ETV Bharat / state

ನನ್ನ ಗೆಲುವು ಖಚಿತ, ಮತದಾನದ ಬಳಿಕ ಮೈತ್ರಿ ಸರ್ಕಾರದ ಪತನ: ಡಿವಿಎಸ್​

ಅಭಿವೃದ್ಧಿ ವಿಷಯ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ‌ಪ್ರೋಗ್ರೆಸ್ ಕಾರ್ಡ್ ಜನರ ಮುಂದೆ ಇಟ್ಟಿದ್ದು, ಅದನ್ನು ಮೌಲ್ಯಮಾಪನ ಮಾಡಿ ಜನ ಆಶೀರ್ವಾದ ಮಾಡಲಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ನಾನು ಗೆಲ್ಲುತ್ತೇನೆ ಇದು ಅತಿಯಾದ ಆತ್ಮವಿಶ್ವಾಸ ಅಲ್ಲ ವಾಸ್ತವ ಎಂದು ಡಿವಿಎಸ್​ ತಿಳಿಸಿದರು.

author img

By

Published : Apr 12, 2019, 4:46 PM IST

ಡಿ ವಿ ಸದಾನಂದಗೌಡ

ಬೆಂಗಳೂರು: ಟೀಕೆ ಟಿಪ್ಪಣಿಗಳನ್ನು ಮಾಡದೆ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ನಾವು ಚುನಾವಣೆ ಎದುರಿಸುತ್ತಿದ್ದು, ಮತದಾನ ಮುಗಿದ‌ ದಿನವೇ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮೈತ್ರಿ ಸರ್ಕಾರ ಪತನದ ಸುಳಿವನ್ನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ ಸದಾನಂದಗೌಡ ನೀಡಿದ್ದಾರೆ.

ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಯಾರ ವಿರುದ್ಧವೂ ಟೀಕೆ, ಆರೋಪ ಮಾಡದೆ ಅಭಿವೃದ್ಧಿ ವಿಷಯ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ‌ಪ್ರೋಗ್ರೆಸ್ ಕಾರ್ಡ್ ಜನರ ಮುಂದೆ ಇಟ್ಟಿದ್ದು, ಅದನ್ನು ಮೌಲ್ಯಮಾಪನ ಮಾಡಿ ಜನ ಆಶೀರ್ವಾದ ಮಾಡಲಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ನಾನು ಗೆಲ್ಲುತ್ತೇನೆ ಇದು ಅತಿಯಾದ ಆತ್ಮವಿಶ್ವಾಸ ಅಲ್ಲ ವಾಸ್ತವ ಎಂದರು.

ಡಿ ವಿ ಸದಾನಂದಗೌಡ

ಮೈತ್ರಿ ಸರ್ಕಾರ ಪತನ:

ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನದ ಸನಿಹದಲ್ಲಿದೆ. ಮತದಾನ ಮುಗಿದ ದಿನವೇ ಏನು ಬೇಕಾದರೂ ಆಗಬಹುದು, ನಾನು ಭವಿಷ್ಯ ನುಡಿಯಲ್ಲ, ವಾಸ್ತವವನ್ನು ಹೇಳುತ್ತಿದ್ದೇನೆ. ಬೇರೆ ಬೇರೆ ಕಡೆ ಆಗ್ತಿರೋ ವಿದ್ಯಮಾನ ನೋಡ್ತಿದ್ದರೆ ಏನ್ ಬೇಕಾದರು ಆಗುತ್ತೆ ಹಾಸನ, ಮಂಡ್ಯ, ತುಮಕೂರು ಕಡೆ ನೋಡ್ತಿದ್ದೇವೆ ಜಂಟಿ ಪ್ರಚಾರಗಳಲ್ಲೂ ಒಟ್ಟಿಗೆ ಹೋಗ್ತಿಲ್ಲ ಮೈತ್ರಿಯಲ್ಲಿ ಯಾವಾಗ ಏನ್ ಬೇಕಾದರೂ ಆಗಬಹುದು. ನಾವಾಗಿಯೇ ಯಾವುದಕ್ಕೂ ಕೈ ಹಾಕಲ್ಲ. ಆದರೆ ಸರ್ಕಾರ‌ ಬಿದ್ದರೆ 104 ಸ್ಥಾನ ಪಡೆದಿರುವ ನಾವು ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಚುನಾವಣೆ ನಂತರ ಸರ್ಕಾರ ರಚನೆ ಸುಳಿವು ನೀಡಿದರು.


