ETV Bharat / state

ಹೊರಟ್ಟಿ ಅವರನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಆಟವಾಡುತ್ತಿದೆ: ದೇವೇಗೌಡ ಆಕ್ರೋಶ

author img

By

Published : Dec 26, 2020, 4:57 PM IST

ಚುನಾವಣೆ ಬಂದಾಗ ಬರ್ತಾರೆ, ಹೋಗ್ತಾರೆ, ಅದೆಲ್ಲಾ ಉಪಯೋಗವಿಲ್ಲ. ಬಂದವರು ಬರಲಿ, ಹೋಗುವವರು ಹೋಗಲಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಜೆಡಿಎಸ್ ಪಕ್ಷ ಶಾಶ್ವತ. ಯಾವುದೇ ರಾಜ್ಯದ ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ‌. ಜೆಡಿಎಸ್​​​ ಈಗಲೂ ಗಟ್ಟಿಯಾಗಿಯೇ ಇದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

JDS leader HD Devegowda
ಜೆಡಿಎಸ್​ ವರಿಷ್ಠ ಹೆಚ್​​ ಡಿ ದೇವೇಗೌಡ

ಬೆಂಗಳೂರು: ಕಾಂಗ್ರೆಸ್​​ನ ಸಾಫ್ಟ್, ಹಾರ್ಡ್ ಹಿಂದುತ್ವ ನಮಗೆ ಗೊತ್ತಿಲ್ಲ. ಇದೆಲ್ಲಾ ಕಾಂಗ್ರೆಸ್​ನ ನಾಟಕ. ಜೆಡಿಎಸ್​​​​ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರನ್ನು ಮುಂದಿಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಏನು ಎಂಬುದು ಗೊತ್ತಿದೆ. ಸಭಾಪತಿ ವಿಚಾರದಲ್ಲಿ ಜಾತ್ಯಾತೀತ ನಾಯಕತ್ವ ಪ್ರಶ್ನೆ ಮಾಡುವ ನಾಟಕವಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಭಾಪತಿ ಅವರೇ ರಾಜೀನಾಮೆ ಕೊಡಲು ಸಿದ್ಧವಿದ್ದರು. ಆದರೆ ಅವರ ಪಕ್ಷದವರೇ ಕೊಡಬೇಡಿ ಎಂದು ಹೇಳಿದ್ದಾರೆ. ಏಕೆಂದರೆ ನನ್ನನ್ನು ಟೆಸ್ಟ್ ಮಾಡಬೇಕೆಂದು ಈ ನಾಟಕ ಮಾಡಿದ್ದಾರೆ. ಗೋದ್ರಾ ಘಟನೆ ನಡೆದಾಗ ನಾನು ಗುಜರಾತ್​​ಗೆ ಹೋಗಿದ್ದೆ. ಇವರಲ್ಲಿ ಯಾರಾದರೂ ಹೋಗಿದ್ದಾರಾ?. ಕಾಂಗ್ರೆಸ್​​​ನವರು ನನ್ನನ್ನು ಟೆಸ್ಟ್ ಮಾಡುತ್ತಿದ್ದಾರೆ. ಜೀವನದಲ್ಲಿ ಹೋರಾಟ ಮಾಡಿ ಈ ಹಂತಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಏನೆಂದು ನನಗೆ ಗೊತ್ತಿದೆ ಎಂದು ಗುಡುಗಿದರು.

ಮೈತ್ರಿ ಸರ್ಕಾರದ ವೇಳೆ ಸಭಾಪತಿ ಸ್ಥಾನ ನಮಗೆ ಬಿಟ್ಟುಕೊಡಿ ಎಂದು ನಾವು ಕೇಳಿದ್ದೆವು. ಆಗ ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದರು, ಮುಂದೆ ಮಾಡೋಣ ಎಂದು ಹೇಳಿದ್ದರು. ಆದರೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಬಳಿಕ ಸಿದ್ದರಾಮಯ್ಯ ಅವರು, ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಮಾಡೋಣ ಎಂದು ಹೇಳಿದ್ದರು. ನಾನು ಬಸವರಾಜ ಹೊರಟ್ಟಿ ಅವರನ್ನು ಮಾಡೋಣ ಎಂದಿದ್ದೆ. ಆದರೆ ದೆಹಲಿ ನಾಯಕರು ಬೇರೆಯವರ ಹೆಸರು ಹೇಳಿದ್ದರು ಎಂದರು.

ಬಿಜೆಪಿ ಜೊತೆ ಜೆಡಿಎಸ್ ವಿಲೀನ ಕುರಿತು ಚರ್ಚೆಯೇ ಆಗಿಲ್ಲ. ಇದು ನಗು ತರಿಸುತ್ತದೆ. ಜನವರಿ 7ರಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅರಮನೆ ಮೈದಾನದಲ್ಲಿ ನಡೆಯುವ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಗಟ್ಟಿಯಾಗಿ ಹೇಳಲಿದ್ದಾರೆ ಎಂದರು.

