ETV Bharat / state

ಸ್ಮಶಾನ ಫುಲ್! ಹೊಸ ರುದ್ರಭೂಮಿ ನಿರ್ಮಿಸಲು ಬಿಬಿಎಂಪಿಗೆ ಜಾಗ ಮಂಜೂರು

author img

By

Published : Jun 6, 2019, 9:40 PM IST

ಮೀಸಲಿಟ್ಟ ಸ್ಮಶಾನಗಳು ಭರ್ತಿಯಾಗಿವೆ. ಕೆಲವು ಬಡಾವಣೆಗಳ ಮಧ್ಯೆ ಸ್ಮಶಾನವಿರುವುದರಿಂದ ಮಾಲಿನ್ಯ ಹೆಚ್ಚಾಗಿ ಅಕ್ಕ ಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಬಾರಿಯ ಬಜೆಟ್‌ನಲ್ಲಿ 40 ಕೋಟಿ ರೂ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.

ಹೊಸ ರುದ್ರಭೂಮಿ ನಿರ್ಮಿಸಲು ಜಾಗ ಮಂಜೂರು

ಬೆಂಗಳೂರು : ಸಿಲಿಕಾನ್ ಸಿಟಿಯ ಸ್ಮಶಾನಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ. ಸದ್ಯ ನಗರದ ಬಹುತೇಕ ರುದ್ರಭೂಮಿಗಳು ಭರ್ತಿಯಾಗಿದ್ದು, ಇದರಿಂದ ಜನರಿಗೆ ಅನಾನುಕೂಲವಾಗ್ತಿರೋ ಬಗ್ಗೆ ಬಿಬಿಎಂಪಿಗೆ ದೂರುಗಳು ಬರುತ್ತಿದ್ದು, ಹೊಸ ಸ್ಮಶಾನ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ.

ಹೊಸ ಸ್ಮಶಾನ ಮತ್ತು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ನಗರದ ಹೊರವಲಯದ ರಿಂಗ್ ರಸ್ತೆಗಳ ಪಕ್ಕದಲ್ಲಿ 25 ಎಕರೆ ಜಾಗ ಮಂಜೂರು ಮಾಡುವಂತೆ ಪಾಲಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದ್ರೆ, ಸರ್ಕಾರ ಬಿಬಿಎಂಪಿ ಮನವಿ ಮಾಡಿರುವಷ್ಟು ಜಾಗ ಮಂಜೂರು ಮಾಡದೇ, ಕೆ.ಆರ್ ಪುರ ಹೋಬಳಿ, ದೇವಸಂದ್ರ ಗ್ರಾಮದಲ್ಲಿ 30 ಗುಂಟೆ, ದಾಸನಪುರ ಹೋಬಳಿ ಕುದುರೆಗೆ ಗ್ರಾಮದಲ್ಲಿ 2 ಎಕರೆ, ಯಲಹಂಕದ ಬಾಗಲೂರು ಗ್ರಾಮದಲ್ಲಿ 1 ಎಕರೆ, ಶಿವನಪುರದಲ್ಲಿ 2 ಎಕರೆ ಉಲ್ಲೇನಗೌಡನ ಹಳ್ಳಿಯಲ್ಲಿ 2 ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಾಗಿ ನೀಡಿದೆ.

ಹೊಸ ರುದ್ರಭೂಮಿ ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ.