ಸುಮಲತಾಗೆ ಬಿಜೆಪಿ ವರ:

ಸುಮಲತಾ ಪರ ಬಿಜೆಪಿ ಬೆಂಬಲ ವರವೋ ಶಾಪವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ನಾವು ವರ ಕೊಡ್ಲಿಕ್ಕೇ ಇದ್ದೇವೆ. ಶಾಪ ಕೊಡುವುದಿಲ್ಲ ಒಬ್ಬರನ್ನ ಮಣಿಸಿ ಮತ್ತೊಬ್ಬರ ಜೊತೆ ಮಲ್ಲಯುದ್ಧ ಸಾರ್ತೆವೆ ಆದರೆ‌ ಸದಾನಂದಗೌಡರನ್ನ ಬೆಂಗಳೂರು ಉತ್ತರದಿಂದ ಸುಳ್ಯಕ್ಕೆ ಕಳಿಸೋ ಹೇಳಿಕೆ‌ಯನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ. ಅವರಿಗೆ ಸ್ವಲ್ಪ ಕಾಮನ್ ಸೆನ್ಸ್ ಇರ್ಬೇಕು. ನಾನು ಮುಖ್ಯಮಂತ್ರಿ ಆಗಿದ್ದವ ರಾಜ್ಯದ ಎಲ್ಲಿಂದ ಬೇಕಾದರೂ ಚುನಾವಣೆಗೆ ನಿಲ್ಲಬಹುದು ಎನ್ನುವ ತಿಳಿವಳಿಕೆ ಅವರಿಗಿಲ್ಲವೇ? ಇದಕ್ಕೆ‌ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಆಗ ಯಾರು ಎಲ್ಲಿಗೆ ಹೋಗುತ್ತಾರೆ ಎಂದು ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.
.

ಬೆಂಗಳೂರು: ಟೀಕೆ ಟಿಪ್ಪಣಿಗಳನ್ನು ಮಾಡದೆ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ನಾವು ಚುನಾವಣೆ ಎದುರಿಸುತ್ತಿದ್ದು, ಮತದಾನ ಮುಗಿದ‌ ದಿನವೇ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮೈತ್ರಿ ಸರ್ಕಾರ ಪತನದ ಸುಳಿವನ್ನು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ ಸದಾನಂದಗೌಡ ನೀಡಿದ್ದಾರೆ.

ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಯಾರ ವಿರುದ್ಧವೂ ಟೀಕೆ, ಆರೋಪ ಮಾಡದೆ ಅಭಿವೃದ್ಧಿ ವಿಷಯ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ‌ಪ್ರೋಗ್ರೆಸ್ ಕಾರ್ಡ್ ಜನರ ಮುಂದೆ ಇಟ್ಟಿದ್ದು, ಅದನ್ನು ಮೌಲ್ಯಮಾಪನ ಮಾಡಿ ಜನ ಆಶೀರ್ವಾದ ಮಾಡಲಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ನಾನು ಗೆಲ್ಲುತ್ತೇನೆ ಇದು ಅತಿಯಾದ ಆತ್ಮವಿಶ್ವಾಸ ಅಲ್ಲ ವಾಸ್ತವ ಎಂದರು.

