ETV Bharat / state

ಐಎಮ್ಎ ದೋಖಾ: ಟನ್​ಗಟ್ಟಲೆ ಚಿನ್ನ ಕರಗಿಸಿದ್ದನಂತೆ ವಂಚಕ ಮನ್ಸೂರ್​

ಐಎಮ್ಎ ಹಗರಣದ ಆರೋಪಿ ಮನ್ಸೂರ್ ಖಾನ್ ಗೆ ಸೇರಿದ ತಿಲಕನಗರದ ಐಎಮ್ಎ ಜ್ಯುವೆಲರಿ ಹಾಗೂ ಯಶವಂತಪುರ ದಲ್ಲಿರುವ ಎರಡು ಕಚೇರಿಗಳ ಮೇಲೆ ಎಸ್ಐಟಿ ಏಕಕಾಲದಲ್ಲಿ ದಾಳಿ ನಡೆಸಿದೆ.

author img

By

Published : Jun 25, 2019, 8:02 PM IST

ಬಗೆದಷ್ಟು ಬಯಲಿಗೆ ಮನ್ಸೂರ್ ರೋಚಕ ಕಹಾನಿ

ಬೆಂಗಳೂರು: ಬಹುಕೋಟಿ ಐಎಮ್ಎ ಹಗರಣ ಸಂಬಂಧ ದಿನ ಕಳೆದಂತೆ ಮತ್ತಷ್ಟು ಖಜಾನೆಗಳು ಹೊರ ಬೀಳುತ್ತಿವೆ .ಮನ್ಸೂರ್ ಖಾನ್ ನ ವಿಸ್ತಾರವಾದ ಕರಾಳ ದಂಧೆಯನ್ನ ಎಸ್ ಐಟಿ ಜಾಲಾಡುತ್ತಲೆ ಇದೆ.ಇವತ್ತು ಸಹ ಎಸ್ ಐಟಿ ಚಿನ್ನದ ಬೇಟೆಯನ್ನ ಮುಂದುವರೆಸಿದೆ

ಬಗೆದಷ್ಟು ಬಯಲಿಗೆ ಮನ್ಸೂರ್ ರೋಚಕ ಕಹಾನಿ

ಕಳೆದ ಒಂದು ವಾರದಿಂದ ಐಎಮ್ ಎ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಐಎಮ್ಎ ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ‌ ನಡೆಸುತ್ತಿದೆ.‌ ಇಂದು ಸಹ ಮಾನ್ಸೂರ್ ಖಾನ್ ಗೆ ಸೇರಿದ ತಿಲಕನಗರದ ಐ ಎಮ್ಎ ಜ್ಯುವೆಲರಿ ಹಾಗೂ ಯಶವಂತಪುರ ದಲ್ಲಿರುವ ಎರಡು ಕಚೇರಿಗಳ ಮೇಲೆ ಎಸ್ ಐ ಟಿ ಏಕಕಾಲದಲ್ಲಿ ದಾಳಿ ನಡೆಸಿತ್ತು.

