ETV Bharat / state

ಕ್ಯಾನ್ಸರ್‌ ಇದೆ ಎಂದು ಪತ್ನಿ ಕುಡಿಯಲು ಹಣ ಕೊಡಲಿಲ್ಲ, ಪಾಪಿ ಪತಿ ಕಲ್ಲು ಎತ್ತಿ ಹಾಕಿ ಕೊಲೆಗೈದ! - Husband killed wife by hitting stone

ಬೆಂಗಳೂರಿನಲ್ಲಿ ಕುಡಿಯಲು ಹೆಂಡತಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಕುಪಿತಗೊಂಡ ಪತಿ ನೆತ್ತಿಯ ಮೇಲೆ ಕಲ್ಲು ಹಾಕಿ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಪತ್ನಿಯ ಕೊಂದ ಪತಿ
ಪತ್ನಿಯ ಕೊಂದ ಪತಿ
author img

By

Published : Dec 3, 2019, 9:20 PM IST

ಬೆಂಗಳೂರು: ಕುಡಿಯಲು ಹಣ ಕೊಡಲಿಲ್ಲವೆಂದು ಕಲ್ಲು ಎತ್ತಿ ಹಾಕಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ಕುರುಬರ ಹಳ್ಳಿಯಲ್ಲಿ ನಡೆದಿದೆ.

ಸಿದ್ದಮ್ಮ ಕೊಲೆಯಾದ ದುರ್ದೈವಿ. ಇವರು ಕಳೆದೊಂದು ವರ್ಷದ ಹಿಂದೆ ಕಲಬುರಗಿಯಿಂದ ತನ್ನ ಕುಟುಂಬ ಸಮೇತ ಬೆಂಗಳೂರಿನ ಕುರುಬರ ಹಳ್ಳಿಗೆ ಬಂದು ನೆಲೆಸಿದ್ದರು. ಸಿದ್ದಮ್ಮ, ಗಂಡ ಮಲ್ಲಣ್ಣ ಹಾಗೂ ಮಕ್ಕಳು ಕೂಲಿ‌ ಕೆಲಸ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಂದು ಮಧ್ಯಾಹ್ನ ಮಲ್ಲಣ್ಣ ಸಿದ್ದಮ್ಮಳಿಗೆ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ಹಣ ನೀಡಲು ನಿರಾಕರಿಸಿದಕ್ಕೆ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.

Husband killed wife by hitting stone
ತಲೆಯ ಮೇಲೆ ಕಲ್ಲು ಹಾಕಿ ಪತ್ನಿಯ ಕೊಂದ ಪತಿ

ನಿನ್ನೆ ರಾತ್ರಿಯಿಂದ ಮಲ್ಲಣ್ಣ, ಸಿದ್ದಮ್ಮಳ ಬಳಿ ಕುಡಿಯಲು ಹಣ ಕೇಳುತ್ತಿದ್ದ. ಆದರೆ, ಮಲ್ಲಣ್ಣನಿಗೆ ಕ್ಯಾನ್ಸರ್ ಖಾಯಿಲೆ ಇರುವುದರಿಂದ ಸಿದ್ದಮ್ಮ ಹಣ ನೀಡಿರಲಿಲ್ಲ. ಇಂದು ಮುಂಜಾನೆಯಿಂದಲೂ ಹಣಕ್ಕಾಗಿ ಸತಾಯಿಸಿ‌ ಮಲ್ಲಣ್ಣ ಗಲಾಟೆ ಮಾಡಿದ್ದಾನೆ. ಹಣ ಕೊಡದೇ ಇದ್ದಾಗ ಸಿದ್ದಮ್ಮಳ ತಲೆಗೆ ಕಲ್ಲು ಹಾಕಿ ಕೊಲೆ‌ ಮಾಡಿದ್ದಾನೆ.

ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಲ್ಲಣ್ಣನನ್ನ ಬಂಧಿಸಿದ್ದಾರೆ.

ಬೆಂಗಳೂರು: ಕುಡಿಯಲು ಹಣ ಕೊಡಲಿಲ್ಲವೆಂದು ಕಲ್ಲು ಎತ್ತಿ ಹಾಕಿ ಪತಿಯೇ ಪತ್ನಿಯನ್ನು ಕೊಲೆ ಮಾಡಿರುವ ಘಟನೆ ನಗರದ ಕುರುಬರ ಹಳ್ಳಿಯಲ್ಲಿ ನಡೆದಿದೆ.

ಸಿದ್ದಮ್ಮ ಕೊಲೆಯಾದ ದುರ್ದೈವಿ. ಇವರು ಕಳೆದೊಂದು ವರ್ಷದ ಹಿಂದೆ ಕಲಬುರಗಿಯಿಂದ ತನ್ನ ಕುಟುಂಬ ಸಮೇತ ಬೆಂಗಳೂರಿನ ಕುರುಬರ ಹಳ್ಳಿಗೆ ಬಂದು ನೆಲೆಸಿದ್ದರು. ಸಿದ್ದಮ್ಮ, ಗಂಡ ಮಲ್ಲಣ್ಣ ಹಾಗೂ ಮಕ್ಕಳು ಕೂಲಿ‌ ಕೆಲಸ‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಂದು ಮಧ್ಯಾಹ್ನ ಮಲ್ಲಣ್ಣ ಸಿದ್ದಮ್ಮಳಿಗೆ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ಹಣ ನೀಡಲು ನಿರಾಕರಿಸಿದಕ್ಕೆ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ್ದಾನೆ.