ಡಿ ವಿ ಸದಾನಂದಗೌಡ

ಮೈತ್ರಿ ಸರ್ಕಾರ ಪತನ:

ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನದ ಸನಿಹದಲ್ಲಿದೆ. ಮತದಾನ ಮುಗಿದ ದಿನವೇ ಏನು ಬೇಕಾದರೂ ಆಗಬಹುದು, ನಾನು ಭವಿಷ್ಯ ನುಡಿಯಲ್ಲ, ವಾಸ್ತವವನ್ನು ಹೇಳುತ್ತಿದ್ದೇನೆ. ಬೇರೆ ಬೇರೆ ಕಡೆ ಆಗ್ತಿರೋ ವಿದ್ಯಮಾನ ನೋಡ್ತಿದ್ದರೆ ಏನ್ ಬೇಕಾದರು ಆಗುತ್ತೆ ಹಾಸನ, ಮಂಡ್ಯ, ತುಮಕೂರು ಕಡೆ ನೋಡ್ತಿದ್ದೇವೆ ಜಂಟಿ ಪ್ರಚಾರಗಳಲ್ಲೂ ಒಟ್ಟಿಗೆ ಹೋಗ್ತಿಲ್ಲ ಮೈತ್ರಿಯಲ್ಲಿ ಯಾವಾಗ ಏನ್ ಬೇಕಾದರೂ ಆಗಬಹುದು. ನಾವಾಗಿಯೇ ಯಾವುದಕ್ಕೂ ಕೈ ಹಾಕಲ್ಲ. ಆದರೆ ಸರ್ಕಾರ‌ ಬಿದ್ದರೆ 104 ಸ್ಥಾನ ಪಡೆದಿರುವ ನಾವು ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಚುನಾವಣೆ ನಂತರ ಸರ್ಕಾರ ರಚನೆ ಸುಳಿವು ನೀಡಿದರು.


ಸುಮಲತಾಗೆ ಬಿಜೆಪಿ ವರ:

ಸುಮಲತಾ ಪರ ಬಿಜೆಪಿ ಬೆಂಬಲ ವರವೋ ಶಾಪವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ, ನಾವು ವರ ಕೊಡ್ಲಿಕ್ಕೇ ಇದ್ದೇವೆ. ಶಾಪ ಕೊಡುವುದಿಲ್ಲ ಒಬ್ಬರನ್ನ ಮಣಿಸಿ ಮತ್ತೊಬ್ಬರ ಜೊತೆ ಮಲ್ಲಯುದ್ಧ ಸಾರ್ತೆವೆ ಆದರೆ‌ ಸದಾನಂದಗೌಡರನ್ನ ಬೆಂಗಳೂರು ಉತ್ತರದಿಂದ ಸುಳ್ಯಕ್ಕೆ ಕಳಿಸೋ ಹೇಳಿಕೆ‌ಯನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ. ಅವರಿಗೆ ಸ್ವಲ್ಪ ಕಾಮನ್ ಸೆನ್ಸ್ ಇರ್ಬೇಕು. ನಾನು ಮುಖ್ಯಮಂತ್ರಿ ಆಗಿದ್ದವ ರಾಜ್ಯದ ಎಲ್ಲಿಂದ ಬೇಕಾದರೂ ಚುನಾವಣೆಗೆ ನಿಲ್ಲಬಹುದು ಎನ್ನುವ ತಿಳಿವಳಿಕೆ ಅವರಿಗಿಲ್ಲವೇ? ಇದಕ್ಕೆ‌ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಆಗ ಯಾರು ಎಲ್ಲಿಗೆ ಹೋಗುತ್ತಾರೆ ಎಂದು ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.
.

Intro:-ಪ್ರಶಾಂತ್ ಕುಮಾರ್


ಉತ್ತರದಲ್ಲಿ ನನ್ನ ಗೆಲುವು ಖಚಿತ, ಮತದಾನದ ಬಳಿಕ ಮೈತ್ರಿ ಸರ್ಕಾರದ ಪತನ ನಿಶ್ಚಿತ:ಡಿ.ವಿ ಸದಾನಂದಗೌಡ