ಮಾನ್ಸೂರ್ ಖಾನ್ ಈ ಎರಡು ಕಚೇರಿಗಳಲ್ಲಿ ಚಿನ್ನ ವನ್ನ ಅಡವಿಟ್ಟುಕೊಂಡು ಹಣ ನೀಡುತ್ತಿದ್ದ. ಅಲ್ಲದೇ ಗೋಲ್ಡ್ ಲೋನ್ ಸಹ ನೀಡುತ್ತಿದ್ದ. ಈ ಹಿನ್ನೆಲೆ ದಾಳಿ ನಡೆಸಿದ ಎಸ್ ಐಟಿ ಮಹತ್ವದ ದಾಖಲೆಗಳು ಚಿನ್ನಭಾರಣಗಳನ್ನ ಜಪ್ತಿ ಮಾಡಿಕೊಂಡಿದೆ. ಕಳೆದ ಅಕ್ಟೋಬರ್ ಇಂದ ಇಲ್ಲಿಯವರೆಗೂ ಮನ್ಸೂರ್ ಬರೋಬ್ಬರಿ ಒಂದು ಟನ್ ಚಿನ್ನ ಕರಗಿಸಿದ್ದು ಎಸ್ಕೇಪ್ ಆಗುವ ಮೂರು ದಿನದ ಮುಂಚೆ ಮೂವತ್ತೈದು ಕೆಜಿ ಚಿನ್ನ ಕರಗಿಸಿದ್ದಾನಂತೆ . ಇನ್ನು ಮನ್ಸೂರ್ ಎಸ್ಕೇಪ್ ಆಗುವ ಐದು ದಿನಗಳ ಹಿಂದೆ ಚಿನ್ನವನ್ನು ಏರ್ ಪೋರ್ಟ್ ಮೂಲಕ‌ ಸಾಗಿಸಲಾಗದೆ , ಹವಾಲ‌ ಮೂಲಕ‌ ದುಬೈಗೆ ಹಣ ರವಾನೆ ಮಾಡಿಸಿದ್ದ ಎಂದು ಮೂಲಗಳ ಮಾಹಿತಿ ಲಭ್ಯವಾಗಿದೆ.

ಹಾಗೆ ನಿನ್ನೆ ಐಎಂಎ ಜ್ಯುವೆಲರಿ ಹಾಗೂ ಮಳಿಗೆಗಳ ಮೇಲೆ ದಾಳಿ ಮಾಡಿ 41.62 ಕೆಜಿ ಚಿನ್ನಾಭರಣ, 14.5 ಕ್ಯಾರಟ್ ಡೈಮೆಂಡ್72.24 ಕೆ ಜಿ ಬೆಳ್ಳಿ 60 ಕ್ಯಾರಟ್ ಹರಳುಗಳು, 58 ಗುಂಡುಗಳು 32 ರಿವಾಲ್ವರ್,13.45 ಲಕ್ಷ ನಗದು ವಶ ಪಡಿಸಿದ್ದಾರೆ. ಹಾಗೆ ಲೇಡಿ ಕರ್ಜನ್ ರಸ್ತೆ ಬಳಿಯಿರುವ ಮಳಿಗೆಯಲ್ಲಿ 302 ಗ್ರಾಂ ಚಿನ್ನ, 71 ಕೆಜಿ 770 ಗ್ರಾಂ ತೂಕದ ಬೆಳ್ಳಿ, ಹಾಗೂ 5 ಲಕ್ಷದ 60 ಸಾವಿರ ನಗದು ವಶ ಪಡಿಸಿಕೊಂಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

ಬೆಂಗಳೂರು: ಬಹುಕೋಟಿ ಐಎಮ್ಎ ಹಗರಣ ಸಂಬಂಧ ದಿನ ಕಳೆದಂತೆ ಮತ್ತಷ್ಟು ಖಜಾನೆಗಳು ಹೊರ ಬೀಳುತ್ತಿವೆ .ಮನ್ಸೂರ್ ಖಾನ್ ನ ವಿಸ್ತಾರವಾದ ಕರಾಳ ದಂಧೆಯನ್ನ ಎಸ್ ಐಟಿ ಜಾಲಾಡುತ್ತಲೆ ಇದೆ.ಇವತ್ತು ಸಹ ಎಸ್ ಐಟಿ ಚಿನ್ನದ ಬೇಟೆಯನ್ನ ಮುಂದುವರೆಸಿದೆ

ಬಗೆದಷ್ಟು ಬಯಲಿಗೆ ಮನ್ಸೂರ್ ರೋಚಕ ಕಹಾನಿ

ಕಳೆದ ಒಂದು ವಾರದಿಂದ ಐಎಮ್ ಎ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ಐಎಮ್ಎ ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ‌ ನಡೆಸುತ್ತಿದೆ.‌ ಇಂದು ಸಹ ಮಾನ್ಸೂರ್ ಖಾನ್ ಗೆ ಸೇರಿದ ತಿಲಕನಗರದ ಐ ಎಮ್ಎ ಜ್ಯುವೆಲರಿ ಹಾಗೂ ಯಶವಂತಪುರ ದಲ್ಲಿರುವ ಎರಡು ಕಚೇರಿಗಳ ಮೇಲೆ ಎಸ್ ಐ ಟಿ ಏಕಕಾಲದಲ್ಲಿ ದಾಳಿ ನಡೆಸಿತ್ತು.

