ETV Bharat / state

ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಸರ್ಕಾರ ಹಠ ಹಿಡಿದದ್ದು ಸರಿಯಲ್ಲ: ಎಸ್​​ಆರ್ ಪಾಟೀಲ್

author img

By

Published : Dec 25, 2021, 7:07 AM IST

ವಿಧಾನ ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ಪ್ರತಿಪಕ್ಷ ಸದಸ್ಯರನ್ನು ಅಷ್ಟೊತ್ತು ಕಾಯಿಸಿರೋದು ಸರಿಯಲ್ಲ. ಜಿದ್ದಿಗೆ ಬಿದ್ದು ಬಿಲ್ ಪಾಸ್ ಆಗಲೇಬೇಕು ಎಂದು ಹೀಗೆ ಮಾಡಿದ್ದಾರೆ. ಅದಕ್ಕೆ ಒಂದಿಷ್ಟು ಗೊಂದಲ ಆಯ್ತು. ಬಿಲ್ ಬಗ್ಗೆ ಅಷ್ಟು ಆಸಕ್ತಿ ವಹಿಸುವ ಬದಲು ಜನ ಪರ ಕೆಲಸಗಳ ಬಗ್ಗೆ ಆಸಕ್ತಿ ವಹಿಸಬೇಕಿತ್ತು ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಹೇಳಿದ್ದಾರೆ.

SR Patil on anti conversion bill
ಮತಾಂತರ ನಿಷೇಧ ಕಾಯ್ದೆ, ಎಸ್​​ಆರ್ ಪಾಟೀಲ್

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಸರ್ಕಾರ ಹಠ ಹಿಡಿದದ್ದು ಸರಿಯಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ವಿಧಾನ ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಪಕ್ಷ ಸದಸ್ಯರನ್ನು ಅಷ್ಟೊತ್ತು ಕಾಯಿಸಿರೋದು ಸರಿಯಲ್ಲ. ಜಿದ್ದಿಗೆ ಬಿದ್ದು ಬಿಲ್ ಪಾಸ್ ಆಗಲೇ ಬೇಕು ಎಂದು ಹೀಗೆ ಮಾಡಿದ್ದಾರೆ. ಅದಕ್ಕೆ ಒಂದಿಷ್ಟು ಗೊಂದಲ ಆಯ್ತು. ಬಿಲ್ ಬಗ್ಗೆ ಅಷ್ಟು ಆಸಕ್ತಿ ವಹಿಸುವ ಬದಲೂ ಜನ ಪರ ಕೆಲಸಗಳ ಬಗ್ಗೆ ಆಸಕ್ತಿ ವಹಿಸಬೇಕಿತ್ತು. ಕೊನೆಯ ಗಳಿಗೆಯಲ್ಲಿ ಈ ರೀತಿಯಾದ ಘಟನೆ ನಡೆಯಬಾರದಿತ್ತು. ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ಸುದೀರ್ಘವಾಗಿ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನೂರಕ್ಕೆ ನೂರರಷ್ಟು ನನಗೆ ತೃಪ್ತಿ ಇದೆ ಎಂದು ವಿವರಿಸಿದರು.

ಪ್ರತಿಪಕ್ಷ ಮುಖ್ಯಸಚೇತಕ ಎಂ. ನಾರಾಯಣಸ್ವಾಮಿ ಮಾತನಾಡಿ, ಸದಸ್ಯರನ್ನು ಕರೆಸೋದಕ್ಕೆ ಕಾಲಹರಣ ಮಾಡ್ತಾ ಇದ್ದರು. ಏನಾದ್ರೂ ಮಾಡಿ ಬಿಲ್ ಪಾಸ್ ಮಾಡಬೇಕು ಎನ್ನುವ ಕಾರಣಕ್ಕೆ ಸದಸ್ಯರನ್ನು ಕರೆಸುವ ಹಠಕ್ಕೆ ಬಿದ್ದರು. ಜ್ವಲಂತ ಸಮಸ್ಯೆಗಳಿಗಿಂತ ಬಿಲ್ ಅವರಿಗೆ ಮುಖ್ಯವಾಯ್ತು. ಹೀಗಾಗಿ ನಾಳೆಗೆ ಮುಂದೂಡಿಕೆ ಮಾಡಿ ಅಂತಾ ಹೇಳಿದ್ವಿ. ಕೊನೆಗೆ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ ಆಯ್ತು ಎಂದರು.