ಬೆಂಗಳೂರು: ಟೀಕೆ ಟಿಪ್ಪಣಿಗಳನ್ನು ಮಾಡದೇ ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ನಾವು ಚುನಾವಣೆ ಎದುರಿಸುತ್ತಿದ್ದು,ಮತದಾನ ಮುಗಿದ‌ ದಿನವೇ ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಮೈತ್ರಿ ಸರ್ಕಾರ ಪತನದ ಸುಳಿವನ್ನು ಕೇಂದ್ರ ಸಚಿವ ಹಾಗು ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ ಸದಾನಂದಗೌಡ ನೀಡಿದ್ದಾರೆ.
Body:ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ,ಯಾರ ವಿರುದ್ಧವೂ ಟೀಕೆ,ಆರೋಪ ಮಾಡದೆ ಅಭಿವೃದ್ಧಿ ವಿಷಯ ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದೇವೆ, ನಮ್ಮ‌ಪ್ರೋಗ್ರೆಸ್ ಕಾರ್ಡ್ ಜನರ ಮುಂದೆ ಇಟ್ಟಿದ್ದು ಅದನ್ನು ಮೌಲ್ಯಮಾಪನ ಮಾಡಿ ಜನ ಆಶೀರ್ವಾದ ಮಾಡಲಿದ್ದಾರೆ, ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ನಾನು ಗೆಲ್ಲುತ್ತೇನೆ ಇದು ಅತಿಯಾದ ಆತ್ಮವಿಶ್ವಾಸ ಅಲ್ಲ ವಾಸ್ತವ ಎಂದರು.

ಮೈತ್ರಿ ಸರ್ಕಾರ ಪಥನ:

ರಾಜ್ಯದಲ್ಲಿರುವ ಮೈತ್ರಿ ಸರ್ಕಾರ ಪತನದ ಸನಿಹದಲ್ಲಿದೆ ಮತದಾನ ಮುಗಿದ ದಿನವೇ ಏನು ಬೇಕಾದರೂ ಆಗಬಹುದು, ನಾನು ಭವಿಷ್ಯ ನುಡಿಯಲ್ಲ ಆದರೆ ವಾಸ್ತವವನ್ನು ಹೇಳುತ್ತಿದ್ದೇನೆ,‌ಬೇರೆ ಬೇರೆ ಕಡೆ ಆಗ್ತಿರೋ ವಿದ್ಯಮಾನ ನೋಡ್ತಿದ್ದರೆ ಏನ್ ಬೇಕಾದರು ಆಗುತ್ತದೆ ಹಾಸನ, ಮಂಡ್ಯ, ತುಮಕೂರು ಕಡೆ ನೋಡ್ತಿದ್ದೇವೆ ಜಂಟಿ ಪ್ರಚಾರಗಳಲ್ಲೂ ಒಟ್ಟಿಗೆ ಹೋಗ್ತಿಲ್ಲ ಮೈತ್ರಿಯಲ್ಲಿ ಯಾವಾಗ ಏನ್ ಬೇಕಾದರೂ ಆಗಬಹುದು,ನಾವಾಗಿಯೇ ಯಾವುದಕ್ಕೂ ಕೈ ಹಾಕಲ್ಲ,‌ಆದರೆ ಸರ್ಕಾರ‌ ಬಿದ್ದರೆ 104 ಸ್ಥಾನ ಪಡೆದಿರುವ ನಾವು ಸರ್ಕಾರ ರಚನೆ ಮಾಡಲಿದ್ದೇವೆ ಎಂದು ಚುನಾವಣೆ ನಂತರ ಸರ್ಕಾರ ರಚನೆ ಸುಳಿವು ನೀಡಿದರು.

