ETV Bharat / state

Disease Data collection: ರೋಗ ಸಂಬಂಧಿ ಮಾಹಿತಿ ಸಂಗ್ರಹಿಸಲು ಬಿಬಿಎಂಪಿಗೆ IIScಯಿಂದ ಹೊಸ ಆ್ಯಪ್

author img

By

Published : Jul 28, 2023, 10:04 AM IST

IISC developing app for disease data collection: ರೋಗ ಮತ್ತು ರೋಗಿಯ ನಿಖರ ಮಾಹಿತಿ ಸಂಗ್ರಹಿಸಲು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಶೇಷ ಅಪ್ಲಿಕೇಷನ್‌ ಅಭಿವೃದ್ಧಿಪಡಿಸುತ್ತಿದೆ.

AISC developing a App for collection of disease related information
ರೋಗ ಸಂಬಂಧಿತ ಮಾಹಿತಿ ಸಂಗ್ರಹಕ್ಕೆ ಆ್ಯಪ್ ಅಭಿವೃದ್ಧಿ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಮತ್ತು ರೋಬೋಟಿಕ್‌ಸ್‌ ಟೆಕ್ನಾಲಜಿ ಪಾರ್ಕ್, ನಗರದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಂದ ರೋಗ ಮತ್ತು ರೋಗಿಯ ನಿಖರ ದತ್ತಾಂಶ ಸಂಗ್ರಹಿಸಲು ಪಾಲಿಕೆಗೆ ಸಹಾಯವಾಗುವ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸುತ್ತಿದೆ.

ಈ ಕುರಿತು ಪಾಲಿಕೆಯ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕಚಂದ್ರ ಮಾತನಾಡಿ, ''ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,000 ಖಾಸಗಿ ಆಸ್ಪತ್ರೆಗಳಿವೆ. ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿಯಡಿ ಸುಮಾರು 400 ಆಸ್ಪತ್ರೆಗಳು ಮಾತ್ರ ರೋಗದ ದತ್ತಾಂಶ ನಮೂದಿಸುತ್ತಿವೆ. ಆ್ಯಪ್ ಅಭಿವೃದ್ಧಿ ಆರಂಭಿಕ ಹಂತದಲ್ಲಿದೆ. ಮೊದಲ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಗಮನ ಹರಿಸಲಾಗುತ್ತದೆ. ಎರಡನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಮೊದಲ ಹಂತದಲ್ಲಿ ಆ್ಯಪ್‌ನಲ್ಲಿ ಸಮುದಾಯದಿಂದ ರೋಗ ಮತ್ತು ರೋಗಿಗಳ ದತ್ತಾಂಶ ಸಂಗ್ರಹಿಸಲು ಆಶಾ ಕಾರ್ಯಕರ್ತರು ಮತ್ತು ನರ್ಸ್‌ಗಳು ಸಹಕಾರಿಯಾಗಲಿದ್ದಾರೆ'' ಎಂದು ತಿಳಿಸಿದರು.

"ಇದೀಗ ಆರಂಭಿಕ ಹಂತದಲ್ಲಿ ಸುಮಾರು 15 ಆಶಾ ಕಾರ್ಯಕರ್ತರು ಅಪ್ಲಿಕೇಶನ್‌ನಲ್ಲಿ ಡೆಂಗ್ಯೂ ದತ್ತಾಂಶ ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿ ಹಂತ ಮುಗಿದ ನಂತರ ಅಪ್ಲಿಕೇಶನ್ ಪರಿಶೀಲನೆ ಮಾಡಲಾಗುತ್ತದೆ. ಇದರಲ್ಲಿ ವೈದ್ಯಕೀಯ ಅಧಿಕಾರಿಗಳು ಡೆಂಗ್ಯೂ ಪ್ರಕರಣಗಳು ಅಥವಾ ಸಂತಾನೋತ್ಪತ್ತಿಗಳ ಸ್ಥಳದ ಬಗ್ಗೆ ಪರಿಶೀಲಿಸುತ್ತಾರೆ. ಮೂರನೇ ಹಂತದಲ್ಲಿ ಔಷಧಿ ಸಿಂಪಡಣೆ ಕುರಿತು ಮತ್ತು ತಂಡವು ರೋಗದ ಸಂತಾನೋತ್ಪತ್ತಿ ಸ್ಥಳಗಳಲ್ಲಿನ ಚಟುವಟಿಕೆಗಳನ್ನು ವರದಿ ಮಾಡುತ್ತವೆ. ಈ ಎಲ್ಲಾ ಮಾಹಿತಿ ಆ್ಯಪ್‌ನಲ್ಲಿ ಇರಲಿದೆ" ಎಂದು ಹೇಳಿದರು.

