ETV Bharat / state

ಬಿಜೆಪಿಗೆ ಸೇರುವುದು ಒಂದು ಶಾಸ್ತ್ರವಷ್ಟೆ ಎಂದ ಅನರ್ಹ ಶಾಸಕ ಹೆಚ್​.ವಿಶ್ವನಾಥ್

author img

By

Published : Sep 26, 2019, 2:30 PM IST

ಸುಪ್ರೀಂ ಕೋರ್ಟ್​ನಲ್ಲಿ ಅನರ್ಹ ಶಾಸಕರ ಕುರಿತ ತೀರ್ಪು ಇಂದು ಅಥವಾ ನಾಳೆಯೊಳಗಾಗಿ ಪ್ರಕಟಗೊಳ್ಳಬಹುದು. ಅದನ್ನು ನೋಡಿಕೊಂಡು ನಮ್ಮ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿಯಾಗಿ ನಿಲ್ಲಬೇಕು ಎಂಬುದನ್ನು ನಿರ್ಧರಿಸುತ್ತೇವೆ ಎಂದು ಅನರ್ಹ ಶಾಸಕ ಹೆಚ್​. ವಿಶ್ವನಾಥ್ ಹೇಳಿದ್ದಾರೆ.

ಅನರ್ಹ ಶಾಸಕ ಹೆಚ್.ವಿಶ್ವನಾಥ

ಬೆಂಗಳೂರು: ಅನರ್ಹ ಶಾಸಕರೆಲ್ಲ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ನಾವು ಬಿಜೆಪಿ ಸೇರುವುದು ಶಾಸ್ತ್ರವಷ್ಟೇ ಎಂದು ಅನರ್ಹ ಶಾಸಕ ಹೆಚ್​. ವಿಶ್ವನಾಥ್ ಹೇಳಿದ್ದಾರೆ.

ಅನರ್ಹ ಶಾಸಕ ಹೆಚ್.ವಿಶ್ವನಾಥ

ಸಿಎಂ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ಮಾತನಾಡಿದ ಅವರು, ಜೆಡಿಎಸ್​, ಕಾಂಗ್ರೆಸ್​ನಲ್ಲಿಯೂ ಚುನಾವಣೆ ಸಂದರ್ಭದಲ್ಲಿ ಆಂತರಿಕ ಚುನಾವಣೆ ಸಮರ ನಡೆದಿದೆ. ಹಾಗೇ ಬಿಜೆಪಿಯಲ್ಲಿ ಉಪಚುನಾವಣೆ ಸಂದರ್ಭದಲ್ಲಿ ಕೆಲವರು ಟಿಕೆಟ್​ ಆಕಾಂಕ್ಷಿಗಳು ಇದ್ದಾರೆ ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರೇ ಸಮ್ಮಿಶ್ರ ಸರ್ಕಾರ ಕೆಡವಿದ ಮಹಾಭೂಪರು. ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡಿರೋದು ಎಂದು ವಿಶ್ವನಾಥ್​ ಹೇಳಿದರು.

ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಇಂದು ಸಂಜೆ ಹಾಗೂ ನಾಳೆಯೊಳಗಾಗಿ ತೀರ್ಪು ಹೊರಬೀಳಲಿದೆ. ನಮ್ಮ ಪರವಾಗಿ ಉತ್ತಮ ವಾದ ಮಂಡನೆಯಾಗಿದೆ. ನಾನು ಯಾವುದೇ ಆತಂಕವಿಟ್ಟುಕೊಂಡು ಸಿಎಂ ಭೇಟಿಯಾಗಲ್ಲಿ. ಕ್ಷೇತ್ರದ ಕೆಲಸದ ಸಂಬಂಧ ಬಂದಿದ್ದೇನೆ ಎಂದು ಹೇಳಿದರು.

ಉಪಚುನಾವಣೆಯಲ್ಲಿ ನಾನು ಅಥವಾ ನನ್ನ ಮಗ ಸ್ಪರ್ಧಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧರಿಸಿಲ್ಲ. ನಮ್ಮ ಕ್ಷೇತ್ರದಲ್ಲಿ, ನಾವು ಸ್ಪರ್ಧಿಸಲು ಬಿಜೆಪಿ ನಾಯಕರ ವಿರೋಧವಿಲ್ಲ ಎಂದು ಇದೇ ವೇಳೆ ಹೆಚ್​ ವಿಶ್ವನಾಥ್​ ಅಭಿಪ್ರಾಯಪಟ್ಟರು.

ಬೆಂಗಳೂರು: ಅನರ್ಹ ಶಾಸಕರೆಲ್ಲ ಬಿಜೆಪಿಯಿಂದಲೇ ಸ್ಪರ್ಧಿಸಬೇಕು. ನಾವು ಬಿಜೆಪಿ ಸೇರುವುದು ಶಾಸ್ತ್ರವಷ್ಟೇ ಎಂದು ಅನರ್ಹ ಶಾಸಕ ಹೆಚ್​. ವಿಶ್ವನಾಥ್ ಹೇಳಿದ್ದಾರೆ.