ಕೆಲವೊಂದು ಗೊಂದಲಗಳಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯ್ತು‌ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಜಯಗಳಿಸಿ ಕೇಂದ್ರ ಸಚಿವನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದೇನೆ,ಅನಂತ್ ಕುಮಾರ್ ನಿಧನರಾದ ಬಳಿಕ ಅವರು ನಿರ್ವಹಣೆ ಮಾಡುತ್ತಿದ್ದ ಇಲಾಖೆಯ ಜವಾಬ್ದಾರಿ ಕೂಡ ನನ್ನ ಹೆಗಲಿಗೆ ಬಂತ್ತು ನನ್ನ ಅಧಿಕಾರದಲ್ಲಿ ನನಗೆ ವಹಿಸಿದ ಇಲಾಖೆಯಲ್ಲಿ ಯಾವುದೇ ತಲೆ ತಗ್ಗಿಸುವ ಕೆಲಸ ಮಾಡಲಿಲ್ಲ ಅದು ನನಗೆ ಬಹಳ ಖುಷಿ ತಂದಿದೆ ಎಂದು ತಮ್ಮ ಕರ್ತವ್ಯ ನಿರ್ವಹಣೆಯನ್ನು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿಯಾಗಿದ್ದಾಗ ಒಂದು ವರ್ಷದಲ್ಲಿ ಪಾರದರ್ಶಕ ಆಡಳಿತ ಕೊಟ್ಟೆ ಅದೇ ಆಧಾರದಲ್ಲಿ ಕೇಂದ್ರದ ಮಂತ್ರಿಯಾಗಲು ಸಾದ್ಯವಾಯ್ತು‌ ನಾನು ಪಕ್ಷದ ಅಧ್ಯಕ್ಷನಾದಾಗ ಯಾವುದೇ ಗುಂಪುಗಾರಿಕೆ ಮಾಡಿಲ್ಲ ಅದರಿಂದಾಗಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯ್ತು,ನಾನು ಕೇಂದ್ರ ರೈಲ್ವೆ ಸಚಿವನಾಗಿದ್ದಾಗ ಬೆಂಗಳೂರಿಗೆ ಸಬ್ ಅರ್ಬನ್ ರೈಲು ಯೋಜನೆ ಜಾರಿಗೆ ತಂದೆ ಅದನ್ನ ಎಲ್ಲೂ ನಾನು ಮಾಡಿದ್ದು ಅಂತ ಹೇಳಿಕೊಳ್ಳಲಿಲ್ಲ ರೈಲ್ವೆ ಇಲಾಖೆಯಲ್ಲಿ ಹೊಸ ತಂತ್ರಜ್ಞಾನ ಜಾರಿ ಮಾಡಲಾಯ್ತು. ಇದರಿಂದ ಯಾವ ಟ್ರೈನ್ ಎಲ್ಲಿದೆ ಎಷ್ಟೊತ್ತಿಗೆ ಟ್ರೈನ್ ಬಿಡುತ್ತೆ ಎಂಬುದನ್ನ ಕಂಡುಹಿಡಿಯಲು ಸಾದ್ಯವಾಯ್ತು ಇದೆಲ್ಲವೂ‌ ನನ್ನ ಕಾಲಘಟ್ಟದಲ್ಲಿ ಮಾಡಿದ ಸಾಧನೆ ಎಂದರು.

ಯಶವಂತಪುರಕ್ಕೆ ಕೇಂದ್ರಿಯ ವಿದ್ಯಾಲಯ ಮಂಜೂರು ಮಾಡಿಸಿದ್ದು ನಾನು ರಾಜ್ಯಕ್ಕೆ ಹಲವು ರೈಲ್ವೇ ಬ್ರಿಡ್ಜ್ ಗಳನ್ನ ತಂದುಕೊಟ್ಟೆ ‌ಆದರೆ ನಾನೆಲ್ಲೂ ಪ್ರಚಾರ ಮಾಡಿಕೊಂಡಿಲ್ಲ
ಮೋದಿ ಹೆಸರಲ್ಲಿ ಚುನಾವಣೆ ನಡೆಸ್ತಿದೀವಿ ದೇಶಕ್ಕೆ ಉತ್ತಮ‌ ನಾಯಕ ಸಿಕ್ಕಿದ್ದಾರೆ ಅದರಿಂದ ಮೋದಿ ಹೆಸರಲ್ಲಿ ಮತ ಕೇಳ್ತಿದೀವಿ ಅದು ನಮ್ಮೆಲ್ಲರಿಗೂ ಹೆಮ್ಮೆ ಇದೆ ಎಂದರು.