ಇದು ಡೆಂಗ್ಯೂ ಸಮಯ, ತಕ್ಷಣ ಚಾಲನೆ: "ಮೊದಲ ಹಂತ ಕೆಲವೇ ತಿಂಗಳು ಇರಲಿದೆ. ಈ ಮೂಲಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಒಂದೇ ಆ್ಯಪ್‌ನಲ್ಲಿ ಡೆಂಗ್ಯೂ ದತ್ತಾಂಶ ಸಿಗಲಿದೆ. ಡೆಂಗ್ಯೂ ಸಮಯವಾದ್ದರಿಂದ ನಾವು ಅಪ್ಲಿಕೇಶನ್ ಅನ್ನು ತಕ್ಷಣವೇ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ತ್ರಿಲೋಕಚಂದ್ರ ಮಾಹಿತಿ ನೀಡಿದರು.

ಇದನ್ನೂ ಓದಿ: CM Siddaramaiah: ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ, ಹುಷಾರಾಗಿರಿ: ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

ರಾಜ್ಯದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕೆಮ್ಮು, ಶೀತ, ಗಂಟಲು ನೋವು ಸೇರಿ ಸೋಂಕಿನ ಕಾಯಿಲೆಗಳು ಹೆಚ್ಚಾಗುತ್ತಿವೆ. ಸೊಳ್ಳೆ ಹೆಚ್ಚಾಗುವುದರಿಂದ ಡೆಂಗ್ಯೂ ಅಲ್ಲದೇ ಹಲವು ಸೋಂಕು ಹಿಡಿಯುವ ಸಾಧ್ಯತೆಗಳೂ ಹೆಚ್ಚಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಅದರಂತೆ, ಆಸ್ಪತ್ರೆಗಳಿಂದ ರೋಗದ ಮತ್ತು ರೋಗಿಯ ನಿಖರ ಮಾಹಿತಿ ಸಂಗ್ರಹಣೆಗೆ ಭಾರತೀಯ ವಿಜ್ಞಾನ ಸಂಸ್ಥೆ ಆ್ಯಪ್ ಅಭಿವೃದ್ಧಿ ಮಾಡುತ್ತಿದೆ.

ಇದನ್ನೂ ಓದಿ: Uttara Kannada Rain: ಜೋಯಿಡಾದಲ್ಲಿ ವ್ಯಕ್ತಿಯ ಶವ ಸಾಗಾಟಕ್ಕೆ ಪರದಾಟ; ಕಂಬಳಿ ಜೋಲಿಯಲ್ಲಿ ರೋಗಿಯ ಸಂಕಟ

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಆರ್ಟಿಫಿಷಿಯಲ್ ಇಂಟಲಿಜೆನ್ಸ್ (ಎಐ) ಮತ್ತು ರೋಬೋಟಿಕ್‌ಸ್‌ ಟೆಕ್ನಾಲಜಿ ಪಾರ್ಕ್, ನಗರದ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಂದ ರೋಗ ಮತ್ತು ರೋಗಿಯ ನಿಖರ ದತ್ತಾಂಶ ಸಂಗ್ರಹಿಸಲು ಪಾಲಿಕೆಗೆ ಸಹಾಯವಾಗುವ ಅಪ್ಲಿಕೇಷನ್‌ ಅಭಿವೃದ್ಧಿ ಪಡಿಸುತ್ತಿದೆ.

ಈ ಕುರಿತು ಪಾಲಿಕೆಯ ವಿಶೇಷ ಆಯುಕ್ತ ಡಾ.ಕೆ.ವಿ ತ್ರಿಲೋಕಚಂದ್ರ ಮಾತನಾಡಿ, ''ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 1,000 ಖಾಸಗಿ ಆಸ್ಪತ್ರೆಗಳಿವೆ. ಕೇಂದ್ರ ಸರ್ಕಾರದ ಸಮಗ್ರ ಆರೋಗ್ಯ ಮಾಹಿತಿಯಡಿ ಸುಮಾರು 400 ಆಸ್ಪತ್ರೆಗಳು ಮಾತ್ರ ರೋಗದ ದತ್ತಾಂಶ ನಮೂದಿಸುತ್ತಿವೆ. ಆ್ಯಪ್ ಅಭಿವೃದ್ಧಿ ಆರಂಭಿಕ ಹಂತದಲ್ಲಿದೆ. ಮೊದಲ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೇಲೆ ಗಮನ ಹರಿಸಲಾಗುತ್ತದೆ. ಎರಡನೇ ಹಂತದಲ್ಲಿ ಖಾಸಗಿ ಆಸ್ಪತ್ರೆಗಳು ಮತ್ತು ಲ್ಯಾಬ್‌ಗಳ ಮಾಹಿತಿ ಸಂಗ್ರಹಿಸಲಾಗುತ್ತದೆ. ಮೊದಲ ಹಂತದಲ್ಲಿ ಆ್ಯಪ್‌ನಲ್ಲಿ ಸಮುದಾಯದಿಂದ ರೋಗ ಮತ್ತು ರೋಗಿಗಳ ದತ್ತಾಂಶ ಸಂಗ್ರಹಿಸಲು ಆಶಾ ಕಾರ್ಯಕರ್ತರು ಮತ್ತು ನರ್ಸ್‌ಗಳು ಸಹಕಾರಿಯಾಗಲಿದ್ದಾರೆ'' ಎಂದು ತಿಳಿಸಿದರು.