ಮಾನ್ಸೂರ್ ಖಾನ್ ಈ ಎರಡು ಕಚೇರಿಗಳಲ್ಲಿ ಚಿನ್ನ ವನ್ನ ಅಡವಿಟ್ಟುಕೊಂಡು ಹಣ ನೀಡುತ್ತಿದ್ದ. ಅಲ್ಲದೇ ಗೋಲ್ಡ್ ಲೋನ್ ಸಹ ನೀಡುತ್ತಿದ್ದ. ಈ ಹಿನ್ನೆಲೆ ದಾಳಿ ನಡೆಸಿದ ಎಸ್ ಐಟಿ ಮಹತ್ವದ ದಾಖಲೆಗಳು ಚಿನ್ನಭಾರಣಗಳನ್ನ ಜಪ್ತಿ ಮಾಡಿಕೊಂಡಿದೆ. ಕಳೆದ ಅಕ್ಟೋಬರ್ ಇಂದ ಇಲ್ಲಿಯವರೆಗೂ ಮನ್ಸೂರ್ ಬರೋಬ್ಬರಿ ಒಂದು ಟನ್ ಚಿನ್ನ ಕರಗಿಸಿದ್ದು ಎಸ್ಕೇಪ್ ಆಗುವ ಮೂರು ದಿನದ ಮುಂಚೆ ಮೂವತ್ತೈದು ಕೆಜಿ ಚಿನ್ನ ಕರಗಿಸಿದ್ದಾನಂತೆ . ಇನ್ನು ಮನ್ಸೂರ್ ಎಸ್ಕೇಪ್ ಆಗುವ ಐದು ದಿನಗಳ ಹಿಂದೆ ಚಿನ್ನವನ್ನು ಏರ್ ಪೋರ್ಟ್ ಮೂಲಕ‌ ಸಾಗಿಸಲಾಗದೆ , ಹವಾಲ‌ ಮೂಲಕ‌ ದುಬೈಗೆ ಹಣ ರವಾನೆ ಮಾಡಿಸಿದ್ದ ಎಂದು ಮೂಲಗಳ ಮಾಹಿತಿ ಲಭ್ಯವಾಗಿದೆ.

ಹಾಗೆ ನಿನ್ನೆ ಐಎಂಎ ಜ್ಯುವೆಲರಿ ಹಾಗೂ ಮಳಿಗೆಗಳ ಮೇಲೆ ದಾಳಿ ಮಾಡಿ 41.62 ಕೆಜಿ ಚಿನ್ನಾಭರಣ, 14.5 ಕ್ಯಾರಟ್ ಡೈಮೆಂಡ್72.24 ಕೆ ಜಿ ಬೆಳ್ಳಿ 60 ಕ್ಯಾರಟ್ ಹರಳುಗಳು, 58 ಗುಂಡುಗಳು 32 ರಿವಾಲ್ವರ್,13.45 ಲಕ್ಷ ನಗದು ವಶ ಪಡಿಸಿದ್ದಾರೆ. ಹಾಗೆ ಲೇಡಿ ಕರ್ಜನ್ ರಸ್ತೆ ಬಳಿಯಿರುವ ಮಳಿಗೆಯಲ್ಲಿ 302 ಗ್ರಾಂ ಚಿನ್ನ, 71 ಕೆಜಿ 770 ಗ್ರಾಂ ತೂಕದ ಬೆಳ್ಳಿ, ಹಾಗೂ 5 ಲಕ್ಷದ 60 ಸಾವಿರ ನಗದು ವಶ ಪಡಿಸಿಕೊಂಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

