ETV Bharat / state

ಬಿಎಸ್​ವೈ ವಿಶ್ವಾಸಮತ ಯಾಚನೆಗೆ ಜೆಡಿಎಸ್​​ ಬಾಹ್ಯ ಬೆಂಬಲ ಹೇಳಿಕೆ ಸ್ವಾಗತಿಸಿದ ರೇಣುಕಾಚಾರ್ಯ

author img

By

Published : Jul 27, 2019, 7:33 PM IST

ಯಡಿಯೂರಪ್ಪ ವಿಶ್ವಾಸಮತ ಯಾಚನೆ ಸಂದರ್ಭ ಜೆಡಿಎಸ್ ಬಾಹ್ಯ ಬೆಂಬಲ ನೀಡಲಿದೆ ಎಂಬ ಜೆಡಿಎಸ್​ ಶಾಸಕರ ಹೇಳಿಕೆಯನ್ನ ಸ್ವಾಗತ ಮಾಡುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ಧಾರೆ.

ರೇಣುಕಾಚಾರ್ಯ

ಬೆಂಗಳೂರು: ವಿಷಯಾಧಾರಿತ ಬೆಂಬಲ ನೀಡುವುದಾಗಿ ಹೇಳಿರುವ ದೇವೇಗೌಡರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಈ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಶಾಸಕ ರೇಣುಕಾಚಾರ್ಯ

ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗೆ ಈ‌ ಮೈತ್ರಿ ಸಾಕಾಗಿದೆ. ಈ ಕಾಂಗ್ರೆಸ್ ಸಹವಾಸದಿಂದ ಹಾಳಾದೆವು ಅಂತಾ ನಿನ್ನೆ‌ ಸಭೆಯಲ್ಲಿ ಹಲವಾರು ಶಾಸಕರು ಹೇಳಿದ್ದಾರಂತೆ. ಈ ಕುರಿತು ಕೆಲ ಶಾಸಕರು ನಂಗೆ ಇವತ್ತು ಬೆಳಗ್ಗೆ ದೂರವಾಣಿ‌ ಕರೆ ಮಾಡಿ ಹೇಳಿದರು. ನನ್ನ ಬಳಿ ಸಾಕ್ಷಿ ಕೂಡ ಇದೆ. ಅವರೆಲ್ಲರೂ ನನ್ನ ಮಿತ್ರರು. ಸಮಯ ಬಂದಾಗ ಹೆಸರು ಹೇಳುತ್ತೇನೆ. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭ ಜೆಡಿಎಸ್ ಬಾಹ್ಯ ಬೆಂಬಲ ಹೇಳಿಕೆಯನ್ನ ನಾನು ಸ್ವಾಗತ ಮಾಡುತ್ತೇನೆ. ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ ಎಂದು ಕೂಡ ಜೆಡಿಎಸ್ ಶಾಸಕರು ಸ್ಪಷ್ಟವಾಗಿ ಮಾತನಾಡಿದ್ದಾರೆ ಎಂದರು.

ಎಲ್ಲೆಲ್ಲಿ ಜೆಡಿಎಸ್ ಶಾಸಕರಿದ್ದಾರೋ, ಬಿಜೆಪಿ ಶಾಸಕರು ಇಲ್ಲವೋ ಆ ಎಲ್ಲ ಪ್ರದೇಶಗಳಲ್ಲಿ ಬಿಜೆಪಿ ಜೊತೆ ಸಖ್ಯ ಮಾಡಿಕೊಳ್ಳುವುದು ಸೂಕ್ತ ಎಂದು ಕುಮಾರಸ್ವಾಮಿಯವರಿಗೂ ಮನವರಿಕೆ ಮಾಡಿಕೊಟ್ಟಿದ್ದಾಗಿ ಶಾಸಕರು ಹೇಳಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದರು.

ಬೆಂಗಳೂರು: ವಿಷಯಾಧಾರಿತ ಬೆಂಬಲ ನೀಡುವುದಾಗಿ ಹೇಳಿರುವ ದೇವೇಗೌಡರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ. ಈ ಸಂಬಂಧ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

ಶಾಸಕ ರೇಣುಕಾಚಾರ್ಯ

ಡಾಲರ್ಸ್ ಕಾಲೋನಿಯ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂಗೆ ಈ‌ ಮೈತ್ರಿ ಸಾಕಾಗಿದೆ. ಈ ಕಾಂಗ್ರೆಸ್ ಸಹವಾಸದಿಂದ ಹಾಳಾದೆವು ಅಂತಾ ನಿನ್ನೆ‌ ಸಭೆಯಲ್ಲಿ ಹಲವಾರು ಶಾಸಕರು ಹೇಳಿದ್ದಾರಂತೆ. ಈ ಕುರಿತು ಕೆಲ ಶಾಸಕರು ನಂಗೆ ಇವತ್ತು ಬೆಳಗ್ಗೆ ದೂರವಾಣಿ‌ ಕರೆ ಮಾಡಿ ಹೇಳಿದರು. ನನ್ನ ಬಳಿ ಸಾಕ್ಷಿ ಕೂಡ ಇದೆ. ಅವರೆಲ್ಲರೂ ನನ್ನ ಮಿತ್ರರು. ಸಮಯ ಬಂದಾಗ ಹೆಸರು ಹೇಳುತ್ತೇನೆ. ಯಡಿಯೂರಪ್ಪ ವಿಶ್ವಾಸಮತ ಯಾಚನೆ ಮಾಡುವ ಸಂದರ್ಭ ಜೆಡಿಎಸ್ ಬಾಹ್ಯ ಬೆಂಬಲ ಹೇಳಿಕೆಯನ್ನ ನಾನು ಸ್ವಾಗತ ಮಾಡುತ್ತೇನೆ. ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ ಎಂದು ಕೂಡ ಜೆಡಿಎಸ್ ಶಾಸಕರು ಸ್ಪಷ್ಟವಾಗಿ ಮಾತನಾಡಿದ್ದಾರೆ ಎಂದರು.