ಚುನಾವಣಾ ಸಂಧರ್ಭದಲ್ಲಿ ರಾಜ್ಯಕ್ಕೆ ನಿಮ್ಮ ಕೊಡುಗೆ ಏನು ಅಂತ ಕೇಳ್ತಾರೆ ಕೇಂದ್ರ ಮತ್ತು‌ ರಾಜ್ಯಕ್ಕೆ ಕೊಂಡಿಯಾಗಿ ಕೆಲಸ ಮಾಡಿದ್ದಾನೆ ರಾಜ್ಯಕ್ಕೆ ಅತಿಹೆಚ್ಚು ಅನುಧಾನ ತಂದಿದ್ದೇನೆ
ಕಾವೇರಿ ವಿಚಾರದಲ್ಲಿ ಎಂ.ಬಿ ಪಾಟೀಲ್ ನನ್ನನ್ನ ಭೇಟಿ‌ ಮಾಡಿದ್ರು ರಾಜ್ಯಕ್ಕೆ 10 ಟಿ.ಎಂ.ಸಿ ಹಾಗೂ
ಬೆಂಗಳೂರಿಗೆ 4 ಟಿ.ಎಂ.ಸಿ ಹೆಚ್ಚು ನೀರು ಸಿಗುವ ಕೆಲಸ ಮಾಡಿದೆ. ಕಾನೂನು ಸಚಿವನಾಗಿದ್ದಾಗ ರಾಜ್ಯಕ್ಕೆ ನ್ಯಾಯ ದೊರಕಿಸಿಕೊಟ್ಟೆ. ಯಾರ ಮೇಲೆ ಆರೋಪ ಮಾಡ್ಕೊಂಡು ಚುನಾವಣೆ ನಿಲ್ತಿಲ್ಲ ನನ್ನ ರಿಪೋರ್ಟ್ ಕಾರ್ಡ್ ಇಟ್ಕೊಂಡು ಚುನಾವಣೆಗೆ ಮುಂದಾಗಿದ್ದೇನೆ ಟೀಕೆ ಟಿಪ್ಪಣಿ ಮಾಡದೇ ನಾನು ಮಾಡಿದ ಕೆಲಸದ ಮೇಲೆ ಪ್ರಚಾರ ನಡೆಸುತ್ತಿದ್ದೇನೆ ಎಂದರು.

ಚುನಾವಣೆ ನಂತರ ರಾಜ್ಯಾಧ್ಯಕ್ಷರ ಬದಲಾವಣೆ ರಾಷ್ಟ ಮಟ್ಟದ ನಾಯಕರು ತೆಗೆದುಕೊಳ್ಳುವ ನಿರ್ಧಾರ, ಮೂರು ವರ್ಷಕ್ಕೆ ಒಮ್ಮೆ ಅಧ್ಯಕ್ಷರ ಬದಲಾವಣೆ ಆಗುತ್ತದೆ ಆದರೆ ಈಗ ನಮ್ಮ ಪಕ್ಷದ ಸಂವಿಧಾನದಲ್ಲಿ ಬದಲಾವಣೆ ಮಾಡಿ ಎರಡು ಅವಧಿಗೆ ಅಧ್ಯಕ್ಷರು ಮುಂದುವರೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ಸ್ಟೇಜ್ ನಲ್ಲಿ ನಾವು ಈ ಬಗ್ಗೆ ಮಾತಾಡೋದು ಸೂಕ್ತ ಅಲ್ಲ ಯುವಕರಿಗೆ ಹೆಚ್ಚು ಆಧ್ಯತೆ ಕೊಡ್ಬೇಕು ಅಂತ ವರಿಷ್ಠರು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಸುಮಲತಾ ಪರ ಬಿಜೆಪಿ ಬೆಂಬಲ ವರವೋ ಶಾಪವೋ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸದಾನಂದಗೌಡ ನಾವು ವರ ಕೊಡ್ಲಿಕ್ಕೇ ಇದ್ದೇವೆ. ಶಾಪ ಕೊಡುವುದಿಲ್ಲ ಒಬ್ಬರನ್ನ ಮಣಿಸಿ ಮತ್ತೊಬ್ಬರ ಜೊತೆ ಮಲ್ಲಯುದ್ಧ ಸಾರ್ತೆವೆ ಆದರೆ‌ಸದಾನಂದಗೌಡರನ್ನ ಬೆಂಗಳೂರು ಉತ್ತರದಿಂದ ಸುಳ್ಯಕ್ಕೆ ಕಳಿಸೋ ಹೇಳಿಕೆ‌ಯನ್ನು ಕಾಂಗ್ರೆಸ್ ನಾಯಕರು ನೀಡುತ್ತಿದ್ದಾರೆ,ಅವರಿಗೆ ಸ್ವಲ್ಪ ಕಾಮನ್ ಸೆನ್ಸ್ ಇರ್ಬೇಕು. ನಾನು ಮುಖ್ಯಮಂತ್ರಿ ಆಗಿದ್ದವ ರಾಜ್ಯದ ಎಲ್ಲಿಂದ ಬೇಕಾದರೂ ಚುನಾವಣೆಗೆ ನಿಲ್ಲಬಹುದು ಎನ್ನುವ ತಿಳಿವಳಿಕೆ ಅವರಿಗಿಲ್ಲವೇ?ಇದಕ್ಕೆ‌ ಚುನಾವಣೆಯಲ್ಲಿ ಜನರೇ ಉತ್ತರ ನೀಡುತ್ತಾರೆ ಆಗ ಯಾರು ಎಲ್ಲಿಗೆ ಹೋಗುತ್ತಾರೆ ಎಂದು ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.