ಅನರ್ಹ ಶಾಸಕ ಹೆಚ್.ವಿಶ್ವನಾಥ

ಸಿಎಂ ಮನೆಗೆ ಭೇಟಿ ನೀಡಿದ ವೇಳೆಯಲ್ಲಿ ಮಾತನಾಡಿದ ಅವರು, ಜೆಡಿಎಸ್​, ಕಾಂಗ್ರೆಸ್​ನಲ್ಲಿಯೂ ಚುನಾವಣೆ ಸಂದರ್ಭದಲ್ಲಿ ಆಂತರಿಕ ಚುನಾವಣೆ ಸಮರ ನಡೆದಿದೆ. ಹಾಗೇ ಬಿಜೆಪಿಯಲ್ಲಿ ಉಪಚುನಾವಣೆ ಸಂದರ್ಭದಲ್ಲಿ ಕೆಲವರು ಟಿಕೆಟ್​ ಆಕಾಂಕ್ಷಿಗಳು ಇದ್ದಾರೆ ಎಂದು ಸಮರ್ಥಿಸಿಕೊಂಡರು.

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರೇ ಸಮ್ಮಿಶ್ರ ಸರ್ಕಾರ ಕೆಡವಿದ ಮಹಾಭೂಪರು. ಸುಮ್ಮನೆ ನಮ್ಮ ವಿರುದ್ಧ ಆರೋಪ ಮಾಡಿರೋದು ಎಂದು ವಿಶ್ವನಾಥ್​ ಹೇಳಿದರು.

ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್​ನಲ್ಲಿ ಇಂದು ಸಂಜೆ ಹಾಗೂ ನಾಳೆಯೊಳಗಾಗಿ ತೀರ್ಪು ಹೊರಬೀಳಲಿದೆ. ನಮ್ಮ ಪರವಾಗಿ ಉತ್ತಮ ವಾದ ಮಂಡನೆಯಾಗಿದೆ. ನಾನು ಯಾವುದೇ ಆತಂಕವಿಟ್ಟುಕೊಂಡು ಸಿಎಂ ಭೇಟಿಯಾಗಲ್ಲಿ. ಕ್ಷೇತ್ರದ ಕೆಲಸದ ಸಂಬಂಧ ಬಂದಿದ್ದೇನೆ ಎಂದು ಹೇಳಿದರು.

ಉಪಚುನಾವಣೆಯಲ್ಲಿ ನಾನು ಅಥವಾ ನನ್ನ ಮಗ ಸ್ಪರ್ಧಿಸಬೇಕು ಎಂಬುದರ ಕುರಿತು ಇನ್ನೂ ನಿರ್ಧರಿಸಿಲ್ಲ. ನಮ್ಮ ಕ್ಷೇತ್ರದಲ್ಲಿ, ನಾವು ಸ್ಪರ್ಧಿಸಲು ಬಿಜೆಪಿ ನಾಯಕರ ವಿರೋಧವಿಲ್ಲ ಎಂದು ಇದೇ ವೇಳೆ ಹೆಚ್​ ವಿಶ್ವನಾಥ್​ ಅಭಿಪ್ರಾಯಪಟ್ಟರು.

Intro:Body:KN_BNG_01_CMDOLLARSCOLONY_HVISHWANTH_SCRIPT_7201951

ಅನರ್ಹರ ಅರ್ಜಿ ವಿಚಾರಣೆ: ಏನಾಗುತ್ತೋ ಎಂಬ ಚಿಂತೆಯಲ್ಲಿ ಸಿಎಂ; ಸಿಎಂ‌ ಭೇಟಿಯಾದ ಎಚ್.ವಿಶ್ವನಾಥ್

ಬೆಂಗಳೂರು: ಪೂರ್ವ ನಿಯೋಜಿತ ಕಾರ್ಯಕ್ರಮಗಳಿಗೂ ಹೋಗದೇ ತಮ್ಮ ಡಾಲರ್ಸ್ ಕಾಲೋನಿ ಮನೆಯಲ್ಲೇ ಇದ್ದು, ಸಿಎಂ‌ ಅನರ್ಹರ ಅರ್ಜಿ ವಿಚಾರಣೆ ಬಗ್ಗೆ ಮಾಹಿತಿ ಪಡೆದುಕೊಂಡರು.

ಇಂದು ಸುಪ್ರೀಂ‌ಕೋರ್ಟಿನಲ್ಲಿ ಅನರ್ಹರ ಅರ್ಜಿ ವಿಚಾರಣೆ ಮುಂದುವರಿದಿದ್ದು, ಇತ್ತ ಸಿಎಂ ಯಡಿಯೂರಪ್ಪ ಟೆನ್ಷನ್ ಜಾಸ್ತಿಯಾಗಿದೆ. ಅನರ್ಹರ ಅರ್ಜಿ‌ ವಿಚಾರಣೆ ಕುರಿತು ತೀರ್ಪು ಏನು ಬರುತ್ತೋ ಎಂಬ ಚಿಂತೆಯಲ್ಲಿ ಸಿಎಂ‌ ಇದ್ದಾರೆ.

