ETV Bharat / state

​​​​​​​ರಾಕ್ಷಸ ಆರ್ಥಿಕತೆ ಜಾಗದಲ್ಲಿ ಪವಿತ್ರ ಆರ್ಥಿಕತೆ ಸ್ಥಾಪಿಸಿ: ರಂಗಕರ್ಮಿ ಪ್ರಸನ್ನ ಆಗ್ರಹ

author img

By

Published : Oct 9, 2019, 8:35 AM IST

Updated : Oct 9, 2019, 8:45 AM IST

ಬೆಂಗಳೂರಿನ ಗ್ರಾಮ ಸೇವಾ ಸಂಘದಿಂದ ಪರಿಸರ ಗೆಲ್ಲಿಸಿ, ದುಡಿಮೆ ಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿರುವ ಉಪವಾಸದಲ್ಲಿ ರಂಗಕರ್ಮಿ ಪ್ರಸನ್ನ ಅವರು ಪ್ರಧಾನಿ ಅವರಿಗೆ ಪತ್ರ ಬರೆದಿದ್ದಾರೆ.

ರಂಗಕರ್ಮಿ ಪ್ರಸನ್ನ

ಬೆಂಗಳೂರು: ಪವಿತ್ರ ಆರ್ಥಿಕತೆಯ ಬಗ್ಗೆ ವಿಶ್ವಕ್ಕೆ ತಿಳಿಸಿ. ಇದು ಗಾಂಧೀಜಿ ಪ್ರತಿಪಾದಿಸಿದ ಆರ್ಥಿಕತೆ. ರಾಕ್ಷಸ ಆರ್ಥಿಕತೆಯನ್ನು ದೇಶದೊಳಗೆ ಬಿಟ್ಟುಕೊಳ್ಳಬೇಡಿ ಎಂದು ರಂಗಕರ್ಮಿ ಪ್ರಸನ್ನ ಅವರು ಒತ್ತಾಯಿಸಿದ್ದಾರೆ.

ರಂಗಕರ್ಮಿ ಪ್ರಸನ್ನ

ಗ್ರಾಮ ಸೇವಾ ಸಂಘದಿಂದ ಪರಿಸರ ಗೆಲ್ಲಿಸಿ, ದುಡಿಮೆ ಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಮೂರು ದಿನಗಳಿಂದ ಉಪವಾಸ ಕುಳಿತಿದ್ದಾರೆ. ಇಂದು ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಬೇಡಿಕೆ ಸಲ್ಲಿಸಲಾಗಿದೆ.

ಪವಿತ್ರ ಆರ್ಥಿಕತೆ ಎಂದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನೆ ಕೈಗೊಳ್ಳುವುದಾಗಿದೆ. ಈ ಉತ್ಪಾದನೆಗಳಿಗೆ ಶೂನ್ಯ ತೆರಿಗೆ ವಿಧಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಒಂದು ವರ್ಗಕ್ಕೆ ಅನುಕೂಲ ಮಾಡುವ ರಾಕ್ಷಸ ನೀತಿಯನ್ನು ಹಿಮ್ಮೆಟ್ಟಿಸಬೇಕು. ದುಡಿಯುವ, ಕಾರ್ಮಿಕರ ಪರವಾದ ಪವಿತ್ರ ಆರ್ಥಿಕ ನೀತಿಯನ್ನು ಜಾರಿಗೊಳಿಸಲು ಪ್ರಸನ್ನ ಅವರು ನಡೆಸಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

ಬೆಂಗಳೂರು: ಪವಿತ್ರ ಆರ್ಥಿಕತೆಯ ಬಗ್ಗೆ ವಿಶ್ವಕ್ಕೆ ತಿಳಿಸಿ. ಇದು ಗಾಂಧೀಜಿ ಪ್ರತಿಪಾದಿಸಿದ ಆರ್ಥಿಕತೆ. ರಾಕ್ಷಸ ಆರ್ಥಿಕತೆಯನ್ನು ದೇಶದೊಳಗೆ ಬಿಟ್ಟುಕೊಳ್ಳಬೇಡಿ ಎಂದು ರಂಗಕರ್ಮಿ ಪ್ರಸನ್ನ ಅವರು ಒತ್ತಾಯಿಸಿದ್ದಾರೆ.

ರಂಗಕರ್ಮಿ ಪ್ರಸನ್ನ

ಗ್ರಾಮ ಸೇವಾ ಸಂಘದಿಂದ ಪರಿಸರ ಗೆಲ್ಲಿಸಿ, ದುಡಿಮೆ ಗೆಲ್ಲಿಸಿ ಎಂಬ ಘೋಷವಾಕ್ಯದೊಂದಿಗೆ ಮೂರು ದಿನಗಳಿಂದ ಉಪವಾಸ ಕುಳಿತಿದ್ದಾರೆ. ಇಂದು ಪ್ರಧಾನಿ ಮೋದಿ ಅವರಿಗೆ ಪತ್ರದ ಮೂಲಕ ಬೇಡಿಕೆ ಸಲ್ಲಿಸಲಾಗಿದೆ.