ರಫೇಲ್ ಡೀಲ್ ವಿಚಾರ ಕೋರ್ಡ್ ನಲ್ಲಿದೆ,ನಾನು ನ್ಯಾಯಾಲಯಕ್ಕೆ ಏನು ಹೇಳಬೇಕೋ ಹೇಳಿದ್ದೇವೆ,ಸಂಸತ್ತಿನಲ್ಲಿಯೂ ಉತ್ತರ ಕೊಟ್ಟಿದ್ದೇವೆ,ಈಗ
ಸುಪ್ರೀಂ ಕೋರ್ಟ್ ನಲ್ಲಿ ಚರ್ಚೆಯಾದ ವಿಷಯ ಎಲ್ಲೆಂದರಲ್ಲಿ ಚರ್ಚೆ ಮಾಡಬಾರು ಅಂತ ಸುಮ್ಮನಿದ್ದೇವೆ,ಈ ಸಂಬಂಧ ಸುಪ್ರೀಂ ಕೋರ್ಟ್ ನ ಫೈನಲ್ ಜಡ್ಜ್ ಮೆಂಟ್ ಬರ್ಲಿ‌ ನಂತರ ಮಾತಾಡುತ್ತೇವೆ ಎಂದರು.

ಜೀನ್ಸ್, ಡಿಎನ್ ಎ ಆಧಾರದಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಬಿ.ಎಲ್. ಸಂತೋಷ್ ಹೇಳಿಕೆ ನೀಡಿದ್ದಾರೆ, ಸಂತೋಷ್ ಅವರ ಹೇಳಿಕೆ ಬಗ್ಗೆ ಈಗ ಏನೂ ಕೂಡಾ ಹೇಳುವ ಸ್ಥಿತಿಯಲ್ಲಿ ಇಲ್ಲ ಅದರ ಬಗ್ಗೆ ಹೆಚ್ಚಿನ ಮಾಹಿತಿ ಕೂಡಾ ಇಲ್ಲ,ಅವರು ರಾಷ್ಟ್ರೀಯ ಸಹ‌ ಸಂಘಟನಾ ‌ಕಾರ್ಯದರ್ಶಿ ಆಗಿರುವ ಕಾರಣ ರಾಷ್ಟ್ರಕ್ಕೆ ಅನ್ವಯಿಸುವಂತೆ ಹೇಳಿರಬಹುದು‌ ಆದರೆ ರಾಜ್ಯ ಕೋರ್ ಕಮಿಟಿ ಅಭ್ಯರ್ಥಿಗಳ ಹೆಸರು ಶಿಫಾರಸು ‌ಮಾಡಿದರೂ ವರಿಷ್ಠರು ಬೇರೆ ಬೇರೆ ಮಾನದಂಡ ಇಟ್ಟು ಟಿಕೆಟ್ ಕೊಟ್ಟಿರುತ್ತಾರೆ ಎಂದು ವ್ಯಾಖ್ಯಾನಿಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.