ಅನೇಕ ವರ್ಷಗಳಿಂದ ಮೀಸಲಿಟ್ಟ ಸ್ಮಶಾನ ಜಾಗ ಭರ್ತಿಯಾಗಿದೆ, ಕೆಲವು ಬಡಾವಣೆಗಳ ಮಧ್ಯೆ ಸ್ಮಶಾನವಿರುವುದರಿಂದ ಮಾಲಿನ್ಯ ಹೆಚ್ಚಾಗಿ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಈ ಬಾರಿಯ ಬಜೆಟ್‌ನಲ್ಲಿ 40 ಕೋಟಿ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ನಗರದ ಹೊರವಲಯದಲ್ಲಿ ನೀಡಲಾದ ಸ್ಮಶಾನ ಜಾಗಗಳಲ್ಲಿ ಬೇಲಿ ಹಾಕಿ, ಮೂಲ ಸೌಕರ್ಯ ನೀಡುವ ಕೆಲಸ ಪ್ರಾರಂಭಿಸಲಾಗುತ್ತದೆ. ಪಾಲಿಕೆಯ ಶವ ಸಾಗಿಸುವ ವಾಹನಗಳು ಕಳಪೆ ಸ್ಥಿತಿಯಲ್ಲಿದ್ದು ಸುಧಾರಿಸಬೇಕಿದೆ. ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಸೂಕ್ತ ಸೌಲಭ್ಯಗಳನ್ನು ಪಾಲಿಕೆ ಮಾಡಿ ಕೊಡಬೇಕಿದೆ ಎಂದರು.

ನಗರದಲ್ಲಿ ಒಟ್ಟು 200 ರುದ್ರಭೂಮಿಗಳು, 12 ವಿದ್ಯುತ್ ಚಿತಾಗಾರಗಳಿವೆ. ವಿಲ್ಸನ್ ಗಾರ್ಡನ್, ಹರಿಶ್ಚಂದ್ರ ಘಾಟ್, ಶ್ರೀರಾಂಪುರ ಸ್ಮಶಾನಗಳು ಭರ್ತಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿದ್ಯುತ್ ಚಿತಾಗಾರದಲ್ಲಿ ಶವಗಳನ್ನು ಸುಡಲಾಗ್ತಿದೆ. ಇನ್ನು ಒಂದೇ ಕುಟುಂಬಸ್ಥರಿದ್ದರೆ ಅದೇ ಜಾಗದಲ್ಲಿ ಹೂಳಲಾಗುತ್ತದೆ ಎಂದು ಸ್ಮಶಾನದಲ್ಲಿ ಕೆಲಸಮಾಡುವ ಕಾರ್ಮಿಕರಾದ ರಾಜಾ ಈಟಿವಿ ಭಾರತ್ ಗೆ ತಿಳಿಸಿದರು.

ಬೆಂಗಳೂರು : ಸಿಲಿಕಾನ್ ಸಿಟಿಯ ಸ್ಮಶಾನಗಳಲ್ಲಿ ಸ್ಥಳಾವಕಾಶದ ಕೊರತೆ ಉಂಟಾಗುತ್ತಿದೆ. ಸದ್ಯ ನಗರದ ಬಹುತೇಕ ರುದ್ರಭೂಮಿಗಳು ಭರ್ತಿಯಾಗಿದ್ದು, ಇದರಿಂದ ಜನರಿಗೆ ಅನಾನುಕೂಲವಾಗ್ತಿರೋ ಬಗ್ಗೆ ಬಿಬಿಎಂಪಿಗೆ ದೂರುಗಳು ಬರುತ್ತಿದ್ದು, ಹೊಸ ಸ್ಮಶಾನ ನಿರ್ಮಾಣಕ್ಕೆ ಪಾಲಿಕೆ ಮುಂದಾಗಿದೆ.

ಹೊಸ ಸ್ಮಶಾನ ಮತ್ತು ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ನಗರದ ಹೊರವಲಯದ ರಿಂಗ್ ರಸ್ತೆಗಳ ಪಕ್ಕದಲ್ಲಿ 25 ಎಕರೆ ಜಾಗ ಮಂಜೂರು ಮಾಡುವಂತೆ ಪಾಲಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದ್ರೆ, ಸರ್ಕಾರ ಬಿಬಿಎಂಪಿ ಮನವಿ ಮಾಡಿರುವಷ್ಟು ಜಾಗ ಮಂಜೂರು ಮಾಡದೇ, ಕೆ.ಆರ್ ಪುರ ಹೋಬಳಿ, ದೇವಸಂದ್ರ ಗ್ರಾಮದಲ್ಲಿ 30 ಗುಂಟೆ, ದಾಸನಪುರ ಹೋಬಳಿ ಕುದುರೆಗೆ ಗ್ರಾಮದಲ್ಲಿ 2 ಎಕರೆ, ಯಲಹಂಕದ ಬಾಗಲೂರು ಗ್ರಾಮದಲ್ಲಿ 1 ಎಕರೆ, ಶಿವನಪುರದಲ್ಲಿ 2 ಎಕರೆ ಉಲ್ಲೇನಗೌಡನ ಹಳ್ಳಿಯಲ್ಲಿ 2 ಎಕರೆ ಜಾಗವನ್ನು ಸ್ಮಶಾನಕ್ಕೆ ಮೀಸಲಾಗಿ ನೀಡಿದೆ.