ಇದನ್ನೂ ಓದಿ:ಚಳಿಗಾಲದ‌ ಅಧಿವೇಶನ ಮುಗಿದ ಬೆನ್ನಲ್ಲೇ ದುಬೈ ಪ್ರವಾಸಕ್ಕೆ ತೆರಳಿದ ಮಾಜಿ ಸಿಎಂ ಬಿಎಸ್ವೈ..!

ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರದಲ್ಲಿ ಸರ್ಕಾರ ಹಠ ಹಿಡಿದದ್ದು ಸರಿಯಲ್ಲ ಎಂದು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ವಿಧಾನ ಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಿಪಕ್ಷ ಸದಸ್ಯರನ್ನು ಅಷ್ಟೊತ್ತು ಕಾಯಿಸಿರೋದು ಸರಿಯಲ್ಲ. ಜಿದ್ದಿಗೆ ಬಿದ್ದು ಬಿಲ್ ಪಾಸ್ ಆಗಲೇ ಬೇಕು ಎಂದು ಹೀಗೆ ಮಾಡಿದ್ದಾರೆ. ಅದಕ್ಕೆ ಒಂದಿಷ್ಟು ಗೊಂದಲ ಆಯ್ತು. ಬಿಲ್ ಬಗ್ಗೆ ಅಷ್ಟು ಆಸಕ್ತಿ ವಹಿಸುವ ಬದಲೂ ಜನ ಪರ ಕೆಲಸಗಳ ಬಗ್ಗೆ ಆಸಕ್ತಿ ವಹಿಸಬೇಕಿತ್ತು. ಕೊನೆಯ ಗಳಿಗೆಯಲ್ಲಿ ಈ ರೀತಿಯಾದ ಘಟನೆ ನಡೆಯಬಾರದಿತ್ತು. ಇದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ಸುದೀರ್ಘವಾಗಿ ಬದ್ಧತೆ, ನಿಷ್ಠೆಯಿಂದ ಕೆಲಸ ಮಾಡಿದ್ದೇನೆ. ನೂರಕ್ಕೆ ನೂರರಷ್ಟು ನನಗೆ ತೃಪ್ತಿ ಇದೆ ಎಂದು ವಿವರಿಸಿದರು.

ಪ್ರತಿಪಕ್ಷ ಮುಖ್ಯಸಚೇತಕ ಎಂ. ನಾರಾಯಣಸ್ವಾಮಿ ಮಾತನಾಡಿ, ಸದಸ್ಯರನ್ನು ಕರೆಸೋದಕ್ಕೆ ಕಾಲಹರಣ ಮಾಡ್ತಾ ಇದ್ದರು. ಏನಾದ್ರೂ ಮಾಡಿ ಬಿಲ್ ಪಾಸ್ ಮಾಡಬೇಕು ಎನ್ನುವ ಕಾರಣಕ್ಕೆ ಸದಸ್ಯರನ್ನು ಕರೆಸುವ ಹಠಕ್ಕೆ ಬಿದ್ದರು. ಜ್ವಲಂತ ಸಮಸ್ಯೆಗಳಿಗಿಂತ ಬಿಲ್ ಅವರಿಗೆ ಮುಖ್ಯವಾಯ್ತು. ಹೀಗಾಗಿ ನಾಳೆಗೆ ಮುಂದೂಡಿಕೆ ಮಾಡಿ ಅಂತಾ ಹೇಳಿದ್ವಿ. ಕೊನೆಗೆ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿಕೆ ಆಯ್ತು ಎಂದರು.

ಇದನ್ನೂ ಓದಿ:ಚಳಿಗಾಲದ‌ ಅಧಿವೇಶನ ಮುಗಿದ ಬೆನ್ನಲ್ಲೇ ದುಬೈ ಪ್ರವಾಸಕ್ಕೆ ತೆರಳಿದ ಮಾಜಿ ಸಿಎಂ ಬಿಎಸ್ವೈ..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.