Intro:ಬಹುಕೋಟಿ ಐ ಎಮ್ ಎ ಹಗರಣ
ಬಗೆದಷ್ಟು ಬರುತ್ತಿದೆ ಮತ್ತಷ್ಟು ಮನ್ಸೂರ್ ರೋಚಕ ಕಹಾನಿ

ಭವ್ಯ

ಬಹುಕೋಟಿ ಐ ಎಮ್ ಎ ಹಗರಣ ದಿನ ಕಳೆದಂತೆ ಮತ್ತಷ್ಟು ಖಜಾನೆಗಳು ಹೊರ ಬೀಳುತ್ತಿವೆ .ಮನ್ಸೂರ್ ಖಾನ್ ನ ವಿಸ್ತರಿಸಿದ ಕರಾಳ ದಂಧೆಯನ್ನ ಎಸ್ ಐ ಟಿ ಜಾಲಾಡುತ್ತಲೆ ಇದೆ .. ಇವತ್ತು ಸಹ ಎಸ್ ಐಟಿ ಚಿನ್ನದ ಭೇಟೆಯನ್ನ ಮುಂದುವರೆಸಿದೆ

ಕಳೆದ ಒಂದು ವಾರದಿಂದ ಐ ಎಮ್ ಎ ಹಗರಣದ ತನಿಖೆ ನಡೆಸುತ್ತಿರುವ ಎಸ್ ಐ ಟಿ ತಂಡ ಐಎಮ್ ಎ ಗೆ ಸಂಬಂಧಿಸಿದ ಕಚೇರಿಗಳ ಮೇಲೆ ದಾಳಿ‌ ನಡೆಸುತ್ತಿದೆ.‌ಇಂದು ಸಹ ಮಾನ್ಸೂರ್ ಖಾನ್ ಗೆ ಸೇರಿದ ತಿಲಕನಗರದ ಐ ಎಮ್ ಎ ಜುವೈಲ್ಯರಿ ಹಾಗೂ ಯಶವಂತಪುರ ದಲ್ಲಿರುವ ಎರಡು ಕಚೇರಿಗಳ ಮೇಲೆ ಎಸ್ ಐ ಟಿ ಏಕಕಾಲದಲ್ಲಿ ದಾಳಿ ನಡೆಸಿತ್ತು. ಮಾನ್ಸೂರ್ ಖಾನ್ ಈ ಎರಡು ಕಚೇರಿಗಳಲ್ಲಿ ಚಿನ್ನ ವನ್ನ ಅಡವಿಟ್ಟುಕೊಂಡು ಹಣ ನೀಡುತ್ತಿದ್ದ. ಅಲ್ದೆ ಗೋಲ್ಡ್ ಲೋನ್ ಸಹ ನೀಡುತ್ತಿದ್ದ. ದಾಳಿ ನಡೆಸಿದ ಎಸ್ ಐ ಟಿ ಗೆ ಮಹತ್ವದ ದಾಖಲೆಗಳು ಚಿನ್ನಭಾರಣಗಳನ್ನ ಜಪ್ತಿ ಮಾಡಿಕೊಂಡಿದೆ.