ಹೊಸ ರುದ್ರಭೂಮಿ ನಿರ್ಮಿಸಲು ಪಾಲಿಕೆ ನಿರ್ಧರಿಸಿದೆ.

ಅನೇಕ ವರ್ಷಗಳಿಂದ ಮೀಸಲಿಟ್ಟ ಸ್ಮಶಾನ ಜಾಗ ಭರ್ತಿಯಾಗಿದೆ, ಕೆಲವು ಬಡಾವಣೆಗಳ ಮಧ್ಯೆ ಸ್ಮಶಾನವಿರುವುದರಿಂದ ಮಾಲಿನ್ಯ ಹೆಚ್ಚಾಗಿ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಅದಕ್ಕೆ ಈ ಬಾರಿಯ ಬಜೆಟ್‌ನಲ್ಲಿ 40 ಕೋಟಿ ವೆಚ್ಚದಲ್ಲಿ ಸ್ಮಶಾನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ನಗರದ ಹೊರವಲಯದಲ್ಲಿ ನೀಡಲಾದ ಸ್ಮಶಾನ ಜಾಗಗಳಲ್ಲಿ ಬೇಲಿ ಹಾಕಿ, ಮೂಲ ಸೌಕರ್ಯ ನೀಡುವ ಕೆಲಸ ಪ್ರಾರಂಭಿಸಲಾಗುತ್ತದೆ. ಪಾಲಿಕೆಯ ಶವ ಸಾಗಿಸುವ ವಾಹನಗಳು ಕಳಪೆ ಸ್ಥಿತಿಯಲ್ಲಿದ್ದು ಸುಧಾರಿಸಬೇಕಿದೆ. ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಸೂಕ್ತ ಸೌಲಭ್ಯಗಳನ್ನು ಪಾಲಿಕೆ ಮಾಡಿ ಕೊಡಬೇಕಿದೆ ಎಂದರು.

ನಗರದಲ್ಲಿ ಒಟ್ಟು 200 ರುದ್ರಭೂಮಿಗಳು, 12 ವಿದ್ಯುತ್ ಚಿತಾಗಾರಗಳಿವೆ. ವಿಲ್ಸನ್ ಗಾರ್ಡನ್, ಹರಿಶ್ಚಂದ್ರ ಘಾಟ್, ಶ್ರೀರಾಂಪುರ ಸ್ಮಶಾನಗಳು ಭರ್ತಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವಿದ್ಯುತ್ ಚಿತಾಗಾರದಲ್ಲಿ ಶವಗಳನ್ನು ಸುಡಲಾಗ್ತಿದೆ. ಇನ್ನು ಒಂದೇ ಕುಟುಂಬಸ್ಥರಿದ್ದರೆ ಅದೇ ಜಾಗದಲ್ಲಿ ಹೂಳಲಾಗುತ್ತದೆ ಎಂದು ಸ್ಮಶಾನದಲ್ಲಿ ಕೆಲಸಮಾಡುವ ಕಾರ್ಮಿಕರಾದ ರಾಜಾ ಈಟಿವಿ ಭಾರತ್ ಗೆ ತಿಳಿಸಿದರು.

