ETV Bharat / state

ಕಗ್ಗದಾಸಪುರ ಕೆರೆ ಒತ್ತುವರಿ ತೆರವು: 30 ಕೋಟಿ ಬೆಲೆ ಬಾಳುವ ಜಾಗ ವಶಪಡಿಸಿಕೊಂಡ ಅಧಿಕಾರಿಗಳು

author img

By

Published : Aug 12, 2021, 8:41 PM IST

ಹೈಕೋರ್ಟ್ ಆದೇಶದ ಮೇರೆಗೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕಗ್ಗದಾಸಪುರ ಮತ್ತು ಬೈರಸಂದ್ರ ಕೆರೆ ಒತ್ತುವರಿ ಪ್ರದೇಶದಲ್ಲಿನ 30 ಕೋಟಿ ಬೆಲೆ ಬಾಳುವ ಜಾಗವನ್ನ ಗುರುವಾರ ತೆರವುಗೊಳಿಸಲಾಗಿದೆ.

lake encroachment clear
ಕಗ್ಗದಾಸಪುರ ಕೆರೆ ಒತ್ತುವರಿ ತೆರವು

ಕೆಆರ್​​​​​ಪುರ( ಬೆಂಗಳೂರು): ಕೋರ್ಟ್ ಆದೇಶದಂತೆ ಕಗ್ಗದಾಸಪುರ ಮತ್ತು ಬೈರಸಂದ್ರ ಕೆರೆ ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿದ್ದ ಶಾಲಾ ಕಾಪೌಂಡ್, ಗುಜರಿ ಅಂಗಡಿ, ದೇವಾಲಯವನ್ನು ತೆರವುಗೊಳಿಸಲಾಗಿದೆ. ತೆರವು ಬಳಿಕ ಸುಮಾರು 30 ಕೋಟಿ ಬೆಲೆಬಾಳುವ ಜಾಗವನ್ನು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಹೈಕೋರ್ಟ್ ಅದೇಶದ ಮೇರೆಗೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ತೆರವು ಕಾರ್ಯಾಚರಣೆ ನಡೆಸಿ ಸುಮಾರು 45 ಕೋಟಿಗೂ‌ ಹೆಚ್ಚು ಮೌಲ್ಯದ ಜಾಗವನ್ನು ತಹಶೀಲ್ದಾರ್ ನೇತೃತ್ವದಲ್ಲಿ ವಶಪಡಿಕೊಳ್ಳಲಾಗಿದೆ.

ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

ಎರಡು ದಿನಗಳ‌ ಹಿಂದೆ ಕೆ.ಆರ್. ಪುರ ಕ್ಷೇತ್ರದ ಬಸವನಪುರ ವಾರ್ಡ್​​ನಲ್ಲಿನ ಬಸವನಪುರ ಕೆರೆ ಬಳಿ, ಸ್ಥಳೀಯರ ವಿರೋಧದ ನಡುವೆಯೂ 1 ಎಕರೆ ಜಾಗ ತೆರವು ಮಾಡಿ ವಶಪಡಿಸಿಕೊಂಡು ತಂತಿ ಬೇಲಿಯನ್ನು ಹಾಕಿದರು.

ಇನ್ನು ಇಂದಿನ ತೆರವು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್​ ಅಜಿತ್ ಕುಮಾರ್ ರೈ, ಬೆಂಗಳೂರು ಪೂರ್ವ ತಾಲೂಕಿನ ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೆ ಸೇರುವ ಕಗ್ಗದಾಸಪುರ ಸರ್ವೆ ನಂಬರ್ 141 ಮತ್ತು ಬೈರಸಂದ್ರ ಸರ್ವೆ ನಂಬರ್ 5 ರಲ್ಲಿ ಸುಮಾರು ಎರಡು ಎಕರೆ ಪ್ರದೇಶ ಒತ್ತುವರಿಯಾಗಿತ್ತು. ಇಂದು ಶಿಶು ಗೃಹ ಶಾಲೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್, ಕೆರೆ ಅಂಗಳದಲ್ಲಿನ ಗುಜರಿ ಅಂಗಡಿ ಸೇರಿದಂತೆ 30 ಕೋಟಿ ಮೌಲ್ಯದ ಭೂಮಿಯ ಒತ್ತುವರಿ ತೆರವುಗೊಳಿಸಿ ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಐಶ್ವರ್ಯ ಮತ್ತು ಗೋಲ್ಡ್ ಗಾರ್ಡನ್ ವೀವ್ ಎರಡು ಅಪಾರ್ಟ್ಮೆಂಟ್​ಗಳು ಕೆರೆಯ ಜಾಗ ಒತ್ತುವರಿ ಮಾಡಿದ್ದು ಸ್ಟ್ರಕ್ಚರ್ ಇಂಜಿನಿಯರ್ ಜೊತೆ ಮಾತನಾಡಿ ಹೈಕೋರ್ಟ್​ನಲ್ಲಿ ಕಾಲಾವಕಾಶ ಕೇಳಿರುವ ಕಾರಣ ಮತ್ತು ಜಲಕಂಟೇಶ್ವರ ದೇವಲಯದ ಟ್ರಸ್ಟ್​ನವರು ಕೋರ್ಟಿನಲ್ಲಿ ಸ್ಟೇ ತಂದಿದ್ದು ಇಂದು ತೆರವುಗೊಳಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ತೆರವು ಕಾರ್ಯಾಚರಣೆ ಸಂಪೂರ್ಣ ಮುಗಿದ ನಂತರ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೆರೆ ಅಭಿವೃದ್ಧಿ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಸರ್ಕಾರದಿಂದಲೂ ಸಹ ಕೆಲವು ಜಾಗ ಒತ್ತುವರಿ ಮಾಡಿಕೊಂಡಿದ್ದು , ಮುಂದಿನ ದಿನಗಳಲ್ಲಿ ಅವುಗಳ ಒತ್ತುವರಿಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್​ಗೆ ಕೋರ್ಟ್ ಆದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ರು.