Husband killed wife by hitting stone
ತಲೆಯ ಮೇಲೆ ಕಲ್ಲು ಹಾಕಿ ಪತ್ನಿಯ ಕೊಂದ ಪತಿ

ನಿನ್ನೆ ರಾತ್ರಿಯಿಂದ ಮಲ್ಲಣ್ಣ, ಸಿದ್ದಮ್ಮಳ ಬಳಿ ಕುಡಿಯಲು ಹಣ ಕೇಳುತ್ತಿದ್ದ. ಆದರೆ, ಮಲ್ಲಣ್ಣನಿಗೆ ಕ್ಯಾನ್ಸರ್ ಖಾಯಿಲೆ ಇರುವುದರಿಂದ ಸಿದ್ದಮ್ಮ ಹಣ ನೀಡಿರಲಿಲ್ಲ. ಇಂದು ಮುಂಜಾನೆಯಿಂದಲೂ ಹಣಕ್ಕಾಗಿ ಸತಾಯಿಸಿ‌ ಮಲ್ಲಣ್ಣ ಗಲಾಟೆ ಮಾಡಿದ್ದಾನೆ. ಹಣ ಕೊಡದೇ ಇದ್ದಾಗ ಸಿದ್ದಮ್ಮಳ ತಲೆಗೆ ಕಲ್ಲು ಹಾಕಿ ಕೊಲೆ‌ ಮಾಡಿದ್ದಾನೆ.

ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಲ್ಲಣ್ಣನನ್ನ ಬಂಧಿಸಿದ್ದಾರೆ.

Intro:ಗಂಡನಿಂದಲೇ ಹೆಂಡತಿಯ ಬರ್ಬರ ಹತ್ಯೆ
ಕುಡಿಯಲು ಹಣ ನೀಡಿಲ್ಲ ಎಂದು ಕಲ್ಲು ಎತ್ತಿ ಹಾಕಿ ಕೊಲೆ

ಕುಡಿಯಲು ಹಣ ನೀಡಿಲ್ಲ ಎಂದು ಕಲ್ಲು ಎತ್ತಿ ಹಾಕಿ ಗಂಡನೆ ಹೆಂಡತಿಯನ್ನ ಕೊಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮೃತ ದುರ್ದೈವಿ ಹೆಸರು ಸಿದ್ದಮ್ಮ

ಕಲುಬುರಗಿ ಮೂಲದವರಾಗಿದ್ದ ಸಿದ್ದಮ್ಮ ಕಳೆದ ಒಂದು ವರ್ಷದ ಹಿಂದೆ ತನ್ನ ಕುಟುಂಬ ಸಮೇತ ಬೆಂಗಳೂರಿಗೆ ಬಂದಿದ್ರು.ತಾನು ಹಾಗೂ ತನ್ನ ಮಕ್ಕಳು ಎಲ್ಲರೂ ಸೇರಿ ಬೆಂಗಳೂರಿನ ಕುರುಬರ ಹಳ್ಳಿಯಲ್ಲಿ ವಾಸವಾಗಿ ಎಲ್ಲರೂ ಕೂಲಿ‌ ಕೆಲಸ‌ಮಾಡಿಕೊಂಡು ಜೀವನ ಸಾಗಿಸುತ್ತಿದ್ರು.ಆದ್ರೆ ಇಂದು ಮಟಮಟ ಮಧ್ಯಾಹ್ನವೇ ಸ್ವಂತ ಗಂಡನಾದ ಮಲ್ಲಣ್ಣ ಸಿದ್ದಮ್ಮಳ ಜೊತೆ ಕುಡಿಯಲು ಹಣ ಕೇಳಿದ್ದಾನೆ. ಈ ವೇಳೆ ನಿರಾಕರಿಸಿದಕ್ಕೆ ತಲೆಗೆ ಕಲ್ಲು ಎಸೆದು ಕೊಲೆ ಮಾಡಿದ್ದಾನೆ.

ನಿನ್ನೆ ರಾತ್ರಿಯಿಂದ ಮಲ್ಲಣ್ಣ ,ಸಿದ್ದಮ್ಮಳ ಬಳಿ ಕುಡಿಯಲು ಹಣ ಕೇಳುತ್ತಿದ್ದ.ಆದ್ರೆ ಸಿದ್ದಮ್ಮ ತನ್ನ ಗಂಡ ಮಲ್ಲಣ್ಣನಿಗೆ ಕ್ಯಾನ್ಸರ್ ಖಾಯಿಲೆ ಇರುವುದರಿಂದ ಹಣ ನೀಡಿರಲಿಲ್ಲ.ಇಂದು ಮುಂಜಾನೆಯಿಂದಲೂ ಹಣಕ್ಕಾಗಿ ಸತಾಯಿಸಿ‌ ಮಲ್ಲಣ್ಣ ಗಲಾಟೆ ಮಾಡಿದ್ದಾನೆ.ಸಿದ್ದಮ್ಮ ಹಣ ಕೊಡದೆ ಇದ್ದಾಗ ಮಲ್ಲಣ್ಣ ಸಿದ್ದಮ್ಮಳ ತಲೆಗೆ ಕಲ್ಲು ಎಸೆದು ಕೊಲೆ‌ಮಾಡಿದ್ದಾನೆ. ಸದ್ಯ ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಮಲ್ಲಣ್ಣನನ್ನ ಬಂಧಿಸುವಲ್ಲಿ‌ ಯಶಸ್ವಿಯಾಗಿದ್ದಾರೆ.Body:KN_BNG_11_MURDER_7204498Conclusion:KN_BNG_11_MURDER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.