ಇದನ್ನೂ ಓದಿ: ಜೆಡಿಎಸ್​ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ದೇವೇಗೌಡ ಗುಡುಗು

ಸಂಕ್ರಾಂತಿ ನಂತರ ಜೆಡಿಎಸ್​​​​ನಲ್ಲಿ ಬದಲಾವಣೆ?

ಶಿರಾ ಉಪಚುನಾವಣೆಯಲ್ಲಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ. ನಮ್ಮ ಕಾರ್ಯಕರ್ತರಿಗೆ ಹುಮ್ಮಸ್ಸಿದೆ. ಹಾಗಾಗಿ ಯಾರಿಗಾದರೂ ಜವಾಬ್ದಾರಿ ಕೊಡಬೇಕಿದೆ ಎಂದ ಅವರು, ಕುಮಾರಸ್ವಾಮಿ ಅವರ ಜೊತೆಯೇ ಮಾತಾಡಿದ್ದೇನೆ. ಏಕ ತೀರ್ಮಾನ ಬೇಡ, ಕೋರ್ ಕಮಿಟಿ ಮಾಡಿ ಅಲ್ಲಿ ಚರ್ಚೆ ಮಾಡೋಣ ಎಂದಿದ್ದೇನೆ ಎಂದರು.

ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ. ನಮಗೆ ಯಾವ ಹೈಕಮಾಂಡ್ ಕೂಡ ಇಲ್ಲ. ನಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ. ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ಕುಮಾರಸ್ವಾಮಿ ಅಂತಿಮ ನಿರ್ಧಾರ ಅಂತೇನೂ ಇಲ್ಲ. ದೊಡ್ಡ ದೊಡ್ಡ ಪಕ್ಷದಲ್ಲಿ ಹೈಕಮಾಂಡ್ ಇದೆ. ನಾನು ರಾಷ್ಟ್ರೀಯ ಅಧ್ಯಕ್ಷನಿದ್ದೇನೆ. ಅಧಿಕಾರ ಒಬ್ಬರಲ್ಲೇ ಇರುತ್ತದೆ ಅನ್ನೋದು ಏನೂ ಇಲ್ಲ‌. ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರೂ ನಿರ್ಧಾರ ಮಾಡುತ್ತಾರೆ ಎಂದರು.

‘ಬರುವವರು ಬರಲಿ, ಹೋಗುವವರು ಹೋಗಲಿ’

ಚುನಾವಣೆ ಬಂದಾಗ ಬರ್ತಾರೆ, ಹೋಗ್ತಾರೆ ಅದೆಲ್ಲಾ ಉಪಯೋಗವಿಲ್ಲ. ಬಂದವರು ಬರಲಿ, ಹೋಗುವವರು ಹೋಗಲಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಜೆಡಿಎಸ್ ಪಕ್ಷ ಶಾಶ್ವತ. ಯಾವುದೇ ರಾಜ್ಯದ ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ‌ ಎಂದಿದ್ದಾರೆ.

ಬೆಂಗಳೂರು: ಕಾಂಗ್ರೆಸ್​​ನ ಸಾಫ್ಟ್, ಹಾರ್ಡ್ ಹಿಂದುತ್ವ ನಮಗೆ ಗೊತ್ತಿಲ್ಲ. ಇದೆಲ್ಲಾ ಕಾಂಗ್ರೆಸ್​ನ ನಾಟಕ. ಜೆಡಿಎಸ್​​​​ನ ಹಿರಿಯ ನಾಯಕ ಬಸವರಾಜ ಹೊರಟ್ಟಿ ಅವರನ್ನು ಮುಂದಿಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಏನು ಎಂಬುದು ಗೊತ್ತಿದೆ. ಸಭಾಪತಿ ವಿಚಾರದಲ್ಲಿ ಜಾತ್ಯಾತೀತ ನಾಯಕತ್ವ ಪ್ರಶ್ನೆ ಮಾಡುವ ನಾಟಕವಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಸಭಾಪತಿ ಅವರೇ ರಾಜೀನಾಮೆ ಕೊಡಲು ಸಿದ್ಧವಿದ್ದರು. ಆದರೆ ಅವರ ಪಕ್ಷದವರೇ ಕೊಡಬೇಡಿ ಎಂದು ಹೇಳಿದ್ದಾರೆ. ಏಕೆಂದರೆ ನನ್ನನ್ನು ಟೆಸ್ಟ್ ಮಾಡಬೇಕೆಂದು ಈ ನಾಟಕ ಮಾಡಿದ್ದಾರೆ. ಗೋದ್ರಾ ಘಟನೆ ನಡೆದಾಗ ನಾನು ಗುಜರಾತ್​​ಗೆ ಹೋಗಿದ್ದೆ. ಇವರಲ್ಲಿ ಯಾರಾದರೂ ಹೋಗಿದ್ದಾರಾ?. ಕಾಂಗ್ರೆಸ್​​​ನವರು ನನ್ನನ್ನು ಟೆಸ್ಟ್ ಮಾಡುತ್ತಿದ್ದಾರೆ. ಜೀವನದಲ್ಲಿ ಹೋರಾಟ ಮಾಡಿ ಈ ಹಂತಕ್ಕೆ ಬಂದಿದ್ದೇನೆ. ಕಾಂಗ್ರೆಸ್ ಏನೆಂದು ನನಗೆ ಗೊತ್ತಿದೆ ಎಂದು ಗುಡುಗಿದರು.