Intro:ಬೆಂಗಳೂರಿನ ಸ್ಮಶಾನಗಳು ಫುಲ್ - ಹೊಸ ಸ್ಮಶಾನ ನಿರ್ಮಿಸಲು ಜಾಗ ಮಂಜೂರು


ಬೆಂಗಳೂರು- ಬೆಂಗಳೂರಿನ ಜನಸಂಖ್ಯೆ ಹೆಚ್ಚಳವಾಗ್ತಿದ್ದಂತೇ, ಜನರ ಮರಣದ ನಂತರ ಶವಸಂಸ್ಕಾರ ಮಾಡಲು ಬೇಕಾದ ಸ್ಮಶಾನದ ಕೊರತೆಯೂ ಉಂಟಾಗ್ತಿದೆ. ಈಗಾಗಲೇ ಬೆಂಗಳೂರಿನ ಬಹುತೇಕ ರುದ್ರಭೂಮಿಗಳು ಭರ್ತಿಯಾಗಿವೆ. ಜನರಿಗೆ ಅನಾನುಕೂಲವಾಗ್ತಿರೋ ಬಗ್ಗೆ ಬಿಬಿಎಂಪಿಗೆ ಪದೇ ಪದೇ ದೂರಿನ ಪತ್ರಗಳು ಬಂದ ಕಾರಣ, ಹೊಸ ಸ್ಮಶಾನ ಹಾಗೂ ವಿದ್ಯುತ್ ಚಿತಾಗಾರಗಳನ್ನು ನಗರದ ಹೊರವಲಯ ರಿಂಗ್ ರಸ್ತೆಗಳ ಪಕ್ಕದಲ್ಲಿ ನಿರ್ಮಿಸಲು 25 ಎಕರೆ ಜಾಗ ಮಂಜೂರು ಮಾಡುವಂತೆ ಬಿಬಿಎಂಪಿ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಅದರಂತೆ ನಾಲ್ಕು ಕಡೆಗಳಲ್ಲಿ ಜಾಗ ಮಂಜೂರು ಮಾಡಿರುವ ಸರ್ಕಾರ ಎರಡು ವರ್ಷದೊಳಗೆ ಉದ್ದೇಶಿತ ಕೆಲಸಕ್ಕೆ ಜಾಗವನ್ನು ಉಪಯೋಗಿಸಿಕೊಳ್ಳುವಂತೆ ಪತ್ರ ಬರೆದಿದೆ. ಆದ್ರೆ ಪಾಲಿಕೆ ಮನವಿ ಮಾಡಿರುವಷ್ಟು ಎಕರೆ ಜಾಗಗಳನ್ನು ಸರ್ಕಾರ ಮಂಜೂರು ಮಾಡಿಲ್ಲ.
ಕೆ.ಆರ್ ಪುರ ಹೋಬಳಿ, ದೇವಸಂದ್ರ ಗ್ರಾಮದಲ್ಲಿ ಮೂವತ್ತು ಗುಂಟೆ ಜಾಗ, ಬೆಂಗಳೂರು ಉತ್ತರ ತಾಲೂಕು ದಾಸನಪುರ ಹೋಬಳಿ ಕುದುರೆಗೆರೆ ಗ್ರಾಮದಲ್ಲಿ ಎರಡು ಎಕರೆ,, ಯಲಹಂಕದ ಬಾಗಲೂರು ಗ್ರಾಮದಲ್ಲಿ ಒಂದು ಎಕರೆ, ಶಿವನಪುರದಲ್ಲಿ ಎರಡು ಎಕರೆ, ಉಲ್ಲೇಗೌಡನ ಹಳ್ಳಿಯಲ್ಲಿ ಎರಡು ಎಕರೆ ಜಾಗಗಳನ್ನು ಸ್ಮಶಾನಕ್ಕೆ ಮೀಸಲಾಗಿ ನೀಡಲಾಗಿದೆ. ಈ ಬಾರಿಯ ಬಜೆಟ್ ನಲ್ಲಿರುವ ನಲ್ವತ್ತು ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ತುಂಬಾ ವರ್ಷಗಳ ಹಿಂದೆ ಸ್ಮಶಾನ ಜಾಗ ಮೀಸಲಿಟ್ಟಿರುವುದರಿಂದ ಈಗಾಗಲೇ ಭರ್ತಿಯಾಗುತ್ತಾ ಬಂದಿವೆ. ಅಲ್ಲದೆ ಕೆಲವು ಬಡಾವಣೆಗಳ ಮಧ್ಯದಲ್ಲಿ ಸ್ಮಶಾನಗಳಿರುವುದಿಂದ ಹೆಚ್ಚಿದ ಮಾಲಿನ್ಯದಿಂದ ಅಕ್ಕ ಪಕ್ಕದ ನಿವಾಸಿಗಳಿಗೆ ತೊಂದರೆಯಾಗ್ತಿದೆ. ಹೀಗಾಗಿ ಪಾಲಿಕೆಯ ಹೊಸ ವಲಯಗಳಲ್ಲಿ, ಔಟರ್ ರಿಂಗ್ ರೋಡ್ ಬಳಿಯಲ್ಲಿ ಸ್ಮಶಾನ ನಿರ್ಮಿಸಲು ಜಾಗ ಮಂಜೂರಿಗೆ ಮನವಿ ಮಾಡಲಾಗಿತ್ತು ಎಂದರು.
ನಗರದಲ್ಲಿ ಒಟ್ಟು ಇನ್ನೂರರಷ್ಟು ಹಿಂದೂ ರುದ್ರಭೂಮಿಗಳು, ಹನ್ನೆರಡು ವಿದ್ಯುತ್ ಚಿತಾಗಾರಗಳಿವೆ.
ವಿಲ್ಸನ್ ಗಾರ್ಡನ್, ಹರಿಶ್ಚಂದ್ರ ಘಾಟ್, ಶ್ರೀರಾಂಪುರ ಸ್ಮಶಾನಗಳಲ್ಲಿ ಈಗಾಗಲೇ ಜಾಗಗಳನ್ನು ಹೆಣಗಳನ್ನು ಹೂತು ಹಾಗೂ ಸುಟ್ಟು ಜಾಗಗಳು ಭರ್ತಿಯಾಗಿವೆ. ಇತ್ತಿಚಿನ ದಿನಗಳಲ್ಲಿ ಹೆಚ್ಚಾಗಿ ವಿದ್ಯುತ್ ಚಿತಾಗಾರದಲ್ಲಿ ಶವಗಳನ್ನು ಸುಡಲಾಗ್ತಿದೆ. ಇನ್ನು ಒಂದೇ ಕುಟುಂಬಸ್ಥರಿಸದ್ದರೆ ಅದೇ ಜಾಗದಲ್ಲಿ ಹೂಳಲಾಗುತ್ತದೆ ಎಂದು ಸ್ಮಶಾನದಲ್ಲಿ ಕೆಲಸಮಾಡುವ ಕಾರ್ಮಿಕರಾದ ರಾಜಾ ಈಟಿವಿ ಭಾರತ್ ಗೆ ತಿಳಿಸಿದರು.
ಇದೀಗ ಹೊರವಲಯದಲ್ಲಿ ನೀಡಲಾದ ಸ್ಮಶಾನ ಜಾಗಗಳಲ್ಲಿ ಬೇಲಿ ಹಾಕಿ, ಮೂಲ ಸೌಕರ್ಯ ನೀಡುವ ಕೆಲಸ ಪ್ರಾರಂಭಿಸಲಾಗುತ್ತದೆ. ಈ ಬಾರಿಯ ನಲ್ವತ್ತು ಕೋಟಿ ರುಪಾಯಿ ಬಜೆಟ್ ಅನುದಾನ ಬಳಸಿಕೊಳ್ಳಲಾಗುತ್ತದೆ ಎಂದು ಮೇಯರ್ ತಿಳಿಸಿದ್ದಾರೆ. ಪಾಲಿಕೆಯ ಶವ ಸಾಗಿಸುವ ವಾಹನಗಳು ಕಳಪೆ ಸ್ಥಿತಿಯಲ್ಲಿದ್ದು ಸುಧಾರಿಸಬೇಕಿದೆ. ಅಲ್ಲದೆ ಸ್ಮಶಾನದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೂ ಸೂಕ್ತ ಸೌಲಭ್ಯಗಳನ್ನು ಪಾಲಿಕೆ ಮಾಡಿಕೊಡಬೇಕಿದೆ.


ಸೌಮ್ಯಶ್ರೀ
KN_BNG_03_06_bbmp_graveyard_script_sowmya_7202707
Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.