ETV Bharat / state

ಡಿಸಿ ಆದೇಶವಿಲ್ಲದೆ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನು ವಶ: ರೈತ ಆರೋಪ - ಆನೇಕಲ್

ಸಾಲ ತೀರಿಸಲು ಅವಕಾಶ ನೀಡದೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ಜಮೀನು ಸ್ವಾಧೀನಕ್ಕೆ ಮುಂದಾಗಿದ್ದಾರೆ ಎಂದು ಆನೇಕಲ್​ ಬಳಿಯ ತನ್ನ ಜಮೀನು ಕಳೆದುಕೊಳ್ಳುತ್ತಿರುವ ರೈತ ಆರೋಪಿಸಿದ್ದಾರೆ.

ddd
ಆನೇಕಲ್​ನಲ್ಲಿ ರೈತನಿಂದ ಗಂಭೀರ ಆರೋಪ
author img

By

Published : Jul 2, 2020, 6:57 PM IST

ಬೆಂಗಳೂರು/ಆನೇಕಲ್: ಬ್ಯಾಂಕ್​ನಿಂದ ಪಡೆದ ಸಾಲ ತೀರಿಸಲಾಗದೆ ಕಾನೂನು ಮೊರೆ ಹೋಗಿರುವುದನ್ನು ನೆಪ ಮಾಡಿಕೊಂಡು ತರಾತುರಿಯಲ್ಲಿ ಜಮೀನು ವಶಪಡಿಸಿಕೊಳ್ಳುತ್ತಿದ್ದಾರೆಂದು ರೈತರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.

ಆನೇಕಲ್​ನಲ್ಲಿ ರೈತನಿಂದ ಗಂಭೀರ ಆರೋಪ

ಅತ್ತಿಬೆಲೆ-ಆನೇಕಲ್ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಂಟೂವರೆ ಕೋಟಿಯಷ್ಟು ಬೆಲೆ ಬಾಳುವ ಜಮೀನು ರಮೇಶ್ ಎಂಬ ರೈತನಿಗೆ ಸೇರಿದೆ. ಜಮೀನಿನ ಮೇಲೆ ತಮಿಳುನಾಡಿನ ಹೊಸೂರು ಕೆನರಾ ಬ್ಯಾಂಕ್​ನಿಂದ ಎಂಎಸ್ಇ ಅಡಿಯಲ್ಲಿ 15 ಕೋಟಿ ಸಾಲ ಪಡೆದಿದ್ದರು. ಕಳೆದ ವರ್ಷ ಸಾಲ ತೀರಿಸಲಾಗದೆ ರಮೇಶ್ ಕೈಚೆಲ್ಲಿ ಕುಳಿತಿದ್ದರು. ಇದನ್ನೇ ನೆಪ ಮಾಡಿಕೊಂಡ ಬ್ಯಾಂಕ್ ಹಾಗೂ ರೈತ ರಮೇಶ್ ಸ್ನೇಹಿತ ಬೇರೊಬ್ಬರನ್ನು ಪುಸಲಾಯಿಸಿ ತರಾತುರಿಯಲ್ಲಿ ಐದೂವರೆ ಕೋಟಿಗೆ ಹರಾಜಿನಲ್ಲಿ ಜಮೀನಿನ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಯಮದಂತೆ ಜಿಲ್ಲಾಧಿಕಾರಿಗಳಿಂದ ಸರ್ವೇ, ಜಮೀನಿನ ಹಕ್ಕು ಮುಂತಾದ ಕ್ಲೀಯರಿಂಗ್ ಸರ್ಟಿಫಿಕೇಟ್ ತೋರಿಸುವಂತೆ ರೈತ ಕೋರಿದ್ದಾರೆ. ಆದರೆ ಬ್ಯಾಂಕ್ ಮತ್ತು ಹರಾಜಿನಲ್ಲಿ ಭೂಮಿ ಪಡೆದವರು ದಾಖಲೆ ತೋರಿಸುತ್ತಿಲ್ಲವೆಂದು ರೈತ ದೂರಿದ್ದಾರೆ.

ಬೆಂಗಳೂರು/ಆನೇಕಲ್: ಬ್ಯಾಂಕ್​ನಿಂದ ಪಡೆದ ಸಾಲ ತೀರಿಸಲಾಗದೆ ಕಾನೂನು ಮೊರೆ ಹೋಗಿರುವುದನ್ನು ನೆಪ ಮಾಡಿಕೊಂಡು ತರಾತುರಿಯಲ್ಲಿ ಜಮೀನು ವಶಪಡಿಸಿಕೊಳ್ಳುತ್ತಿದ್ದಾರೆಂದು ರೈತರೊಬ್ಬರು ಗಂಭೀರವಾಗಿ ಆರೋಪಿಸಿದ್ದಾರೆ.

ಆನೇಕಲ್​ನಲ್ಲಿ ರೈತನಿಂದ ಗಂಭೀರ ಆರೋಪ

ಅತ್ತಿಬೆಲೆ-ಆನೇಕಲ್ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಎಂಟೂವರೆ ಕೋಟಿಯಷ್ಟು ಬೆಲೆ ಬಾಳುವ ಜಮೀನು ರಮೇಶ್ ಎಂಬ ರೈತನಿಗೆ ಸೇರಿದೆ. ಜಮೀನಿನ ಮೇಲೆ ತಮಿಳುನಾಡಿನ ಹೊಸೂರು ಕೆನರಾ ಬ್ಯಾಂಕ್​ನಿಂದ ಎಂಎಸ್ಇ ಅಡಿಯಲ್ಲಿ 15 ಕೋಟಿ ಸಾಲ ಪಡೆದಿದ್ದರು. ಕಳೆದ ವರ್ಷ ಸಾಲ ತೀರಿಸಲಾಗದೆ ರಮೇಶ್ ಕೈಚೆಲ್ಲಿ ಕುಳಿತಿದ್ದರು. ಇದನ್ನೇ ನೆಪ ಮಾಡಿಕೊಂಡ ಬ್ಯಾಂಕ್ ಹಾಗೂ ರೈತ ರಮೇಶ್ ಸ್ನೇಹಿತ ಬೇರೊಬ್ಬರನ್ನು ಪುಸಲಾಯಿಸಿ ತರಾತುರಿಯಲ್ಲಿ ಐದೂವರೆ ಕೋಟಿಗೆ ಹರಾಜಿನಲ್ಲಿ ಜಮೀನಿನ ಮೇಲೆ ಹಕ್ಕು ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಿಯಮದಂತೆ ಜಿಲ್ಲಾಧಿಕಾರಿಗಳಿಂದ ಸರ್ವೇ, ಜಮೀನಿನ ಹಕ್ಕು ಮುಂತಾದ ಕ್ಲೀಯರಿಂಗ್ ಸರ್ಟಿಫಿಕೇಟ್ ತೋರಿಸುವಂತೆ ರೈತ ಕೋರಿದ್ದಾರೆ. ಆದರೆ ಬ್ಯಾಂಕ್ ಮತ್ತು ಹರಾಜಿನಲ್ಲಿ ಭೂಮಿ ಪಡೆದವರು ದಾಖಲೆ ತೋರಿಸುತ್ತಿಲ್ಲವೆಂದು ರೈತ ದೂರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.