ETV Bharat / state

ಹಣ ವಂಚನೆ ಆರೋಪ : ಇನ್ಫೋಸಿಸ್ ಕಂಪನಿಯ ಮೂವರು ಉದ್ಯೋಗಿಗಳ ಬಂಧನ..

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

author img

By

Published : Mar 8, 2020, 9:23 PM IST

infosys-employee-arrested-in-bangalore
ಇನ್ಫೋಸಿಸ್ ಕಂಪೆನಿಯ ಮೂವರು ಉದ್ಯೋಗಿಗಳ ಬಂಧನ

ಬೆಂಗಳೂರು : ಹಣ ವಂಚನೆ ಆರೋಪದಡಿ ಇನ್ಫೋಸಿಸ್ ಕಂಪನಿಯ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್, ಕಲ್ಯಾಣ ಹಾಗೂ ದೇವಿಶ್ರೀ ರೆಡ್ಡಿ ಬಂಧಿತ ಆರೋಪಿಗಳು. ಮೂಲತಃ ಹೈದರಾಬಾದ್​ ನಿವಾಸಿಗಳಾದ ಆರೋಪಿಗಳು ಬೆಂಗಳೂರಿನ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿಪಿಸಿ ಎಂಬ ಪ್ರಾಜೆಕ್ಟ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ತೆರಿಗೆ ಮರುಪಾವತಿ ಮಾಡಿಕೊಳ್ಳುವವರಿಗೆ 7 ದಿನಗಳಲ್ಲಿ ಹಣ ರಿಫಂಡ್ ಮಾಡುವುದಾಗಿ ಕಮಿಷನ್ ಪಡೆಯುತ್ತಿದ್ದರು ಎಂದು ದೂರು ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಬೆಂಗಳೂರು : ಹಣ ವಂಚನೆ ಆರೋಪದಡಿ ಇನ್ಫೋಸಿಸ್ ಕಂಪನಿಯ ಮೂವರು ಉದ್ಯೋಗಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್, ಕಲ್ಯಾಣ ಹಾಗೂ ದೇವಿಶ್ರೀ ರೆಡ್ಡಿ ಬಂಧಿತ ಆರೋಪಿಗಳು. ಮೂಲತಃ ಹೈದರಾಬಾದ್​ ನಿವಾಸಿಗಳಾದ ಆರೋಪಿಗಳು ಬೆಂಗಳೂರಿನ ಪ್ರತಿಷ್ಠಿತ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಿಪಿಸಿ ಎಂಬ ಪ್ರಾಜೆಕ್ಟ್‌ನಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಇವರು, ತೆರಿಗೆ ಮರುಪಾವತಿ ಮಾಡಿಕೊಳ್ಳುವವರಿಗೆ 7 ದಿನಗಳಲ್ಲಿ ಹಣ ರಿಫಂಡ್ ಮಾಡುವುದಾಗಿ ಕಮಿಷನ್ ಪಡೆಯುತ್ತಿದ್ದರು ಎಂದು ದೂರು ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.