ETV Bharat / state

ಉಕ್ರೇನ್​​ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಾಲ್ವರು ವಿದ್ಯಾರ್ಥಿಗಳು

author img

By

Published : Mar 12, 2022, 7:35 AM IST

ಯುದ್ದ ಪ್ರಾರಂಭವಾದ ನಂತರ ನಮಗೆ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆ ಉಂಟಾಯಿತು. ಹೀಗಾಗಿ, ಸುಮಿಯಿಂದ ರಷ್ಯಾದ ಮೂಲಕ‌ ಭಾರತಕ್ಕೆ ತೆರಳಲು ನಿರ್ಧರಿದೆವು.ಆದರೆ, ರಷ್ಯಾ ಸೈನಿಕರಿಂದ ಫೈರಿಂಗ್ ಭಯದಲ್ಲಿ ಪೋಲ್ಯಾಂಡ್​​ ಗಡಿಗೆ ಕಷ್ಟ ಪಟ್ಟು ತಲುಪಿದೆವು. ಅಲ್ಲಿಂದ ಇಂಡಿಯನ್ ಎಂಬಸಿ ಆಪರೇಷನ್ ಗಂಗಾ ಯೋಜನೆಯಡಿ ಸುಮಿ ವಿದ್ಯಾರ್ಥಿಗಳನ್ನು ಕರೆತರುವ ವಿಮಾನದಲ್ಲಿ ದೆಹಲಿಗೆ ಬಂದೆವು..

Four students returned from Ukraine to Bengaluru
ಉಕ್ರೇನ್​​ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಾಲ್ವರು ವಿದ್ಯಾರ್ಥಿಗಳು

ದೇವನಹಳ್ಳಿ(ಬೆಂಗಳೂರು): ಯುದ್ದ ಪೀಡಿತ ಉಕ್ರೇನ್​​ನ ಸುಮಿಯಿಂದ ನಾಲ್ವರು ವಿದ್ಯಾರ್ಥಿಗಳು ನಿನ್ನೆ (ಶುಕ್ರವಾರ) ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದರು. ಏರ್​​ಪೋರ್ಟ್‌ನಲ್ಲಿ ತುಂಬು ಹೃದಯದಿಂದ ಪೋಷಕರು ಅವರನ್ನು ಬರಮಾಡಿಕೊಂಡರು.

ಉಕ್ರೇನ್​​ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಾಲ್ವರು ವಿದ್ಯಾರ್ಥಿಗಳು

ಉಕ್ರೇನ್​​ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳನ್ನು 'ಆಪರೇಷನ್ ಗಂಗಾ' ಯೋಜನೆಯಡಿ ಕರೆತರಲಾಗುತ್ತಿದೆ. ಅದರಂತೆ ಶುಕ್ರವಾರ ನಾಲ್ವರು ಕನ್ನಡಿಗರು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಉಕ್ರೇನ್​​ನ ಸುಮಿಯಲ್ಲಿ ಸಿಲುಕಿದ ಅಕ್ಷರ್, ಶ್ರೀಜಾ, ಶ್ರಿಯ ಮತ್ತು ಸ್ನೇಹ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳು.

ಇದೇ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಸುಮಿ ಪ್ರಾಂತ್ಯದಲ್ಲಿ ಭಾರತದ 600 ಮಂದಿ ವಿದ್ಯಾರ್ಥಿಗಳಿದ್ದಾರೆ. ಕೀವ್ ಹಾಗೂ ಖಾರ್ಕಿವ್​​ನಲ್ಲಿ ಯುದ್ದ ತೀವ್ರವಾಗಿತ್ತು. ಸುಮಿಯ ಕೆಲ ಪ್ರಾಂತ್ಯಗಳಲ್ಲಿಯೂ ಯುದ್ದ ಪ್ರಾರಂಭವಾಯಿತು.

ಈ ಸಮಯದಲ್ಲಿ ನಾವು ಸುಮಿ ಯುನಿವರ್ಸಿಟಿಯಲ್ಲಿ ಇದ್ದೆವು. ಯುದ್ದ ಪ್ರಾರಂಭವಾದ ನಂತರ ನಮಗೆ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆ ಉಂಟಾಯಿತು. ಹೀಗಾಗಿ, ಸುಮಿಯಿಂದ ರಷ್ಯಾದ ಮೂಲಕ‌ ಭಾರತಕ್ಕೆ ತೆರಳಲು ನಿರ್ಧರಿದೆವು.

ಆದರೆ, ರಷ್ಯಾ ಸೈನಿಕರಿಂದ ಫೈರಿಂಗ್ ಭಯದಲ್ಲಿ ಪೋಲ್ಯಾಂಡ್​​ ಗಡಿಗೆ ಕಷ್ಟ ಪಟ್ಟು ತಲುಪಿದೆವು. ಅಲ್ಲಿಂದ ಇಂಡಿಯನ್ ಎಂಬಸಿ ಆಪರೇಷನ್ ಗಂಗಾ ಯೋಜನೆಯಡಿ ಸುಮಿ ವಿದ್ಯಾರ್ಥಿಗಳನ್ನು ಕರೆತರುವ ವಿಮಾನದಲ್ಲಿ ದೆಹಲಿಗೆ ಬಂದೆವು. ಅಲ್ಲಿಂದ ರಾಜ್ಯಕ್ಕೆ‌ ಮರಳಿದೆವು ಎಂದು ವಿದ್ಯಾರ್ಥಿಗಳು ವಿವರಿಸಿದರು.

ಇದನ್ನೂ ಓದಿ: ಭಾರತ ಸರ್ಕಾರದ ನಡೆ ಸುರಕ್ಷತೆಗೆ ಸಾಕ್ಷಿ: ಉ್ರಕೇನ್​​​​ನಿಂದ ಮರಳಿದ ವಿದ್ಯಾರ್ಥಿಯಿಂದ ಗುಣಗಾನ

ದೇವನಹಳ್ಳಿ(ಬೆಂಗಳೂರು): ಯುದ್ದ ಪೀಡಿತ ಉಕ್ರೇನ್​​ನ ಸುಮಿಯಿಂದ ನಾಲ್ವರು ವಿದ್ಯಾರ್ಥಿಗಳು ನಿನ್ನೆ (ಶುಕ್ರವಾರ) ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದರು. ಏರ್​​ಪೋರ್ಟ್‌ನಲ್ಲಿ ತುಂಬು ಹೃದಯದಿಂದ ಪೋಷಕರು ಅವರನ್ನು ಬರಮಾಡಿಕೊಂಡರು.

ಉಕ್ರೇನ್​​ನಿಂದ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ ನಾಲ್ವರು ವಿದ್ಯಾರ್ಥಿಗಳು

ಉಕ್ರೇನ್​​ನಲ್ಲಿ ಸಿಲುಕಿದ ಭಾರತೀಯ ವಿದ್ಯಾರ್ಥಿಗಳನ್ನು 'ಆಪರೇಷನ್ ಗಂಗಾ' ಯೋಜನೆಯಡಿ ಕರೆತರಲಾಗುತ್ತಿದೆ. ಅದರಂತೆ ಶುಕ್ರವಾರ ನಾಲ್ವರು ಕನ್ನಡಿಗರು ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಉಕ್ರೇನ್​​ನ ಸುಮಿಯಲ್ಲಿ ಸಿಲುಕಿದ ಅಕ್ಷರ್, ಶ್ರೀಜಾ, ಶ್ರಿಯ ಮತ್ತು ಸ್ನೇಹ ತಾಯ್ನಾಡಿಗೆ ಮರಳಿದ ವಿದ್ಯಾರ್ಥಿಗಳು.

ಇದೇ ವೇಳೆ ಮಾತನಾಡಿದ ವಿದ್ಯಾರ್ಥಿಗಳು, ಸುಮಿ ಪ್ರಾಂತ್ಯದಲ್ಲಿ ಭಾರತದ 600 ಮಂದಿ ವಿದ್ಯಾರ್ಥಿಗಳಿದ್ದಾರೆ. ಕೀವ್ ಹಾಗೂ ಖಾರ್ಕಿವ್​​ನಲ್ಲಿ ಯುದ್ದ ತೀವ್ರವಾಗಿತ್ತು. ಸುಮಿಯ ಕೆಲ ಪ್ರಾಂತ್ಯಗಳಲ್ಲಿಯೂ ಯುದ್ದ ಪ್ರಾರಂಭವಾಯಿತು.

ಈ ಸಮಯದಲ್ಲಿ ನಾವು ಸುಮಿ ಯುನಿವರ್ಸಿಟಿಯಲ್ಲಿ ಇದ್ದೆವು. ಯುದ್ದ ಪ್ರಾರಂಭವಾದ ನಂತರ ನಮಗೆ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಮಸ್ಯೆ ಉಂಟಾಯಿತು. ಹೀಗಾಗಿ, ಸುಮಿಯಿಂದ ರಷ್ಯಾದ ಮೂಲಕ‌ ಭಾರತಕ್ಕೆ ತೆರಳಲು ನಿರ್ಧರಿದೆವು.

ಆದರೆ, ರಷ್ಯಾ ಸೈನಿಕರಿಂದ ಫೈರಿಂಗ್ ಭಯದಲ್ಲಿ ಪೋಲ್ಯಾಂಡ್​​ ಗಡಿಗೆ ಕಷ್ಟ ಪಟ್ಟು ತಲುಪಿದೆವು. ಅಲ್ಲಿಂದ ಇಂಡಿಯನ್ ಎಂಬಸಿ ಆಪರೇಷನ್ ಗಂಗಾ ಯೋಜನೆಯಡಿ ಸುಮಿ ವಿದ್ಯಾರ್ಥಿಗಳನ್ನು ಕರೆತರುವ ವಿಮಾನದಲ್ಲಿ ದೆಹಲಿಗೆ ಬಂದೆವು. ಅಲ್ಲಿಂದ ರಾಜ್ಯಕ್ಕೆ‌ ಮರಳಿದೆವು ಎಂದು ವಿದ್ಯಾರ್ಥಿಗಳು ವಿವರಿಸಿದರು.

ಇದನ್ನೂ ಓದಿ: ಭಾರತ ಸರ್ಕಾರದ ನಡೆ ಸುರಕ್ಷತೆಗೆ ಸಾಕ್ಷಿ: ಉ್ರಕೇನ್​​​​ನಿಂದ ಮರಳಿದ ವಿದ್ಯಾರ್ಥಿಯಿಂದ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.