ಮೈತ್ರಿ ಸರ್ಕಾರದ ವೇಳೆ ಸಭಾಪತಿ ಸ್ಥಾನ ನಮಗೆ ಬಿಟ್ಟುಕೊಡಿ ಎಂದು ನಾವು ಕೇಳಿದ್ದೆವು. ಆಗ ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದರು, ಮುಂದೆ ಮಾಡೋಣ ಎಂದು ಹೇಳಿದ್ದರು. ಆದರೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಬಳಿಕ ಸಿದ್ದರಾಮಯ್ಯ ಅವರು, ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಮಾಡೋಣ ಎಂದು ಹೇಳಿದ್ದರು. ನಾನು ಬಸವರಾಜ ಹೊರಟ್ಟಿ ಅವರನ್ನು ಮಾಡೋಣ ಎಂದಿದ್ದೆ. ಆದರೆ ದೆಹಲಿ ನಾಯಕರು ಬೇರೆಯವರ ಹೆಸರು ಹೇಳಿದ್ದರು ಎಂದರು.

ಬಿಜೆಪಿ ಜೊತೆ ಜೆಡಿಎಸ್ ವಿಲೀನ ಕುರಿತು ಚರ್ಚೆಯೇ ಆಗಿಲ್ಲ. ಇದು ನಗು ತರಿಸುತ್ತದೆ. ಜನವರಿ 7ರಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅರಮನೆ ಮೈದಾನದಲ್ಲಿ ನಡೆಯುವ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಗಟ್ಟಿಯಾಗಿ ಹೇಳಲಿದ್ದಾರೆ ಎಂದರು.

ಇದನ್ನೂ ಓದಿ: ಜೆಡಿಎಸ್​ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ: ದೇವೇಗೌಡ ಗುಡುಗು

ಸಂಕ್ರಾಂತಿ ನಂತರ ಜೆಡಿಎಸ್​​​​ನಲ್ಲಿ ಬದಲಾವಣೆ?

ಶಿರಾ ಉಪಚುನಾವಣೆಯಲ್ಲಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ. ನಮ್ಮ ಕಾರ್ಯಕರ್ತರಿಗೆ ಹುಮ್ಮಸ್ಸಿದೆ. ಹಾಗಾಗಿ ಯಾರಿಗಾದರೂ ಜವಾಬ್ದಾರಿ ಕೊಡಬೇಕಿದೆ ಎಂದ ಅವರು, ಕುಮಾರಸ್ವಾಮಿ ಅವರ ಜೊತೆಯೇ ಮಾತಾಡಿದ್ದೇನೆ. ಏಕ ತೀರ್ಮಾನ ಬೇಡ, ಕೋರ್ ಕಮಿಟಿ ಮಾಡಿ ಅಲ್ಲಿ ಚರ್ಚೆ ಮಾಡೋಣ ಎಂದಿದ್ದೇನೆ ಎಂದರು.

ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ. ನಮಗೆ ಯಾವ ಹೈಕಮಾಂಡ್ ಕೂಡ ಇಲ್ಲ. ನಾನು ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ. ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೇನೆ. ಪಕ್ಷದಲ್ಲಿ ಕುಮಾರಸ್ವಾಮಿ ಅಂತಿಮ ನಿರ್ಧಾರ ಅಂತೇನೂ ಇಲ್ಲ. ದೊಡ್ಡ ದೊಡ್ಡ ಪಕ್ಷದಲ್ಲಿ ಹೈಕಮಾಂಡ್ ಇದೆ. ನಾನು ರಾಷ್ಟ್ರೀಯ ಅಧ್ಯಕ್ಷನಿದ್ದೇನೆ. ಅಧಿಕಾರ ಒಬ್ಬರಲ್ಲೇ ಇರುತ್ತದೆ ಅನ್ನೋದು ಏನೂ ಇಲ್ಲ‌. ರಾಜ್ಯಾಧ್ಯಕ್ಷರು, ಕಾರ್ಯಾಧ್ಯಕ್ಷರೂ ನಿರ್ಧಾರ ಮಾಡುತ್ತಾರೆ ಎಂದರು.

‘ಬರುವವರು ಬರಲಿ, ಹೋಗುವವರು ಹೋಗಲಿ’

ಚುನಾವಣೆ ಬಂದಾಗ ಬರ್ತಾರೆ, ಹೋಗ್ತಾರೆ ಅದೆಲ್ಲಾ ಉಪಯೋಗವಿಲ್ಲ. ಬಂದವರು ಬರಲಿ, ಹೋಗುವವರು ಹೋಗಲಿ ಎಂದು ಕುಮಾರಸ್ವಾಮಿ ಅವರಿಗೆ ಹೇಳಿದ್ದೇನೆ. ಜೆಡಿಎಸ್ ಪಕ್ಷ ಶಾಶ್ವತ. ಯಾವುದೇ ರಾಜ್ಯದ ಜನರನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ‌ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.