ಕೆಆರ್​​​​​ಪುರ( ಬೆಂಗಳೂರು): ಕೋರ್ಟ್ ಆದೇಶದಂತೆ ಕಗ್ಗದಾಸಪುರ ಮತ್ತು ಬೈರಸಂದ್ರ ಕೆರೆ ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿದ್ದ ಶಾಲಾ ಕಾಪೌಂಡ್, ಗುಜರಿ ಅಂಗಡಿ, ದೇವಾಲಯವನ್ನು ತೆರವುಗೊಳಿಸಲಾಗಿದೆ. ತೆರವು ಬಳಿಕ ಸುಮಾರು 30 ಕೋಟಿ ಬೆಲೆಬಾಳುವ ಜಾಗವನ್ನು ಬಿಬಿಎಂಪಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ.

ಹೈಕೋರ್ಟ್ ಅದೇಶದ ಮೇರೆಗೆ ಬೆಂಗಳೂರು ಪೂರ್ವ ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ತೆರವು ಕಾರ್ಯಾಚರಣೆ ನಡೆಸಿ ಸುಮಾರು 45 ಕೋಟಿಗೂ‌ ಹೆಚ್ಚು ಮೌಲ್ಯದ ಜಾಗವನ್ನು ತಹಶೀಲ್ದಾರ್ ನೇತೃತ್ವದಲ್ಲಿ ವಶಪಡಿಕೊಳ್ಳಲಾಗಿದೆ.

ಕೆರೆ ಒತ್ತುವರಿ ತೆರವು ಕಾರ್ಯಾಚರಣೆ

ಎರಡು ದಿನಗಳ‌ ಹಿಂದೆ ಕೆ.ಆರ್. ಪುರ ಕ್ಷೇತ್ರದ ಬಸವನಪುರ ವಾರ್ಡ್​​ನಲ್ಲಿನ ಬಸವನಪುರ ಕೆರೆ ಬಳಿ, ಸ್ಥಳೀಯರ ವಿರೋಧದ ನಡುವೆಯೂ 1 ಎಕರೆ ಜಾಗ ತೆರವು ಮಾಡಿ ವಶಪಡಿಸಿಕೊಂಡು ತಂತಿ ಬೇಲಿಯನ್ನು ಹಾಕಿದರು.

ಇನ್ನು ಇಂದಿನ ತೆರವು ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್​ ಅಜಿತ್ ಕುಮಾರ್ ರೈ, ಬೆಂಗಳೂರು ಪೂರ್ವ ತಾಲೂಕಿನ ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೆ ಸೇರುವ ಕಗ್ಗದಾಸಪುರ ಸರ್ವೆ ನಂಬರ್ 141 ಮತ್ತು ಬೈರಸಂದ್ರ ಸರ್ವೆ ನಂಬರ್ 5 ರಲ್ಲಿ ಸುಮಾರು ಎರಡು ಎಕರೆ ಪ್ರದೇಶ ಒತ್ತುವರಿಯಾಗಿತ್ತು. ಇಂದು ಶಿಶು ಗೃಹ ಶಾಲೆ ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್, ಕೆರೆ ಅಂಗಳದಲ್ಲಿನ ಗುಜರಿ ಅಂಗಡಿ ಸೇರಿದಂತೆ 30 ಕೋಟಿ ಮೌಲ್ಯದ ಭೂಮಿಯ ಒತ್ತುವರಿ ತೆರವುಗೊಳಿಸಿ ಬಿಬಿಎಂಪಿ ಕೆರೆ ಅಭಿವೃದ್ಧಿ ಪ್ರಾಧಿಕಾರ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನೂ ಐಶ್ವರ್ಯ ಮತ್ತು ಗೋಲ್ಡ್ ಗಾರ್ಡನ್ ವೀವ್ ಎರಡು ಅಪಾರ್ಟ್ಮೆಂಟ್​ಗಳು ಕೆರೆಯ ಜಾಗ ಒತ್ತುವರಿ ಮಾಡಿದ್ದು ಸ್ಟ್ರಕ್ಚರ್ ಇಂಜಿನಿಯರ್ ಜೊತೆ ಮಾತನಾಡಿ ಹೈಕೋರ್ಟ್​ನಲ್ಲಿ ಕಾಲಾವಕಾಶ ಕೇಳಿರುವ ಕಾರಣ ಮತ್ತು ಜಲಕಂಟೇಶ್ವರ ದೇವಲಯದ ಟ್ರಸ್ಟ್​ನವರು ಕೋರ್ಟಿನಲ್ಲಿ ಸ್ಟೇ ತಂದಿದ್ದು ಇಂದು ತೆರವುಗೊಳಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ತಿಳಿಸಿದರು.

ತೆರವು ಕಾರ್ಯಾಚರಣೆ ಸಂಪೂರ್ಣ ಮುಗಿದ ನಂತರ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಕೆರೆ ಅಭಿವೃದ್ಧಿ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು. ಸರ್ಕಾರದಿಂದಲೂ ಸಹ ಕೆಲವು ಜಾಗ ಒತ್ತುವರಿ ಮಾಡಿಕೊಂಡಿದ್ದು , ಮುಂದಿನ ದಿನಗಳಲ್ಲಿ ಅವುಗಳ ಒತ್ತುವರಿಗೆ ಬಿಬಿಎಂಪಿ ಮುಖ್ಯ ಇಂಜಿನಿಯರ್​ಗೆ ಕೋರ್ಟ್ ಆದೇಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.