ತಿಲಕ್ ನಗರದ ಐ ಎಂ‌ಎ ಸಂಸ್ಥೆ ,ಮನ್ಸೂರ್ ಖಾನ್ ಸ್ಥಾಪಿಸಿದ ಪಥಮ‌ ಸಂಸ್ಥೆ .‌ಈ ಸಂಸ್ಥೆಯಲ್ಲಿ ಎಸ್ ಐ ಟಿ ಡಿ ವೈ ಎಸ್ಪಿ ಬಾಲರಾಜ್ ಅವರ ನೇತೃತ್ಬದ ತಂಡ ಪರಿಶೀಲನೆ ನಡೆಸಿತು.. ಈ ಸಂಸ್ಥೆಯಲ್ಲಿ ಅಂತಹ ಚಿನ್ನಾಭರಣಗಳು ಸಿಗದ ಹಿನ್ನಲೆ‌ ಸಾಕಷ್ಟು ದಾಖಲಾತಿಗಳನ್ನ ವಶಕ್ಕೆ ಪಡೆದಿದ್ದಾರೆ .ಇನ್ನು ಕಳೆದ ಅಕ್ಟೋಬರ್ ಇಂದ ಇಲ್ಲಿಯವರೆಗೂ ಮನ್ಸೂರ್ ಬರೋಬ್ಬರಿ ಒಂದು ಟನ್ ಚಿನ್ನ ಕರಗಿಸಿದ್ದು ಎಸ್ಕೇಪ್ ಆಗುವ ಮೂರು ದಿನದ ಮುಂಚೆ ಮೂವತ್ತೈದು ಕೇಜಿ ಚಿನ್ನ ಕರಗಿಸಿದ್ದಾನಂತೆ . ಇನ್ನು ಮನ್ಸೂರ್ ಎಸ್ಕೇಪ್ ಆಗುವ ಐದು ದಿನಗಳ ಹಿಂದೆ ಬಂದಿದ್ದು , ಚಿನ್ನವನ್ನು ಏರ್ ಪೋರ್ಟ್ ಮೂಲಕ‌ ಸಾಗಿಸಲಾಗದೆ , ಹವಾಲ‌ ಮೂಲಕ‌ ದುಬೈಗೆ ಹಣ ರವಾನೆ ಮಾಡಿಸಿದ್ದ ಎಂದು ಮೂಲಗಳ ಮಾಹಿತಿ ಲಭ್ಯವಾಗಿದೆ.

ಇನ್ನು ಕಳೆದ ಒಂದು ವಾರದಿಂದ ಎಸ್ ಐ ಟಿ ನಡೆಸಿದ ದಾಳಿ ಮಾಹಿತಿ ತನಿಖೆ ಪ್ರಗತಿಯನ್ನು ಹಾಗೂ ಮಾನ್ಸೂರ್ ಖಾನ್ ಮಾತನಾಡಿರುವ ವಿಡಿಯೋ ಗಳನ್ನ ಎಸ್ ಐ ಟಿ ಮುಖಸ್ಥ ರವಿಕಾಂತೇಗೌಡರು ಎಡಿಜಿಪಿ ಎಮ್ ಎ ಸಲಿಂ ರನ್ನ ಭೇಟಿ ಮಾಡಿ ಒಂದು ವಾರದ ತನಿಖೆ ವರದಿ ಯನ್ನ ಸಲ್ಲಿಸಿದ್ರು.

ಹಾಗೆ ನಿನ್ನೆ ಐಎಂಎ ಜ್ಯುವೆಲರಿ ಹಾಗೂ ಮಳಿಗೆಗಳ ಮೇಲೆ ದಾಳಿ ಮಾಡಿ 41.62 ಕೆಜಿ ಚಿನ್ನಾಭರಣ, 14.5 ಕ್ಯಾರೆಟ್ ಡೈಮೆಂಡ್
72.24 ಕೆ ಜಿ ಬೆಳ್ಳಿ 60 ಕ್ಯಾರೆಟ್ ಹರಳುಗಳು, 58 ಗುಂಡುಗಳು 32 ರಿವಾಲ್ವರ್,13.45 ಲಕ್ಷ ನಗದು ವಶ ಪಡಿಸಿದ್ದಾರೆ. ಹಾಗೆ
ಲೇಡಿ ಕರ್ಜನ್ ರಸ್ತೆ ಬಳಿಯಿರುವ ಮಳಿಗೆಯಲ್ಲಿ..41 ಕೆಜಿ 302 ಗ್ರಾಂ ಚಿನ್ನ..71 ಕೆಜಿ 770 ಗ್ರಾಂ ತೂಕದ ಬೆಳ್ಲಿ,ಅಂದಾಜು ಬೆಲೆ 8.27 ಲಕ್ಷ ರೂಪಾಯಿಗಳು.. 5 ಲಕ್ಷದ 60 ಸಾವಿರ ನಗದು ವಶ ಪಡಿಸಿದ್ದಾಗಿ ಅಧಿಕೃತವಾಗಿ ತಿಳಿಸಿದ್ದಾರೆ.

Body:KN_BNG_07_25_IMA_BHAVYA_7204498Conclusion:KN_BNG_07_25_IMA_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.