ಎಲ್ಲೆಲ್ಲಿ ಜೆಡಿಎಸ್ ಶಾಸಕರಿದ್ದಾರೋ, ಬಿಜೆಪಿ ಶಾಸಕರು ಇಲ್ಲವೋ ಆ ಎಲ್ಲ ಪ್ರದೇಶಗಳಲ್ಲಿ ಬಿಜೆಪಿ ಜೊತೆ ಸಖ್ಯ ಮಾಡಿಕೊಳ್ಳುವುದು ಸೂಕ್ತ ಎಂದು ಕುಮಾರಸ್ವಾಮಿಯವರಿಗೂ ಮನವರಿಕೆ ಮಾಡಿಕೊಟ್ಟಿದ್ದಾಗಿ ಶಾಸಕರು ಹೇಳಿದ್ದಾರೆ ಎಂದು ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದರು.

Intro:KN_BNG_02_RENUKACHARYA_REACTION_ON_JDS_SUPPORT_SCRIPT_9021933

ಜೆಡಿಎಸ್ ನಮ್ಮನ್ನು ಬೆಂಬಲಿಸುವ ಚರ್ಚೆ ಬಗ್ಗೆ ಶಾಸಕರು ಮಾಹಿತಿ ನೀಡಿದ್ದಾರೆ: ರೇಣುಕಾಚಾರ್ಯ!

ಬೆಂಗಳೂರು:ವಿಷಯಾಧಾರಿತ ಬೆಂಬಲ ನೀಡುವುದಾಗಿ ಹೇಳಿರುವ ದೇವೇಗೌಡರ ಹೇಳಿಕೆಯನ್ನು ನಾವು ಸ್ವಾಗತಿಸುತ್ತೇವೆ.ಈ ಸಂಬಂಧ ಪಕ್ಷದ ವರಿಷ್ಟರೊಂದಿಗೆ ಚರ್ಚಿಸಿ ಸಿಎಂ ಯಡಿಯೂರಪ್ಪ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಗೆ ಈ‌ ಮೈತ್ರಿ ಸಾಕಾಗಿದೆ ಈ ಕಾಂಗ್ರೆಸ್ ಸಹವಾಸದಿಂದ ಹಾಳಾದ್ವಿ ಅಂತಾ ನಿನ್ನೆ‌ ಸಭೆಯಲ್ಲಿ ಹಲವಾರು ಶಾಸಕರು ಹೇಳಿದ್ದಾರಂತೆ ಈ ಕುರಿತು ಕೆಲ ಶಾಸಕರು ನಂಗೆ ಇವತ್ತು ಬೆಳಗ್ಗೆ ದೂರವಾಣಿ‌ ಕರೆ ಮಾಡಿ ಹೇಳಿದ್ರು, ನನ್ನ ಹತ್ರ ಸಾಕ್ಷಿ ಕೂಡ ಇದೆ ,ಅವರೆಲ್ಲರೂ ನನ್ನ ಮಿತ್ರರು ಸಮಯ ಬಂದಾಗ ಹೆಸರು ಹೇಳುತ್ತೇನೆ, ವಿಶ್ವಾಸಮತ ಯಾಚನೆ ಸಂದರ್ಭ ಜೆಡಿಎಸ್ ಬಾಹ್ಯ ಬೆಂಬಲ ಹೇಳಿಕೆಯನ್ನ ನಾನು ಸ್ವಾಗತ ಮಾಡುತ್ತೇನೆ ಚುನಾವಣೆಗೆ ಹೋಗೋಕೆ ಇಷ್ಟ ಇಲ್ಲ ಎಂದು ಕೂಡ ಜೆಡಿಎಸ್ ಶಾಸಕರು ಸ್ಪಷ್ಟವಾಗಿ ಮಾತಾನಾಡಿದ್ದಾರೆ ಎಂದರು.

ಎಲ್ಲೆಲ್ಲಿ ಜೆಡಿಎಸ್ ಶಾಸಕರಿದ್ದಾರೋ,ಬಿಜೆಪಿ ಶಾಸಕರು ಇಲ್ಲವೋ ಆ ಎಲ್ಲ ಪ್ರದೇಶಗಳಲ್ಲಿ ಬಿಜೆಪಿ ಜತೆ ಸಖ್ಯ ಮಾಡಿಕೊಳ್ಳುವುದು ಸೂಕ್ತ ಎಂದು ಕುಮಾರಸ್ವಾಮಿಯವರಿಗೂ ಮನವರಿಕೆ ಮಾಡಿಕೊಟ್ಟಿದ್ದಾಗಿ ಹೇಳಿದ್ದಾರೆ ಎಂದು ಹೇಳಿದರು.
Body:.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.