ಬಿಜೆಪಿ ಕಚೇರಿಯಲ್ಲಿದ್ದ ಮಹಿಳಾ‌ ಮೋರ್ಚಾದ ಕಾರ್ಯಕಾರಿಣಿ ಸಭೆಗೂ ಹೋಗದ ಸಿಎಂ, ಮನೆಯಲ್ಲೇ ಕುಳಿತು ‌ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ಕೋರ್ಟ್ ವಿಚಾರಣೆ ಸಂಬಂಧ ವರದಿ ವೀಕ್ಷಣೆ ಮಾಡಿದರು.

ಈ ವೇಳೆ ಸಿಎಂ ಜೊತೆಯಲ್ಲೇ ಜೆಡಿಎಸ್‌ ಅನರ್ಹ ಶಾಸಕ ಹೆಚ್ ವಿಶ್ವನಾಥ್ ಹಾಗೂ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಇದ್ದರು. ಹುಣಸೂರು ಕ್ಷೇತ್ರದಲ್ಲಿನ ಟಿಕೆಟ್ ವಿಚಾರ ಕುರಿತು ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.

ಬಿಜೆಪಿಯಲ್ಲೇ ಸ್ಪರ್ಧೆ ಮಾಡಬೇಕು:

ಇದೇ ವೇಳೆ ಮಾತನಾಡಿದ ಎಚ್.ವಿಶ್ವನಾಥ್, ಬಿಜೆಪಿಯಲ್ಲೇ ಸ್ಪರ್ಧೆ ಮಾಡಬೇಕು. ಇನ್ನೇನು ಮತ್ತೆ ಜೆಡಿಎಸ್‌ ಗೆ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.

ಬಿಜೆಪಿ ಸೇರ್ಪಡೆ ಎಲ್ಲಾ ಒಂದು ಶಾಸ್ತ್ರ ಅಷ್ಟೇ. ಬಿಜೆಪಿ ಯಿಂದಲೇ ಅನರ್ಹರ ಸ್ಪರ್ಧೆ ಎಂದು ವಿಶ್ವನಾಥ್ ಒಪ್ಪಿಕೊಂಡರು. ನಾನು ಸ್ಪರ್ಧೆ ಮಾಡುತ್ತೇನೋ, ನನ್ನ ಮಗ ಸ್ಪರ್ಧೆ ಮಾಡ್ತಾನೋ ನೋಡೋಣ. ಜಿಟಿಡಿ ಮತ್ತು ಅವರ ಪುತ್ರರು ಜೆಡಿಎಸ್ ನಲ್ಲಿದ್ದಾರೆ. ಸ್ಥಳೀಯವಾಗಿ ನಮಗೆ ಬಿಜೆಪಿ ಮುಖಂಡರ ಆಕ್ಷೇಪಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆಯಲ್ಲಿ ಬಿಜೆಪಿಯವರ ವಿರುದ್ಧ ಬಿಜೆಪಿಯವರಿಂದಲೇ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜೆಡಿಎಸ್-ಜೆಡಿಎಸ್ ನಡುವೆ ಚುನಾವಣೆ ನಡೆದಿಲ್ಲವೇ?. ಕಾಂಗ್ರೆಸ್-ಕಾಂಗ್ರೆಸ್ ನಡುವೆ ಚುನಾವಣೆ ನಡೆದಿಲ್ವೇ?. ಹಾಗೇ ಬಿಜೆಪಿ-ಬಿಜೆಪಿ ನಡುವೆ ಚುನಾವಣೆ ಇರಬಹುದು ಎಂದು ತಿಳಿಸಿದರು.

ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಧ್ಯೆ ಹದ್ದು-ಗಿಣಿ ಸಮರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅವರಿಬ್ಬರೂ ತಮ್ಮ ತಮ್ಮ ಜಗಳ ಮೂಲಕ ತಾವೇ ಸಮ್ಮಿಶ್ರ ಸರ್ಕಾರ ಕೆಡವಿದವರು ಅಂತ ಸಾರಿ ಹೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಡವಿದವರೇ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ. ಇದಕ್ಕೆ ಇವರಿಬ್ಬರ ಜಗಳಕ್ಕಿಂತಲೂ ಸಾಕ್ಷಿ ಬೇಕಾ? ಎಂದು ಟಾಂಗ್ ನೀಡಿದರು.

ಕ್ಷೇತ್ರದ ಕೆಲಸ ಇದ್ವು, ಅದಕ್ಕೆ ಸಿಎಂರನ್ನು ಭೇಟಿಯಾಗಿದ್ದೆ. ಬೇರೆ ಯಾವುದೇ ಆತಂಕ ಇಟ್ಕೊಂಡು ಸಿಎಂ ಭೇಟಿ ಆಗಿಲ್ಲ. ಇವತ್ತು ಸಂಜೆ ಅಥವಾ ನಾಳೆ ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಬರಬಹುದು. ನಮ್ಮ ಪರವಾಗಿ ಉತ್ತಮವಾಗಿ ವಾದ ಮಂಡನೆ ಆಗಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.