ETV Bharat / state

ಬದುಕಿನ ಪಯಣ ಮುಗಿಸಿದ ಖ್ಯಾತ ಗೀತ ರಚನೆಕಾರ ತಂಗಾಳಿ ನಾಗರಾಜ್! - Thangali Nagaraju Passed away

ಕನ್ನಡ ಚಿತ್ರರಂಗದ ಪ್ರಖ್ಯಾತ ಗೀತ ರಚನೆಕಾರ ತಂಗಾಳಿ ನಾಗರಾಜ್ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ‌.

Kannada Lyrics writer Thangali Nagaraju Passed away
ಬದುಕಿನ ಪಯಣ ಮುಗಿಸಿದ ಖ್ಯಾತ ಗೀತರಚನೆಕಾರ ತಂಗಾಳಿ ನಾಗರಾಜ್!
author img

By

Published : Sep 12, 2020, 8:14 PM IST

ಕನ್ನಡ ಚಿತ್ರರಂಗದ ಪ್ರಖ್ಯಾತ ಗೀತ ರಚನೆಕಾರ ತಂಗಾಳಿ ನಾಗರಾಜ್ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ‌. ತಂಗಾಳಿ ಎಲ್ಲಿಂದ ಬೀಸುವೆ ಹಾಡಿನಿಂದ‌ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದ ನಾಗರಾಜ್, ಆ ಬಳಿಕ ತಂಗಾಳಿ ನಾಗರಾಜ್ ಎಂದೇ ಪ್ರಖ್ಯಾತಿ ಹೊಂದಿದ್ದರು.

ಕಲಾಸಿಪಾಳ್ಯ ಸಿನಿಮಾದಲ್ಲಿ ಧೂಳ್ ಮಗಾ ಧೂಳ್ ಹಾಡು ಸೇರಿದಂತೆ, ಹಲವಾರು ಸಿನಿಮಾಗಳಿಗೆ ಗೀತರಚನೆ ಬರೆದಿರುವ, ತಂಗಾಳಿ ನಾಗರಾಜ್ ಕಳೆದ 15ವರ್ಷಗಳಿಂದ ಚಿತ್ರರಂಗದಲ್ಲಿ ಎಲೆಮರೆ ಕಾಯಿದಂತೆ ಇದ್ರೂ ಕೂಡ ನೂರಾರು ಸೂಪರ್ ಹಿಟ್​​​ ಹಾಡುಗಳನ್ನ ಬರೆದಿದ್ದಾರೆ.

Kannada Lyrics writer Thangali Nagaraju Passed away
ಬದುಕಿನ ಪಯಣ ಮುಗಿಸಿದ ಖ್ಯಾತ ಗೀತರಚನೆಕಾರ ತಂಗಾಳಿ ನಾಗರಾಜ್!

ಸದ್ಯ ತಂಗಾಳಿ ನಾಗರಾಜ್ ನಿಧನದ ಬಗ್ಗೆ ಗೀತರಚನೆಕಾರ ಕವಿರಾಜ್ ಈ ವಿಷ್ಯವನ್ನ ತಮ್ಮ ಫೇಸ್​ಬುಕ್ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ‌. ಇನ್ನು ಕನ್ನಡ ಚಿತ್ರರಂಗದ ಸಾಕಷ್ಟು ಜನ ತಂಗಾಳಿ ನಾಗರಾಜ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಕನ್ನಡ ಚಿತ್ರರಂಗದ ಪ್ರಖ್ಯಾತ ಗೀತ ರಚನೆಕಾರ ತಂಗಾಳಿ ನಾಗರಾಜ್ ಇಂದು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ‌. ತಂಗಾಳಿ ಎಲ್ಲಿಂದ ಬೀಸುವೆ ಹಾಡಿನಿಂದ‌ ಕನ್ನಡ ಚಿತ್ರರಂಗದಲ್ಲಿ ಪ್ರಸಿದ್ಧಿ ಪಡೆದಿದ್ದ ನಾಗರಾಜ್, ಆ ಬಳಿಕ ತಂಗಾಳಿ ನಾಗರಾಜ್ ಎಂದೇ ಪ್ರಖ್ಯಾತಿ ಹೊಂದಿದ್ದರು.

ಕಲಾಸಿಪಾಳ್ಯ ಸಿನಿಮಾದಲ್ಲಿ ಧೂಳ್ ಮಗಾ ಧೂಳ್ ಹಾಡು ಸೇರಿದಂತೆ, ಹಲವಾರು ಸಿನಿಮಾಗಳಿಗೆ ಗೀತರಚನೆ ಬರೆದಿರುವ, ತಂಗಾಳಿ ನಾಗರಾಜ್ ಕಳೆದ 15ವರ್ಷಗಳಿಂದ ಚಿತ್ರರಂಗದಲ್ಲಿ ಎಲೆಮರೆ ಕಾಯಿದಂತೆ ಇದ್ರೂ ಕೂಡ ನೂರಾರು ಸೂಪರ್ ಹಿಟ್​​​ ಹಾಡುಗಳನ್ನ ಬರೆದಿದ್ದಾರೆ.

Kannada Lyrics writer Thangali Nagaraju Passed away
ಬದುಕಿನ ಪಯಣ ಮುಗಿಸಿದ ಖ್ಯಾತ ಗೀತರಚನೆಕಾರ ತಂಗಾಳಿ ನಾಗರಾಜ್!

ಸದ್ಯ ತಂಗಾಳಿ ನಾಗರಾಜ್ ನಿಧನದ ಬಗ್ಗೆ ಗೀತರಚನೆಕಾರ ಕವಿರಾಜ್ ಈ ವಿಷ್ಯವನ್ನ ತಮ್ಮ ಫೇಸ್​ಬುಕ್ ಪೇಜ್​​ನಲ್ಲಿ ಹಂಚಿಕೊಂಡಿದ್ದಾರೆ‌. ಇನ್ನು ಕನ್ನಡ ಚಿತ್ರರಂಗದ ಸಾಕಷ್ಟು ಜನ ತಂಗಾಳಿ ನಾಗರಾಜ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.