಖಲಿಸಿದ್ದಾರೆ. ಮತ್ತೊಂದಡೆ, ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಬಿಜೆಪಿ ಶಾಸಕ ಹಾಗು ಜನಾರ್ದನ ರೆಡ್ಡಿ ಸಹೋದರ ಗಾಲಿ ಸೋಮಶೇಖರ್ ರೆಡ್ಡಿ ಅವರು ಕಾಂಗ್ರೆಸ್​ ಅಭ್ಯರ್ಥಿ ನಾರಾ ಭರತ್​ ರೆಡ್ಡಿ ವಿರುದ್ಧ 49,049 ಸಾವಿರ ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಇದೇ ಕ್ಷೇತ್ರದಲ್ಲಿ ಇವರ ಸೊಸೆ ಲಕ್ಷ್ಮಿ ಅರುಣಾ ಕೆಆರ್‌ಪಿಪಿಯಿಂದ ಎದುರಾಳಿಯಾಗಿದ್ದರು. 48118 ಮತಗಳು ಪಡೆದುಕೊಂಡು ಸೋಲನುಭವಿಸಿದರು.

ಇದನ್ನೂ ಓದಿ: ಮತ ಪ್ರಭುವಿನ ಮಹಾತೀರ್ಪು! 'ಕೈ' ವಶವಾದ ಕರ್ನಾಟಕ - ಬಿಜೆಪಿಗೆ ಭಾರಿ ಮುಖಭಂಗ ​

Last Updated : May 13, 2023, 6:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.