ಪವಿತ್ರ ಆರ್ಥಿಕತೆ ಎಂದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸಿ, ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದನೆ ಕೈಗೊಳ್ಳುವುದಾಗಿದೆ. ಈ ಉತ್ಪಾದನೆಗಳಿಗೆ ಶೂನ್ಯ ತೆರಿಗೆ ವಿಧಿಸಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಒಂದು ವರ್ಗಕ್ಕೆ ಅನುಕೂಲ ಮಾಡುವ ರಾಕ್ಷಸ ನೀತಿಯನ್ನು ಹಿಮ್ಮೆಟ್ಟಿಸಬೇಕು. ದುಡಿಯುವ, ಕಾರ್ಮಿಕರ ಪರವಾದ ಪವಿತ್ರ ಆರ್ಥಿಕ ನೀತಿಯನ್ನು ಜಾರಿಗೊಳಿಸಲು ಪ್ರಸನ್ನ ಅವರು ನಡೆಸಿರುವ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಹೇಳಿದರು.

Intro:ಪ್ರಧಾನಿ ಮೋದಿ ಗೆ ಪತ್ರ ಬರೆದ ಉಪವಾಸ ನಿರತ ಪ್ರಸನ್ನ


ಬೆಂಗಳೂರು- ಸಾಮಾಜಿಕ ಹೋರಾಟಗಾರ ಪ್ರಸನ್ನ ಅವರ ಉಪವಾಸ ಸತ್ಯಾಗ್ರಹ ಮೂರು ದಿನಗಳನ್ನು ಪೂರೈಸಿದೆ. ಇಳಿ ವಯಸ್ಸಿನಲ್ಲೂ, ಪರಿಸರದ ಉಳಿವಿಗಾಗಿ, ಪರಿಸರ ಸ್ನೇಹಿ ಉದ್ಯೋಗಗಳಿಗಾಗಿ, ಗ್ರಾಮಗಳ ಅಭಿವೃದ್ಧಿಯ ಬೇಡಿಕೆ ಇಟ್ಟುಕೊಂಡು ಗ್ರಾಮ ಸೇವಾಸಂಘದಿಂದ ಉಪವಾಸ ಕುಳಿತಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿಯವರೊಗೆ ಪತ್ರದ ಮೂಲಕ ಬೇಡಿಕೆ ಸಲ್ಲಿಸಲಾಗಿದೆ. ಸಮರ್ಥ ಪ್ರಧಾನಿಗಳಾದ ನೀವು ಪವಿತ್ರ ಆರ್ಥಿಕತೆಯ ಬಗ್ಗೆ ಮಾತನಾಡಿ, ವಿಶ್ವದಲ್ಲಿಯೇ ಹರಡಿ, ಗಾಂಧೀಜಿಯವರ ಕನಸನ್ನು ನನಸು ಮಾಡಿ ಎಂದು ಮನವಿ ಮಾಡಿದ್ದಾರೆ. ಪವಿತ್ರ ಆರ್ಥಿಕತೆ ಎಂದರೆ ಸ್ಥಳೀಯರನ್ನು ಬಳಿಸೊ, ಸ್ಥಳೀಯ ಸಂಪನ್ಮೂಲಗಳನ್ನು ಬಳಿಸಿ ಮಾಡುವ ಉತ್ಪಾದನೆ. ಈ ಉತ್ಪಾದನೆಗಳಿಗೆ ಶೂನ್ಯ ತೆರಿಗೆ ಮಾಡಬೇಕು. ಆರ್ಥಿಕ ಶಕ್ತಿ ನೀಡಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಸತ್ಯಾಗ್ರಹ ನಿರತ ಪ್ರಸನ್ನ ಅವರು ಈಟಿವಿ ಭಾರತ್ ಗೆ ತಿಳಿಸಿದರು.
ಗ್ರಾಮ ಸೇವಾ ಸಂಘದ ಈ ಚಳುವಳಿಗೆ ಅಜದ ವಿವಿಧ ಮಗದ ಜನರು ಸಾಥ್ ನೀಡಿದರು. ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಪ್ರಸನ್ನ ಅವರ ಚಳುವಳಿಗೆ ಸಾಥ್ ನೀಡಿದರು. ಬಳಿಕ ಮಾತನಾಡಿದ ಅವರು, ಮುಖ್ಯಮಂತ್ರಿ ಚಂದ್ರು ಮಾತನಾಡಿ, ನೂರಾರು ವರ್ಷದಿಂದ ಉದ್ಯೋಗ, ಗ್ರಾಮಾಭಿವೃದ್ಧಿ ಸಮಸ್ಯೆಗಳು ನಡೆದುಕೊಂಡೇ ಬಂದಿವೆ. ವ್ಯವಸ್ಥೆಯ ಬದಲಾವಣೆ ಅಷ್ಟು ಸುಲಭ ಇಲ್ಲ. ಸರ್ಕಾರ ಈ ಬಗ್ಗೆ ಗಮನ ಕೊಡಬೇಕು. ದೊಡ್ಡ ಕ್ರಾಂತಿಯನ್ನು ಮಾಡಬೇಕಿದೆ. ಪ್ರಸನ್ಮ ಅವರ ಬೆಂಬಲಕ್ಕೆ ನಾವಿದ್ದೇವೆ ಎಂದರು.


ಸೌಮ್ಯಶ್ರೀ
Kn_bng_02_Prasanna_day3_upavasa_7202707Body:..Conclusion: .
Last Updated : Oct 9, 2019, 8:45 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.