"ಇದೀಗ ಆರಂಭಿಕ ಹಂತದಲ್ಲಿ ಸುಮಾರು 15 ಆಶಾ ಕಾರ್ಯಕರ್ತರು ಅಪ್ಲಿಕೇಶನ್‌ನಲ್ಲಿ ಡೆಂಗ್ಯೂ ದತ್ತಾಂಶ ಸಂಗ್ರಹಿಸುತ್ತಿದ್ದಾರೆ. ಈ ಮಾಹಿತಿ ಹಂತ ಮುಗಿದ ನಂತರ ಅಪ್ಲಿಕೇಶನ್ ಪರಿಶೀಲನೆ ಮಾಡಲಾಗುತ್ತದೆ. ಇದರಲ್ಲಿ ವೈದ್ಯಕೀಯ ಅಧಿಕಾರಿಗಳು ಡೆಂಗ್ಯೂ ಪ್ರಕರಣಗಳು ಅಥವಾ ಸಂತಾನೋತ್ಪತ್ತಿಗಳ ಸ್ಥಳದ ಬಗ್ಗೆ ಪರಿಶೀಲಿಸುತ್ತಾರೆ. ಮೂರನೇ ಹಂತದಲ್ಲಿ ಔಷಧಿ ಸಿಂಪಡಣೆ ಕುರಿತು ಮತ್ತು ತಂಡವು ರೋಗದ ಸಂತಾನೋತ್ಪತ್ತಿ ಸ್ಥಳಗಳಲ್ಲಿನ ಚಟುವಟಿಕೆಗಳನ್ನು ವರದಿ ಮಾಡುತ್ತವೆ. ಈ ಎಲ್ಲಾ ಮಾಹಿತಿ ಆ್ಯಪ್‌ನಲ್ಲಿ ಇರಲಿದೆ" ಎಂದು ಹೇಳಿದರು.

ಇದು ಡೆಂಗ್ಯೂ ಸಮಯ, ತಕ್ಷಣ ಚಾಲನೆ: "ಮೊದಲ ಹಂತ ಕೆಲವೇ ತಿಂಗಳು ಇರಲಿದೆ. ಈ ಮೂಲಕ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಒಂದೇ ಆ್ಯಪ್‌ನಲ್ಲಿ ಡೆಂಗ್ಯೂ ದತ್ತಾಂಶ ಸಿಗಲಿದೆ. ಡೆಂಗ್ಯೂ ಸಮಯವಾದ್ದರಿಂದ ನಾವು ಅಪ್ಲಿಕೇಶನ್ ಅನ್ನು ತಕ್ಷಣವೇ ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ತ್ರಿಲೋಕಚಂದ್ರ ಮಾಹಿತಿ ನೀಡಿದರು.

ಇದನ್ನೂ ಓದಿ: CM Siddaramaiah: ಬೇಕೆಂದೇ ದಾರಿ ತಪ್ಪಿಸುವ ಕೆಲಸ ಮಾಡ್ತಾರೆ, ಹುಷಾರಾಗಿರಿ: ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಕಿವಿಮಾತು

ರಾಜ್ಯದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕೆಮ್ಮು, ಶೀತ, ಗಂಟಲು ನೋವು ಸೇರಿ ಸೋಂಕಿನ ಕಾಯಿಲೆಗಳು ಹೆಚ್ಚಾಗುತ್ತಿವೆ. ಸೊಳ್ಳೆ ಹೆಚ್ಚಾಗುವುದರಿಂದ ಡೆಂಗ್ಯೂ ಅಲ್ಲದೇ ಹಲವು ಸೋಂಕು ಹಿಡಿಯುವ ಸಾಧ್ಯತೆಗಳೂ ಹೆಚ್ಚಿವೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ. ಅದರಂತೆ, ಆಸ್ಪತ್ರೆಗಳಿಂದ ರೋಗದ ಮತ್ತು ರೋಗಿಯ ನಿಖರ ಮಾಹಿತಿ ಸಂಗ್ರಹಣೆಗೆ ಭಾರತೀಯ ವಿಜ್ಞಾನ ಸಂಸ್ಥೆ ಆ್ಯಪ್ ಅಭಿವೃದ್ಧಿ ಮಾಡುತ್ತಿದೆ.

ಇದನ್ನೂ ಓದಿ: Uttara Kannada Rain: ಜೋಯಿಡಾದಲ್ಲಿ ವ್ಯಕ್ತಿಯ ಶವ ಸಾಗಾಟಕ್ಕೆ ಪರದಾಟ; ಕಂಬಳಿ ಜೋಲಿಯಲ್ಲಿ ರೋಗಿಯ ಸಂಕಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.